<p><strong>ಹಾವೇರಿ:</strong> ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಮಂಗಳವಾರ ಒಂದೇ ದಿನದಲ್ಲಿ 172 ಮನೆಗಳಿಗೆ ಹಾನಿಯಾಗಿದೆ.</p>.<p>ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಭಾಗದಲ್ಲಿ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಹರಿಯುತ್ತಿರುವ ವರದಾ ಹಾಗೂ ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಯಥಾಸ್ಥಿತಿಯಲ್ಲಿದೆ. ಇದರ ಜೊತೆಯಲ್ಲೇ ಜಿಲ್ಲೆಯ ಹಲವೆಡೆ ಬಿಡುವು ನೀಡುತ್ತಲೇ ಮಳೆ ಸುರಿಯುತ್ತಿದ್ದು, ಗೋಡೆ ಹಾಗೂ ಚಾವಣಿ ಶಿಥಿಲಗೊಂಡು ಮನೆಗಳಿಗೆ ಹಾನಿಯಾಗುತ್ತಿದೆ.</p>.<p>‘ಮಳೆಯಿಂದ ಮನೆಗಳಿಗೆ ಹಾನಿಯಾದ ಬಗ್ಗೆ ಅಧಿಕಾರಿಗಳು ಕಾಲ ಕಾಲಕ್ಕೆ ಫೋಟೊ ಸಮೇತ ವರದಿ ಪಡೆಯುತ್ತಿದ್ದಾರೆ. ಮಂಗಳವಾರ ಒಂದೇ ದಿನದಲ್ಲಿ 172 ಮನೆಗಳಿಗೆ ಭಾಗಶಃ ಹಾನಿಯಾಗಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.</p>.<p>‘ಮಳೆಗಾಲ ಶುರುವಾದಾಗಿನಿಂದ ಇದುವರೆಗೂ ಜಿಲ್ಲೆಯ 1,460 ಮನೆಗಳಿಗೆ ಹಾನಿಯಾಗಿದೆ. 5 ಮನೆಗಳಿಗೆ ಸಂಪೂರ್ಣ ಹಾನಿ ಉಂಟಾಗಿದೆ. 11 ಮನೆಗಳಿಗೆ ತೀವ್ರ ಹಾಗೂ 1,444 ಮನೆಗಳಿಗೆ ಭಾಗಶಃ ಹಾನಿ ಆಗಿದೆ. 15 ಕಡೆ ದನದ ಕೊಟ್ಟಿಗೆಗಳಿಗೂ ಹಾನಿ ಉಂಟಾಗಿದೆ. ಎರಡು ಆಕಳು ಹಾಗೂ ಒಂದು ಎಮ್ಮೆಕರು ಮೃತಪಟ್ಟಿದೆ’ ಎಂದು ಹೇಳಿದರು.</p>.<p>3,778 ಹೆಕ್ಟೇರ್ ಜಮೀನು ಜಲಾವೃತ: ‘ವರದಾ ಹಾಗೂ ತುಂಗಭದ್ರಾ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿರುವ ಕೃಷಿ ಜಮೀನಿಗೆ ನೀರು ನುಗ್ಗಿದೆ. ಇದರಿಂದಾಗಿ ಜಿಲ್ಲೆಯ 3,778 ಹೆಕ್ಟೇರ್ ಜಮೀನು ಜಲಾವೃತಗೊಂಡಿದೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.</p>.<p>‘5,017 ರೈತರಿಗೆ ಸೇರಿದ್ದ ಜಮೀನು ಜಲಾವೃತಗೊಂಡಿದೆ. ಜಲಾವೃತಗೊಂಡಿರುವ ಜಮೀನಿನಲ್ಲಿ ನೀರು ಇಳಿಕೆಯಾಗುತ್ತಿಲ್ಲ. ಇದು ಹೀಗೆ ಮುಂದುವರಿದರೆ, ಎಲ್ಲ ಬೆಳೆಯೂ ಹಾನಿಯಾಗಬಹುದು. ನೀರು ಇಳಿಕೆಯಾದ ನಂತರ ಮತ್ತೊಮ್ಮೆ ಸಮೀಕ್ಷೆ ನಡೆಸಿದಾಗ, ಬೆಳೆ ಹಾನಿ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಮಂಗಳವಾರ ಒಂದೇ ದಿನದಲ್ಲಿ 172 ಮನೆಗಳಿಗೆ ಹಾನಿಯಾಗಿದೆ.</p>.<p>ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಭಾಗದಲ್ಲಿ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಹರಿಯುತ್ತಿರುವ ವರದಾ ಹಾಗೂ ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಯಥಾಸ್ಥಿತಿಯಲ್ಲಿದೆ. ಇದರ ಜೊತೆಯಲ್ಲೇ ಜಿಲ್ಲೆಯ ಹಲವೆಡೆ ಬಿಡುವು ನೀಡುತ್ತಲೇ ಮಳೆ ಸುರಿಯುತ್ತಿದ್ದು, ಗೋಡೆ ಹಾಗೂ ಚಾವಣಿ ಶಿಥಿಲಗೊಂಡು ಮನೆಗಳಿಗೆ ಹಾನಿಯಾಗುತ್ತಿದೆ.</p>.<p>‘ಮಳೆಯಿಂದ ಮನೆಗಳಿಗೆ ಹಾನಿಯಾದ ಬಗ್ಗೆ ಅಧಿಕಾರಿಗಳು ಕಾಲ ಕಾಲಕ್ಕೆ ಫೋಟೊ ಸಮೇತ ವರದಿ ಪಡೆಯುತ್ತಿದ್ದಾರೆ. ಮಂಗಳವಾರ ಒಂದೇ ದಿನದಲ್ಲಿ 172 ಮನೆಗಳಿಗೆ ಭಾಗಶಃ ಹಾನಿಯಾಗಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.</p>.<p>‘ಮಳೆಗಾಲ ಶುರುವಾದಾಗಿನಿಂದ ಇದುವರೆಗೂ ಜಿಲ್ಲೆಯ 1,460 ಮನೆಗಳಿಗೆ ಹಾನಿಯಾಗಿದೆ. 5 ಮನೆಗಳಿಗೆ ಸಂಪೂರ್ಣ ಹಾನಿ ಉಂಟಾಗಿದೆ. 11 ಮನೆಗಳಿಗೆ ತೀವ್ರ ಹಾಗೂ 1,444 ಮನೆಗಳಿಗೆ ಭಾಗಶಃ ಹಾನಿ ಆಗಿದೆ. 15 ಕಡೆ ದನದ ಕೊಟ್ಟಿಗೆಗಳಿಗೂ ಹಾನಿ ಉಂಟಾಗಿದೆ. ಎರಡು ಆಕಳು ಹಾಗೂ ಒಂದು ಎಮ್ಮೆಕರು ಮೃತಪಟ್ಟಿದೆ’ ಎಂದು ಹೇಳಿದರು.</p>.<p>3,778 ಹೆಕ್ಟೇರ್ ಜಮೀನು ಜಲಾವೃತ: ‘ವರದಾ ಹಾಗೂ ತುಂಗಭದ್ರಾ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿರುವ ಕೃಷಿ ಜಮೀನಿಗೆ ನೀರು ನುಗ್ಗಿದೆ. ಇದರಿಂದಾಗಿ ಜಿಲ್ಲೆಯ 3,778 ಹೆಕ್ಟೇರ್ ಜಮೀನು ಜಲಾವೃತಗೊಂಡಿದೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.</p>.<p>‘5,017 ರೈತರಿಗೆ ಸೇರಿದ್ದ ಜಮೀನು ಜಲಾವೃತಗೊಂಡಿದೆ. ಜಲಾವೃತಗೊಂಡಿರುವ ಜಮೀನಿನಲ್ಲಿ ನೀರು ಇಳಿಕೆಯಾಗುತ್ತಿಲ್ಲ. ಇದು ಹೀಗೆ ಮುಂದುವರಿದರೆ, ಎಲ್ಲ ಬೆಳೆಯೂ ಹಾನಿಯಾಗಬಹುದು. ನೀರು ಇಳಿಕೆಯಾದ ನಂತರ ಮತ್ತೊಮ್ಮೆ ಸಮೀಕ್ಷೆ ನಡೆಸಿದಾಗ, ಬೆಳೆ ಹಾನಿ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>