<p><strong>ಶಿಗ್ಗಾವಿ</strong>: ಇಲ್ಲಿನ ಸಂತೆ ಮೈದಾನ ಸತತ ಮಳೆಯಿಂದ ಕೆಸರು ಗದ್ದೆಯಾಗಿದ್ದು, ಅದರಲ್ಲಿಯೇ ವಾರದ ಸಂತೆ ನಡೆಯುತ್ತಿದೆ. ಹೀಗಾಗಿ ಸಂತೆಗೆ ಬರುವ ಜನರು ಪರದಾಡುವಂತಾಗಿದೆ.</p>.<p>ವ್ಯಾಪಾರಸ್ಥರು ತಾಡಪಾಲದ ಟೆಂಟ್ಗಳನ್ನು ಕಟ್ಟಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ತರಕಾರಿ, ಹಣ್ಣುಗಳನ್ನು ಹೆರಿಕೊಂಡು ಬರುವ ವಾಹನಗಳು ಇದರಲ್ಲಿ ಸಿಕ್ಕು ಚಾಲಕರು ಸಂಚಾರಕ್ಕಾಗಿ ಹರಸಾಹಸ ಮಾಡುತ್ತಿದ್ದಾರೆ.</p>.<p>ಕೆಲವು ವಾಹನಗಳು ಕೆಸರಿನಲ್ಲಿ ಸಿಲುಕಿ ಹೋರ ಬಾರದಂತಾಗಿವೆ. ದಿನವೀಡಿ ಕೆಸರಿನಲ್ಲಿಯೇ ಕುಳಿತುಕೊಂಡು ವ್ಯಾಪಾರ ಮಾಡುವಂತಾಗಿದೆ ಎಂದು ಇಲ್ಲಿನ ವ್ಯಾಪಾರಸ್ಥರು ಅಳಲು ತೊಂಡಿಕೊಂಡರು.</p>.<p>‘ಪುರಸಭೆ ಆಡಳಿತವು ಸಂತೆ ವ್ಯಾಪಾರಸ್ಥರಿಂದ ತೆರಿಗೆ ಕಟ್ಟಿಸಿಕೊಳ್ಳುತ್ತಿದೆ. ಅಲ್ಲದೆ ಸಾರ್ವಜನಿಕರಿಂದ ಸಂತೆ ಸೇರಿದಂತೆ ವಿವಿಧ ತೆರಿಗೆ ಹಣ ವಸೂಲು ಮಾಡುತ್ತಿದೆ. ಆದರೂ ಸಂತೆ ಮೈದಾನ ಸುಸಜ್ಜಿತವಾಗಿಲ್ಲ. ಈ ಕುರಿತು ಪುರಸಭೆ ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸಂತೆ ತೆರಿಗೆ ಹಣ ಸಂತೆ ಮಾರುಕಟ್ಟೆ ಮೈದಾನಕ್ಕೆ ಬಳಕೆಯಾಗುತ್ತಿಲ್ಲ’ ಎಂದು ಹಿರಿಯ ಕಲಾವಿದ ಶಂಕರ ಅರ್ಕಸಾಲಿ ಪುರಸಭೆ ಅಧಿಕಾರಿಗಳ ವಿರೋಧ ಆಕ್ರೋಶ ವ್ಯಕ್ತಪಡಿಸುತ್ತಾರೆ.</p>.<p>‘ವ್ಯಾಪರಕ್ಕಾಗಿ ತಂದಿರುವ ತರಕಾರಿ ಕೆಸರಿನಲ್ಲಿ ಬಿದ್ದು ಮಣ್ಣು ಪಾಲಾಗುತ್ತಿದ್ದು, ವ್ಯಾಪಾರ ಕುಠಿತವಾಗುತ್ತಿದೆ. ಪುರಸಭೆ ಆಡಳಿತ ಅಧಿಕಾರಿಗಳು ತಕ್ಷಣ ಈ ಕಡೆ ಗಮನಹರಿಸಿ, ಕಾಂಕ್ರಿಟ್ ರಸ್ತೆ ಮಾಡಬೇಕು. ಸುಸಜ್ಜಿತ ಮಾರುಕಟ್ಟೆ ನಿರ್ಮಿಸಬೇಕು’ ಎಂದು ತರಕಾರಿ ವ್ಯಾಪಾರಸ್ಥ ಪರಶುರಾಮ ಕುದರಿ ಒತ್ತಾಯಿಸಿದರು.</p>.<div><blockquote>ಸಂತೆ ಮೈದಾನದಲ್ಲಿ ಜನರಿಗಾಗುವ ತೊಂದರೆಗಳನ್ನು ಗಮನಿಸಲಾಗಿದ್ದು ಮೇಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಕಾಂಕ್ರಿಟ್ ಮಾಡಿಸಲಾಗುವುದು. ಆಡಳಿತ ಮಂಡಳಿಯೂ ಸಹಕರಿಸಲಿದೆ. </blockquote><span class="attribution">ಆರ್.ಮಲ್ಲೇಶ, ಪುರಸಭೆ ಮುಖ್ಯಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಗ್ಗಾವಿ</strong>: ಇಲ್ಲಿನ ಸಂತೆ ಮೈದಾನ ಸತತ ಮಳೆಯಿಂದ ಕೆಸರು ಗದ್ದೆಯಾಗಿದ್ದು, ಅದರಲ್ಲಿಯೇ ವಾರದ ಸಂತೆ ನಡೆಯುತ್ತಿದೆ. ಹೀಗಾಗಿ ಸಂತೆಗೆ ಬರುವ ಜನರು ಪರದಾಡುವಂತಾಗಿದೆ.</p>.<p>ವ್ಯಾಪಾರಸ್ಥರು ತಾಡಪಾಲದ ಟೆಂಟ್ಗಳನ್ನು ಕಟ್ಟಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ತರಕಾರಿ, ಹಣ್ಣುಗಳನ್ನು ಹೆರಿಕೊಂಡು ಬರುವ ವಾಹನಗಳು ಇದರಲ್ಲಿ ಸಿಕ್ಕು ಚಾಲಕರು ಸಂಚಾರಕ್ಕಾಗಿ ಹರಸಾಹಸ ಮಾಡುತ್ತಿದ್ದಾರೆ.</p>.<p>ಕೆಲವು ವಾಹನಗಳು ಕೆಸರಿನಲ್ಲಿ ಸಿಲುಕಿ ಹೋರ ಬಾರದಂತಾಗಿವೆ. ದಿನವೀಡಿ ಕೆಸರಿನಲ್ಲಿಯೇ ಕುಳಿತುಕೊಂಡು ವ್ಯಾಪಾರ ಮಾಡುವಂತಾಗಿದೆ ಎಂದು ಇಲ್ಲಿನ ವ್ಯಾಪಾರಸ್ಥರು ಅಳಲು ತೊಂಡಿಕೊಂಡರು.</p>.<p>‘ಪುರಸಭೆ ಆಡಳಿತವು ಸಂತೆ ವ್ಯಾಪಾರಸ್ಥರಿಂದ ತೆರಿಗೆ ಕಟ್ಟಿಸಿಕೊಳ್ಳುತ್ತಿದೆ. ಅಲ್ಲದೆ ಸಾರ್ವಜನಿಕರಿಂದ ಸಂತೆ ಸೇರಿದಂತೆ ವಿವಿಧ ತೆರಿಗೆ ಹಣ ವಸೂಲು ಮಾಡುತ್ತಿದೆ. ಆದರೂ ಸಂತೆ ಮೈದಾನ ಸುಸಜ್ಜಿತವಾಗಿಲ್ಲ. ಈ ಕುರಿತು ಪುರಸಭೆ ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸಂತೆ ತೆರಿಗೆ ಹಣ ಸಂತೆ ಮಾರುಕಟ್ಟೆ ಮೈದಾನಕ್ಕೆ ಬಳಕೆಯಾಗುತ್ತಿಲ್ಲ’ ಎಂದು ಹಿರಿಯ ಕಲಾವಿದ ಶಂಕರ ಅರ್ಕಸಾಲಿ ಪುರಸಭೆ ಅಧಿಕಾರಿಗಳ ವಿರೋಧ ಆಕ್ರೋಶ ವ್ಯಕ್ತಪಡಿಸುತ್ತಾರೆ.</p>.<p>‘ವ್ಯಾಪರಕ್ಕಾಗಿ ತಂದಿರುವ ತರಕಾರಿ ಕೆಸರಿನಲ್ಲಿ ಬಿದ್ದು ಮಣ್ಣು ಪಾಲಾಗುತ್ತಿದ್ದು, ವ್ಯಾಪಾರ ಕುಠಿತವಾಗುತ್ತಿದೆ. ಪುರಸಭೆ ಆಡಳಿತ ಅಧಿಕಾರಿಗಳು ತಕ್ಷಣ ಈ ಕಡೆ ಗಮನಹರಿಸಿ, ಕಾಂಕ್ರಿಟ್ ರಸ್ತೆ ಮಾಡಬೇಕು. ಸುಸಜ್ಜಿತ ಮಾರುಕಟ್ಟೆ ನಿರ್ಮಿಸಬೇಕು’ ಎಂದು ತರಕಾರಿ ವ್ಯಾಪಾರಸ್ಥ ಪರಶುರಾಮ ಕುದರಿ ಒತ್ತಾಯಿಸಿದರು.</p>.<div><blockquote>ಸಂತೆ ಮೈದಾನದಲ್ಲಿ ಜನರಿಗಾಗುವ ತೊಂದರೆಗಳನ್ನು ಗಮನಿಸಲಾಗಿದ್ದು ಮೇಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಕಾಂಕ್ರಿಟ್ ಮಾಡಿಸಲಾಗುವುದು. ಆಡಳಿತ ಮಂಡಳಿಯೂ ಸಹಕರಿಸಲಿದೆ. </blockquote><span class="attribution">ಆರ್.ಮಲ್ಲೇಶ, ಪುರಸಭೆ ಮುಖ್ಯಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>