<p><strong>ಮಂಗಳೂರು</strong>: ಅರಬ್ಬಿ ಸಮುದ್ರದಲ್ಲಿ ಸಾಗುವಾಗ ಬೆಂಕಿ ಹೊತ್ತಿಕೊಂಡ ಪನಾಮ ಧ್ವಜವನ್ನು ಹೊಂದಿರುವ ಸರಕು ಸಾಗಣೆಯ ಎಂ.ವಿ. ಮೇ| ಫ್ರಾಂಕ್ಫರ್ಟ್ ಕಂಟೈನರ್ ಹಡಗಿನ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಪ್ರತಿಕೂಲ ಹವಾಮಾನದಿಂದಾಗಿ ಸಮುದ್ರದ ವಾತಾವರಣ ಪ್ರಕ್ಷುಬ್ಧವಾಗಿದೆಯಾದರೂ ಹಡಗಿನ ಬೆಂಕಿ ನಂದಿಸಲು ಹಾಗೂ ಪರಿಸರಕ್ಕೆ ಹಾನಿ ಉಂಟಾಗುವುದನ್ನು ತಡೆಯಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆ (ಐಸಿಜಿ) ತಿಳಿಸಿದೆ.</p>.<p>‘ಸದ್ಯಕ್ಕೆ ಈ ಹಡಗಿಗೆ ಸಕಲ ರಕ್ಷಣೆ ಒದಗಿಸಿದ್ದೇವೆ. ಪ್ರತಿಕೂಲ ಸನ್ನಿವೇಶ ತಿಳಿಯಾಗುತ್ತಿದ್ದಂತೆಯೇ ಬೆಂಕಿ ನಂದಿಸುವ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಲಿದ್ದೇವೆ. ಕಾರ್ಯಾಚರಣೆಯನ್ನು ಆದಷ್ಟು ಶೀಘ್ರವೇ ಪೂರ್ಣಗೊಳಿಸಲಿದ್ದೇವೆ. ಈ ಹಡಗಿನಿಂದ ಕರ್ನಾಟಕದ ಕರಾವಳಿ ತೀರದ ಪರಿಸರಕ್ಕೆ ಯಾವುದೇ ಅಪಾಯವಿಲ್ಲ.’</p>.<p>‘ಜುಲೈ 19ರಂದು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕರಾವಳಿ ರಕ್ಷಣಾ ಪಡೆಯ ಮಾಲಿನ್ಯ ನಿಯಂತ್ರಣ ಹಡಗು ‘ಸಮುದ್ರ ಪ್ರಹರಿ’ ತಕ್ಷಣವೇ ‘ಸಹಾಯ’ ಕಾರ್ಯಾಚರಣೆಗೆ ಧಾವಿಸಿತ್ತು. ತೈಲ ಸೋರಿಕೆಯಿಂದ ಸಮುದ್ರ ಮಾಲಿನ್ಯ ಉಂಟಾಗುವುದನ್ನು ತಡೆಯಲು ಕ್ರಮ ವಹಿಸಿತ್ತು. ‘ಸಮುದ್ರ ಪ್ರಹರಿ’ ಹಡಗಿನಲ್ಲಿ ಡೈನಾಮಿಕ್ ಪೊಸಿಷನಿಂಗ್ ಸಿಸ್ಟಂ ಅಳವಡಿಸಿದ್ದು, ಅದು ಇನ್ನೊಂದು ಹಡಗಿನ ಅತ್ಯಂತ ಸಮೀಪಕ್ಕೆ ಧಾವಿಸಿ ಬೆಂಕಿ ನಂದಿಸಲು ನೆರವಾಗುತ್ತದೆ.’</p>.<p>‘ಹಡಗಿನಲ್ಲಿ 21 ಸಿಬ್ಬಂದಿ ಇದ್ದರು. ಫಿಲಿಪ್ಪೈನ್ಸ್ನ ಒಬ್ಬ ಸಿಬ್ಬಂದಿ ಕಣ್ಮರೆಯಾಗಿದ್ದು, ಉಳಿದ ಎಲ್ಲ ಸಿಬ್ಬಂದಿ ಸುರಕ್ಷಿತ ಹಾಗೂ ಆರೋಗ್ಯವಾಗಿದ್ದಾರೆ. ಸರಕು ಸಾಗಣೆ ಹಡಗು ಸದ್ಯಕ್ಕೆ ನವಮಂಗಳೂರಿನಿಂದ 50 ನಾಟಿಕಲ್ ಮೈಲು ಹಾಗೂ ಕಡಲ ಕಿನಾರೆಯಿಂದ 37 ನಾಟಿಕಲ್ ಮೈಲು ದೂರದಲ್ಲಿದೆ. ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ನವಮಂಗಳೂರು ಬಂದರಿನ ಮೂಲಕವೇ ನಿರ್ವಹಿಸಲಾಗುತ್ತಿದೆ. ಬೆಂಕಿ ನಂದಿಸಿದ ಬಳಿಕ ಆ ಹಡಗನ್ನು ಈ ಬಂದರಿಗೆ ತರಲಾಗುತ್ತದೆ.’</p>.<p>‘ಭಾರತದ ನೌಕಾಯಾನ ಮಹಾನಿರ್ದೇಶನಾಲಯ, ರಾಜ್ಯ ಸರ್ಕಾರ, ಪಾಲುದಾರರು, ಬಂದರು ಪ್ರಾಧಿಕಾರ, ಹಡಗಿನ ಸರಕಿಗೆ ವಿಮೆ ಪರಿಹಾರ ಒದಗಿಸುವ ಸಂಸ್ಥೆ ಹಾಗೂ ಹಡಗಿನ ಮಾಲೀಕರ ಜೊತೆ ಸಮನ್ವಯ ಸಾಧಿಸಲು, ಕಾರ್ಯಾಚರಣೆಯ ಪ್ರಗತಿ ಪರಿಶೀಲಿಸಲು ಮತ್ತು ಬೆಂಕಿಯನ್ನು ತ್ವರಿತವಾಗಿ ನಂದಿಸಲು ಎರಡು ಸುತ್ತುಗಳ ಮಾತುಕತೆ ನಡೆಸಿದ್ದೇವೆ. ಸದ್ಯಕ್ಕೆ ಪರಿಸ್ಥಿತಿ ಹತೋಟಿಯಲ್ಲಿದೆ. ಸಮುದ್ರಕ್ಕೆ ಹಾಗೂ ಜಲಚರಗಳಿಗೆ ಯಾವುದೇ ಅಪಾಯ ಇಲ್ಲ. ಚಾಲನಾಸ್ಥಿತಿಯಲ್ಲಿರುವ ಹಡಗನ್ನು ಸದ್ಯಕ್ಕೆ ಭಾರತದ ಕಡಲ ಸರಹದ್ದಿಗಿಂತ 24 ನಾಟಿಕಲ್ ಮೈಲುಗಳ ಆಚೆ ನಿಲ್ಲಿಸಲಾಗಿದೆ. ಬೆಂಕಿ ನಂದಿಸಲು ಹಾಗೂ ಈ ಕಾರ್ಯಾಚರಣೆಯ ಸಮನ್ವಯಕ್ಕಾಗಿ ಸ್ಥಳದಲ್ಲಿ ಕನಿಷ್ಠ ಎರಡು ಹಡಗುಗಳು ಲಭ್ಯ ಇರುವಂತೆ ನೋಡಿಕೊಂಡಿದ್ದೇವೆ’ ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆಯ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ಅರಬ್ಬಿ ಸಮುದ್ರದಲ್ಲಿ ಸಾಗುವಾಗ ಬೆಂಕಿ ಹೊತ್ತಿಕೊಂಡ ಪನಾಮ ಧ್ವಜವನ್ನು ಹೊಂದಿರುವ ಸರಕು ಸಾಗಣೆಯ ಎಂ.ವಿ. ಮೇ| ಫ್ರಾಂಕ್ಫರ್ಟ್ ಕಂಟೈನರ್ ಹಡಗಿನ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಪ್ರತಿಕೂಲ ಹವಾಮಾನದಿಂದಾಗಿ ಸಮುದ್ರದ ವಾತಾವರಣ ಪ್ರಕ್ಷುಬ್ಧವಾಗಿದೆಯಾದರೂ ಹಡಗಿನ ಬೆಂಕಿ ನಂದಿಸಲು ಹಾಗೂ ಪರಿಸರಕ್ಕೆ ಹಾನಿ ಉಂಟಾಗುವುದನ್ನು ತಡೆಯಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆ (ಐಸಿಜಿ) ತಿಳಿಸಿದೆ.</p>.<p>‘ಸದ್ಯಕ್ಕೆ ಈ ಹಡಗಿಗೆ ಸಕಲ ರಕ್ಷಣೆ ಒದಗಿಸಿದ್ದೇವೆ. ಪ್ರತಿಕೂಲ ಸನ್ನಿವೇಶ ತಿಳಿಯಾಗುತ್ತಿದ್ದಂತೆಯೇ ಬೆಂಕಿ ನಂದಿಸುವ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಲಿದ್ದೇವೆ. ಕಾರ್ಯಾಚರಣೆಯನ್ನು ಆದಷ್ಟು ಶೀಘ್ರವೇ ಪೂರ್ಣಗೊಳಿಸಲಿದ್ದೇವೆ. ಈ ಹಡಗಿನಿಂದ ಕರ್ನಾಟಕದ ಕರಾವಳಿ ತೀರದ ಪರಿಸರಕ್ಕೆ ಯಾವುದೇ ಅಪಾಯವಿಲ್ಲ.’</p>.<p>‘ಜುಲೈ 19ರಂದು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕರಾವಳಿ ರಕ್ಷಣಾ ಪಡೆಯ ಮಾಲಿನ್ಯ ನಿಯಂತ್ರಣ ಹಡಗು ‘ಸಮುದ್ರ ಪ್ರಹರಿ’ ತಕ್ಷಣವೇ ‘ಸಹಾಯ’ ಕಾರ್ಯಾಚರಣೆಗೆ ಧಾವಿಸಿತ್ತು. ತೈಲ ಸೋರಿಕೆಯಿಂದ ಸಮುದ್ರ ಮಾಲಿನ್ಯ ಉಂಟಾಗುವುದನ್ನು ತಡೆಯಲು ಕ್ರಮ ವಹಿಸಿತ್ತು. ‘ಸಮುದ್ರ ಪ್ರಹರಿ’ ಹಡಗಿನಲ್ಲಿ ಡೈನಾಮಿಕ್ ಪೊಸಿಷನಿಂಗ್ ಸಿಸ್ಟಂ ಅಳವಡಿಸಿದ್ದು, ಅದು ಇನ್ನೊಂದು ಹಡಗಿನ ಅತ್ಯಂತ ಸಮೀಪಕ್ಕೆ ಧಾವಿಸಿ ಬೆಂಕಿ ನಂದಿಸಲು ನೆರವಾಗುತ್ತದೆ.’</p>.<p>‘ಹಡಗಿನಲ್ಲಿ 21 ಸಿಬ್ಬಂದಿ ಇದ್ದರು. ಫಿಲಿಪ್ಪೈನ್ಸ್ನ ಒಬ್ಬ ಸಿಬ್ಬಂದಿ ಕಣ್ಮರೆಯಾಗಿದ್ದು, ಉಳಿದ ಎಲ್ಲ ಸಿಬ್ಬಂದಿ ಸುರಕ್ಷಿತ ಹಾಗೂ ಆರೋಗ್ಯವಾಗಿದ್ದಾರೆ. ಸರಕು ಸಾಗಣೆ ಹಡಗು ಸದ್ಯಕ್ಕೆ ನವಮಂಗಳೂರಿನಿಂದ 50 ನಾಟಿಕಲ್ ಮೈಲು ಹಾಗೂ ಕಡಲ ಕಿನಾರೆಯಿಂದ 37 ನಾಟಿಕಲ್ ಮೈಲು ದೂರದಲ್ಲಿದೆ. ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ನವಮಂಗಳೂರು ಬಂದರಿನ ಮೂಲಕವೇ ನಿರ್ವಹಿಸಲಾಗುತ್ತಿದೆ. ಬೆಂಕಿ ನಂದಿಸಿದ ಬಳಿಕ ಆ ಹಡಗನ್ನು ಈ ಬಂದರಿಗೆ ತರಲಾಗುತ್ತದೆ.’</p>.<p>‘ಭಾರತದ ನೌಕಾಯಾನ ಮಹಾನಿರ್ದೇಶನಾಲಯ, ರಾಜ್ಯ ಸರ್ಕಾರ, ಪಾಲುದಾರರು, ಬಂದರು ಪ್ರಾಧಿಕಾರ, ಹಡಗಿನ ಸರಕಿಗೆ ವಿಮೆ ಪರಿಹಾರ ಒದಗಿಸುವ ಸಂಸ್ಥೆ ಹಾಗೂ ಹಡಗಿನ ಮಾಲೀಕರ ಜೊತೆ ಸಮನ್ವಯ ಸಾಧಿಸಲು, ಕಾರ್ಯಾಚರಣೆಯ ಪ್ರಗತಿ ಪರಿಶೀಲಿಸಲು ಮತ್ತು ಬೆಂಕಿಯನ್ನು ತ್ವರಿತವಾಗಿ ನಂದಿಸಲು ಎರಡು ಸುತ್ತುಗಳ ಮಾತುಕತೆ ನಡೆಸಿದ್ದೇವೆ. ಸದ್ಯಕ್ಕೆ ಪರಿಸ್ಥಿತಿ ಹತೋಟಿಯಲ್ಲಿದೆ. ಸಮುದ್ರಕ್ಕೆ ಹಾಗೂ ಜಲಚರಗಳಿಗೆ ಯಾವುದೇ ಅಪಾಯ ಇಲ್ಲ. ಚಾಲನಾಸ್ಥಿತಿಯಲ್ಲಿರುವ ಹಡಗನ್ನು ಸದ್ಯಕ್ಕೆ ಭಾರತದ ಕಡಲ ಸರಹದ್ದಿಗಿಂತ 24 ನಾಟಿಕಲ್ ಮೈಲುಗಳ ಆಚೆ ನಿಲ್ಲಿಸಲಾಗಿದೆ. ಬೆಂಕಿ ನಂದಿಸಲು ಹಾಗೂ ಈ ಕಾರ್ಯಾಚರಣೆಯ ಸಮನ್ವಯಕ್ಕಾಗಿ ಸ್ಥಳದಲ್ಲಿ ಕನಿಷ್ಠ ಎರಡು ಹಡಗುಗಳು ಲಭ್ಯ ಇರುವಂತೆ ನೋಡಿಕೊಂಡಿದ್ದೇವೆ’ ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆಯ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>