<p><strong>ಉಳ್ಳಾಲ</strong>: ಬಾಡಿಗೆ ನೀಡದೆ ನಾಲ್ಕು ತಿಂಗಳಿನಿಂದ ಮನೆಯಲ್ಲೇ ಉಳಿದಿದ್ದ ಕುಟುಂಬದ ಮೇಲೆ ಮನೆ ಮಾಲೀಕ ಸೇರಿದ ತಂಡ ಹಲ್ಲೆ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬಬ್ಬುಕಟ್ಟೆ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ.</p>.<p>ಮೂಲತಃ ನಾಟೆಕಲ್ ನಿವಾಸಿ ಬಶೀರ್ (44) ಹಲ್ಲೆಗೊಳಗಾದವರು. ಹಲ್ಲೆ ತಡೆಯಲು ಬಂದ ಅವರ ಪತ್ನಿ ನಸೀಮಾ (34), ಪುತ್ರ ಮುಹಮ್ಮದ್ ತಸ್ಲಾಲ್ (10) ಹಾಗೂ ಪುತ್ರಿ ಝಕಿಯಾ (9) ಮೇಲೂ ತಂಡ ಹಲ್ಲೆ ನಡೆಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.</p>.<p>ಹಲ್ಲೆಗೊಳಗಾದವರು ತೊಕ್ಕೊಟ್ಟು ನೇತಾಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆ ಮಾಲೀಕರ ಪುತ್ರ ಸಮೀರ್ ಹಾಗೂ ಬದ್ರುದ್ದೀನ್, ಕುಞಿಮೋನು, ಹನೀಫ್ ಸೇರಿಕೊಂಡು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ.</p>.<p>10 ತಿಂಗಳಿನಿಂದ ಬಶೀರ್ ಮತ್ತು ಕುಟುಂಬ ಬಬ್ಬುಕಟ್ಟೆಯಲ್ಲಿರುವ ಸಮೀರ್ ಎಂಬುವರ ಬಾಡಿಗೆ ಮನೆಯಲ್ಲಿದ್ದರು. ಮೂರು ತಿಂಗಳ ಬಾಡಿಗೆ ₹ 33 ಸಾವಿರ ಬಾಕಿ ಇರಿಸಿದ್ದರು. ನಿಗದಿತ ದಿನಾಂಕದ ಒಳಗೆ ಹಣ ನೀಡುವುದಾಗಿ ಉಳ್ಳಾಲ ಪೊಲೀಸ್ ಠಾಣೆಯಲ್ಲೂ ಬಶೀರ್ ಒಪ್ಪಿಕೊಂಡಿದ್ದರು. ಆದರೆ ದಿನ ಮುಂದೂಡಿ ₹ 11 ಸಾವಿರ ಮಾತ್ರ ನೀಡಿ, ಮತ್ತೆ ಅದೇ ಮನೆಯಲ್ಲಿ ಬಶೀರ್ ಕುಟುಂಬ ನೆಲೆಸಿತ್ತು. ಹಲ್ಲೆಗೊಳಗಾದವರು ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಳ್ಳಾಲ</strong>: ಬಾಡಿಗೆ ನೀಡದೆ ನಾಲ್ಕು ತಿಂಗಳಿನಿಂದ ಮನೆಯಲ್ಲೇ ಉಳಿದಿದ್ದ ಕುಟುಂಬದ ಮೇಲೆ ಮನೆ ಮಾಲೀಕ ಸೇರಿದ ತಂಡ ಹಲ್ಲೆ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬಬ್ಬುಕಟ್ಟೆ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ.</p>.<p>ಮೂಲತಃ ನಾಟೆಕಲ್ ನಿವಾಸಿ ಬಶೀರ್ (44) ಹಲ್ಲೆಗೊಳಗಾದವರು. ಹಲ್ಲೆ ತಡೆಯಲು ಬಂದ ಅವರ ಪತ್ನಿ ನಸೀಮಾ (34), ಪುತ್ರ ಮುಹಮ್ಮದ್ ತಸ್ಲಾಲ್ (10) ಹಾಗೂ ಪುತ್ರಿ ಝಕಿಯಾ (9) ಮೇಲೂ ತಂಡ ಹಲ್ಲೆ ನಡೆಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.</p>.<p>ಹಲ್ಲೆಗೊಳಗಾದವರು ತೊಕ್ಕೊಟ್ಟು ನೇತಾಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆ ಮಾಲೀಕರ ಪುತ್ರ ಸಮೀರ್ ಹಾಗೂ ಬದ್ರುದ್ದೀನ್, ಕುಞಿಮೋನು, ಹನೀಫ್ ಸೇರಿಕೊಂಡು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ.</p>.<p>10 ತಿಂಗಳಿನಿಂದ ಬಶೀರ್ ಮತ್ತು ಕುಟುಂಬ ಬಬ್ಬುಕಟ್ಟೆಯಲ್ಲಿರುವ ಸಮೀರ್ ಎಂಬುವರ ಬಾಡಿಗೆ ಮನೆಯಲ್ಲಿದ್ದರು. ಮೂರು ತಿಂಗಳ ಬಾಡಿಗೆ ₹ 33 ಸಾವಿರ ಬಾಕಿ ಇರಿಸಿದ್ದರು. ನಿಗದಿತ ದಿನಾಂಕದ ಒಳಗೆ ಹಣ ನೀಡುವುದಾಗಿ ಉಳ್ಳಾಲ ಪೊಲೀಸ್ ಠಾಣೆಯಲ್ಲೂ ಬಶೀರ್ ಒಪ್ಪಿಕೊಂಡಿದ್ದರು. ಆದರೆ ದಿನ ಮುಂದೂಡಿ ₹ 11 ಸಾವಿರ ಮಾತ್ರ ನೀಡಿ, ಮತ್ತೆ ಅದೇ ಮನೆಯಲ್ಲಿ ಬಶೀರ್ ಕುಟುಂಬ ನೆಲೆಸಿತ್ತು. ಹಲ್ಲೆಗೊಳಗಾದವರು ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>