<p><strong>ಲಕ್ಷ್ಮೇಶ್ವರ</strong>: ಪಟ್ಟಣದಲ್ಲಿ 'ಮದ್ರಾಸ್ ಐ' ರೋಗ ಕಾಣಿಸಿಕೊಂಡಿದೆ. ಈಗಾಗಲೇ ಬಹಳಷ್ಟು ಜನರಿಗೆ ಈ ರೋಗ ಬಂದ ಬಗ್ಗೆ ವರದಿಯಾಗಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀಕಾಂತ ಕಾಟೆವಾಲೆ ಅವರ ಸೂಚನೆ ಮೇರೆಗೆ ಆಸ್ಪತ್ರೆಯ ಹಿರಿಯ ಆರೋಗ್ಯ ಸಹಾಯಕ ಬಿ.ಎಸ್.ಹಿರೇಮಠ ಬುಧವಾರ ಪಟ್ಟಣದ ಕೆಲ ಶಾಲೆ ಮತ್ತು ಓಣಿಗಳಿಗೆ ಭೇಟಿ ನೀಡಿ ಮದ್ರಾಸ್ ಐ ಕುರಿತು ಮಾಹಿತಿ ನೀಡಿದರು.</p>.<p>'ಮದ್ರಾಸ್ ಐ' ವೈರಾಣುವಿನಿಂದ ಈ ರೋಗ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಗುಲಾಬಿ ಕಣ್ಣಿನ ರೋಗ ಎಂದೂ ಕರೆಯುತ್ತಾರೆ. ಇದು ತೀವ್ರ ಅಪಾಯಕರ ಅಲ್ಲದಿದ್ದರೂ ಕೂಡ ನಿರ್ಲಕ್ಷ್ಯ ಮಾಡಬಾರದು. ರೋಗಪೀಡಿತ ಕಣ್ಣಿನಿಂದ ಆಗಾಗ ದ್ರವ ಬರುತ್ತದೆ. ಕೆಲವರಲ್ಲಿ ಪಿಚ್ಚು ಬರುತ್ತದೆ. ಕಣ್ಣು ಚುಚ್ವುವುದರೊಂಗೆ ಸ್ವಲ್ಪ ನೋವೂ ಇರುವುದು. ಈ ರೋಗದ ಲಕ್ಷಣ. ಇದೊಂದು ಸಾಂಕ್ರಾಮಿಕ ರೋಗ. ಒಬ್ಬರಿಂದ ಒಬ್ಬರಿಗೆ ಸುಲಭವಾಗಿ ಹರಡಬಲ್ಲದು.</p>.<p>ಸೋಂಕಿತರು ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಕಣ್ಣುಗಳನ್ನು ಉಜ್ಜುವುದು, ಕೆರೆದುಕೊಳ್ಳುವುದನ್ನು ಮಾಡಬಾರದು. ಕಣ್ಣುಗಳ ಮೇಲೆ ತಣ್ಣನೆಯ ಬಟ್ಟೆ ಅಥವಾ ಸೌತೆಕಾಯಿ ತುಂಡುಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು’ ಎಂದು ಬಿ.ಎಸ್.ಹಿರೇಮಠರು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಕ್ಷ್ಮೇಶ್ವರ</strong>: ಪಟ್ಟಣದಲ್ಲಿ 'ಮದ್ರಾಸ್ ಐ' ರೋಗ ಕಾಣಿಸಿಕೊಂಡಿದೆ. ಈಗಾಗಲೇ ಬಹಳಷ್ಟು ಜನರಿಗೆ ಈ ರೋಗ ಬಂದ ಬಗ್ಗೆ ವರದಿಯಾಗಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀಕಾಂತ ಕಾಟೆವಾಲೆ ಅವರ ಸೂಚನೆ ಮೇರೆಗೆ ಆಸ್ಪತ್ರೆಯ ಹಿರಿಯ ಆರೋಗ್ಯ ಸಹಾಯಕ ಬಿ.ಎಸ್.ಹಿರೇಮಠ ಬುಧವಾರ ಪಟ್ಟಣದ ಕೆಲ ಶಾಲೆ ಮತ್ತು ಓಣಿಗಳಿಗೆ ಭೇಟಿ ನೀಡಿ ಮದ್ರಾಸ್ ಐ ಕುರಿತು ಮಾಹಿತಿ ನೀಡಿದರು.</p>.<p>'ಮದ್ರಾಸ್ ಐ' ವೈರಾಣುವಿನಿಂದ ಈ ರೋಗ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಗುಲಾಬಿ ಕಣ್ಣಿನ ರೋಗ ಎಂದೂ ಕರೆಯುತ್ತಾರೆ. ಇದು ತೀವ್ರ ಅಪಾಯಕರ ಅಲ್ಲದಿದ್ದರೂ ಕೂಡ ನಿರ್ಲಕ್ಷ್ಯ ಮಾಡಬಾರದು. ರೋಗಪೀಡಿತ ಕಣ್ಣಿನಿಂದ ಆಗಾಗ ದ್ರವ ಬರುತ್ತದೆ. ಕೆಲವರಲ್ಲಿ ಪಿಚ್ಚು ಬರುತ್ತದೆ. ಕಣ್ಣು ಚುಚ್ವುವುದರೊಂಗೆ ಸ್ವಲ್ಪ ನೋವೂ ಇರುವುದು. ಈ ರೋಗದ ಲಕ್ಷಣ. ಇದೊಂದು ಸಾಂಕ್ರಾಮಿಕ ರೋಗ. ಒಬ್ಬರಿಂದ ಒಬ್ಬರಿಗೆ ಸುಲಭವಾಗಿ ಹರಡಬಲ್ಲದು.</p>.<p>ಸೋಂಕಿತರು ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಕಣ್ಣುಗಳನ್ನು ಉಜ್ಜುವುದು, ಕೆರೆದುಕೊಳ್ಳುವುದನ್ನು ಮಾಡಬಾರದು. ಕಣ್ಣುಗಳ ಮೇಲೆ ತಣ್ಣನೆಯ ಬಟ್ಟೆ ಅಥವಾ ಸೌತೆಕಾಯಿ ತುಂಡುಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು’ ಎಂದು ಬಿ.ಎಸ್.ಹಿರೇಮಠರು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>