<p><strong>ಹೊನ್ನಾಳಿ:</strong> ‘ಎ’ ಗ್ರೇಡ್ ಮುಜರಾಯಿ ವಿಭಾಗಕ್ಕೆ ಸೇರಿದ ಸುಂಕದಕಟ್ಟೆ ಗ್ರಾಮದ ನರಸಿಂಹಸ್ವಾಮಿ, ಮಂಜುನಾಥ ಸ್ವಾಮಿ ದೇವರ ಹುಂಡಿಯನ್ನು ಮಂಗಳವಾರ ಗ್ರಾಮಸ್ಥರ ಸಮ್ಮುಖದಲ್ಲಿ, ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳ ನೇತೃತ್ವದಲ್ಲಿ ತೆರೆಯಲಾಯಿತು.</p>.<p>ಹುಂಡಿಯನ್ನು 6 ತಿಂಗಳಿಗೊಮ್ಮೆ ತೆರೆದು ಮಾಡಿ ಎಣಿಕೆ ಮಾಡುವ ಪದ್ಧತಿ ಇದೆ. ಮಂಗಳವಾರ ಎಣಿಕೆ ಮಾಡಿದ ಸಂದರ್ಭದಲ್ಲಿ ₹ 46.77 ಲಕ್ಷ ಹುಂಡಿಯಲ್ಲಿ ಸಂಗ್ರಹವಾಗಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದರು.</p>.<p>‘ಮುಜರಾಯಿ ದೇವಸ್ಥಾನದ ಖಾತೆ ಇರುವ ಕೆನರಾ ಬ್ಯಾಂಕ್ನಲ್ಲಿ ಹಣ ಜಮಾ ಮಾಡಲಾಗುವುದು. ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಿಕೊಳ್ಳಲು ಅವಕಾಶವಿದೆ’ ಎಂದು ಅವರು ತಿಳಿಸಿದರು.</p>.<p>ರಾಜಸ್ವ ನಿರೀಕ್ಷಕರಾದ ರಮೇಶ್, ಜಯಪ್ರಕಾಶ್, ಮುಜರಾಯಿ ಗುಮಾಸ್ತೆ ಚಂದ್ರಕಲಾ, ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಕೆ. ನರಸಿಂಹಮೂರ್ತಿ, ಕರಿಯಪ್ಪ, ಅಣ್ಣಪ್ಪ, ಚಂದ್ರಮ್ಮ, ಪಿ.ಟಿ. ಗೌರಮ್ಮ, ಎಸ್.ಎನ್. ಪ್ರಸನ್ನ, ಗ್ರಾ.ಪಂ. ಸದಸ್ಯ ಶ್ರೀನಾಥ್, ಗ್ರಾಮ ಲೆಕ್ಕಿಗರಾದ ಭರ್ಮಪ್ಪ, ದೊಡ್ಡೇಶ್, ಬಸವರಾಜ್ , ಕೆನರಾ ಬ್ಯಾಂಲ್ನ ಅಧಿಕಾರಿಗಳಾದ ರಾಮಣ್ಣ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾಳಿ:</strong> ‘ಎ’ ಗ್ರೇಡ್ ಮುಜರಾಯಿ ವಿಭಾಗಕ್ಕೆ ಸೇರಿದ ಸುಂಕದಕಟ್ಟೆ ಗ್ರಾಮದ ನರಸಿಂಹಸ್ವಾಮಿ, ಮಂಜುನಾಥ ಸ್ವಾಮಿ ದೇವರ ಹುಂಡಿಯನ್ನು ಮಂಗಳವಾರ ಗ್ರಾಮಸ್ಥರ ಸಮ್ಮುಖದಲ್ಲಿ, ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳ ನೇತೃತ್ವದಲ್ಲಿ ತೆರೆಯಲಾಯಿತು.</p>.<p>ಹುಂಡಿಯನ್ನು 6 ತಿಂಗಳಿಗೊಮ್ಮೆ ತೆರೆದು ಮಾಡಿ ಎಣಿಕೆ ಮಾಡುವ ಪದ್ಧತಿ ಇದೆ. ಮಂಗಳವಾರ ಎಣಿಕೆ ಮಾಡಿದ ಸಂದರ್ಭದಲ್ಲಿ ₹ 46.77 ಲಕ್ಷ ಹುಂಡಿಯಲ್ಲಿ ಸಂಗ್ರಹವಾಗಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದರು.</p>.<p>‘ಮುಜರಾಯಿ ದೇವಸ್ಥಾನದ ಖಾತೆ ಇರುವ ಕೆನರಾ ಬ್ಯಾಂಕ್ನಲ್ಲಿ ಹಣ ಜಮಾ ಮಾಡಲಾಗುವುದು. ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಿಕೊಳ್ಳಲು ಅವಕಾಶವಿದೆ’ ಎಂದು ಅವರು ತಿಳಿಸಿದರು.</p>.<p>ರಾಜಸ್ವ ನಿರೀಕ್ಷಕರಾದ ರಮೇಶ್, ಜಯಪ್ರಕಾಶ್, ಮುಜರಾಯಿ ಗುಮಾಸ್ತೆ ಚಂದ್ರಕಲಾ, ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಕೆ. ನರಸಿಂಹಮೂರ್ತಿ, ಕರಿಯಪ್ಪ, ಅಣ್ಣಪ್ಪ, ಚಂದ್ರಮ್ಮ, ಪಿ.ಟಿ. ಗೌರಮ್ಮ, ಎಸ್.ಎನ್. ಪ್ರಸನ್ನ, ಗ್ರಾ.ಪಂ. ಸದಸ್ಯ ಶ್ರೀನಾಥ್, ಗ್ರಾಮ ಲೆಕ್ಕಿಗರಾದ ಭರ್ಮಪ್ಪ, ದೊಡ್ಡೇಶ್, ಬಸವರಾಜ್ , ಕೆನರಾ ಬ್ಯಾಂಲ್ನ ಅಧಿಕಾರಿಗಳಾದ ರಾಮಣ್ಣ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>