<p><strong>ಗಜೇಂದ್ರಗಡ (ಗದಗ ಜಿಲ್ಲೆ):</strong> ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತಕ್ಕೀಡಾಗಿ ಒಬ್ಬರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ರಾಜೂರ ಗ್ರಾಮದ ಹೊರ ವಲಯದಲ್ಲಿರುವ ಹಾಲಿನ ಶೇಖರಣಾ ಕೇಂದ್ರದ ಹತ್ತಿರ ನಡೆದಿದೆ.</p>.<p>ಅಪಘಾತದಲ್ಲಿ ಸೂಡಿ ಗ್ರಾಮದ ಚಿದಂಬರ ಪಂಚಾಂಗ ಕರ್ತೃ ಗಣಪತಿಭಟ್ ಜೋಶಿ (74) ಮೃತಪಟ್ಟಿದ್ದು, ಮೃತರ ಮಗ ಕಿರಣ ಜೋಶಿ ಹಾಗೂ ಸೊಸೆ ವೈಷ್ಣವಿ ಅವರಿಗೆ ಗಾಯಗಳಾಗಿವೆ. </p><p>ಮದುವೆ ಕಾರ್ಯ ಮುಗಿಸಿ ಲಿಂಗಸಗೂರಿನಿಂದ ಸೂಡಿಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಚಾಲನೆ ವೇಳೆ ನಿದ್ರೆ ಮಂಪರಿನಿಂದಾಗಿ ಕಾರು ಅಪಘಾತಕ್ಕೀಡಾಗಿದೆ ಎನ್ನಲಾಗಿದೆ.</p><p>ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.</p><p><strong>ಬೈಕ್ ಅಪಘಾತ:</strong> ಪಟ್ಟಣದ ಕುಷ್ಟಗಿ ರಸ್ತೆಯ ಎಸ್.ಬಿ.ಐ ಬ್ಯಾಂಕ್ ಹತ್ತಿರ ಬೈಕ್ ಮತ್ತು ಕಾರ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ತೀವ್ರ ಗಾಯಗೊಂಡ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.</p><p>ಗಾಯಗೊಂಡ ಬೈಕ್ ಸವಾರ ಉಣಚಗೇರಿ ಗ್ರಾಮದ ಮೌಲಾಸಾಬ ಫಕೀರಸಾಬ ಹರಹುಣಸಿ (28) ಎಂದು ತಿಳಿದು ಬಂದಿದ್ದು, ಗಾಯಾಳಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಜೇಂದ್ರಗಡ (ಗದಗ ಜಿಲ್ಲೆ):</strong> ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತಕ್ಕೀಡಾಗಿ ಒಬ್ಬರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ರಾಜೂರ ಗ್ರಾಮದ ಹೊರ ವಲಯದಲ್ಲಿರುವ ಹಾಲಿನ ಶೇಖರಣಾ ಕೇಂದ್ರದ ಹತ್ತಿರ ನಡೆದಿದೆ.</p>.<p>ಅಪಘಾತದಲ್ಲಿ ಸೂಡಿ ಗ್ರಾಮದ ಚಿದಂಬರ ಪಂಚಾಂಗ ಕರ್ತೃ ಗಣಪತಿಭಟ್ ಜೋಶಿ (74) ಮೃತಪಟ್ಟಿದ್ದು, ಮೃತರ ಮಗ ಕಿರಣ ಜೋಶಿ ಹಾಗೂ ಸೊಸೆ ವೈಷ್ಣವಿ ಅವರಿಗೆ ಗಾಯಗಳಾಗಿವೆ. </p><p>ಮದುವೆ ಕಾರ್ಯ ಮುಗಿಸಿ ಲಿಂಗಸಗೂರಿನಿಂದ ಸೂಡಿಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಚಾಲನೆ ವೇಳೆ ನಿದ್ರೆ ಮಂಪರಿನಿಂದಾಗಿ ಕಾರು ಅಪಘಾತಕ್ಕೀಡಾಗಿದೆ ಎನ್ನಲಾಗಿದೆ.</p><p>ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.</p><p><strong>ಬೈಕ್ ಅಪಘಾತ:</strong> ಪಟ್ಟಣದ ಕುಷ್ಟಗಿ ರಸ್ತೆಯ ಎಸ್.ಬಿ.ಐ ಬ್ಯಾಂಕ್ ಹತ್ತಿರ ಬೈಕ್ ಮತ್ತು ಕಾರ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ತೀವ್ರ ಗಾಯಗೊಂಡ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.</p><p>ಗಾಯಗೊಂಡ ಬೈಕ್ ಸವಾರ ಉಣಚಗೇರಿ ಗ್ರಾಮದ ಮೌಲಾಸಾಬ ಫಕೀರಸಾಬ ಹರಹುಣಸಿ (28) ಎಂದು ತಿಳಿದು ಬಂದಿದ್ದು, ಗಾಯಾಳಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>