<p><strong>ಉಪ್ಪಿನಬೆಟಗೇರಿ:</strong> ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ, ಕನ್ನಡ ಹೆಣ್ಣು ಮಕ್ಕಳ ಶಾಲೆ ಮತ್ತು ಉರ್ದು ಶಾಲೆಯಲ್ಲಿ ಮೂಲಸೌಕರ್ಯ ಕೊರತೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.</p>.<p>ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ಭೋಜನಾಲಯ, ಹೈಟೆಕ್ ಶೌಚಾಲಯ ಇನ್ನಿತರ ಮೂಲಸೌಕಾರ್ಯಗಳು ಮಂಜೂರಾಗಿದೆ. ಕೆಲ ಕಾಮಗಾರಿಗಳು ಕುಂಟುತ್ತ ಸಾಗಿದ್ದು, ಇನ್ನೂ ಕೆಲವು ಹೆಸರಿಗಷ್ಟೇ ಎಂಬಂತಿವೆ.</p>.<p>ಹೆಣ್ಣು ಮಕ್ಕಳ ಶಾಲೆಗೆ ಸ್ಥಳದ ಅಭಾವದಿಂದ ಎರಡು ಕೊಠಡಿಗಳ ಚಾವಣಿ ತೆಗೆದು ಸ್ಲ್ಯಾಪ್ ಹಾಕಲಾಗಿದೆ. ಇದರ ಮೇಲೆ ಭೋಜನಾಲಯದ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇಲೆ ಹತ್ತಲು ನಿರ್ಮಿಸಿದ ಮೆಟ್ಟಿಲುಗಳಿಗೆ ಬಳಸಿದ ಕಬ್ಬಿಣದ ಕಂಬಿಗಳು ಹಾಗೇ ಉಳಿದಿದ್ದು, ಅಪಾಯಕ್ಕೆ ಎಡೆ ಮಾಡಿಕೊಡುವಂತಿವೆ.</p>.<p>ಭೋಜನಾಲಯದ ಕಟ್ಟಡ ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷಗಳಾಗಿವೆ. ಅನುದಾನ ಬಾರದೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಅನುದಾನ ಬಿಡುಗಡೆಯಾದ ನಂತರ ಕಾಮಗಾರಿ ಆರಂಭಿಸಲಾಗುವುದು ಎಂಬುದು ಗುತ್ತಿಗೆದಾರರ ಮಾತು.</p>.<p>‘ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ಭೋಜನಾಲಯ ಕಟ್ಟಡ ನಿರ್ಮಾಣಕ್ಕೆ ಶಾಲೆಯ ಮುಂಭಾಗದ ಕಾಂಪೌಂಡ್ ಕೆಡವಲಾಗಿದೆ. ಇದರಿಂದಾಗಿ ಶಾಲಾ ಆವರಣದಲ್ಲಿ ನೈರ್ಮಲ್ಯ ಮರೀಚಿಕೆಯಾಗಿದೆ. ಮೇಲಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳುತ್ತಿಲ್ಲ. ಹೀಗೆ ಮುಂದುವರಿದರೆ ಗ್ರಾಮ ಪಂಚಾಯ್ತಿಗೆ ತೆರಳಿ ಧರಣಿ ನಡೆಸುತ್ತೇವೆ’ ಎಂದು ಶಾಲಾಭಿವೃದ್ಧಿ ಸಮಿತಿ ಸದಸ್ಯ ಯಲ್ಲಪ್ಪ ದಿವಟಗಿ ಎಚ್ಚರಿಸಿದ್ದಾರೆ.</p>.<p>ಸರ್ಕಾರಿ ಗಂಡು ಮಕ್ಕಳ ಶಾಲೆಗೂ ಭೋಜನಾಲಯವಿಲ್ಲ. ಮಕ್ಕಳು ಶಾಲೆಯ ಮುಂಭಾಗದ ಚಾವಣಿಯಲ್ಲಿ ಕುಳಿತು ಊಟ ಮಾಡುವಂತಾಗಿದೆ. ಮೂರು ಮೂತ್ರಾಲಯ ಹಾಗೂ ಒಂದು ಶೌಚಾಲಯವಿದೆ. ಮಕ್ಕಳ ಸಂಖ್ಯೆ ಹೆಚ್ಚಿರುವ ಕಾರಣ ಇದು ಸಾಲುತ್ತಿಲ್ಲ.</p>.<p>‘ಉರ್ದು ಶಾಲೆಗೆ ತೆರಳುವ ರಸ್ತೆ ಮಣ್ಣು ಕಲ್ಲಿನಿಂದ ಕೂಡಿದೆ. ಮಳೆಗಾಲದಲ್ಲಿ ಕೆಸರಿನ ಗದ್ದೆಯಂತಾಗಿ ತೊಂದರೆಯಾಗುತ್ತಿದೆ. ಈ ಕುರಿತು ಮಕ್ಕಳ ಗ್ರಾಮ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಶಿಕ್ಷಕರು.</p>.<p>‘ಹನುಮನಾಳ ಗ್ರಾಮದ ಪ್ರಾಥಮಿಕ ಶಾಲೆಗೆ ಕೊಠಡಿಗಳ ಅಭಾವವಿದ್ದು, ದೇವಸ್ಥಾನದಲ್ಲಿ ಪಾಠ ಹೇಳುವಂತಾಗಿದೆ’ ಎಂದು ಅಲ್ಲಿಯ ಶಿಕ್ಷಕರೊಬ್ಬರು ತಿಳಿಸಿದರು.</p>.<div><blockquote>ಶಾಲೆಗಳ ಮೂಲಸೌಕರ್ಯಗಳ ಕೊರತೆ ಗಮನಕ್ಕಿದೆ. ಶೀಘ್ರವೇ ಕಾಮಗಾರಿಗೆ ಕ್ರಮ ಕೈಗೊಂಡು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು</blockquote><span class="attribution">-ಬಿ.ಎ.ಬಾವಾಕಾನವರ ಪಿಡಿಒ ಉಪ್ಪಿನಬೆಟಗೇರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಪ್ಪಿನಬೆಟಗೇರಿ:</strong> ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ, ಕನ್ನಡ ಹೆಣ್ಣು ಮಕ್ಕಳ ಶಾಲೆ ಮತ್ತು ಉರ್ದು ಶಾಲೆಯಲ್ಲಿ ಮೂಲಸೌಕರ್ಯ ಕೊರತೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.</p>.<p>ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ಭೋಜನಾಲಯ, ಹೈಟೆಕ್ ಶೌಚಾಲಯ ಇನ್ನಿತರ ಮೂಲಸೌಕಾರ್ಯಗಳು ಮಂಜೂರಾಗಿದೆ. ಕೆಲ ಕಾಮಗಾರಿಗಳು ಕುಂಟುತ್ತ ಸಾಗಿದ್ದು, ಇನ್ನೂ ಕೆಲವು ಹೆಸರಿಗಷ್ಟೇ ಎಂಬಂತಿವೆ.</p>.<p>ಹೆಣ್ಣು ಮಕ್ಕಳ ಶಾಲೆಗೆ ಸ್ಥಳದ ಅಭಾವದಿಂದ ಎರಡು ಕೊಠಡಿಗಳ ಚಾವಣಿ ತೆಗೆದು ಸ್ಲ್ಯಾಪ್ ಹಾಕಲಾಗಿದೆ. ಇದರ ಮೇಲೆ ಭೋಜನಾಲಯದ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇಲೆ ಹತ್ತಲು ನಿರ್ಮಿಸಿದ ಮೆಟ್ಟಿಲುಗಳಿಗೆ ಬಳಸಿದ ಕಬ್ಬಿಣದ ಕಂಬಿಗಳು ಹಾಗೇ ಉಳಿದಿದ್ದು, ಅಪಾಯಕ್ಕೆ ಎಡೆ ಮಾಡಿಕೊಡುವಂತಿವೆ.</p>.<p>ಭೋಜನಾಲಯದ ಕಟ್ಟಡ ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷಗಳಾಗಿವೆ. ಅನುದಾನ ಬಾರದೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಅನುದಾನ ಬಿಡುಗಡೆಯಾದ ನಂತರ ಕಾಮಗಾರಿ ಆರಂಭಿಸಲಾಗುವುದು ಎಂಬುದು ಗುತ್ತಿಗೆದಾರರ ಮಾತು.</p>.<p>‘ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ಭೋಜನಾಲಯ ಕಟ್ಟಡ ನಿರ್ಮಾಣಕ್ಕೆ ಶಾಲೆಯ ಮುಂಭಾಗದ ಕಾಂಪೌಂಡ್ ಕೆಡವಲಾಗಿದೆ. ಇದರಿಂದಾಗಿ ಶಾಲಾ ಆವರಣದಲ್ಲಿ ನೈರ್ಮಲ್ಯ ಮರೀಚಿಕೆಯಾಗಿದೆ. ಮೇಲಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳುತ್ತಿಲ್ಲ. ಹೀಗೆ ಮುಂದುವರಿದರೆ ಗ್ರಾಮ ಪಂಚಾಯ್ತಿಗೆ ತೆರಳಿ ಧರಣಿ ನಡೆಸುತ್ತೇವೆ’ ಎಂದು ಶಾಲಾಭಿವೃದ್ಧಿ ಸಮಿತಿ ಸದಸ್ಯ ಯಲ್ಲಪ್ಪ ದಿವಟಗಿ ಎಚ್ಚರಿಸಿದ್ದಾರೆ.</p>.<p>ಸರ್ಕಾರಿ ಗಂಡು ಮಕ್ಕಳ ಶಾಲೆಗೂ ಭೋಜನಾಲಯವಿಲ್ಲ. ಮಕ್ಕಳು ಶಾಲೆಯ ಮುಂಭಾಗದ ಚಾವಣಿಯಲ್ಲಿ ಕುಳಿತು ಊಟ ಮಾಡುವಂತಾಗಿದೆ. ಮೂರು ಮೂತ್ರಾಲಯ ಹಾಗೂ ಒಂದು ಶೌಚಾಲಯವಿದೆ. ಮಕ್ಕಳ ಸಂಖ್ಯೆ ಹೆಚ್ಚಿರುವ ಕಾರಣ ಇದು ಸಾಲುತ್ತಿಲ್ಲ.</p>.<p>‘ಉರ್ದು ಶಾಲೆಗೆ ತೆರಳುವ ರಸ್ತೆ ಮಣ್ಣು ಕಲ್ಲಿನಿಂದ ಕೂಡಿದೆ. ಮಳೆಗಾಲದಲ್ಲಿ ಕೆಸರಿನ ಗದ್ದೆಯಂತಾಗಿ ತೊಂದರೆಯಾಗುತ್ತಿದೆ. ಈ ಕುರಿತು ಮಕ್ಕಳ ಗ್ರಾಮ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಶಿಕ್ಷಕರು.</p>.<p>‘ಹನುಮನಾಳ ಗ್ರಾಮದ ಪ್ರಾಥಮಿಕ ಶಾಲೆಗೆ ಕೊಠಡಿಗಳ ಅಭಾವವಿದ್ದು, ದೇವಸ್ಥಾನದಲ್ಲಿ ಪಾಠ ಹೇಳುವಂತಾಗಿದೆ’ ಎಂದು ಅಲ್ಲಿಯ ಶಿಕ್ಷಕರೊಬ್ಬರು ತಿಳಿಸಿದರು.</p>.<div><blockquote>ಶಾಲೆಗಳ ಮೂಲಸೌಕರ್ಯಗಳ ಕೊರತೆ ಗಮನಕ್ಕಿದೆ. ಶೀಘ್ರವೇ ಕಾಮಗಾರಿಗೆ ಕ್ರಮ ಕೈಗೊಂಡು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು</blockquote><span class="attribution">-ಬಿ.ಎ.ಬಾವಾಕಾನವರ ಪಿಡಿಒ ಉಪ್ಪಿನಬೆಟಗೇರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>