ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎತ್ತಿಹೊಳೆ ಯೋಜನೆ ಹೆಸರಲ್ಲಿ ಪರಿಸರ ನಾಶ: ನಿರ್ಮಲಾಗೌಡ

Published : 28 ಜೂನ್ 2024, 13:59 IST
Last Updated : 28 ಜೂನ್ 2024, 13:59 IST
ಫಾಲೋ ಮಾಡಿ
Comments
‘ವೃಷಭಾವತಿ ನದಿಯಿಲ್ಲ ಎಂದಿದ್ದ ಸರ್ಕಾರ’
‘ಬೆಂಗಳೂರು ಮಹಾನಗರದ ಚರಂಡಿ ಒಳಚರಂಡಿ ನೀರನ್ನು ಸಾಗಿಸುವ ಕೆಂಗೇರಿ ಮೋರಿ ಮೂಲ ವೃಷಭಾವತಿ ನದಿಯಾಗಿದೆ. ನದಿ ಸಂಪೂರ್ಣ ಕಲುಷಿತಗೊಂಡಿದೆ ಎಂದು ಕೋರ್ಟ್‌ನಲ್ಲಿ ದಾವೆ ಹೂಡಿದಾಗ ಸರ್ಕಾರ ಅಲ್ಲಿ ನದಿಯೇ ಇಲ್ಲ ಎಂದು ವಾದಿಸಿತ್ತು. ನಂತರ ನಾವು ದಾಖಲೆ ಸಮೇತ ವೃಷಭಾವತಿಯ ಮಾಹಿತಿ ನೀಡಿದಾಗ ಸರ್ಕಾರ ತಪ್ಪೊಪ್ಪಿಕೊಂಡಿತು’ ಎಂದು ನಿರ್ಮಲಾಗೌಡ ಹೇಳಿದರು. ‘ಮುಂದಿನ ಕೆಲವೇ ದಿನಗಳಲ್ಲಿ ಹಾಸನ ಜಿಲ್ಲೆಯ ಯಗಚಿ ನದಿ ಕೂಡ ಮತ್ತೊಂದು ಮೋರಿ ಆಗುವುದರಲ್ಲಿ ಯಾವುದೇ ಅನುಮಾನ ಬೇಡ. ಕಲುಷಿತ ನೀರಿನ ಸೇರ್ಪಡೆಯಿಂದ ಹೇಮಾವತಿ ಯಗಚಿ ಕಾವೇರಿ ಸೇರಿ ರಾಜ್ಯದ ಬಹುತೇಕ ನದಿಗಳು ಮೋರಿಗಳಾಗಿ ಪರಿವರ್ತನೆಯಾಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.
ಮಾಲಿನ್ಯಕ್ಕೆ ಅಧಿಕಾರಿಗಳೂ ಕಾರಣ
‘ಇತ್ತೀಚಿನ ದಿನಗಳಲ್ಲಿ ಕೆರೆ ಹಾಗೂ ಇನ್ನಿತರ ನೈಸರ್ಗಿಕ ಸಂಪನ್ಮೂಲ ಮಲಿನ ಮಾಡಲು ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ. ಮಲೀನ ಮಾಡುವವರಿಂದ ಲಂಚ ಪಡೆದು ಸಹಕಾರ ನೀಡುತ್ತಿದ್ದಾರೆ. ಇದರಿಂದ ಪರಿಸರ ಮತ್ತಷ್ಟು  ಹದಗೆಡುತ್ತಿದೆ’ ಎಂದು ಚಿಕ್ಕಬಳ್ಳಾಪುರದ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯ ರೆಡ್ಡಿ ದೂರಿದರು. ‘ನಮ್ಮ ಸುತ್ತಲಿನ ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಯುವ ಸಮುದಾಯ ಹಾಗೂ ನಾಗರಿಕರು ಕೈಜೋಡಿಸಬೇಕಿದೆ. ನಮ್ಮ ಕಣ್ಣಿಗೆ ಯಾವುದೇ ಇಂತಹ ಸನ್ನಿವೇಶ ಕಂಡರೆ ಕೂಡಲೇ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಿಳಿಸಬೇಕು. ಅಲ್ಲಿನ ಅಧಿಕಾರಿಗಳು ಕ್ರಮ ವಹಿಸದಿದ್ದರೆ ನ್ಯಾಯಾಲಯದ ಮೂಲಕ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಾಗಿದೆ’ ಎಂದು ಹೇಳಿದರು. ‘40 ವರ್ಷಗಳ ಈಚೆಗೆ ಮಣ್ಣಿನ ವಿಪರೀತ ಶೋಷಣೆ ನಡೆಯುತ್ತಿದೆ. ಕ್ರಿಮಿನಾಶಕ ಬಳಕೆಯಿಂದ ಫಲವತ್ತತೆ ಕಳೆದುಕೊಳ್ಳುತ್ತಿದೆ. ಇದೇ ರೀತಿಯ ಪರಿಸ್ಥಿತಿ ಮುಂದುವರಿದರೆ 40 ವರ್ಷಗಳಲ್ಲಿ ಭೂಮಿಯ ಸ್ಥಿತಿ ಭಯಾನಕವಾಗಿರಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT