<p><strong>ಹಾವೇರಿ:</strong> ತನ್ನನ್ನು ಮದುವೆಯಾಗಲು ಒಪ್ಪಲಿಲ್ಲವೆಂಬ ಕಾರಣಕ್ಕೆ ನಾಗರಾಜ ಮಣ್ಣಿಕೇರಿ ಎಂಬುವರನ್ನು ಕೊಲೆ ಮಾಡಿದ್ದ ಅಪರಾಧಿ ಎಲ್ಲವ್ವ ಹೊಸಳ್ಳಿ ಎಂಬುವವರಿಗೆ ಜೀವಾವಧಿ ಶಿಕ್ಷೆ ಹಾಗೂ ₹ 35 ಸಾವಿರ ದಂಡ ವಿಧಿಸಿ ನಗರದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.</p><p>2021ರಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶ ಜಿ.ಎಲ್. ಲಕ್ಷ್ಮಿನಾರಾಯಣ ಅವರು ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಸರೋಜಾ ಕೂಡಲಗಿಮಠ ವಾದಿಸಿದ್ದರು.</p><p>ಅಪರಾಧಿ ಎಲ್ಲವ್ವ, ಮೊದಲ ಪತಿಯಿಂದ ದೂರವಾಗಿ ಎರಡನೇ ಮದುವೆಯಾಗಿದ್ದರು. ಎರಡನೇ ಪತಿ ಹಾಗೂ ಮಗಳ (ಮೊದಲ ಪತಿ ಮಗಳು) ಜೊತೆ ವಾಸವಿದ್ದರು. ಎರಡನೇ ಪತಿ, ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಜೈಲು ಸೇರಿದ್ದ. ಇದರಿಂದಾಗಿ ಎಲ್ಲವ್ವ, ಬಾಡಿಗೆ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಿದ್ದರು.</p><p>ಕೊಲೆಯಾದ ನಾಗರಾಜ ಮಣ್ಣಿಕೇರಿ, ಎಲ್ಲವ್ವ ಮನೆ ಬಳಿ ಇರುವ ಸಂಬಂಧಿಕರ ಮನೆಗೆ ಆಗಾಗ ಬಂದು ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಸ್ನೇಹ ಬೆಳೆದು ಸಲುಗೆ ಏರ್ಪಟ್ಟಿತ್ತು. ಇಬ್ಬರೂ ಉಡುಪಿ, ಮಂಗಳೂರು ಹಾಗೂ ಇತರೆಡೆ ಆಗಾಗ ಸುತ್ತಾಡಿಕೊಂಡು ಬಂದಿದ್ದರು.</p><p>ಸಲುಗೆ ವಿಷಯ ತಿಳಿದಿದ್ದ ಸಂಬಂಧಿಕರು, ‘ಎಲ್ಲವ್ವ ನಡತೆ ಸರಿ ಇಲ್ಲ. ಎರಡು ಮದುವೆಯಾಗಿದೆ. ಆಕೆಯ ಜೊತೆ ಸುತ್ತಾಡಬೇಡ’ ಎಂದು ನಾಗರಾಜಗೆ ತಾಕೀತು ಮಾಡಿದ್ದರು. ಆದರೆ, ತನ್ನನ್ನೇ ಮದುವೆಯಾಗಬೇಕೆಂದು ಎಲ್ಲವ್ವ ಪಟ್ಟು ಹಿಡಿದಿದ್ದರು. ಮದುವೆಯಾಗದಿದ್ದರೆ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿಯೂ ಬೆದರಿಸಿದ್ದರು.</p><p>2021ರ ಆಗಸ್ಟ್ 2ರಂದು ನಾಗರಾಜ ಅವರನ್ನು ಕರೆದುಕೊಂಡು ಹೋಗಿದ್ದ ಎಲ್ಲವ್ವ, ಹಲವೆಡೆ ಸುತ್ತಾಡಿದ್ದರು. ಆಗಸ್ಟ್ 8ರಂದು ಇಬ್ಬರೂ ಹುಬ್ಬಳ್ಳಿಯ ಗಬ್ಬೂರು ಕ್ರಾಸ್ ಬಳಿ ಬಂದಿದ್ದರು. ಚಾಲಕರೊಬ್ಬರು ಲಾರಿ ನಿಲ್ಲಿಸಿ ಊಟಕ್ಕೆ ತೆರಳಿದ್ದರು. ಪಾನಮತ್ತನಾಗಿದ್ದ ನಾಗರಾಜ ಹಾಗೂ ಎಲ್ಲವ್ವ ಅದೇ ಲಾರಿ ಹತ್ತಿ ಕುಳಿತಿದ್ದರು. ಇದೇ ಸಂದರ್ಭದಲ್ಲಿ ಎಲ್ಲವ್ವ, ನಾಗರಾಜ ಅವರ ಕುತ್ತಿಗೆಯನ್ನು ವೇಲ್ನಿಂದ ಬಿಗಿದು ಕೊಂದಿದ್ದರು. ನಂತರ, ಮೃತದೇಹವನ್ನು ಮೋಟೆಬೆನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಸಮೀಪ ಎಸೆದು ಪರಾರಿಯಾಗಿದ್ದರು.</p><p>ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಡಿವೈಎಸ್ಪಿ ಶಂಕರ ವಾರಿಹಾಳ ಅವರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ತನ್ನನ್ನು ಮದುವೆಯಾಗಲು ಒಪ್ಪಲಿಲ್ಲವೆಂಬ ಕಾರಣಕ್ಕೆ ನಾಗರಾಜ ಮಣ್ಣಿಕೇರಿ ಎಂಬುವರನ್ನು ಕೊಲೆ ಮಾಡಿದ್ದ ಅಪರಾಧಿ ಎಲ್ಲವ್ವ ಹೊಸಳ್ಳಿ ಎಂಬುವವರಿಗೆ ಜೀವಾವಧಿ ಶಿಕ್ಷೆ ಹಾಗೂ ₹ 35 ಸಾವಿರ ದಂಡ ವಿಧಿಸಿ ನಗರದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.</p><p>2021ರಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶ ಜಿ.ಎಲ್. ಲಕ್ಷ್ಮಿನಾರಾಯಣ ಅವರು ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಸರೋಜಾ ಕೂಡಲಗಿಮಠ ವಾದಿಸಿದ್ದರು.</p><p>ಅಪರಾಧಿ ಎಲ್ಲವ್ವ, ಮೊದಲ ಪತಿಯಿಂದ ದೂರವಾಗಿ ಎರಡನೇ ಮದುವೆಯಾಗಿದ್ದರು. ಎರಡನೇ ಪತಿ ಹಾಗೂ ಮಗಳ (ಮೊದಲ ಪತಿ ಮಗಳು) ಜೊತೆ ವಾಸವಿದ್ದರು. ಎರಡನೇ ಪತಿ, ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಜೈಲು ಸೇರಿದ್ದ. ಇದರಿಂದಾಗಿ ಎಲ್ಲವ್ವ, ಬಾಡಿಗೆ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಿದ್ದರು.</p><p>ಕೊಲೆಯಾದ ನಾಗರಾಜ ಮಣ್ಣಿಕೇರಿ, ಎಲ್ಲವ್ವ ಮನೆ ಬಳಿ ಇರುವ ಸಂಬಂಧಿಕರ ಮನೆಗೆ ಆಗಾಗ ಬಂದು ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಸ್ನೇಹ ಬೆಳೆದು ಸಲುಗೆ ಏರ್ಪಟ್ಟಿತ್ತು. ಇಬ್ಬರೂ ಉಡುಪಿ, ಮಂಗಳೂರು ಹಾಗೂ ಇತರೆಡೆ ಆಗಾಗ ಸುತ್ತಾಡಿಕೊಂಡು ಬಂದಿದ್ದರು.</p><p>ಸಲುಗೆ ವಿಷಯ ತಿಳಿದಿದ್ದ ಸಂಬಂಧಿಕರು, ‘ಎಲ್ಲವ್ವ ನಡತೆ ಸರಿ ಇಲ್ಲ. ಎರಡು ಮದುವೆಯಾಗಿದೆ. ಆಕೆಯ ಜೊತೆ ಸುತ್ತಾಡಬೇಡ’ ಎಂದು ನಾಗರಾಜಗೆ ತಾಕೀತು ಮಾಡಿದ್ದರು. ಆದರೆ, ತನ್ನನ್ನೇ ಮದುವೆಯಾಗಬೇಕೆಂದು ಎಲ್ಲವ್ವ ಪಟ್ಟು ಹಿಡಿದಿದ್ದರು. ಮದುವೆಯಾಗದಿದ್ದರೆ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿಯೂ ಬೆದರಿಸಿದ್ದರು.</p><p>2021ರ ಆಗಸ್ಟ್ 2ರಂದು ನಾಗರಾಜ ಅವರನ್ನು ಕರೆದುಕೊಂಡು ಹೋಗಿದ್ದ ಎಲ್ಲವ್ವ, ಹಲವೆಡೆ ಸುತ್ತಾಡಿದ್ದರು. ಆಗಸ್ಟ್ 8ರಂದು ಇಬ್ಬರೂ ಹುಬ್ಬಳ್ಳಿಯ ಗಬ್ಬೂರು ಕ್ರಾಸ್ ಬಳಿ ಬಂದಿದ್ದರು. ಚಾಲಕರೊಬ್ಬರು ಲಾರಿ ನಿಲ್ಲಿಸಿ ಊಟಕ್ಕೆ ತೆರಳಿದ್ದರು. ಪಾನಮತ್ತನಾಗಿದ್ದ ನಾಗರಾಜ ಹಾಗೂ ಎಲ್ಲವ್ವ ಅದೇ ಲಾರಿ ಹತ್ತಿ ಕುಳಿತಿದ್ದರು. ಇದೇ ಸಂದರ್ಭದಲ್ಲಿ ಎಲ್ಲವ್ವ, ನಾಗರಾಜ ಅವರ ಕುತ್ತಿಗೆಯನ್ನು ವೇಲ್ನಿಂದ ಬಿಗಿದು ಕೊಂದಿದ್ದರು. ನಂತರ, ಮೃತದೇಹವನ್ನು ಮೋಟೆಬೆನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಸಮೀಪ ಎಸೆದು ಪರಾರಿಯಾಗಿದ್ದರು.</p><p>ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಡಿವೈಎಸ್ಪಿ ಶಂಕರ ವಾರಿಹಾಳ ಅವರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>