ನಿಲ್ದಾಣ ನಾಮಕರಣದಲ್ಲೂ ಜಟಾಪಟಿ
‘ಸ್ಮಾರ್ಟ್ ಸಿಟಿ’ ಯೋಜನೆಯಡಿ ನೂತನವಾಗಿ ನಿರ್ಮಿಸಿದ ಖಾಸಗಿ ಬಸ್ ನಿಲ್ದಾಣದ ನಾಮಕರಣದಲ್ಲಿ ಕೂಡ ಕಾಂಗ್ರೆಸ್ ಮತ್ತು ಬಿಜೆಪಿ ಜಟಾಪಟಿ ನಡೆಸಿವೆ. ಈ ಹಿಂದೆ ಇದ್ದ ‘ಶಾಮನೂರು ಶಿವಶಂಕರಪ್ಪ ಬಸ್ ನಿಲ್ದಾಣ’ ಹೆಸರಿನಲ್ಲಿಯೇ ಹೊಸ ಬಸ್ ನಿಲ್ದಾಣ ಉದ್ಘಾಟನೆಗೆ ಸಜ್ಜಾಗಿದೆ. ಪಿ.ಬಿ.ರಸ್ತೆಯಲ್ಲಿರುವ ಖಾಸಗಿ ಬಸ್ ನಿಲ್ದಾಣದ ರೂಪುರೇಷ ಕಾಂಗ್ರೆಸ್ ಅಧಿಕಾರವಧಿಯಲ್ಲಿ ಸಿದ್ಧವಾಗಿತ್ತು. ಕಾಮಗಾರಿ ಆರಂಭವಾದಾಗ ಅಧಿಕಾರ ಬಿಜೆಪಿ ಕೈಯಲ್ಲಿತ್ತು. ಹೊಸ ಬಸ್ ನಿಲ್ದಾಣಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರು ಇಡುವ ಪ್ರಯತ್ನಕ್ಕೆ ಕೈಹಾಕಿತು. ಮಹಾನಗರ ಪಾಲಿಕೆಯ ತುರ್ತು ಸಭೆ ಕರೆದು ನಿರ್ಣಯ ಕೈಗೊಂಡಿತು. ಇದು ಕಾಂಗ್ರೆಸ್ ಜನಪ್ರತಿನಿಧಿಗಳನ್ನು ಕೆಣಕಿತು. ‘ಶಾಮನೂರು ಶಿವಶಂಕರಪ್ಪ ಅವರ 75ನೇ ಜನ್ಮದಿನದ ಅಂಗವಾಗಿ 2004–05ರಲ್ಲಿ ಖಾಸಗಿ ಬಸ್ ನಿಲ್ದಾಣಕ್ಕೆ ಅವರ ಹೆಸರನ್ನು ಇಡಲಾಗಿತ್ತು. ಮಹಾನಗರ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ನವೀಕರಣಗೊಂಡ ಬಳಿಕ ಬಿಜೆಪಿ ಹೊಸ ತಗಾದೆ ತೆಗೆದಿತ್ತು. ಆದರೆ ಇದರಲ್ಲಿ ಬಿಜೆಪಿಗೆ ಯಶಸ್ಸು ಸಿಗಲಿಲ್ಲ’ ಎನ್ನುತ್ತಾರೆ ‘ಸ್ಮಾರ್ಟ್ ಸಿಟಿ’ ಸದಸ್ಯರೂ ಆಗಿರುವ ಪಾಲಿಕೆ ಸದಸ್ಯ ಎ.ನಾಗರಾಜ