<p><strong>ಚಿಕ್ಕಮಗಳೂರು:</strong> ಜಿಲ್ಲೆಯಲ್ಲಿ ಮಳೆ ಆರ್ಭಟ ಹೆಚ್ಚಿದ್ದು, ಅಲ್ಲಲ್ಲಿ ಭೂಕುಸಿತ, ಮನೆ ಕುಸಿತ, ಮರ ಬೀಳುವುದು ಮುಂದುವರಿದಿದೆ. ವಿಪರೀತ ಮಳೆಯಿಂದ ಶೃಂಗೇರಿಯ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. </p><p>ಶೃಂಗೇರಿಯಲ್ಲಿ ಎತ್ತ ನೋಡಿದರೂ ನೀರೇ ತುಂಬಿಕೊಂಡಿದ್ದು, ಪಟ್ಟಣದ ಹಲವು ಮನೆಗಳು, ಅಂಗಡಿಗಳು ನೀರಿನಲ್ಲಿ ಮುಳುಗಿವೆ. ತುಂಗಾ ನದಿಯ ನೀರು ನೆಮ್ಮೂರ್ ರಸ್ತೆ ನೀರಿನಿಂದ ಆವೃತಗೊಂಡಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಪ್ರವಾಸಿಗರಿಲ್ಲದೆ ಇಡೀ ಶೃಂಗೇರಿ ಬಣಗುಡುತ್ತಿದೆ.</p><p>ತುಂಗಾನದಿ ಉಕ್ಕಿ ಹರಿಯುತ್ತಿದ್ದು, ಶಾರದ ಪೀಠ ಭಾರತೀ ತೀರ್ಥ ಸ್ವಾಮಿಜೀ ಅವರ ಸ್ನಾನಘಟ್ಟ ಹಾಗೂ ಸಂದ್ಯಾ ವಂದನೆ ಮಂಟಪ ಮುಳುಗಿದೆ. ಉಕ್ಕಿ ಹರಿಯುತ್ತಿರುವ ನೀರಿನಲ್ಲಿ ಕಾಳಿಂಗ ಸೇರಿ ಹಲವು ಹಾವುಗಳು, ಮರದ ದಿಮ್ಮಿಗಳು ತೇಲುತ್ತಿದ್ದವು.</p><p>ಹೆಬ್ಬೆ ಜಲಪಾತ, ಮಾಣಿಕ್ಯಾಧಾರ, ಝರಿ ಜಲಪಾತ, ಸೂರಮನೆ, ಬರ್ಕಣ, ಸಿರಿಮನೆ, ಸೂತನಬ್ಬಿ ಜಲಪಾತಗಳು ಉಕ್ಕಿ ಹರಿಯುತ್ತಿದೆ. </p><p>ಕೊಪ್ಪ ತಾಲ್ಲೂಕಿನ ನಾರ್ವೆ ಬಳಿ ರಸ್ತೆಗೆ ಮರ ಬಿದ್ದು ಒಂದೂವರೆ ಗಂಟೆ ಕೊಪ್ಪ – ಜಯಪುರ ರಸ್ತೆ ಸಂಚಾರ ಕಡಿತಗೊಂಡಿತ್ತು. ಕಳಸ- ಹೊರನಾಡು ರಸ್ತೆಯ ಹೆಬ್ಬೊಳೆಯ ಸೇತುವೆ ಮೇಲೆ ಸೋಮವಾರ ರಾತ್ರಿ ನದಿ ನೀರು ಉಕ್ಕಿ ಹರಿಯಿತು. ಹೊರನಾಡಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಪೊಲೀಸರು ಬಂದ್ ಮಾಡಿದ್ದರು. ಹಳುವಳ್ಳಿ ಮೂಲಕ ಹೊರನಾಡಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದ್ದರೂ, ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು.</p><p>ಮರಸಣಿಗೆ ಸಮೀಪದ ಗಾಳಿಗಂಡಿ, ಹಿರೇಬೈಲು ಸಮೀಪದ ಕಂಕೋಡು, ಸಂಸೆ ಸಮೀಪದ ದೇವರಮನೆ, ಹೊರನಾಡು ಸಮೀಪದ ಮುಂಡುಗದಮನೆ ಪ್ರದೇಶದಲ್ಲಿ ಧರೆ ಕುಸಿದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ಜಿಲ್ಲೆಯಲ್ಲಿ ಮಳೆ ಆರ್ಭಟ ಹೆಚ್ಚಿದ್ದು, ಅಲ್ಲಲ್ಲಿ ಭೂಕುಸಿತ, ಮನೆ ಕುಸಿತ, ಮರ ಬೀಳುವುದು ಮುಂದುವರಿದಿದೆ. ವಿಪರೀತ ಮಳೆಯಿಂದ ಶೃಂಗೇರಿಯ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. </p><p>ಶೃಂಗೇರಿಯಲ್ಲಿ ಎತ್ತ ನೋಡಿದರೂ ನೀರೇ ತುಂಬಿಕೊಂಡಿದ್ದು, ಪಟ್ಟಣದ ಹಲವು ಮನೆಗಳು, ಅಂಗಡಿಗಳು ನೀರಿನಲ್ಲಿ ಮುಳುಗಿವೆ. ತುಂಗಾ ನದಿಯ ನೀರು ನೆಮ್ಮೂರ್ ರಸ್ತೆ ನೀರಿನಿಂದ ಆವೃತಗೊಂಡಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಪ್ರವಾಸಿಗರಿಲ್ಲದೆ ಇಡೀ ಶೃಂಗೇರಿ ಬಣಗುಡುತ್ತಿದೆ.</p><p>ತುಂಗಾನದಿ ಉಕ್ಕಿ ಹರಿಯುತ್ತಿದ್ದು, ಶಾರದ ಪೀಠ ಭಾರತೀ ತೀರ್ಥ ಸ್ವಾಮಿಜೀ ಅವರ ಸ್ನಾನಘಟ್ಟ ಹಾಗೂ ಸಂದ್ಯಾ ವಂದನೆ ಮಂಟಪ ಮುಳುಗಿದೆ. ಉಕ್ಕಿ ಹರಿಯುತ್ತಿರುವ ನೀರಿನಲ್ಲಿ ಕಾಳಿಂಗ ಸೇರಿ ಹಲವು ಹಾವುಗಳು, ಮರದ ದಿಮ್ಮಿಗಳು ತೇಲುತ್ತಿದ್ದವು.</p><p>ಹೆಬ್ಬೆ ಜಲಪಾತ, ಮಾಣಿಕ್ಯಾಧಾರ, ಝರಿ ಜಲಪಾತ, ಸೂರಮನೆ, ಬರ್ಕಣ, ಸಿರಿಮನೆ, ಸೂತನಬ್ಬಿ ಜಲಪಾತಗಳು ಉಕ್ಕಿ ಹರಿಯುತ್ತಿದೆ. </p><p>ಕೊಪ್ಪ ತಾಲ್ಲೂಕಿನ ನಾರ್ವೆ ಬಳಿ ರಸ್ತೆಗೆ ಮರ ಬಿದ್ದು ಒಂದೂವರೆ ಗಂಟೆ ಕೊಪ್ಪ – ಜಯಪುರ ರಸ್ತೆ ಸಂಚಾರ ಕಡಿತಗೊಂಡಿತ್ತು. ಕಳಸ- ಹೊರನಾಡು ರಸ್ತೆಯ ಹೆಬ್ಬೊಳೆಯ ಸೇತುವೆ ಮೇಲೆ ಸೋಮವಾರ ರಾತ್ರಿ ನದಿ ನೀರು ಉಕ್ಕಿ ಹರಿಯಿತು. ಹೊರನಾಡಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಪೊಲೀಸರು ಬಂದ್ ಮಾಡಿದ್ದರು. ಹಳುವಳ್ಳಿ ಮೂಲಕ ಹೊರನಾಡಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದ್ದರೂ, ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು.</p><p>ಮರಸಣಿಗೆ ಸಮೀಪದ ಗಾಳಿಗಂಡಿ, ಹಿರೇಬೈಲು ಸಮೀಪದ ಕಂಕೋಡು, ಸಂಸೆ ಸಮೀಪದ ದೇವರಮನೆ, ಹೊರನಾಡು ಸಮೀಪದ ಮುಂಡುಗದಮನೆ ಪ್ರದೇಶದಲ್ಲಿ ಧರೆ ಕುಸಿದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>