<p><strong>ಗದಗ:</strong> ‘ನಗರದ ಕ್ಲಾಥ್ ಮಾರ್ಕೆಟ್ ಹಾಗೂ ಗ್ರೇನ್ ಮಾರ್ಕೆಟ್ನಲ್ಲಿರುವ ವಾಣಿಜ್ಯ ಮಳಿಗೆಗಳ ಬಾಡಿಗೆದಾರರು ಮುಂದಿನ ಐದು ವರ್ಷಗಳ ಅವಧಿಗೆ ಮುಂಗಡವಾಗಿ ಬಾಡಿಗೆ ತುಂಬಿರುವುದರ ಹಿಂದೆ ಭ್ರಷ್ಟಾಚಾರ ನಡೆದಿರುವ ಅನುಮಾನ ಇದ್ದು, ಕಾಣದ ಕೈಗಳ ಕೈವಾಡ ಇದೆ. ಆದಕಾರಣ, ಈ ಬಗ್ಗೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿ ತನಿಖೆಗೆ ಒಳಪಡಿಸಬೇಕು’ ಎಂದು ನಗರಸಭೆ ಸದಸ್ಯರು ಒತ್ತಾಯಿಸಿದರು.</p>.<p>ನಗರಸಭೆ ಅಧ್ಯಕ್ಷೆ ಉಷಾ ದಾಸರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ 15ನೇ ಹಣಕಾಸು ಆಯೋಗದ ಅನುದಾನ ಕುರಿತಾದ ವಿಶೇಷ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಹಲವು ಸದಸ್ಯರು ಈ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.</p>.<p>ವಿರೋಧ ಪಕ್ಷದ ನಾಯಕ ಎಲ್.ಡಿ.ಚಂದಾವರಿ ಮಾತನಾಡಿ, ‘ಕ್ಲಾಥ್ ಮಾರ್ಕೆಟ್ ಹಾಗೂ ಗ್ರೇನ್ ಮಾರ್ಕೆಟ್ನ ಮಳಿಗೆಗಳ ಲೀಸ್ ಅವಧಿ ವಿಸ್ತರಿಸಿಲ್ಲ. ನವೀಕರಣವೂ ಆಗಿಲ್ಲ. ಮೇಲಾಗಿ ಈ ಬಗ್ಗೆ ಪ್ರಕರಣ ನ್ಯಾಯಾಲಯದಲ್ಲಿದ್ದಾಗಲೂ ಲೀಸ್ ಅಥವಾ ಬಾಡಿಗೆದಾರರು ಮುಂದಿನ ಐದು ವರ್ಷಗಳ ಅವಧಿಯ ಬಾಡಿಗೆ ಕಟ್ಟಿದ್ದು ಏಕೆ’ ಎಂದು ಪ್ರಶ್ನಿಸಿದರು.</p>.<p>‘ನಗರಸಭೆಯ ಆಡಳಿತದ ಗಮನಕ್ಕೆ ತರದೇ ಐದು ವರ್ಷಗಳ ಬಾಡಿಗೆಯನ್ನು ಮುಂಗಡವಾಗಿ ಭರಿಸಿರುವುದು ಗಂಭೀರ ಲೋಪ. ತಕ್ಷಣವೇ ಹಣವನ್ನು ಎಲ್ಲರಿಗೂ ಮರಳಿಸಬೇಕು’ ಎಂದು ಒತ್ತಾಯಿಸಿದರು.</p>.<p>ಇದಕ್ಕೆ ಕಾಂಗ್ರೆಸ್ನ ಹಿರಿಯ ಸದಸ್ಯ ಕೃಷ್ಣ ಪರಾಪೂರ, ಜೆ.ಎಂ. ನಮಾಜಿ ಧ್ವನಿಗೂಡಿಸಿ, ‘ಈ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರ ಮೇಲೆಯೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಆಗ್ರಹಿಸಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಪ್ರಭಾರ ಪೌರಾಯುಕ್ತ ಪ್ರಶಾಂತ ವರಗಪ್ಪನವರ, ‘ಮುಂಗಡವಾಗಿ ಬಾಡಿಗೆ ಹಣ ಪಾವತಿಸಿರುವುದಕ್ಕೆ ಸಂಬಂಧಿಸಿದಂತೆ ಕಾನೂನು ತಜ್ಞರ ಸಲಹೆ ಪಡೆದು, ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.</p>.<p>ಆಡಳಿತ ಹಾಗೂ ವಿರೋಧ ಪಕ್ಷದ ಮಹಿಳಾ ಸದಸ್ಯೆಯರು ಅವಳಿ ನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಧ್ವನಿ ಎತ್ತಿದರು.</p>.<p>ನಗರಸಭೆ ಸದಸ್ಯೆ ಲಲಿತಾ ಅಸೂಟಿ, ‘ಕುಡಿಯುವ ನೀರಿನ ಸಮಸ್ಯೆಯಿಂದಾಗಿ ನಾವು ವಾರ್ಡ್ನ ಜನರಿಗೆ ಮುಖ ತೋರಿಸಲಾಗುತ್ತಿಲ್ಲ’ ಎಂದು ಹರಿಹಾಯ್ದರು.</p>.<p>ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಸಭೆ ಸದಸ್ಯರು, ಅಧಿಕಾರಿಗಳು ಇದ್ದರು.</p>.<p><strong>ಉಷಾ ದಾಸರಗೆ ಅಭಿನಂದನೆ</strong> </p><p>ಸಭೆ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯ ಚಂದ್ರು ತಡಸದ ಮಾತನಾಡಿ ‘30 ತಿಂಗಳ ಕಾಲ ಅಧ್ಯಕ್ಷರಾಗಿರುವ ಉಷಾ ದಾಸರ ಅವರ ಅವಧಿ ಜುಲೈ 24ಕ್ಕೆ ಪೂರ್ಣಗೊಳ್ಳಲಿದೆ. ನಗರಸಭೆ ಇತಿಹಾಸದಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಅಧ್ಯಕ್ಷೆ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದ್ದ ಅವರು ಅಭಿವೃದ್ಧಿ ಕಾರ್ಯಗಳ ಜತೆಗೆ ವಿರೋಧ ಪಕ್ಷವನ್ನು ಎದುರಿಸಿ ಸಮರ್ಥ ಆಡಳಿತ ನಡೆಸಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆಗಳು’ ಎಂದರು. ‘ವಕಾರು ಸಾಲ ನಗರಸಭೆಯ ಪ್ರಮುಖ ಆಸ್ತಿಯಾಗಿದ್ದು ಅದು ಉಳಿಯಬೇಕು. ಅವಳಿ ನಗರದಲ್ಲಿ ಪೈಪ್ ಲೈನ್ ಅಳವಡಿಕೆಗೆ ನಗರಸಭೆ ಗಮನಕ್ಕೆ ತರದೆ ನೂರಾರು ಕೋಟಿಗಳ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ತನಿಖೆ ನಡೆಸಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ‘ಉಷಾ ದಾಸರ ಅವರ ಅಧ್ಯಕ್ಷತೆ ಅವಧಿ ಜುಲೈ 24ಕ್ಕೆ ಕೊನೆಗೊಳ್ಳಲಿದೆ. ಇವರ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಎಲ್.ಡಿ.ಚಂದಾವರಿ ಟೀಕಿಸಿದರು.</p>.<p><strong>ಏಟು– ಎದಿರೇಟು</strong> </p><p>ನಗರಸಭೆ ವಾಣಿಜ್ಯ ಮಳಿಗೆಗಳಿಗೆ ಮುಂಗಡ ಹಣ ತುಂಬಿದ ಪ್ರಕರಣದಲ್ಲಿ ಹಲವರ ಕೈವಾಡ ಇದೆ ಎಂದು ಕಾಂಗ್ರೆಸ್ ಸದಸ್ಯರು ಆರೋಪ ಮಾಡುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ವಕಾರಸಾಲು ಆಸ್ತಿ ರಕ್ಷಣೆ ವಿಷಯ ಎತ್ತಿದರು. ‘ನಗರಸಭೆಯ ಸಾವಿರಾರು ಕೋಟಿ ಮೌಲ್ಯದ 54 ವಖಾರ ಸಾಲು ಆಸ್ತಿ ರಕ್ಷಣೆ ಬಗ್ಗೆ ಏಕೆ ಮಾತನಾಡುತ್ತಿಲ್ಲ’ ಎಂದು ಆಡಳಿತ ಪಕ್ಷದ ಅನೀಲ ಅಬ್ಬಿಗೇರಿ ಚಂದ್ರು ತಡಸದ ಕಾಂಗ್ರೆಸ್ ಸದಸ್ಯರನ್ನು ತಿವಿದರು. ‘ನಗರಸಭೆ ಮಾಲೀಕತ್ವದ ವಾಣಿಜ್ಯ ಮಳಿಗೆಗಳ ಮುಂಗಡ ಬಾಡಿಗೆ ಪಾವತಿ ವಿಷಯವಾಗಿ ಬಿಜೆಪಿ ಸದಸ್ಯರು ಕೂಡ ಈಗಾಗಲೇ ಉಪ ಲೋಕಾಯುಕ್ತರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೂ ದಾಖಲೆ ಸಮೇತ ದೂರ ಸಲ್ಲಿಸಿದ್ದೇವೆ’ ಎಂದು ರಾಘವೇಂದ್ರ ಯಳವತ್ತಿ ಹೇಳಿದರು.</p>.<p><strong>‘ಅಭಿವೃದ್ಧಿ ಬಗ್ಗೆ ಮಾತಾಡ್ರೀ...’</strong> </p><p>ಆರೋಪ ಪ್ರತ್ಯಾರೋಪ ಸದ್ದು– ಗದ್ದಲಗಳ ನಡುವೆ ಮಹಿಳಾ ಸದಸ್ಯರು ಆಕ್ರೋಶಗೊಂಡು ಈ ಸಭೆಯಲ್ಲಿ ಅಭಿವೃದ್ಧಿ ಕುರಿತು ಚರ್ಚೆ ಮಾಡಿ. ವಾರ್ಡ್ನಲ್ಲಿ ನಾವು ಜನರಿಗೆ ಉತ್ತರ ನೀಡಲು ಆಗುತ್ತಿಲ್ಲ. ಮಳೆಗಾಲ ಆರಂಭವಾಗಿದೆ ಸಾಕಷ್ಟು ಸಮಸ್ಯೆಗಳಿವೆ. ಕಾಮಗಾರಿಗಳು ಆರಂಭಗೊಂಡಿಲ್ಲ. ಜನ ನಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಮೊದಲು ಕಾಮಗಾರಿಗಳ ಬಗ್ಗೆ ಟೆಂಡರ್ ಕರೆಯಿರಿ’ ಎಂದು ನಗರಸಭೆ ಸದಸ್ಯೆ ಪದ್ಮಾ ಕಟಗಿ ಆಕ್ರೋಶ ವ್ಯಕ್ತಪಡಿಸಿದರು </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ:</strong> ‘ನಗರದ ಕ್ಲಾಥ್ ಮಾರ್ಕೆಟ್ ಹಾಗೂ ಗ್ರೇನ್ ಮಾರ್ಕೆಟ್ನಲ್ಲಿರುವ ವಾಣಿಜ್ಯ ಮಳಿಗೆಗಳ ಬಾಡಿಗೆದಾರರು ಮುಂದಿನ ಐದು ವರ್ಷಗಳ ಅವಧಿಗೆ ಮುಂಗಡವಾಗಿ ಬಾಡಿಗೆ ತುಂಬಿರುವುದರ ಹಿಂದೆ ಭ್ರಷ್ಟಾಚಾರ ನಡೆದಿರುವ ಅನುಮಾನ ಇದ್ದು, ಕಾಣದ ಕೈಗಳ ಕೈವಾಡ ಇದೆ. ಆದಕಾರಣ, ಈ ಬಗ್ಗೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿ ತನಿಖೆಗೆ ಒಳಪಡಿಸಬೇಕು’ ಎಂದು ನಗರಸಭೆ ಸದಸ್ಯರು ಒತ್ತಾಯಿಸಿದರು.</p>.<p>ನಗರಸಭೆ ಅಧ್ಯಕ್ಷೆ ಉಷಾ ದಾಸರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ 15ನೇ ಹಣಕಾಸು ಆಯೋಗದ ಅನುದಾನ ಕುರಿತಾದ ವಿಶೇಷ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಹಲವು ಸದಸ್ಯರು ಈ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.</p>.<p>ವಿರೋಧ ಪಕ್ಷದ ನಾಯಕ ಎಲ್.ಡಿ.ಚಂದಾವರಿ ಮಾತನಾಡಿ, ‘ಕ್ಲಾಥ್ ಮಾರ್ಕೆಟ್ ಹಾಗೂ ಗ್ರೇನ್ ಮಾರ್ಕೆಟ್ನ ಮಳಿಗೆಗಳ ಲೀಸ್ ಅವಧಿ ವಿಸ್ತರಿಸಿಲ್ಲ. ನವೀಕರಣವೂ ಆಗಿಲ್ಲ. ಮೇಲಾಗಿ ಈ ಬಗ್ಗೆ ಪ್ರಕರಣ ನ್ಯಾಯಾಲಯದಲ್ಲಿದ್ದಾಗಲೂ ಲೀಸ್ ಅಥವಾ ಬಾಡಿಗೆದಾರರು ಮುಂದಿನ ಐದು ವರ್ಷಗಳ ಅವಧಿಯ ಬಾಡಿಗೆ ಕಟ್ಟಿದ್ದು ಏಕೆ’ ಎಂದು ಪ್ರಶ್ನಿಸಿದರು.</p>.<p>‘ನಗರಸಭೆಯ ಆಡಳಿತದ ಗಮನಕ್ಕೆ ತರದೇ ಐದು ವರ್ಷಗಳ ಬಾಡಿಗೆಯನ್ನು ಮುಂಗಡವಾಗಿ ಭರಿಸಿರುವುದು ಗಂಭೀರ ಲೋಪ. ತಕ್ಷಣವೇ ಹಣವನ್ನು ಎಲ್ಲರಿಗೂ ಮರಳಿಸಬೇಕು’ ಎಂದು ಒತ್ತಾಯಿಸಿದರು.</p>.<p>ಇದಕ್ಕೆ ಕಾಂಗ್ರೆಸ್ನ ಹಿರಿಯ ಸದಸ್ಯ ಕೃಷ್ಣ ಪರಾಪೂರ, ಜೆ.ಎಂ. ನಮಾಜಿ ಧ್ವನಿಗೂಡಿಸಿ, ‘ಈ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರ ಮೇಲೆಯೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಆಗ್ರಹಿಸಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಪ್ರಭಾರ ಪೌರಾಯುಕ್ತ ಪ್ರಶಾಂತ ವರಗಪ್ಪನವರ, ‘ಮುಂಗಡವಾಗಿ ಬಾಡಿಗೆ ಹಣ ಪಾವತಿಸಿರುವುದಕ್ಕೆ ಸಂಬಂಧಿಸಿದಂತೆ ಕಾನೂನು ತಜ್ಞರ ಸಲಹೆ ಪಡೆದು, ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.</p>.<p>ಆಡಳಿತ ಹಾಗೂ ವಿರೋಧ ಪಕ್ಷದ ಮಹಿಳಾ ಸದಸ್ಯೆಯರು ಅವಳಿ ನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಧ್ವನಿ ಎತ್ತಿದರು.</p>.<p>ನಗರಸಭೆ ಸದಸ್ಯೆ ಲಲಿತಾ ಅಸೂಟಿ, ‘ಕುಡಿಯುವ ನೀರಿನ ಸಮಸ್ಯೆಯಿಂದಾಗಿ ನಾವು ವಾರ್ಡ್ನ ಜನರಿಗೆ ಮುಖ ತೋರಿಸಲಾಗುತ್ತಿಲ್ಲ’ ಎಂದು ಹರಿಹಾಯ್ದರು.</p>.<p>ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಸಭೆ ಸದಸ್ಯರು, ಅಧಿಕಾರಿಗಳು ಇದ್ದರು.</p>.<p><strong>ಉಷಾ ದಾಸರಗೆ ಅಭಿನಂದನೆ</strong> </p><p>ಸಭೆ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯ ಚಂದ್ರು ತಡಸದ ಮಾತನಾಡಿ ‘30 ತಿಂಗಳ ಕಾಲ ಅಧ್ಯಕ್ಷರಾಗಿರುವ ಉಷಾ ದಾಸರ ಅವರ ಅವಧಿ ಜುಲೈ 24ಕ್ಕೆ ಪೂರ್ಣಗೊಳ್ಳಲಿದೆ. ನಗರಸಭೆ ಇತಿಹಾಸದಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಅಧ್ಯಕ್ಷೆ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದ್ದ ಅವರು ಅಭಿವೃದ್ಧಿ ಕಾರ್ಯಗಳ ಜತೆಗೆ ವಿರೋಧ ಪಕ್ಷವನ್ನು ಎದುರಿಸಿ ಸಮರ್ಥ ಆಡಳಿತ ನಡೆಸಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆಗಳು’ ಎಂದರು. ‘ವಕಾರು ಸಾಲ ನಗರಸಭೆಯ ಪ್ರಮುಖ ಆಸ್ತಿಯಾಗಿದ್ದು ಅದು ಉಳಿಯಬೇಕು. ಅವಳಿ ನಗರದಲ್ಲಿ ಪೈಪ್ ಲೈನ್ ಅಳವಡಿಕೆಗೆ ನಗರಸಭೆ ಗಮನಕ್ಕೆ ತರದೆ ನೂರಾರು ಕೋಟಿಗಳ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ತನಿಖೆ ನಡೆಸಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ‘ಉಷಾ ದಾಸರ ಅವರ ಅಧ್ಯಕ್ಷತೆ ಅವಧಿ ಜುಲೈ 24ಕ್ಕೆ ಕೊನೆಗೊಳ್ಳಲಿದೆ. ಇವರ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಎಲ್.ಡಿ.ಚಂದಾವರಿ ಟೀಕಿಸಿದರು.</p>.<p><strong>ಏಟು– ಎದಿರೇಟು</strong> </p><p>ನಗರಸಭೆ ವಾಣಿಜ್ಯ ಮಳಿಗೆಗಳಿಗೆ ಮುಂಗಡ ಹಣ ತುಂಬಿದ ಪ್ರಕರಣದಲ್ಲಿ ಹಲವರ ಕೈವಾಡ ಇದೆ ಎಂದು ಕಾಂಗ್ರೆಸ್ ಸದಸ್ಯರು ಆರೋಪ ಮಾಡುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ವಕಾರಸಾಲು ಆಸ್ತಿ ರಕ್ಷಣೆ ವಿಷಯ ಎತ್ತಿದರು. ‘ನಗರಸಭೆಯ ಸಾವಿರಾರು ಕೋಟಿ ಮೌಲ್ಯದ 54 ವಖಾರ ಸಾಲು ಆಸ್ತಿ ರಕ್ಷಣೆ ಬಗ್ಗೆ ಏಕೆ ಮಾತನಾಡುತ್ತಿಲ್ಲ’ ಎಂದು ಆಡಳಿತ ಪಕ್ಷದ ಅನೀಲ ಅಬ್ಬಿಗೇರಿ ಚಂದ್ರು ತಡಸದ ಕಾಂಗ್ರೆಸ್ ಸದಸ್ಯರನ್ನು ತಿವಿದರು. ‘ನಗರಸಭೆ ಮಾಲೀಕತ್ವದ ವಾಣಿಜ್ಯ ಮಳಿಗೆಗಳ ಮುಂಗಡ ಬಾಡಿಗೆ ಪಾವತಿ ವಿಷಯವಾಗಿ ಬಿಜೆಪಿ ಸದಸ್ಯರು ಕೂಡ ಈಗಾಗಲೇ ಉಪ ಲೋಕಾಯುಕ್ತರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೂ ದಾಖಲೆ ಸಮೇತ ದೂರ ಸಲ್ಲಿಸಿದ್ದೇವೆ’ ಎಂದು ರಾಘವೇಂದ್ರ ಯಳವತ್ತಿ ಹೇಳಿದರು.</p>.<p><strong>‘ಅಭಿವೃದ್ಧಿ ಬಗ್ಗೆ ಮಾತಾಡ್ರೀ...’</strong> </p><p>ಆರೋಪ ಪ್ರತ್ಯಾರೋಪ ಸದ್ದು– ಗದ್ದಲಗಳ ನಡುವೆ ಮಹಿಳಾ ಸದಸ್ಯರು ಆಕ್ರೋಶಗೊಂಡು ಈ ಸಭೆಯಲ್ಲಿ ಅಭಿವೃದ್ಧಿ ಕುರಿತು ಚರ್ಚೆ ಮಾಡಿ. ವಾರ್ಡ್ನಲ್ಲಿ ನಾವು ಜನರಿಗೆ ಉತ್ತರ ನೀಡಲು ಆಗುತ್ತಿಲ್ಲ. ಮಳೆಗಾಲ ಆರಂಭವಾಗಿದೆ ಸಾಕಷ್ಟು ಸಮಸ್ಯೆಗಳಿವೆ. ಕಾಮಗಾರಿಗಳು ಆರಂಭಗೊಂಡಿಲ್ಲ. ಜನ ನಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಮೊದಲು ಕಾಮಗಾರಿಗಳ ಬಗ್ಗೆ ಟೆಂಡರ್ ಕರೆಯಿರಿ’ ಎಂದು ನಗರಸಭೆ ಸದಸ್ಯೆ ಪದ್ಮಾ ಕಟಗಿ ಆಕ್ರೋಶ ವ್ಯಕ್ತಪಡಿಸಿದರು </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>