ದುರ್ಗಾದೇವಿ ಜಾತ್ರೆ: ಉಡಿ ತುಂಬುವ ಕಾರ್ಯಕ್ರಮ
ಸವಣೂರು: ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಪ್ರಾತಃಕಾಲ ದೇವಿಗೆ ಅಭಿಷೇಕ ಪುಷ್ಪಾರ್ಚನೆ ಸೇರಿದಂತೆ ಉಡಿ ತುಂಬುವ ಕಾರ್ಯಕ್ರಮ ವಿಜೃಂಭನೆಯಿಂದ ಜರುಗಿತು. ಜಾತ್ರಾ ಮಹೋತ್ಸವದ ಅಂಗವಾಗಿ ದುರ್ಗಾದೇವಿ ಉತ್ಸವ ಮೂರ್ತಿ ಮೆರವಣಿಗೆ ಡೊಳ್ಳು ಭಜನೆ ಜಾಂಜ್ಮೇಳ ಸೇರಿದಂತೆ ಸಕಲ ವಾದ್ಯವೈಭವದೊಂದಿಗೆ ಗ್ರಾಮದ ಬೀದಿಗಳಲ್ಲಿ ಸಂಚರಿಸುತ್ತಿದ್ದಂತೆ ಭಕ್ತರು ರಥಬೀದಿ ಉದ್ದಕ್ಕೂ ದೇವಿಯ ದರ್ಶನ ಪಡೆದು ಪುನೀತರಾದರು. ನಂತರ ಮೇಡ್ಲೆರೇಶ್ವರ ದೇವಸ್ಥಾನದ ಕಮಿಟಿ ವತಿಯಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ದೇವಿಯ ದರ್ಶನ ಪಡೆಯಲು ಬಂದ ಭಕ್ತರು ಹಣ್ಣು ಕಾಯಿ ನೈವೇದ್ಯ ಸಲ್ಲಿಸುವ ಮೂಲಕ ತಮ್ಮ ಹರಕೆ ಸಲ್ಲಿಸಿದರು. ಜಂಗಿ ಕುಸ್ತಿ: ದುರ್ಗಾದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರದವರೆಗೆ ರಾಜ್ಯಮಟ್ಟದ ಬಯಲು ಜಂಗಿ ಕುಸ್ತಿಗಳು ನಿರಂತರವಾಗಿ ನಡೆಯಲಿವೆ. ಹೊನ್ನಪ್ಪ ಕೊಳ್ಳವರ ಬರಮಪ್ಪ ಕಲಾದಗಿ ಹೊನ್ನಪ್ಪ ಕೊಳ್ಳವರ ಅಶೋಕ ಬಿಜ್ಜೂರ ಮಾಲತೇಶ ಪೂಜಾರ ನಿಂಗಪ್ಪ ಮತ್ತೂರು ಫಕೀರೇಶ ಪೂಜಾರ ನಿಂಗಪ್ಪ ಸಂದ್ಲಿ ನಿಂಗಪ್ಪ ಯರೆಸೀಮಿ. ನಿಂಗಪ್ಪ ಅಜ್ಜಣ್ಣವರ ಸುರೇಶ ಅಜ್ಜಣ್ಣವರ ಹನುಮಂತಪ್ಪ ಬಂಡಿವಡ್ಡರ ಮಂಜು ಕೊಪ್ಪದ ರಾಮಣ್ಣ ವೈಯ್ಯಾಳಿ ಬಸವಂತಪ್ಪ ಭಜಂತ್ರಿ ಉಡಚಪ್ಪ ಅಜ್ಜಣ್ಣವರ ಇದ್ದರು.