<p><strong>ಹಾವೇರಿ:</strong> ‘ಹಣ, ಬೆಳ್ಳಿ, ಬಂಗಾರ ವಸ್ತುಗಳನ್ನು ಕದಿಯಬಹುದು. ಕದಿಯಲಾರದ ಸಂಪತ್ತು ವಿದ್ಯೆ ಮಾತ್ರ’ ಎಂದು ಹಾವೇರಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.</p>.<p>ನಗರದ ಗೌರಿಮಠದ ಮಲ್ಲಿಕಾರ್ಜುನ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಶುಕ್ರವಾರ ಜರುಗಿದ ಸರಸ್ವತಿ ಪೂಜೆ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ವಿದ್ಯೆ ಶ್ರೇಷ್ಠ ಸಂಪತ್ತು. ಮಕ್ಕಳಿಗೆ ವಿದ್ಯೆಯ ಮಹತ್ವ ತಿಳಿಸಬೇಕು’ ಎಂದರು.</p>.<p>ನಿವೃತ್ತ ಪ್ರಾಚಾರ್ಯ ಪಿ.ಸಿ. ಹಿರೇಮಠ ಅವರು ಮಾತನಾಡಿ, ‘ವಿದ್ಯಾರ್ಥಿಗಳು ತಾಯಿ ಗರ್ಭದಲ್ಲಿ ಹುಟ್ಟಿರುವುದು ಮಾತ್ರವಲ್ಲ, ಶಿಕ್ಷಕರ ಹೃದಯದಿಂದ ಹುಟ್ಟಿದ ಮಕ್ಕಳು’ ಎಂದು ಶಿಕ್ಷಕರ ಹಾಗೂ ಮಕ್ಕಳ ಬಾಂಧವ್ಯದ ಬಗ್ಗೆ ವಿವರಿಸಿದರು.</p>.<p>ಮುಖಂಡ ಎಂ.ಎಸ್. ಕೊರಿಶೆಟ್ಟರ್ ಮಾತನಾಡಿ, ‘ಧೈರ್ಯದಿಂದ ಪರೀಕ್ಷೆ ಬರೆದು ಉತ್ತಮ ಅಂಕ ಪಡೆದು ಶಾಲೆಯ ಮತ್ತು ಪಾಲಕರಿಗೆ ಕೀರ್ತಿ ತರಬೇಕು’ ಎಂದರು.</p>.<p>ಮುಖ್ಯಶಿಕ್ಷಕ ಶಂಕರ ಅಕ್ಕಸಾಲಿ, ತಸ್ಮಿಯಾ ಬಾಗಲಕೋಟಿ, ಪ್ರಿಯಾಂಕಾ ತುಂಗಳ, ಮಿಸಬಾ ನೆಗಳೂರ, ಹಿರೇಮಠ, ಮಂಗಳಾ ಗೌಡರ, ಇಂಚರ ಮಲ್ಲಪ್ಪನವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ‘ಹಣ, ಬೆಳ್ಳಿ, ಬಂಗಾರ ವಸ್ತುಗಳನ್ನು ಕದಿಯಬಹುದು. ಕದಿಯಲಾರದ ಸಂಪತ್ತು ವಿದ್ಯೆ ಮಾತ್ರ’ ಎಂದು ಹಾವೇರಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.</p>.<p>ನಗರದ ಗೌರಿಮಠದ ಮಲ್ಲಿಕಾರ್ಜುನ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಶುಕ್ರವಾರ ಜರುಗಿದ ಸರಸ್ವತಿ ಪೂಜೆ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ವಿದ್ಯೆ ಶ್ರೇಷ್ಠ ಸಂಪತ್ತು. ಮಕ್ಕಳಿಗೆ ವಿದ್ಯೆಯ ಮಹತ್ವ ತಿಳಿಸಬೇಕು’ ಎಂದರು.</p>.<p>ನಿವೃತ್ತ ಪ್ರಾಚಾರ್ಯ ಪಿ.ಸಿ. ಹಿರೇಮಠ ಅವರು ಮಾತನಾಡಿ, ‘ವಿದ್ಯಾರ್ಥಿಗಳು ತಾಯಿ ಗರ್ಭದಲ್ಲಿ ಹುಟ್ಟಿರುವುದು ಮಾತ್ರವಲ್ಲ, ಶಿಕ್ಷಕರ ಹೃದಯದಿಂದ ಹುಟ್ಟಿದ ಮಕ್ಕಳು’ ಎಂದು ಶಿಕ್ಷಕರ ಹಾಗೂ ಮಕ್ಕಳ ಬಾಂಧವ್ಯದ ಬಗ್ಗೆ ವಿವರಿಸಿದರು.</p>.<p>ಮುಖಂಡ ಎಂ.ಎಸ್. ಕೊರಿಶೆಟ್ಟರ್ ಮಾತನಾಡಿ, ‘ಧೈರ್ಯದಿಂದ ಪರೀಕ್ಷೆ ಬರೆದು ಉತ್ತಮ ಅಂಕ ಪಡೆದು ಶಾಲೆಯ ಮತ್ತು ಪಾಲಕರಿಗೆ ಕೀರ್ತಿ ತರಬೇಕು’ ಎಂದರು.</p>.<p>ಮುಖ್ಯಶಿಕ್ಷಕ ಶಂಕರ ಅಕ್ಕಸಾಲಿ, ತಸ್ಮಿಯಾ ಬಾಗಲಕೋಟಿ, ಪ್ರಿಯಾಂಕಾ ತುಂಗಳ, ಮಿಸಬಾ ನೆಗಳೂರ, ಹಿರೇಮಠ, ಮಂಗಳಾ ಗೌಡರ, ಇಂಚರ ಮಲ್ಲಪ್ಪನವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>