ಸೇವಂತಿಗೆ, ಜರ್ಬೆರಾ, ಚೆಂಡು ಹೂವು, ಬಟನ್ ಗುಲಾಬಿ, ಹೆಲಿಕೊನಿಯಾ, ಯೋಲಸ್, ಟುಲಿಪ್, ಡಚ್ ಫ್ಲವರ್, ಆರ್ಕಿಡ್, ಸೂರ್ಯಕಾಂತಿ ಹೂವುಗಳನ್ನು ಬಳಸಿಕೊಂಡು ತರೇಹವಾರಿ ಹೂಗುಚ್ಛಗಳನ್ನು ತಯಾರಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ವಿದ್ಯಾಶ್ರೀ ಅಲಗವಾಡಿ ಅವರು ಹೂವುಗಳಿಂದ ಸಿದ್ಧಪಡಿಸಿರುವ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮಮಂದಿರ ಮಾದರಿ ಪ್ರಮುಖ ಆಕರ್ಷಣೆ.