ದಟ್ಟಣೆಯಲ್ಲಿ ಸಿಲುಕಿದ ಯು.ಟಿ.ಖಾದರ್
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಉಂಟಾಗಿದ್ದರಿಂದ ಸಂಚಾರ ದಟ್ಟಣೆಯಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಪ್ರಯಾಣಿಸುತ್ತಿದ್ದ ಕಾರು ಕೂಡ ಕೆಲಹೊತ್ತು ಸಿಲುಕಿತ್ತು. ಇದರಿಂದಾಗಿ ಅವರು ಡೆಂಗಿ ನಿಯಂತ್ರಣ ಕುರಿತ ಸಭೆಗೆ ತರಳುವಾಗ ವಿಳಂಬವಾಗಿತ್ತು. ‘ನಗರದ ನಂತೂರು ಪಂಪ್ವೆಲ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ವೃತ್ತಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ಕ್ರಮವಹಿಸಿ ವಾಹನಗಳ ಸುಗಮ ಸಂಚಾರ ಅನುವು ಮಾಡಿಕೊಡಬೇಕು’ ಎಂದು ಖಾದರ್ ಅವರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರಿಗೆ ನಿರ್ದೇಶನ ನೀಡಿದರು.