ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂತೇಬೆನ್ನೂರು: ಪಾಪ್‌ಕಾರ್ನ್ ಮೆಕ್ಕೆಜೋಳ ಬಿತ್ತನೆಗೆ ಭರದ ಸಿದ್ಧತೆ

Published : 20 ಮೇ 2024, 7:42 IST
Last Updated : 20 ಮೇ 2024, 7:42 IST
ಫಾಲೋ ಮಾಡಿ
Comments
ಸಂತೇಬೆನ್ನೂರು ಬಳಿ ಪಾಪ್‌ಕಾರ್ನ್ ಮೆಕ್ಕೆಜೋಳ ಬಿತ್ತನೆಗಾಗಿ ಭೂಮಿ ಉಳುಮೆ ಮಾಡಿರುವುದು
ಸಂತೇಬೆನ್ನೂರು ಬಳಿ ಪಾಪ್‌ಕಾರ್ನ್ ಮೆಕ್ಕೆಜೋಳ ಬಿತ್ತನೆಗಾಗಿ ಭೂಮಿ ಉಳುಮೆ ಮಾಡಿರುವುದು
ಸಂತೇಬೆನ್ನೂರಿನಲ್ಲೇ ಅತಿಹೆಚ್ಚು ಬೆಳೆ
ದಾವಣಗೆರೆ ಜಿಲ್ಲೆಯ ಸಂತೇಬೆನ್ನೂರು ಹರಪನಹಳ್ಳಿ ಜಗಳೂರು ಸೇರಿದಂತೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಾಪ್‌ಕಾರ್ನ್ ಬೆಳೆಯಲಾಗುತ್ತದೆ. ಈ ಪೈಕಿ ಅರ್ಧಪಾಲು ಬೆಳೆ ಸಂತೇಬೆನ್ನೂರು ವ್ಯಾಪ್ತಿಯಲ್ಲಿಯೇ ಇದೆ ಎಂಬುದು ವಿಶೇಷ. ಪ್ರಮುಖ ಖರೀದಿದಾರರು ಇಲ್ಲಿದ್ದಾರೆ.
‘ಬೀಜೋಪಚಾರ ಮುಖ್ಯ’
ಸಂಸ್ಕರಿಸಿದ ಬೀಜ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಹೀಗಾಗ ರೈತರೇ ಪಾಪ್‌ಕಾರ್ನ್ ಮೆಕ್ಕೆಜೋಳ ಬೀಜ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಇನ್ನೂ ಕೆಲವರು ಬೀಜದ ಹುಡುಕಾಟದಲ್ಲಿ ತೊಡಗಿದ್ದಾರೆ. ಪ್ರತಿ ಎಕರೆಗೆ 8 ಕೆ.ಜಿ. ಬಿತ್ತನೆ ಬೀಜದ ಅವಶ್ಯಕತೆ ಇದೆ. ಬಿತ್ತನೆ ಪೂರ್ವದಲ್ಲಿ ಬೀಜೋಪಚಾರ ಅಗತ್ಯ. ಸಿಯಾಂಟ್ರನಿಲಿಪ್ರೊಲ್ 19.8% + ಥಿಯಾಮೆಥೊಕ್ಸಾಮ್ 19.8% FS ಔಷಧಿಯನ್ನು ಪ್ರತಿ ಕೆ.ಜಿ. ಬೀಜಕ್ಕೆ 6 ಎಂ.ಎಲ್ ಸೇರಿಸಿ ಬೀಜೋಪಚಾರ ಮಾಡಬೇಕು. ಸ್ಥಳೀಯವಾಗಿ ಇದು ಸಿಗದಿದ್ದಲ್ಲಿ ಕ್ಲೊರೋಫೆರಿಫಾಸ್ 20ec ಪ್ರತಿ ಕೆ.ಜಿ. ಬೀಜಕ್ಕೆ 3 ಎಂ.ಎಲ್ ಬೆರೆಸಿ ಉಪಚರಿಸಬೇಕು. ‘ಬೀಜೋಪಚಾರದಿಂದ ವಿವಿಧ ಬಗೆಯ ರೋಗ ನಿಯಂತ್ರಣ ಸಾಧ್ಯ. ಸೈನಿಕ ಹುಳು ಕಾಟವನ್ನು ತಡೆಯುವ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಸಾಲುಗಳಲ್ಲಿ ಎಡೆಹೊಡೆದು ದಿಂಡೇರಿಸುವುದು ಅತಿ ಮುಖ್ಯ’ ಎಂದು ಕೃಷಿ ಅಧಿಕಾರಿ ಮೆಹತಾಬ್ ಅಲಿ ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT