ಜಿಲ್ಲೆಯಲ್ಲಿ ಅನೇಕ ರಬ್ಬರ್ ಬೆಳೆಗಾರರು ಸರ್ಕಾರಿ ಜಮೀನಿನಲ್ಲಿ ರಬ್ಬರ್ ಬೆಳೆಸಿದ್ದಾರೆ. ಅಂತಹ ಜಾಗವನ್ನು ಭೋಗ್ಯಕ್ಕೆ ನೀಡಿದರೆ ರೈತರು ಆತಂಕಪಡುವುದು ತಪ್ಪಲಿದೆ
–ಶ್ರೀಧರ ಜಿ.ಭಿಡೆ ಅಧ್ಯಕ್ಷರು ಬೆಳ್ತಂಗಡಿ ತಾಲ್ಲೂಕು ರಬ್ಬರ್ ಬೆಳೆಗಾರರ ಸಹಕಾರಿ ಸಂಘ
ಕೃಷಿ ಮಾಡಲು ಕುಮ್ಕಿ ಜಮೀನು ಮುಖ್ಯ. ಕುಮ್ಕಿ ಹಕ್ಕಿಗೂ ಕತ್ತರಿ ಹಾಕಬಾರದು. ಕುಮ್ಕಿ ಜಾಗದಲ್ಲಿ ಬೆಳೆ ಬೆಳೆದ ರೈತರು ಅಕ್ರಮ ಸಕ್ರಮ ಯೋಜನೆಯಡಿ ಸಲ್ಲಿಸಿದ ಅರ್ಜಿಯನ್ನು ಮೊದಲು ವಿಲೇ ಮಾಡಲಿ
–ಮನೋಹರ ಶೆಟ್ಟಿ, ನಡಿಕಂಬಳ ಗುತ್ತು ಕುಪ್ಪೆಪದವು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ (ಕೋಡಿಹಳ್ಳಿ ಬಣ)
ಕೃಷಿ ಮಾಡಿರುವ ಸರ್ಕಾರಿ ಜಮೀನನ್ನು ಭೋಗ್ಯಕ್ಕೆ ನೀಡುವುದು ಸ್ವಾಗತಾರ್ಹ. ಭೋಗ್ಯಕ್ಕೆ ನೀಡಲಾದ ಜಮೀನನ್ನು ಬೆಳೆ ಸಾಲ ಬಳಸಲು ಅಡಮಾನ ಇಡುವುದಕ್ಕೆ ಅವಕಾಶ ನೀಡಬೇಕು
–ರವಿಕಿರಣ್ ಪುಣಚ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ರೈತ ಸಂಘ