<p><strong>ಸೇಡಂ</strong>: ಪಟ್ಟಣದ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಯ ವೈದ್ಯ ಗೌತಮ ಅವರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಬುಧವಾರ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಒಪಿಡಿ ಅವಧಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.</p>.<p>ಪಟ್ಟಣದ ಬಸವನಗರ ನಿವಾಸಿ ಶಿವ ಮತ್ತು ಪ್ರವೀಣ ಹಲ್ಲೆ ನಡೆಸಿದ್ದಾರೆ ಎಂದು ಸೇಡಂ ಪೊಲೀಸ್ ಠಾಣೆಗೆ ಡಾ.ಗೌತಮ್ ದೂರು ನೀಡಿದ್ದಾರೆ.</p>.<p>ವೈದ್ಯರ ಮೇಲಿನ ಹಲ್ಲೆ ಖಂಡನೀಯ. ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಬೇಕು ಎಂದು ಸಿಬ್ಬಂದಿಗಳು ಮೌನ ಪ್ರತಿಭಟನೆ ನಡೆಸಿದರು.</p>.<p>‘ನಾನು ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುತ್ತಿದ್ದಾಗ ಇಬ್ಬರು ಆಗಮಿಸಿದ್ದರು. ನಮ್ಮ ಸಿಬ್ಬಂದಿ ಸ್ವಲ್ಪ ಸಮಯ ಕಾಯಿರಿ ವೈದ್ಯರು ಬರಲಿದ್ದಾರೆ ಎಂದು ಹೇಳಿದ್ದಾರೆ. ಆದರೆ ಏಕಾಏಕಿ ನನ್ನ ಮೇಲೆ ಶಿವ ಮತ್ತು ಪ್ರವೀಣ ಇಬ್ಬರು ಹಲ್ಲೆ ನಡೆಸುತ್ತಿದ್ದಾಗ ನಮ್ಮ ಸಿಬ್ಬಂದಿ ನನ್ನ ರಕ್ಷಣೆಗೆ ಧಾವಿಸಿದರು’ ಎಂದು ಡಾ.ಗೌತಮ ದೂರಿನಲ್ಲಿ ತಿಳಿಸಿದ್ದಾರೆ.</p>.<p>ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನಾಗರಾಜ ಮನ್ನೆ, ಡಾ.ಗೀತಾ ಶ್ರೀನಿವಾಸರೆಡ್ಡಿ ಪಾಟೀಲ, ಡಾ.ನಾಗನಾಥ, ಡಾ.ಸದಾಶಿವ, ಡಾ.ಗಾಯತ್ರಿ, ಡಾ.ಶಶಿಕಾಂತರೆಡ್ಡಿ, ನಜ್ಮಾ, ಸೋನುಬಾಯಿ, ಶಿಲ್ಪಾ, ವಿಜಯಲಕ್ಷ್ಮೀ, ಆಕಾಶ, ಕಂಟೆಪ್ಪ, ಶ್ರೀನಿವಾಸರೆಡ್ಡಿ, ಮಂಜುನಾಥ ರಾಠೋಡ, ಪ್ರಭುಲಿಂಗ, ಭೀಮರಾವ ಕೊಳ್ಳಿ, ರೇವಣಸಿದ್ದಪ್ಪ, ಸಂತೋಷ, ಬಸವರಾಜ, ಮಲ್ಲಿಕಾರ್ಜುನ, ಚಂದ್ರಶೇಖರ, ಮಂಜುನಾಥ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೇಡಂ</strong>: ಪಟ್ಟಣದ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಯ ವೈದ್ಯ ಗೌತಮ ಅವರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಬುಧವಾರ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಒಪಿಡಿ ಅವಧಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.</p>.<p>ಪಟ್ಟಣದ ಬಸವನಗರ ನಿವಾಸಿ ಶಿವ ಮತ್ತು ಪ್ರವೀಣ ಹಲ್ಲೆ ನಡೆಸಿದ್ದಾರೆ ಎಂದು ಸೇಡಂ ಪೊಲೀಸ್ ಠಾಣೆಗೆ ಡಾ.ಗೌತಮ್ ದೂರು ನೀಡಿದ್ದಾರೆ.</p>.<p>ವೈದ್ಯರ ಮೇಲಿನ ಹಲ್ಲೆ ಖಂಡನೀಯ. ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಬೇಕು ಎಂದು ಸಿಬ್ಬಂದಿಗಳು ಮೌನ ಪ್ರತಿಭಟನೆ ನಡೆಸಿದರು.</p>.<p>‘ನಾನು ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುತ್ತಿದ್ದಾಗ ಇಬ್ಬರು ಆಗಮಿಸಿದ್ದರು. ನಮ್ಮ ಸಿಬ್ಬಂದಿ ಸ್ವಲ್ಪ ಸಮಯ ಕಾಯಿರಿ ವೈದ್ಯರು ಬರಲಿದ್ದಾರೆ ಎಂದು ಹೇಳಿದ್ದಾರೆ. ಆದರೆ ಏಕಾಏಕಿ ನನ್ನ ಮೇಲೆ ಶಿವ ಮತ್ತು ಪ್ರವೀಣ ಇಬ್ಬರು ಹಲ್ಲೆ ನಡೆಸುತ್ತಿದ್ದಾಗ ನಮ್ಮ ಸಿಬ್ಬಂದಿ ನನ್ನ ರಕ್ಷಣೆಗೆ ಧಾವಿಸಿದರು’ ಎಂದು ಡಾ.ಗೌತಮ ದೂರಿನಲ್ಲಿ ತಿಳಿಸಿದ್ದಾರೆ.</p>.<p>ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನಾಗರಾಜ ಮನ್ನೆ, ಡಾ.ಗೀತಾ ಶ್ರೀನಿವಾಸರೆಡ್ಡಿ ಪಾಟೀಲ, ಡಾ.ನಾಗನಾಥ, ಡಾ.ಸದಾಶಿವ, ಡಾ.ಗಾಯತ್ರಿ, ಡಾ.ಶಶಿಕಾಂತರೆಡ್ಡಿ, ನಜ್ಮಾ, ಸೋನುಬಾಯಿ, ಶಿಲ್ಪಾ, ವಿಜಯಲಕ್ಷ್ಮೀ, ಆಕಾಶ, ಕಂಟೆಪ್ಪ, ಶ್ರೀನಿವಾಸರೆಡ್ಡಿ, ಮಂಜುನಾಥ ರಾಠೋಡ, ಪ್ರಭುಲಿಂಗ, ಭೀಮರಾವ ಕೊಳ್ಳಿ, ರೇವಣಸಿದ್ದಪ್ಪ, ಸಂತೋಷ, ಬಸವರಾಜ, ಮಲ್ಲಿಕಾರ್ಜುನ, ಚಂದ್ರಶೇಖರ, ಮಂಜುನಾಥ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>