<p><strong>ಕಲಬುರಗಿ</strong>: ಕೃಷಿ ಪರಿಕರ ಮಾರಾಟ ಮಳಿಗೆಗಳ ಮೇಲೆ ಸೋಮವಾರ ದಾಳಿ ಮಾಡಿದ ಕೃಷಿ ಅಧಿಕಾರಿಗಳ ತಂಡ, ಸಂಶಯಾಸ್ಪದ ಕೀಟನಾಶಕಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರಿಕರಗಳ ಮಾರಾಟಕ್ಕೆ ತಡೆಯೊಡ್ಡಿತು.</p>.<p>ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ನೇತೃತ್ವದಲ್ಲಿ ಸಹಾಯಕ ಕೃಷಿ ನಿರ್ದೇಶಕ (ಜಾರಿದಳ–1) ಚಂದ್ರಕಾಂತ ಜೀವಣಗಿ ಸೇರಿ ಇತರೆ ಅಧಿಕಾರಿಗಳು ಗಂಜ್ ಪ್ರದೇಶದ ಕೃಷಿ ಮಳಿಗೆಗಳ ಮೇಲೆ ಮಾಡಿದರು.</p>.<p>ಕಾರ್ಯಾಚರಣೆಯಲ್ಲಿ ಸಂಶಯಾಸ್ಪದ 9 ಕೀಟನಾಶಕಗಳು ಪತ್ತೆ ಹಚ್ಚಿದರು. ಪರೀಕ್ಷೆಗಾಗಿ ಅವುಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದರು. ಅಸಮರ್ಪಕ ದಾಖಲಾತಿಗಳ ನಿರ್ವಹಣೆ ಮಾಡಿದ ವಿಜಯಲಕ್ಷ್ಮಿ ಆಗ್ರೊ ಏಜೆನ್ಸಿ, ಶಾಂತಾ ಆಗ್ರೊ ಕೇಂದ್ರ, ಪ್ರೀತಿ ಆಗ್ರೊ ಮತ್ತು ಅಮರನಾಥ ಕೃಷಿ ಕೇಂದ್ರ ಮಳಿಗೆಗಳಿಗೆ ಪರಿಕರ ಮಾರಾಟ ತಡೆ ಆದೇಶ ನೀಡಿದರು.</p>.<p>ರೈತರು ಕೃಷಿ ಪರಿಕರಗಳನ್ನು ಖರೀದಿಸಿದ ಬಳಿಕ ಕಡ್ಡಾಯವಾಗಿ ರಸೀದಿ ಪಡೆಯಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ಕೃಷಿ ಪರಿಕರ ಮಾರಾಟ ಮಳಿಗೆಗಳ ಮೇಲೆ ಸೋಮವಾರ ದಾಳಿ ಮಾಡಿದ ಕೃಷಿ ಅಧಿಕಾರಿಗಳ ತಂಡ, ಸಂಶಯಾಸ್ಪದ ಕೀಟನಾಶಕಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರಿಕರಗಳ ಮಾರಾಟಕ್ಕೆ ತಡೆಯೊಡ್ಡಿತು.</p>.<p>ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ನೇತೃತ್ವದಲ್ಲಿ ಸಹಾಯಕ ಕೃಷಿ ನಿರ್ದೇಶಕ (ಜಾರಿದಳ–1) ಚಂದ್ರಕಾಂತ ಜೀವಣಗಿ ಸೇರಿ ಇತರೆ ಅಧಿಕಾರಿಗಳು ಗಂಜ್ ಪ್ರದೇಶದ ಕೃಷಿ ಮಳಿಗೆಗಳ ಮೇಲೆ ಮಾಡಿದರು.</p>.<p>ಕಾರ್ಯಾಚರಣೆಯಲ್ಲಿ ಸಂಶಯಾಸ್ಪದ 9 ಕೀಟನಾಶಕಗಳು ಪತ್ತೆ ಹಚ್ಚಿದರು. ಪರೀಕ್ಷೆಗಾಗಿ ಅವುಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದರು. ಅಸಮರ್ಪಕ ದಾಖಲಾತಿಗಳ ನಿರ್ವಹಣೆ ಮಾಡಿದ ವಿಜಯಲಕ್ಷ್ಮಿ ಆಗ್ರೊ ಏಜೆನ್ಸಿ, ಶಾಂತಾ ಆಗ್ರೊ ಕೇಂದ್ರ, ಪ್ರೀತಿ ಆಗ್ರೊ ಮತ್ತು ಅಮರನಾಥ ಕೃಷಿ ಕೇಂದ್ರ ಮಳಿಗೆಗಳಿಗೆ ಪರಿಕರ ಮಾರಾಟ ತಡೆ ಆದೇಶ ನೀಡಿದರು.</p>.<p>ರೈತರು ಕೃಷಿ ಪರಿಕರಗಳನ್ನು ಖರೀದಿಸಿದ ಬಳಿಕ ಕಡ್ಡಾಯವಾಗಿ ರಸೀದಿ ಪಡೆಯಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>