<p><strong>ದಾವಣಗೆರೆ</strong>: ‘ಲೋಕಸಭಾ ಚುನಾವಣೆಯಲ್ಲಿ ನಾನು ಎಂದೂ ಟಿಕೆಟ್ ಕೇಳಿಲ್ಲ. ನನಗೇ ನೀಡುತ್ತ ಬಂದಿದ್ದಾರೆ, ಮುಂದೆಯೂ ನನಗೇ ಕೊಡುತ್ತಾರೆ. ಜನರು ಮುಂದೆಯೂ ಆಶೀರ್ವಾದ ಮಾಡಲಿದ್ದು, ನಾನೇ ಲೋಕಸಭಾ ಸದಸ್ಯನಾಗುವೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.</p>.<p>‘ನಾನು ಟಿಕೆಟ್ ಕೇಳೋಕೆ ಹೋಗಲ್ಲ, ಬೇಕಾದವರು ಕೇಳುತ್ತಾರೆ. ಯಾರಿಗೆ ಅವಕಾಶ ಕೊಟ್ಟರೂ ಕೆಲಸ ಮಾಡಬೇಕು. ಪಕ್ಷದ ತೀರ್ಮಾನವೇ ಅಂತಿಮ’ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.</p>.<p>ಪುತ್ರನಿಗೆ ಟಿಕೆಟ್ ಸಿಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿ, ‘ಅದು ಭಗವಂತನ ಇಚ್ಛೆ. ಮಗ ಏಕೆ ಆಗಬಾರದು ಎಂದು ಮರು ಪ್ರಶ್ನಿಸಿದರು. ಈಗಲೂ ನಾನೇ ಸ್ಪರ್ಧಿಸುವೆ. ಜನರು ಆಶೀರ್ವಾದ ಮಾಡಿದರೆ ಗೆಲ್ಲುವೆ’ ಎಂದು ಹೇಳಿದರು.</p>.<p>‘ಸ್ಥಳೀಯರಲ್ಲದವರಿಗೆ ಟಿಕೆಟ್ ನೀಡಬಾರದು ಎಂದು ಹಿಂದೆ ಕಾಂಗ್ರೆಸ್ನಲ್ಲಿ ಹೇಳುತ್ತಿದ್ದರು. ಈಗ ಕೆಲವರು ಅದನ್ನೇ ಹೇಳುತ್ತಿದ್ದಾರೆ. ಟಿಕೆಟ್ಗಾಗಿ ಸ್ಪರ್ಧೆ ಯಾವತ್ತೂ ಇದೆ, ಈಗ ಸ್ವಲ್ಪ ಪ್ರಬಲವಾಗಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ‘ಲೋಕಸಭಾ ಚುನಾವಣೆಯಲ್ಲಿ ನಾನು ಎಂದೂ ಟಿಕೆಟ್ ಕೇಳಿಲ್ಲ. ನನಗೇ ನೀಡುತ್ತ ಬಂದಿದ್ದಾರೆ, ಮುಂದೆಯೂ ನನಗೇ ಕೊಡುತ್ತಾರೆ. ಜನರು ಮುಂದೆಯೂ ಆಶೀರ್ವಾದ ಮಾಡಲಿದ್ದು, ನಾನೇ ಲೋಕಸಭಾ ಸದಸ್ಯನಾಗುವೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.</p>.<p>‘ನಾನು ಟಿಕೆಟ್ ಕೇಳೋಕೆ ಹೋಗಲ್ಲ, ಬೇಕಾದವರು ಕೇಳುತ್ತಾರೆ. ಯಾರಿಗೆ ಅವಕಾಶ ಕೊಟ್ಟರೂ ಕೆಲಸ ಮಾಡಬೇಕು. ಪಕ್ಷದ ತೀರ್ಮಾನವೇ ಅಂತಿಮ’ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.</p>.<p>ಪುತ್ರನಿಗೆ ಟಿಕೆಟ್ ಸಿಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿ, ‘ಅದು ಭಗವಂತನ ಇಚ್ಛೆ. ಮಗ ಏಕೆ ಆಗಬಾರದು ಎಂದು ಮರು ಪ್ರಶ್ನಿಸಿದರು. ಈಗಲೂ ನಾನೇ ಸ್ಪರ್ಧಿಸುವೆ. ಜನರು ಆಶೀರ್ವಾದ ಮಾಡಿದರೆ ಗೆಲ್ಲುವೆ’ ಎಂದು ಹೇಳಿದರು.</p>.<p>‘ಸ್ಥಳೀಯರಲ್ಲದವರಿಗೆ ಟಿಕೆಟ್ ನೀಡಬಾರದು ಎಂದು ಹಿಂದೆ ಕಾಂಗ್ರೆಸ್ನಲ್ಲಿ ಹೇಳುತ್ತಿದ್ದರು. ಈಗ ಕೆಲವರು ಅದನ್ನೇ ಹೇಳುತ್ತಿದ್ದಾರೆ. ಟಿಕೆಟ್ಗಾಗಿ ಸ್ಪರ್ಧೆ ಯಾವತ್ತೂ ಇದೆ, ಈಗ ಸ್ವಲ್ಪ ಪ್ರಬಲವಾಗಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>