ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ‘ಸ್ಮಾರ್ಟ್‌ ಸಿಟಿ ಲಿಮಿಟೆಡ್‌’: ಹಸ್ತಾಂತರಕ್ಕೆ ಕಾದಿವೆ 54 ಯೋಜನೆ

‘ಸ್ಮಾರ್ಟ್ ಸಿಟಿ’ಯಡಿ ಪೂರ್ಣಗೊಂಡ ಯೋಜನೆಗಳ ನಿರ್ವಹಣೆಗೆ ಮಹಾನಗರ ಪಾಲಿಕೆ ಮೀನಮೇಷ
Published : 25 ಜುಲೈ 2024, 6:55 IST
Last Updated : 25 ಜುಲೈ 2024, 6:55 IST
ಫಾಲೋ ಮಾಡಿ
Comments
ಪಾಲಿಕೆ ವಾದ ಏನು?
ಪೂರ್ಣಗೊಂಡ ಯೋಜನೆಯ ಹಸ್ತಾಂತರಕ್ಕೆ ‘ಸ್ಮಾರ್ಟ್‌ ಸಿಟಿ ಲಿಮಿಟೆಡ್‌’ ಪತ್ರ ವ್ಯವಹಾರ ನಡೆಸುತ್ತದೆ. ನಿರ್ದಿಷ್ಟ ಯೋಜನೆಯನ್ನು ಸ್ವೀಕರಿಸುವ ಇಲಾಖೆಯ ಪ್ರತಿನಿಧಿಗಳು ಹಾಗೂ ‘ಸ್ಮಾರ್ಟ್‌ ಸಿಟಿ’ ಎಂಜಿನಿಯರುಗಳ ತಂಡ ಜಂಟಿ ಸಮೀಕ್ಷೆ ನಡೆಸುತ್ತದೆ. ದೋಷಗಳನ್ನು ಪತ್ತೆಹಚ್ಚಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಪೂರ್ಣಗೊಂಡ ಯೋಜನೆಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲು ‘ಸ್ಮಾರ್ಟ್‌ ಸಿಟಿ ಲಿಮಿಟೆಡ್‌’ ಪತ್ರ ಬರೆದಿದೆ. ನ್ಯಾಯಾಲಯದ ಮೆಟ್ಟಿಲೇರಿದ ಯೋಜನೆಗಳನ್ನು ಹೊರತುಪಡಿಸಿ ಉಳಿದವುಗಳನ್ನು ಸ್ವಾಧೀನಕ್ಕೆ ಪಡೆಯಲು ಮಹಾನಗರ ಪಾಲಿಕೆ ಸಮ್ಮತಿಸಿದೆ. ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್‌ ಸಿಟಿ ಯೋಜನೆಯ ಎಂಜಿನಿಯರುಗಳ ತಂಡ ಜಂಟಿ ಸಮೀಕ್ಷೆ ಕೂಡ ನಡೆಸಿದೆ. ರಸ್ತೆ ಅಭಿವೃದ್ಧಿ, ಒಳಚರಂಡಿ ದುರಸ್ತಿಯಲ್ಲಿ ಕೆಲ ದೋಷಗಳನ್ನು ಪತ್ತೆ ಮಾಡಲಾಗಿದೆ. ಮಾರ್ಗಸೂಚಿ ಪ್ರಕಾರ ಸರಿಪಡಿಸುವಂತೆ ‘ಸ್ಮಾರ್ಟ್‌ ಸಿಟಿ’ಗೆ ಸೂಚಿಸಿದೆ. ಇದರಲ್ಲಿ ವಿಳಂಬ ಆಗುತ್ತಿದೆ ಎಂಬುದು ಮಹಾನಗರ ಪಾಲಿಕೆಯ ವಾದ.
ನಿಗದಿತ ಅನುದಾನದಲ್ಲಿ ಯೋಜನೆಗಳನ್ನು ರೂಪಿಸುವುದಷ್ಟೇ ‘ಸ್ಮಾರ್ಟ್‌ ಸಿಟಿ’ಯ ಗುರಿ. ಮಹಾನಗರ ಪಾಲಿಕೆ ಹೊರತುಪಡಿಸಿ ಉಳಿದ ಇಲಾಖೆಗಳು ಯೋಜನೆಗಳನ್ನು ಸ್ವಾಧೀನಕ್ಕೆ ಪಡೆದುಕೊಂಡಿವೆ.
ವೀರೇಶಕುಮಾರ್‌, ವ್ಯವಸ್ಥಾಪಕ ನಿರ್ದೇಶಕ, ಸ್ಮಾರ್ಟ್‌ ಸಿಟಿ ಲಿಮಿಟೆಡ್‌
ಜಂಟಿ ಸಮೀಕ್ಷೆ ನಡೆಯುತ್ತಿದ್ದು, ಗುತ್ತಿಗೆದಾರರ ನಿರ್ವಹಣೆಯ ಅವಧಿ ಪೂರ್ಣಗೊಂಡ ಯೋಜನೆಗಳನ್ನು ಸ್ವೀಕರಿಸಲು ಪಾಲಿಕೆ ಕಾರ್ಯೋನ್ಮುಖವಾಗಿದೆ. ಯಾವುದೇ ಯೋಜನೆಯನ್ನು ನಿರಾಕರಿಸಿಲ್ಲ.
ರೇಣುಕಾ, ಆಯುಕ್ತರು, ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT