<p><strong>ಸಕಲೇಶಪುರ: </strong>ಬೆಟ್ಟ ಗುಡ್ಡ, ಝರಿ, ಜಲಪಾತ, ಕಾಡು, ಕಾಫಿ, ಏಲಕ್ಕಿ, ತೋಟಗಳನ್ನು ತನ್ನ ಒಡಲಲ್ಲಿ ಹೊಂದಿರುವ ಪಶ್ಚಿಮಘಟ್ಟ ಪ್ರವಾಸಿಗರನ್ನು ಕೈ ಬೀಸಿ ಕರೆಯುವಷ್ಟು ಸೌಂದರ್ಯ ಹಾಸಿ ಹೊದ್ದುಕೊಂಡಿದೆ.</p>.<p>ತಾಲ್ಲೂಕಿನ ಹಲವು ಪ್ರವಾಸಿ ತಾಣಗಳ ಪೈಕಿ ಕಾಗಿನಹರೆ ಬೆಟ್ಟ ಪ್ರಕೃತಿ ಪ್ರಿಯರ ನೆಚ್ಚಿನ ತಾಣವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಆಳ್ವಿಕೆ ನಡೆಸಿದ್ದ ಮೈಸೂರು ಒಡೆಯರ ಕಾಲದಲ್ಲಿ ವಿಶ್ರಾಂತಿಗಾಗಿ ಒಂದು ಸಣ್ಣ ಕೋಟೆನಿರ್ಮಿಸಲಾಗಿತ್ತು ಎನ್ನುವುದಕ್ಕೆ ಈಗಲೂ ಅಲ್ಲಿರುವ ಗೋಡೆಗಳು ಸಾಕ್ಷಿ.</p>.<p>ಈ ಕೋಟೆಯ ಮೇಲೆ ನಿಂತರೆ ನಾಲ್ಕು ದಿಕ್ಕುಗಳಲ್ಲಿಯೂ ಆಕಾಶಕ್ಕೆ ಮುಖ ಚಾಚಿಕೊಂಡು ನಿಂತ ಹಸಿರು ಹೊದ್ದ ಬೆಟ್ಟಗಳ ರಮಣೀಯ ನೋಟ ಸೆಳೆಯುತ್ತದೆ. ಕ್ಷಣ ಕ್ಷಣಕ್ಕೂ ಚಲಿಸುವ ಮೋಡಗಳ ನೆರಳು ಬೆಳಕು ಅಲ್ಲಲ್ಲಿ ಬೆಟ್ಟಗಳ ಮೇಲೆ ಸಾಗಿ ಹೋಗುವ ದೃಶ್ಯಕಾವ್ಯ ನೋಡುಗರನ್ನು ಮಂತ್ರಮುಗ್ಧದರನ್ನಾಗಿಸುತ್ತದೆ. ವರ್ಷದಿಂದ ವರ್ಷಕ್ಕೆಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.</p>.<p>ಕಾಗಿನಹರೆ ಬೆಟ್ಟ ಸಕಲೇಶಪುರ ತಾಲ್ಲೂಕು ಕೇಂದ್ರದಿಂದ (ಹೆತ್ತೂರು, ಬಾಚಳ್ಳಿ, ಅತ್ತಿಹಳ್ಳಿ, ಹೊಂಗಡಹಳ್ಳ ಮಾರ್ಗ) ಸುಮಾರು 50 ಕಿ.ಮೀ. ದೂರದಲ್ಲಿದೆ. ಸಕಲೇಶಪುರದಿಂದ ಮಾನಹಳ್ಳಿ, ಆಲುವಳ್ಳಿ, ಕಡಗರವಳ್ಳಿ, ನೂದ್ರಹಳ್ಳಿ, ಹೊಂಗಡಹಳ್ಳ ಮಾರ್ಗವಾಗಿ ಸಾಗಿದರೆ ಸುಮಾರು 35 ಕಿ.ಮೀ. ಆಗುತ್ತದೆ. ಕಾಗಿನಹರೆ ಗ್ರಾಮದವರೆಗೂ ಈ ಎರಡೂ ಮಾರ್ಗದಲ್ಲಿ ಉತ್ತಮ ರಸ್ತೆ ವ್ಯವಸ್ಥೆ ಇದೆ.</p>.<p>‘ಕಾಗಿನಹರೆ ಗ್ರಾಮಕ್ಕೆ ಬರುವಂತಹ ಪ್ರವಾಸಿಗರು ವಾಹನಗಳನ್ನು ಗ್ರಾಮದ ಹೊರಭಾಗದಲ್ಲಿಯೇ ನಿಲ್ಲಿಸಬೇಕು. ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿಯೇ ಹೋಗಬೇಕು. ಕಾಲ್ನಡಿಗೆಯಲ್ಲಿ ಹೋಗುವುದಕ್ಕೆ ಸಾಧ್ಯವಾಗದಿದ್ದವರನ್ನು ಸ್ಥಳೀಯರ ಜೀಪುಗಳಲ್ಲಿ ಕರೆದೊಯ್ಯುವ ವ್ಯವಸ್ಥೆ ಮಾಡಬೇಕು’ ಎಂದುಕಾಗಿನಹರೆ ಗ್ರಾಮದ ಕೃಷ್ಣೇಗೌಡ ಹೇಳಿದರು.</p>.<p>*<br />ಪ್ರವಾಸಿಗರು ತ್ಯಾಜ್ಯ, ಮದ್ಯದ ಬಾಟಲಿ ಒಡೆದು ಹಾಕಿ, ಬೆಟ್ಟದ ಪರಿಸರ ಹಾಳು ಮಾಡುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆ ವ್ಯವಸ್ಥೆ ನೋಡಿಕೊಳ್ಳಲು ಗ್ರಾ.ಪಂ.ಗಾದರೂ ವಹಿಸಬೇಕು.<br />-<em><strong>ಯತೀಶ್ ಜಗಾಟ, ಸದಸ್ಯ, ಹೊಂಗಡಹಳ್ಳ ಗ್ರಾ.ಪಂ</strong></em></p>.<p>*<br />ಪ್ರವಾಸೋದ್ಯಮಕ್ಕೆ ಒತ್ತು ಕೊಟ್ಟರೆ ಸ್ಥಳೀಯವಾಗಿ ಆರ್ಥಿಕ ಅಭಿವೃದ್ಧಿ ಆಗುತ್ತದೆ. ಪಶ್ಚಿಮಘಟ್ಟ ಸಂರಕ್ಷಣೆ ಜೊತೆ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು.<br /><em><strong>-ಪ್ರತೀಕ್ ಬಯಾಲ್, ಉಪವಿಭಾಗಾಧಿಕಾರಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಕಲೇಶಪುರ: </strong>ಬೆಟ್ಟ ಗುಡ್ಡ, ಝರಿ, ಜಲಪಾತ, ಕಾಡು, ಕಾಫಿ, ಏಲಕ್ಕಿ, ತೋಟಗಳನ್ನು ತನ್ನ ಒಡಲಲ್ಲಿ ಹೊಂದಿರುವ ಪಶ್ಚಿಮಘಟ್ಟ ಪ್ರವಾಸಿಗರನ್ನು ಕೈ ಬೀಸಿ ಕರೆಯುವಷ್ಟು ಸೌಂದರ್ಯ ಹಾಸಿ ಹೊದ್ದುಕೊಂಡಿದೆ.</p>.<p>ತಾಲ್ಲೂಕಿನ ಹಲವು ಪ್ರವಾಸಿ ತಾಣಗಳ ಪೈಕಿ ಕಾಗಿನಹರೆ ಬೆಟ್ಟ ಪ್ರಕೃತಿ ಪ್ರಿಯರ ನೆಚ್ಚಿನ ತಾಣವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಆಳ್ವಿಕೆ ನಡೆಸಿದ್ದ ಮೈಸೂರು ಒಡೆಯರ ಕಾಲದಲ್ಲಿ ವಿಶ್ರಾಂತಿಗಾಗಿ ಒಂದು ಸಣ್ಣ ಕೋಟೆನಿರ್ಮಿಸಲಾಗಿತ್ತು ಎನ್ನುವುದಕ್ಕೆ ಈಗಲೂ ಅಲ್ಲಿರುವ ಗೋಡೆಗಳು ಸಾಕ್ಷಿ.</p>.<p>ಈ ಕೋಟೆಯ ಮೇಲೆ ನಿಂತರೆ ನಾಲ್ಕು ದಿಕ್ಕುಗಳಲ್ಲಿಯೂ ಆಕಾಶಕ್ಕೆ ಮುಖ ಚಾಚಿಕೊಂಡು ನಿಂತ ಹಸಿರು ಹೊದ್ದ ಬೆಟ್ಟಗಳ ರಮಣೀಯ ನೋಟ ಸೆಳೆಯುತ್ತದೆ. ಕ್ಷಣ ಕ್ಷಣಕ್ಕೂ ಚಲಿಸುವ ಮೋಡಗಳ ನೆರಳು ಬೆಳಕು ಅಲ್ಲಲ್ಲಿ ಬೆಟ್ಟಗಳ ಮೇಲೆ ಸಾಗಿ ಹೋಗುವ ದೃಶ್ಯಕಾವ್ಯ ನೋಡುಗರನ್ನು ಮಂತ್ರಮುಗ್ಧದರನ್ನಾಗಿಸುತ್ತದೆ. ವರ್ಷದಿಂದ ವರ್ಷಕ್ಕೆಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.</p>.<p>ಕಾಗಿನಹರೆ ಬೆಟ್ಟ ಸಕಲೇಶಪುರ ತಾಲ್ಲೂಕು ಕೇಂದ್ರದಿಂದ (ಹೆತ್ತೂರು, ಬಾಚಳ್ಳಿ, ಅತ್ತಿಹಳ್ಳಿ, ಹೊಂಗಡಹಳ್ಳ ಮಾರ್ಗ) ಸುಮಾರು 50 ಕಿ.ಮೀ. ದೂರದಲ್ಲಿದೆ. ಸಕಲೇಶಪುರದಿಂದ ಮಾನಹಳ್ಳಿ, ಆಲುವಳ್ಳಿ, ಕಡಗರವಳ್ಳಿ, ನೂದ್ರಹಳ್ಳಿ, ಹೊಂಗಡಹಳ್ಳ ಮಾರ್ಗವಾಗಿ ಸಾಗಿದರೆ ಸುಮಾರು 35 ಕಿ.ಮೀ. ಆಗುತ್ತದೆ. ಕಾಗಿನಹರೆ ಗ್ರಾಮದವರೆಗೂ ಈ ಎರಡೂ ಮಾರ್ಗದಲ್ಲಿ ಉತ್ತಮ ರಸ್ತೆ ವ್ಯವಸ್ಥೆ ಇದೆ.</p>.<p>‘ಕಾಗಿನಹರೆ ಗ್ರಾಮಕ್ಕೆ ಬರುವಂತಹ ಪ್ರವಾಸಿಗರು ವಾಹನಗಳನ್ನು ಗ್ರಾಮದ ಹೊರಭಾಗದಲ್ಲಿಯೇ ನಿಲ್ಲಿಸಬೇಕು. ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿಯೇ ಹೋಗಬೇಕು. ಕಾಲ್ನಡಿಗೆಯಲ್ಲಿ ಹೋಗುವುದಕ್ಕೆ ಸಾಧ್ಯವಾಗದಿದ್ದವರನ್ನು ಸ್ಥಳೀಯರ ಜೀಪುಗಳಲ್ಲಿ ಕರೆದೊಯ್ಯುವ ವ್ಯವಸ್ಥೆ ಮಾಡಬೇಕು’ ಎಂದುಕಾಗಿನಹರೆ ಗ್ರಾಮದ ಕೃಷ್ಣೇಗೌಡ ಹೇಳಿದರು.</p>.<p>*<br />ಪ್ರವಾಸಿಗರು ತ್ಯಾಜ್ಯ, ಮದ್ಯದ ಬಾಟಲಿ ಒಡೆದು ಹಾಕಿ, ಬೆಟ್ಟದ ಪರಿಸರ ಹಾಳು ಮಾಡುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆ ವ್ಯವಸ್ಥೆ ನೋಡಿಕೊಳ್ಳಲು ಗ್ರಾ.ಪಂ.ಗಾದರೂ ವಹಿಸಬೇಕು.<br />-<em><strong>ಯತೀಶ್ ಜಗಾಟ, ಸದಸ್ಯ, ಹೊಂಗಡಹಳ್ಳ ಗ್ರಾ.ಪಂ</strong></em></p>.<p>*<br />ಪ್ರವಾಸೋದ್ಯಮಕ್ಕೆ ಒತ್ತು ಕೊಟ್ಟರೆ ಸ್ಥಳೀಯವಾಗಿ ಆರ್ಥಿಕ ಅಭಿವೃದ್ಧಿ ಆಗುತ್ತದೆ. ಪಶ್ಚಿಮಘಟ್ಟ ಸಂರಕ್ಷಣೆ ಜೊತೆ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು.<br /><em><strong>-ಪ್ರತೀಕ್ ಬಯಾಲ್, ಉಪವಿಭಾಗಾಧಿಕಾರಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>