<p><strong>ಹುಬ್ಬಳ್ಳಿ</strong>: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾವಿ, ಹಾನಗಲ್ ತಾಲ್ಲೂಕುಗಳ ವ್ಯಾಪ್ತಿಯ ಮಳಗಿ–ಶಿಗ್ಗಾವಿ ನಡುವಿನ ಪರ್ವತಶ್ರೇಣಿಯಿದೆ. ಹುಬ್ಬಳ್ಳಿ–ಶಿರಸಿ ಮಾರ್ಗದಲ್ಲಿ ಸಂಚರಿಸುವಾಗ ಎಡಭಾಗದಲ್ಲಿ ಈ ಪರ್ವತ ಶ್ರೇಣಿಯಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಗುಡ್ಡಗಳ ಶ್ರೇಣಿ ಹಾಗೂ ಅದರಲ್ಲಿನ ಕಾಡು ವ್ಯಾಪಕವಾಗಿ ಕರಗುತ್ತಿದೆ ಎಂದು ಜೀವಶಾಸ್ತ್ರಜ್ಞ ಕೇಶವ ಕೊರ್ಸೆ ನೇತೃತ್ವದ ಅಧ್ಯಯನ ತಂಡ ಕಳವಳ ವ್ಯಕ್ತಪಡಿಸಿದೆ.</p>.<p>ಭೂ–ಅತಿಕ್ರಮಣ, ಅನಧಿಕೃತ ಬೇಸಾಯ, ಅಕ್ರಮ ಮರಕಡಿತ, ಮಣ್ಣಿನ ವಾಣಿಜ್ಯಿಕ ಬಳಕೆ, ಅನಧಿಕೃತ ಕ್ವಾರಿ ಮತ್ತು ಇಟ್ಟಂಗಿ ಭಟ್ಟಿಗಳು, ನೀಲಗಿರಿ ನೆಡುತೋಪುಗಳ ವಿಸ್ತರಣೆ ಇತ್ಯಾದಿ ಕಾರಣಗಳು ಬಯಲುನಾಡಿನ ಸಹ್ಯಾದ್ರಿಯನ್ನು ಸುತ್ತಿಕೊಂಡಿವೆ. ಹೀಗಾಗಿ ಕಾಡು ಕಣ್ಮರೆಯಾಗುತ್ತ, ಗುಡ್ಡಗಳು ಕರಗುತ್ತ, ಜೀವವೈವಿಧ್ಯ ನಾಶವಾಗುತ್ತಿದೆ. ಮೇಲ್ಮಣ್ಣು ನಾಶವಾಗಿ ಫಲವತ್ತತೆ ಕಳೆದುಕೊಳ್ಳುತ್ತಿವೆ ಎಂದು ತಂಡ ತಿಳಿಸಿದೆ.</p>.<p>ನೈಸರ್ಗಿಕ ಜಲಮರುಪೂರಣ ಸಾಧ್ಯವಾಗದೆ ಸುತ್ತಲಿನ ತೊರೆಗಳು ಒಣಗುತ್ತಿವೆ. ಕೆರೆಗಳು ಖಾಯಿಯಾಗುತ್ತಿವೆ. ಇದರಿಂದಾಗಿ ಕೊಳವೆಬಾವಿ ಅವಲಂಬನೆ ಮಿತಿಮೀರುತ್ತಿರುವುದರ ಜತೆಗೆ ಹೆಚ್ಚು ನೀರು ಬೇಡುವ ಅಡಿಕೆಯಂಥ ವಾಣಿಜ್ಯೀಕ ತೋಟಗಾರಿಕೆಯೂ ಹೆಚ್ಚಾಗುತ್ತಿದೆ. ಒಟ್ಟಾರೆ ಇಲ್ಲಿನ ಕೃಷಿ ಪರಿಸರದ ಪರಿಸ್ಥಿತಿ ಹದಗೆಡುತ್ತಿವೆ. ಇವೆಲ್ಲವುಗಳಿಂದಾಗಿ ಇಲ್ಲಿನ ಕೃಷಿ ಪರಿಸರ ಹಾಗೂ ಅದನ್ನಾಧರಿಸಿದ ಜನಜೀವನ ಸಂಕಷ್ಟ ಎದುರಿಸುತ್ತಿದೆ. ಆದ್ದರಿಂದ ಈ ಪ್ರದೇಶದ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವ ತುರ್ತು ಅಗತ್ಯವಿದೆ ಎಂಬುದು ತಂಡದ ಆಗ್ರಹವಾಗಿದೆ.</p>.<p>’ಭೌಗೋಳಿಕವಾಗಿ ಸುಮಾರು 50–60 ಕಿ.ಮೀ ಉದ್ದ, 20–25 ಕಿ.ಮೀ ಅಗಲಕ್ಕೆ ವ್ಯಾಪಿಸಿರುವ ಈ ಪರ್ವತಶ್ರೇಣಿಯಲ್ಲಿ 75 ಮೀಟರ್ನಿಂದ 200 ಮೀಟರ್ ವರೆಗೆ ಎತ್ತರದ ಹಲವಾರು ಸಣ್ಣ–ದೊಡ್ಡ ಗುಡ್ಡಗಳಿವೆ. ಪಾರಿಸಾರಿಕವಾಗಿ ಇಲ್ಲಿ ಸುರಿಯುವುದು 800–1000 ಮಿ.ಮೀ. ಮಳೆಯಾದರೂ ಆ ಮಳೆನೀರನ್ನು ಹಿಡಿದಿಟ್ಟು ಅಂತರ್ಜಲ ಮರುಪೂರಣ ಮಾಡಿ ಸುತ್ತಲ ಪ್ರದೇಶದ ಅಂತರ್ಜಲಮಟ್ಟ ಕಾದುಕೊಳ್ಳಲು ಇವು ಸಹಕಾರಿಯಾಗುತ್ತಿವೆ. ಮುಂಡಗೋಡ, ಶಿಗ್ಗಾವಿ, ಹಾನಗಲ್ ಈ ಮೂರು ತಾಲ್ಲೂಕುಗಳಲ್ಲಿರುವ ನೂರಾರು ಕೆರೆಗಳಿಗೆ ಜಲ ಮರುಪೂರಣವಾಗುತ್ತಿರುವುದು ಈ ಕಾಡಿನ ಪ್ರದೇಶದಿಂದಾಗಿ. ಹೀಗಾಗಿ ಈ ಪರ್ವತಶ್ರೇಣಿಯನ್ನು ಹಾವೇರಿ ಜಿಲ್ಲೆ ಹಾಗೂ ಮುಂಡಗೋಡಿನ ಹಸಿರು ಪುಪ್ಪಸವೆಂದು ಗುರುತಿಸಬೇಕಾಗಿದೆ‘ ಎಂದು ಜೀವಶಾಸ್ತ್ರಜ್ಞ ಕೇಶವ ಕೊರ್ಸೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.</p>.<p>ಬಯಲುನಾಡಿನ ಸಹ್ಯಾದ್ರಿಯಂತಿರುವ ಈ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಿಂದ ಅಧ್ಯಯನ ನಡೆಸಿರುವ ಅಧ್ಯಯನ ತಂಡ ಕಂಡುಕೊಂಡ ಒಳನೋಟಗಳ ಆಧಾರದಲ್ಲಿ ಅರಣ್ಯಶ್ರೇಣಿ ಸಂರಕ್ಷಣೆಗೆ ಕೆಲವು ಸಂರಕ್ಷಣಾಸೂತ್ರಗಳನ್ನು ತುರ್ತಾಗಿ ಜಾರಿಮಾಡುವಂತೆ ರಾಜ್ಯ ಸರ್ಕಾರವನ್ನು ಇತ್ತೀಚೆಗೆ ಕೋರಿದೆ.</p>.<p>ಅರಣ್ಯ ರಕ್ಷಣೆ, ಜನಸಹಭಾಗಿತ್ವದ ಅರಣ್ಯ ನಿರ್ವಹಣೆ, ಅರಣ್ಯೀಕರಣ, ಗೋಮಾಳಭೂಮಿ ರಕ್ಷಣೆ, ಕೆರೆಗಳ ಪುನರಜ್ಜೀವನ, ವನವಾಸಿ ಹೈನುಗಾರರಿಗೆ ಸಹಾಯಹಸ್ತ, ಭೂಕಬಳಿಕೆ ನೀತಿ ಜಾರಿ, ಕೃಷಿ–ಅರಣ್ಯಕ್ಕೆ ಪ್ರೋತ್ಸಾಹ, ಅವೈಜ್ಞಾನಿಕ ಭೂಪರಿವರ್ತನೆಗೆ ನಿಯಂತ್ರಣದ ಮೂಲಕ ಅರಣ್ಯಶ್ರೇಣಿ ಸಂರಕ್ಷಿಸಬಹುದು ಎಂಬುದನ್ನು ಅಧ್ಯಯನ ತಂಡ ಸೂಚಿಸಿದೆ.</p>.<div><blockquote>ಮಳಗಿ–ಶಿಗ್ಗಾವಿ ನಡುವಿನ ಈ ಪ್ರದೇಶದ ಜಲಮೂಲ ಸಂರಕ್ಷಣೆ ಹಾಗೂ ಕೃಷಿ ಸುರಕ್ಷತೆ ದೃಷ್ಟಿಯಿಂದ ಪರ್ವತಶ್ರೇಣಿ ಸಂರಕ್ಷಣೆ ತೀರಾ ಅಗತ್ಯ </blockquote><span class="attribution">ಕೇಶವ ಕೊರ್ಸೆ ಜೀವಶಾಸ್ತ್ರಜ್ಞ</span></div>.<div><blockquote>ಮುಂಡಗೋಡ ವಲಯ ಅರಣ್ಯ ವ್ಯಾಪ್ತಿಯ ಪರ್ವತಶ್ರೇಣಿಯಲ್ಲಿ ಹೊಸ ಒತ್ತುವರಿಗೆ ಅವಕಾಶ ನೀಡುತ್ತಿಲ್ಲ. ಅರಣ್ಯ ಅತಿಕ್ರಮಣ ಮರಗಳ ಕಡಿತ ಗಮನಕ್ಕೆ ಬಂದರೆ ಕ್ರಮ ಕೈಗೊಳ್ಳಲಾಗುವುದು </blockquote><span class="attribution">ವಾಗೀಶ ಬಾಚೀನಕೊಪ್ಪ ಆರ್ಎಫ್ಒ ಮುಂಡಗೋಡ</span></div>.<p>ಜೀವವೈವಿಧ್ಯದ ಆಗರ 62500 ಹೆಕ್ಟೇರ್ನಷ್ಟಿರುವ ಈ ಪ್ರದೇಶದ ಕಾಡಿನಲ್ಲಿ ನೂರಾರು ಪ್ರಭೇದಗಳ ಸಸ್ಯ ಉಭಯವಾಸಿಗಳು ಸರಿಸೃಪಗಳು ಪಕ್ಷಿಗಳು ಸಸ್ತನಿಗಳು ಇವೆ. ಮತ್ತಿ ಹೊನಗಲು ಜಂಬೆ ಕಣಗಿಲ ಹೆದ್ದೆ ನಂದಿ ಬೂರಗ ಮರಮಂದಾರ ಶ್ರೀಗಂಧ ತೇಗ ಇತ್ಯಾದಿ ನೂರಕ್ಕೂ ಹೆಚ್ಚು ಪ್ರಭೇದದ ಮರಗಳಿವೆ. ಚಿರತೆ ಕಾಡುಹಂದಿ ಕಡವೆ ಜಿಂಕೆ ಮುಳ್ಳುಹಂದಿ ಮುಂಗುಸಿ ಕಾಡುಪಾಪ ಸೇರಿದಂತೆ 40ಕ್ಕೂ ಹೆಚ್ಚು ಪ್ರಭೇದದ ಪ್ರಾಣಿವರ್ಗವಿವೆ. ನೇರಳೆ ಹಣ್ಣು ಶೀಗೆಕಾಯಿ ನೆಲ್ಲಿಕಾಯಿ ಜೇನುತುಪ್ಪ ಮುಂತಾದ ಅರಣ್ಯ ಉತ್ಪನ್ನಗಳು ಈ ಕಾಡಿನಲ್ಲಿ ಲಭಿಸಲಿವೆ. ಈ ಪ್ರದೇಶ ಸಿದ್ದಿ ಗೌಳಿ ಮರಾಠಿಗರಂಥ ವನವಾಸಿಗರ ನೆಲೆಯಾಗಿದ್ದು ಗೌಳಿಗರು ಕಾಡನ್ನೇ ಆಧರಿಸಿ ಹೈನುಗಾರಿಕೆ ನಡೆಸುತ್ತಾರೆ.</p>.<p>ಬಯಲುನಾಡಿನ ಸಹ್ಯಾದ್ರಿ ಪರ್ವತ ಶ್ರೇಣಿಯ ವ್ಯಾಪ್ತಿ ಜಿಲ್ಲೆ;ತಾಲ್ಲೂಕು;ಅರಣ್ಯವಲಯ;ಅರಣ್ಯ ಪ್ರದೇಶ (ಹೆಕ್ಟೇರ್ನಲ್ಲಿ)(ಅಂದಾಜು) ಉತ್ತರಕನ್ನಡ;ಮುಂಡಗೋಡ;ಮುಂಡಗೋಡ;25000 ಉತ್ತರಕನ್ನಡ;ಮುಂಡಗೋಡ;ಕಾತೂರ;12000 ಹಾವೇರಿ;ಶಿಗ್ಗಾವಿ;ದುಂಡಶಿ;10000 ಹಾವೇರಿ;ಹಾನಗಲ್;ಹಾನಗಲ್;15500 </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾವಿ, ಹಾನಗಲ್ ತಾಲ್ಲೂಕುಗಳ ವ್ಯಾಪ್ತಿಯ ಮಳಗಿ–ಶಿಗ್ಗಾವಿ ನಡುವಿನ ಪರ್ವತಶ್ರೇಣಿಯಿದೆ. ಹುಬ್ಬಳ್ಳಿ–ಶಿರಸಿ ಮಾರ್ಗದಲ್ಲಿ ಸಂಚರಿಸುವಾಗ ಎಡಭಾಗದಲ್ಲಿ ಈ ಪರ್ವತ ಶ್ರೇಣಿಯಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಗುಡ್ಡಗಳ ಶ್ರೇಣಿ ಹಾಗೂ ಅದರಲ್ಲಿನ ಕಾಡು ವ್ಯಾಪಕವಾಗಿ ಕರಗುತ್ತಿದೆ ಎಂದು ಜೀವಶಾಸ್ತ್ರಜ್ಞ ಕೇಶವ ಕೊರ್ಸೆ ನೇತೃತ್ವದ ಅಧ್ಯಯನ ತಂಡ ಕಳವಳ ವ್ಯಕ್ತಪಡಿಸಿದೆ.</p>.<p>ಭೂ–ಅತಿಕ್ರಮಣ, ಅನಧಿಕೃತ ಬೇಸಾಯ, ಅಕ್ರಮ ಮರಕಡಿತ, ಮಣ್ಣಿನ ವಾಣಿಜ್ಯಿಕ ಬಳಕೆ, ಅನಧಿಕೃತ ಕ್ವಾರಿ ಮತ್ತು ಇಟ್ಟಂಗಿ ಭಟ್ಟಿಗಳು, ನೀಲಗಿರಿ ನೆಡುತೋಪುಗಳ ವಿಸ್ತರಣೆ ಇತ್ಯಾದಿ ಕಾರಣಗಳು ಬಯಲುನಾಡಿನ ಸಹ್ಯಾದ್ರಿಯನ್ನು ಸುತ್ತಿಕೊಂಡಿವೆ. ಹೀಗಾಗಿ ಕಾಡು ಕಣ್ಮರೆಯಾಗುತ್ತ, ಗುಡ್ಡಗಳು ಕರಗುತ್ತ, ಜೀವವೈವಿಧ್ಯ ನಾಶವಾಗುತ್ತಿದೆ. ಮೇಲ್ಮಣ್ಣು ನಾಶವಾಗಿ ಫಲವತ್ತತೆ ಕಳೆದುಕೊಳ್ಳುತ್ತಿವೆ ಎಂದು ತಂಡ ತಿಳಿಸಿದೆ.</p>.<p>ನೈಸರ್ಗಿಕ ಜಲಮರುಪೂರಣ ಸಾಧ್ಯವಾಗದೆ ಸುತ್ತಲಿನ ತೊರೆಗಳು ಒಣಗುತ್ತಿವೆ. ಕೆರೆಗಳು ಖಾಯಿಯಾಗುತ್ತಿವೆ. ಇದರಿಂದಾಗಿ ಕೊಳವೆಬಾವಿ ಅವಲಂಬನೆ ಮಿತಿಮೀರುತ್ತಿರುವುದರ ಜತೆಗೆ ಹೆಚ್ಚು ನೀರು ಬೇಡುವ ಅಡಿಕೆಯಂಥ ವಾಣಿಜ್ಯೀಕ ತೋಟಗಾರಿಕೆಯೂ ಹೆಚ್ಚಾಗುತ್ತಿದೆ. ಒಟ್ಟಾರೆ ಇಲ್ಲಿನ ಕೃಷಿ ಪರಿಸರದ ಪರಿಸ್ಥಿತಿ ಹದಗೆಡುತ್ತಿವೆ. ಇವೆಲ್ಲವುಗಳಿಂದಾಗಿ ಇಲ್ಲಿನ ಕೃಷಿ ಪರಿಸರ ಹಾಗೂ ಅದನ್ನಾಧರಿಸಿದ ಜನಜೀವನ ಸಂಕಷ್ಟ ಎದುರಿಸುತ್ತಿದೆ. ಆದ್ದರಿಂದ ಈ ಪ್ರದೇಶದ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವ ತುರ್ತು ಅಗತ್ಯವಿದೆ ಎಂಬುದು ತಂಡದ ಆಗ್ರಹವಾಗಿದೆ.</p>.<p>’ಭೌಗೋಳಿಕವಾಗಿ ಸುಮಾರು 50–60 ಕಿ.ಮೀ ಉದ್ದ, 20–25 ಕಿ.ಮೀ ಅಗಲಕ್ಕೆ ವ್ಯಾಪಿಸಿರುವ ಈ ಪರ್ವತಶ್ರೇಣಿಯಲ್ಲಿ 75 ಮೀಟರ್ನಿಂದ 200 ಮೀಟರ್ ವರೆಗೆ ಎತ್ತರದ ಹಲವಾರು ಸಣ್ಣ–ದೊಡ್ಡ ಗುಡ್ಡಗಳಿವೆ. ಪಾರಿಸಾರಿಕವಾಗಿ ಇಲ್ಲಿ ಸುರಿಯುವುದು 800–1000 ಮಿ.ಮೀ. ಮಳೆಯಾದರೂ ಆ ಮಳೆನೀರನ್ನು ಹಿಡಿದಿಟ್ಟು ಅಂತರ್ಜಲ ಮರುಪೂರಣ ಮಾಡಿ ಸುತ್ತಲ ಪ್ರದೇಶದ ಅಂತರ್ಜಲಮಟ್ಟ ಕಾದುಕೊಳ್ಳಲು ಇವು ಸಹಕಾರಿಯಾಗುತ್ತಿವೆ. ಮುಂಡಗೋಡ, ಶಿಗ್ಗಾವಿ, ಹಾನಗಲ್ ಈ ಮೂರು ತಾಲ್ಲೂಕುಗಳಲ್ಲಿರುವ ನೂರಾರು ಕೆರೆಗಳಿಗೆ ಜಲ ಮರುಪೂರಣವಾಗುತ್ತಿರುವುದು ಈ ಕಾಡಿನ ಪ್ರದೇಶದಿಂದಾಗಿ. ಹೀಗಾಗಿ ಈ ಪರ್ವತಶ್ರೇಣಿಯನ್ನು ಹಾವೇರಿ ಜಿಲ್ಲೆ ಹಾಗೂ ಮುಂಡಗೋಡಿನ ಹಸಿರು ಪುಪ್ಪಸವೆಂದು ಗುರುತಿಸಬೇಕಾಗಿದೆ‘ ಎಂದು ಜೀವಶಾಸ್ತ್ರಜ್ಞ ಕೇಶವ ಕೊರ್ಸೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.</p>.<p>ಬಯಲುನಾಡಿನ ಸಹ್ಯಾದ್ರಿಯಂತಿರುವ ಈ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಿಂದ ಅಧ್ಯಯನ ನಡೆಸಿರುವ ಅಧ್ಯಯನ ತಂಡ ಕಂಡುಕೊಂಡ ಒಳನೋಟಗಳ ಆಧಾರದಲ್ಲಿ ಅರಣ್ಯಶ್ರೇಣಿ ಸಂರಕ್ಷಣೆಗೆ ಕೆಲವು ಸಂರಕ್ಷಣಾಸೂತ್ರಗಳನ್ನು ತುರ್ತಾಗಿ ಜಾರಿಮಾಡುವಂತೆ ರಾಜ್ಯ ಸರ್ಕಾರವನ್ನು ಇತ್ತೀಚೆಗೆ ಕೋರಿದೆ.</p>.<p>ಅರಣ್ಯ ರಕ್ಷಣೆ, ಜನಸಹಭಾಗಿತ್ವದ ಅರಣ್ಯ ನಿರ್ವಹಣೆ, ಅರಣ್ಯೀಕರಣ, ಗೋಮಾಳಭೂಮಿ ರಕ್ಷಣೆ, ಕೆರೆಗಳ ಪುನರಜ್ಜೀವನ, ವನವಾಸಿ ಹೈನುಗಾರರಿಗೆ ಸಹಾಯಹಸ್ತ, ಭೂಕಬಳಿಕೆ ನೀತಿ ಜಾರಿ, ಕೃಷಿ–ಅರಣ್ಯಕ್ಕೆ ಪ್ರೋತ್ಸಾಹ, ಅವೈಜ್ಞಾನಿಕ ಭೂಪರಿವರ್ತನೆಗೆ ನಿಯಂತ್ರಣದ ಮೂಲಕ ಅರಣ್ಯಶ್ರೇಣಿ ಸಂರಕ್ಷಿಸಬಹುದು ಎಂಬುದನ್ನು ಅಧ್ಯಯನ ತಂಡ ಸೂಚಿಸಿದೆ.</p>.<div><blockquote>ಮಳಗಿ–ಶಿಗ್ಗಾವಿ ನಡುವಿನ ಈ ಪ್ರದೇಶದ ಜಲಮೂಲ ಸಂರಕ್ಷಣೆ ಹಾಗೂ ಕೃಷಿ ಸುರಕ್ಷತೆ ದೃಷ್ಟಿಯಿಂದ ಪರ್ವತಶ್ರೇಣಿ ಸಂರಕ್ಷಣೆ ತೀರಾ ಅಗತ್ಯ </blockquote><span class="attribution">ಕೇಶವ ಕೊರ್ಸೆ ಜೀವಶಾಸ್ತ್ರಜ್ಞ</span></div>.<div><blockquote>ಮುಂಡಗೋಡ ವಲಯ ಅರಣ್ಯ ವ್ಯಾಪ್ತಿಯ ಪರ್ವತಶ್ರೇಣಿಯಲ್ಲಿ ಹೊಸ ಒತ್ತುವರಿಗೆ ಅವಕಾಶ ನೀಡುತ್ತಿಲ್ಲ. ಅರಣ್ಯ ಅತಿಕ್ರಮಣ ಮರಗಳ ಕಡಿತ ಗಮನಕ್ಕೆ ಬಂದರೆ ಕ್ರಮ ಕೈಗೊಳ್ಳಲಾಗುವುದು </blockquote><span class="attribution">ವಾಗೀಶ ಬಾಚೀನಕೊಪ್ಪ ಆರ್ಎಫ್ಒ ಮುಂಡಗೋಡ</span></div>.<p>ಜೀವವೈವಿಧ್ಯದ ಆಗರ 62500 ಹೆಕ್ಟೇರ್ನಷ್ಟಿರುವ ಈ ಪ್ರದೇಶದ ಕಾಡಿನಲ್ಲಿ ನೂರಾರು ಪ್ರಭೇದಗಳ ಸಸ್ಯ ಉಭಯವಾಸಿಗಳು ಸರಿಸೃಪಗಳು ಪಕ್ಷಿಗಳು ಸಸ್ತನಿಗಳು ಇವೆ. ಮತ್ತಿ ಹೊನಗಲು ಜಂಬೆ ಕಣಗಿಲ ಹೆದ್ದೆ ನಂದಿ ಬೂರಗ ಮರಮಂದಾರ ಶ್ರೀಗಂಧ ತೇಗ ಇತ್ಯಾದಿ ನೂರಕ್ಕೂ ಹೆಚ್ಚು ಪ್ರಭೇದದ ಮರಗಳಿವೆ. ಚಿರತೆ ಕಾಡುಹಂದಿ ಕಡವೆ ಜಿಂಕೆ ಮುಳ್ಳುಹಂದಿ ಮುಂಗುಸಿ ಕಾಡುಪಾಪ ಸೇರಿದಂತೆ 40ಕ್ಕೂ ಹೆಚ್ಚು ಪ್ರಭೇದದ ಪ್ರಾಣಿವರ್ಗವಿವೆ. ನೇರಳೆ ಹಣ್ಣು ಶೀಗೆಕಾಯಿ ನೆಲ್ಲಿಕಾಯಿ ಜೇನುತುಪ್ಪ ಮುಂತಾದ ಅರಣ್ಯ ಉತ್ಪನ್ನಗಳು ಈ ಕಾಡಿನಲ್ಲಿ ಲಭಿಸಲಿವೆ. ಈ ಪ್ರದೇಶ ಸಿದ್ದಿ ಗೌಳಿ ಮರಾಠಿಗರಂಥ ವನವಾಸಿಗರ ನೆಲೆಯಾಗಿದ್ದು ಗೌಳಿಗರು ಕಾಡನ್ನೇ ಆಧರಿಸಿ ಹೈನುಗಾರಿಕೆ ನಡೆಸುತ್ತಾರೆ.</p>.<p>ಬಯಲುನಾಡಿನ ಸಹ್ಯಾದ್ರಿ ಪರ್ವತ ಶ್ರೇಣಿಯ ವ್ಯಾಪ್ತಿ ಜಿಲ್ಲೆ;ತಾಲ್ಲೂಕು;ಅರಣ್ಯವಲಯ;ಅರಣ್ಯ ಪ್ರದೇಶ (ಹೆಕ್ಟೇರ್ನಲ್ಲಿ)(ಅಂದಾಜು) ಉತ್ತರಕನ್ನಡ;ಮುಂಡಗೋಡ;ಮುಂಡಗೋಡ;25000 ಉತ್ತರಕನ್ನಡ;ಮುಂಡಗೋಡ;ಕಾತೂರ;12000 ಹಾವೇರಿ;ಶಿಗ್ಗಾವಿ;ದುಂಡಶಿ;10000 ಹಾವೇರಿ;ಹಾನಗಲ್;ಹಾನಗಲ್;15500 </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>