<p><strong>ಧಾರವಾಡ</strong>: ನಗರದಿಂದ ಹಳಿಯಾಳ ಸಂಪರ್ಕಿಸುವ ರಸ್ತೆಯು ಹದಗೆಟ್ಟಿದೆ. ಡಾಂಬರು ಕಿತ್ತಿದ್ದು, ಗುಂಡಿಗಳಾಗಿದ್ದು, ಈ ಮಾರ್ಗದಲ್ಲಿ ಸಂಚಾರ ಫಜೀತಿಯಾಗಿದೆ.</p>.<p>ಪ್ರತಿನಿತ್ಯ ಬಸ್ಗಳು, ಕಾರು, ಲಾರಿ, ನೂರಾರು ದ್ವಿಚಕ್ರ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಕಲ್ಲುಮಣ್ಣಿನ ಈ ರಸ್ತೆಯಲ್ಲಿ ವಾಹನಗಳು ಸಾಗುವಾಗ ದೂಳೆಬ್ಬಿಸುತ್ತವೆ. ಈ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕರು, ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ದೂಳಿನ ‘ಶಿಕ್ಷೆ’ ಅನುಭವಿಸುವಂತಾಗಿದೆ.</p>.<p>‘ಧಾರವಾಡದಿಂದ ದಾಂಡೇಲಿಗೆ ನಿತ್ಯ ಬೈಕ್ನಲ್ಲಿ ಓಡಾಡುತ್ತೇನೆ. ರಸ್ತೆ ಹಾಳಾಗಿದ್ದರಿಂದ ದೂಳಿನ ಕಾಟ ತಪ್ಪಿಸಿಕೊಳ್ಳಲು ಮಾಸ್ಕ್ ಧರಿಸಿಯೇ ಓಡಾಡಬೇಕು. ಹದಗೆಟ್ಟಿರುವ ಈ ರಸ್ತೆಯಲ್ಲಿ ವಾಹನ ಚಲಾಯಿಸುವುದು ಸವಾಲಾಗಿದೆ‘ ಎಂದು ಸಹ ಪ್ರಾಧ್ಯಾಪಕ ಶಿವಾನಂದ ಗಾಣಿಗೇರ ಹೇಳಿದರು.</p>.<p>ಹುಲಕೊಪ್ಪ, ಹಲ್ತಿಕೋಟಿ, ಮುರಕಟ್ಟಿ, ಹಳ್ಳಿಗೇರಿ ಸಹಿತ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಶಾಲೆ–ಕಾಲೇಜುಗಳಿಗೆ ಧಾರವಾಡಕ್ಕೆ ನಿತ್ಯ ಸಂಚರಿಸುತ್ತಾರೆ. ಶಿಕ್ಷಕರು ಸಹಿತ ವಿವಿಧ ಇಲಾಖೆ ನೌಕರರು ಹಳಿಯಾಳ ನಗರದಿಂದ ಇತರೆಡೆಗಳಿಂದ ಪ್ರತಿನಿತ್ಯ ಓಡಾಡುತ್ತಾರೆ.</p>.<p>ನಗರದಿಂದ ಹಳಿಯಾಳ ಕಡೆಗೆ ಸಾಗುವ ಮಾರ್ಗದಲ್ಲಿ ಸುಮಾರು ಐದು ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದೆ. ಮನಸೂರ ಕ್ರಾಸ್, ಸಲಕ್ಕಿನಕೊಪ್ಪ, ಬಾಡದಲ್ಲಿ ಅಲ್ಲಲ್ಲಿ ಗುಂಡಿಗಳಾಗಿವೆ. ಅಬ್ಲಿಕೊಪ್ಪ ಕ್ರಾಸ್ ಹಾಗೂ ಮುರಕಟ್ಟಿಯಿಂದ ಹಳ್ಳಿಗೇರಿ ಕ್ರಾಸ್ವರೆಗೂ ಡಾಂಬರು ಕಿತ್ತಿದೆ.</p>.<p>ಗುಂಡಿಮಯ ರಸ್ತೆಯಲ್ಲಿ ಆಯತಪ್ಪಿ ದ್ವಿಚಕ್ರವಾಹನ ಸವಾರರು ಬಿದ್ದು ಪೆಟ್ಟಾಗಿರುವ, ನುಚ್ಚು ಕಲ್ಲಿನ ರಸ್ತೆಯಲ್ಲಿ ಟಯರ್ ಪಂಕ್ಚರ್ ಆಗಿ ಪಡಿಪಾಟಲುಪಟ್ಟಿರುವ ಉದಾಹರಣೆಗಳು ಇವೆ. ದೂಳಿನಿಂದಾಗಿ ವಾಹನ ಸವಾರರಿಗೆ ಎದುರಿನ ವಾಹನಗಳು ಗೋಚರಿಸದಂತಹ ಸ್ಥಿತಿ ಇದೆ. ಗುಂಡಿಗಳನ್ನು ತಪ್ಪಿಸುವ ಭರದಲ್ಲಿ ಅಪಘಾತಗಳು ಸಂಭವಿಸಿವೆ.</p>.<p><strong>ಫಸಲು ಹಾನಿ:</strong> ವಾಹನಗಳು ಸಾಗುವಾಗ ಎಬ್ಬಿಸುವ ದೂಳು ರಸ್ತೆ ಇಕ್ಕೆಲದ ತೋಟ, ಗದ್ದೆ, ಜಮೀನುಗಳ ಬೆಳೆಗಳಿಗೆ ಹಾನಿ ಉಂಟುಮಾಡುತ್ತಿದೆ. ಕಬ್ಬು, ಮಾವಿನ ಮರಗಳು ದೂಳುಮಯವಾಗಿವೆ. ದೂಳಿನ ಕಾರಣಕ್ಕೆ ಈ ಭಾಗದ ಜಮೀನು, ಗದ್ದೆ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ.</p>.<p>‘ಈಗ ಮಾವಿನ ಮರುಗಳು ಹೂಕಟ್ಟುವ ಕಾಲ. ದೂಳು ಹೂವಿನ ಮೇಲೆಲ್ಲ ಹರಡಿ ಹಾನಿ ಉಂಟು ಮಾಡುತ್ತಿದೆ. ದೂಳಿನಿಂದ ಅಲರ್ಜಿ ಉಂಟಾಗುತ್ತದೆ ಎಂದು ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ದೂಳಿನಿಂದಾಗಿ ಕೃಷಿ ಚಟುವಟಿಕೆ ನಿರ್ವಹಿಸುವುದು ಸವಾಲಾಗಿದೆ’ ಎಂದು ರೈತರು ಸಂಕಷ್ಟ ತೋಡಿಕೊಳ್ಳುತ್ತಿದ್ದಾರೆ.</p>.<p>ಈ ರಸ್ತೆಯಲ್ಲಿ ಒಮ್ಮೊಮ್ಮೆ ರಾತ್ರಿ ವೇಳೆ ಸಾರಿಗೆ ಬಸ್ಸು, ಲಾರಿ, ಕಾರು, ಬೈಕ್ ವಾಹನಗಳು ಕೆಟ್ಟು ನಿಲ್ಲುತ್ತವೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದರು.</p>.<p>‘ಒಮ್ಮೊಮ್ಮೆ ರಾತ್ರಿ ವೇಳೆ ಬಸ್, ಲಾರಿ, ಕಾರು, ಬೈಕ್ ಕೆಟ್ಟು ನಿಲ್ಲುತ್ತವೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ರಸ್ತೆಯಲ್ಲಿ ಸಂಚಾರ ಕಷ್ಟಕರವಾಗಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ರಸ್ತೆ ದುರಸ್ತಿಗೆ ಕ್ರಮ ವಹಿಸಬೇಕು’ ಎಂದು ಹಳ್ಳಿಗೇರಿ ಗ್ರಾಮದ ರೈತ ಯಲ್ಲಪ್ಪ ಕೊಟ್ಟಳ್ಳಿ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ನಗರದಿಂದ ಹಳಿಯಾಳ ಸಂಪರ್ಕಿಸುವ ರಸ್ತೆಯು ಹದಗೆಟ್ಟಿದೆ. ಡಾಂಬರು ಕಿತ್ತಿದ್ದು, ಗುಂಡಿಗಳಾಗಿದ್ದು, ಈ ಮಾರ್ಗದಲ್ಲಿ ಸಂಚಾರ ಫಜೀತಿಯಾಗಿದೆ.</p>.<p>ಪ್ರತಿನಿತ್ಯ ಬಸ್ಗಳು, ಕಾರು, ಲಾರಿ, ನೂರಾರು ದ್ವಿಚಕ್ರ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಕಲ್ಲುಮಣ್ಣಿನ ಈ ರಸ್ತೆಯಲ್ಲಿ ವಾಹನಗಳು ಸಾಗುವಾಗ ದೂಳೆಬ್ಬಿಸುತ್ತವೆ. ಈ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕರು, ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ದೂಳಿನ ‘ಶಿಕ್ಷೆ’ ಅನುಭವಿಸುವಂತಾಗಿದೆ.</p>.<p>‘ಧಾರವಾಡದಿಂದ ದಾಂಡೇಲಿಗೆ ನಿತ್ಯ ಬೈಕ್ನಲ್ಲಿ ಓಡಾಡುತ್ತೇನೆ. ರಸ್ತೆ ಹಾಳಾಗಿದ್ದರಿಂದ ದೂಳಿನ ಕಾಟ ತಪ್ಪಿಸಿಕೊಳ್ಳಲು ಮಾಸ್ಕ್ ಧರಿಸಿಯೇ ಓಡಾಡಬೇಕು. ಹದಗೆಟ್ಟಿರುವ ಈ ರಸ್ತೆಯಲ್ಲಿ ವಾಹನ ಚಲಾಯಿಸುವುದು ಸವಾಲಾಗಿದೆ‘ ಎಂದು ಸಹ ಪ್ರಾಧ್ಯಾಪಕ ಶಿವಾನಂದ ಗಾಣಿಗೇರ ಹೇಳಿದರು.</p>.<p>ಹುಲಕೊಪ್ಪ, ಹಲ್ತಿಕೋಟಿ, ಮುರಕಟ್ಟಿ, ಹಳ್ಳಿಗೇರಿ ಸಹಿತ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಶಾಲೆ–ಕಾಲೇಜುಗಳಿಗೆ ಧಾರವಾಡಕ್ಕೆ ನಿತ್ಯ ಸಂಚರಿಸುತ್ತಾರೆ. ಶಿಕ್ಷಕರು ಸಹಿತ ವಿವಿಧ ಇಲಾಖೆ ನೌಕರರು ಹಳಿಯಾಳ ನಗರದಿಂದ ಇತರೆಡೆಗಳಿಂದ ಪ್ರತಿನಿತ್ಯ ಓಡಾಡುತ್ತಾರೆ.</p>.<p>ನಗರದಿಂದ ಹಳಿಯಾಳ ಕಡೆಗೆ ಸಾಗುವ ಮಾರ್ಗದಲ್ಲಿ ಸುಮಾರು ಐದು ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದೆ. ಮನಸೂರ ಕ್ರಾಸ್, ಸಲಕ್ಕಿನಕೊಪ್ಪ, ಬಾಡದಲ್ಲಿ ಅಲ್ಲಲ್ಲಿ ಗುಂಡಿಗಳಾಗಿವೆ. ಅಬ್ಲಿಕೊಪ್ಪ ಕ್ರಾಸ್ ಹಾಗೂ ಮುರಕಟ್ಟಿಯಿಂದ ಹಳ್ಳಿಗೇರಿ ಕ್ರಾಸ್ವರೆಗೂ ಡಾಂಬರು ಕಿತ್ತಿದೆ.</p>.<p>ಗುಂಡಿಮಯ ರಸ್ತೆಯಲ್ಲಿ ಆಯತಪ್ಪಿ ದ್ವಿಚಕ್ರವಾಹನ ಸವಾರರು ಬಿದ್ದು ಪೆಟ್ಟಾಗಿರುವ, ನುಚ್ಚು ಕಲ್ಲಿನ ರಸ್ತೆಯಲ್ಲಿ ಟಯರ್ ಪಂಕ್ಚರ್ ಆಗಿ ಪಡಿಪಾಟಲುಪಟ್ಟಿರುವ ಉದಾಹರಣೆಗಳು ಇವೆ. ದೂಳಿನಿಂದಾಗಿ ವಾಹನ ಸವಾರರಿಗೆ ಎದುರಿನ ವಾಹನಗಳು ಗೋಚರಿಸದಂತಹ ಸ್ಥಿತಿ ಇದೆ. ಗುಂಡಿಗಳನ್ನು ತಪ್ಪಿಸುವ ಭರದಲ್ಲಿ ಅಪಘಾತಗಳು ಸಂಭವಿಸಿವೆ.</p>.<p><strong>ಫಸಲು ಹಾನಿ:</strong> ವಾಹನಗಳು ಸಾಗುವಾಗ ಎಬ್ಬಿಸುವ ದೂಳು ರಸ್ತೆ ಇಕ್ಕೆಲದ ತೋಟ, ಗದ್ದೆ, ಜಮೀನುಗಳ ಬೆಳೆಗಳಿಗೆ ಹಾನಿ ಉಂಟುಮಾಡುತ್ತಿದೆ. ಕಬ್ಬು, ಮಾವಿನ ಮರಗಳು ದೂಳುಮಯವಾಗಿವೆ. ದೂಳಿನ ಕಾರಣಕ್ಕೆ ಈ ಭಾಗದ ಜಮೀನು, ಗದ್ದೆ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ.</p>.<p>‘ಈಗ ಮಾವಿನ ಮರುಗಳು ಹೂಕಟ್ಟುವ ಕಾಲ. ದೂಳು ಹೂವಿನ ಮೇಲೆಲ್ಲ ಹರಡಿ ಹಾನಿ ಉಂಟು ಮಾಡುತ್ತಿದೆ. ದೂಳಿನಿಂದ ಅಲರ್ಜಿ ಉಂಟಾಗುತ್ತದೆ ಎಂದು ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ದೂಳಿನಿಂದಾಗಿ ಕೃಷಿ ಚಟುವಟಿಕೆ ನಿರ್ವಹಿಸುವುದು ಸವಾಲಾಗಿದೆ’ ಎಂದು ರೈತರು ಸಂಕಷ್ಟ ತೋಡಿಕೊಳ್ಳುತ್ತಿದ್ದಾರೆ.</p>.<p>ಈ ರಸ್ತೆಯಲ್ಲಿ ಒಮ್ಮೊಮ್ಮೆ ರಾತ್ರಿ ವೇಳೆ ಸಾರಿಗೆ ಬಸ್ಸು, ಲಾರಿ, ಕಾರು, ಬೈಕ್ ವಾಹನಗಳು ಕೆಟ್ಟು ನಿಲ್ಲುತ್ತವೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದರು.</p>.<p>‘ಒಮ್ಮೊಮ್ಮೆ ರಾತ್ರಿ ವೇಳೆ ಬಸ್, ಲಾರಿ, ಕಾರು, ಬೈಕ್ ಕೆಟ್ಟು ನಿಲ್ಲುತ್ತವೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ರಸ್ತೆಯಲ್ಲಿ ಸಂಚಾರ ಕಷ್ಟಕರವಾಗಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ರಸ್ತೆ ದುರಸ್ತಿಗೆ ಕ್ರಮ ವಹಿಸಬೇಕು’ ಎಂದು ಹಳ್ಳಿಗೇರಿ ಗ್ರಾಮದ ರೈತ ಯಲ್ಲಪ್ಪ ಕೊಟ್ಟಳ್ಳಿ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>