ಬೈಸಿಕಲ್ ಯೋಜನೆ ಬಗ್ಗೆ ಶಿಕ್ಷಣ ಇಲಾಖೆಗೆ ಮಾಹಿತಿ ಇಲ್ಲ. 2019–20ನೇ ಸಾಲಿನಲ್ಲಿ 8 ತರಗತಿ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಲಾಗಿದೆ
ಎಸ್.ಎಸ್.ಕೆಳದಿಮಠ ಉಪನಿರ್ದೇಶಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಧಾರವಾಡ
ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಶಾಲೆಗಳಿಗೆ ನಡೆಯಲು ಸಾಧ್ಯವಾಗದೆ ಅರ್ಧಕ್ಕೆ ಶಿಕ್ಷಣ ನಿಲ್ಲಿಸುತ್ತಾರೆ. ಯೋಜನೆ ಆರಂಭಿಸಿದರೆ ಅನುಕೂಲವಾಗಲಿದೆ.
ಎಫ್.ವಿ.ಮಂಜಣ್ಣವರ ಅಧ್ಯಕ್ಷ ಪ್ರೌಢಶಾಲಾ ಸಹಶಿಕ್ಷಕರ ಸಂಘ ಧಾರವಾಡ ಜಿಲ್ಲಾ ಘಟಕ
‘ಬಳಕೆಯಾಗದೇ ಗುಜರಿಗೆ’
ಬೈಸಿಕಲ್ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ವಿತರಿಸುವ ಸೈಕಲ್ಗಳು ತೀರಾ ಕಳಪೆಯಾಗಿದ್ದವು. ಕೆಲವೇ ತಿಂಗಳಲ್ಲಿ ಹಾಳಾಗುತ್ತಿದ್ದವು. ಮತ್ತೆ ಬಳಕೆಗೆ ಯೋಗ್ಯವಾಗದೆ ಗುಜರಿ ಸೇರಿವೆ. ‘ಬೈಸಿಲ್ಗಳು ಕಳೆಪೆ ಆಗಿರುವ ಕಾರಣ ಅವುಗಳನ್ನು ದೀರ್ಘ ಕಾಲ ಬಳಸಲು ಆಗುವುದಿಲ್ಲ. ಬೈಸಿಕಲ್ಗಳು ಪಡೆದ 6 ತಿಂಗಳಲ್ಲೇ ಬಳಸಲು ಆಗದಂತಹ ಸ್ಥಿತಿ ತಲುಪುತ್ತವೆ. ಹೀಗಾಗಿ ಅವು ಗುಜರಿ ಸೇರುತ್ತವೆ. ವಿದ್ಯಾರ್ಥಿಗಳಿಗೆ ಹಳೆಯದ್ದು ಬಳಸಲು ಆಗುತ್ತಿಲ್ಲ. ಹೊಸತು ಸಿಗುತ್ತಿಲ್ಲ’ ಎಂದು ಶಿಕ್ಷಕರೊಬ್ಬರು ಹೇಳಿದರು.