<p><strong>ಕಲಬುರಗಿ</strong>: ಇತ್ತೀಚೆಗಷ್ಟೇ ದುರಸ್ತಿಯಾಗಿದ್ದ ಆಳಂದದಿಂದ ಭೂಸನೂರು ಮಾರ್ಗವಾಗಿ ಅಫಜಲಪುರಕ್ಕೆ ಕಲ್ಪಿಸುವ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.</p>.<p>ಆಳಂದ ಪಟ್ಟಣದಿಂದ ಭೂಸನೂರಿಗೆ ತೆರಳಲು ಸ್ವಾಗತ ಕಮಾನಿನಿಂದ ಮುಂದೆ ಹೋಗುತ್ತಿದ್ದಂತೆಯೇ ಇಡೀ ರಸ್ತೆಯೇ ತಗ್ಗುಬಿದ್ದಿದೆ. ಆ ತಗ್ಗುಗಳನ್ನು ತಪ್ಪಿಸುವುದೂ ಅಸಾಧ್ಯವಾಗಿದ್ದು, ಇತ್ತೀಚೆಗೆ ಮಳೆಯಾಗಿದ್ದರಿಂದ ರಸ್ತೆಯ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ.</p>.<p>ಆಳಂದದಿಂದ ಭೂಸನೂರು ಸಂಪರ್ಕಿಸುವ ರಸ್ತೆಯುದ್ದಕ್ಕೂ ದೊಡ್ಡ ತಗ್ಗುಗಳು ಬಿದ್ದಿದ್ದು, ಭಾರಿ ಗಾತ್ರದ ವಾಹನಗಳು, ಸಾರಿಗೆ ಬಸ್ಗಳು, ಕಾರುಗಳು ಹಾಗೂ ಬೈಕ್ ಸವಾರರಿಗೆ ಇಲ್ಲಿ ಸಂಚರಿಸುವುದೇ ದೊಡ್ಡ ಸವಾಲಾಗಿದೆ.</p>.<p>ಭೂಸನೂರು, ಕೊರಳ್ಳಿ, ಬಟ್ಟರಗಾ, ನಿಂಬರ್ಗಾ, ಗಾಣಗಾಪುರಕ್ಕೆ ಹೋಗುವ ರಸ್ತೆಯುದ್ದಕ್ಕೂ ಇದೇ ಪರಿಸ್ಥಿತಿ ಇದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.</p>.<p>ಭೂಸನೂರಿನ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆಗೆ ಇದೇ ಮಾರ್ಗವಾಗಿ ಕಬ್ಬು ತುಂಬಿಕೊಂಡು ಟ್ರಕ್, ಟ್ರ್ಯಾಕ್ಟರ್ಗಳು ಹಾದು ಹೋಗಿದ್ದರಿಂದಲೂ ರಸ್ತೆ ಹಾಳಾಗಿದೆ ಎಂಬ ಆರೋಪಗಳಿವೆ. ಆದಾಗ್ಯೂ, ಒಂದೂವರೆ ವರ್ಷದ ಹಿಂದೆ ನಿರ್ಮಾಣವಾದ ಈ ರಸ್ತೆ ಇಷ್ಟು ಬೇಗ ಹಾಳಾಗಿದ್ದನ್ನು ನೋಡಿದರೆ ಕಳಪೆ ಕಾಮಗಾರಿ ನಡೆಸಿರುವ ಸಂಶಯ ಬರುತ್ತದೆ ಎಂದು ಆರೋಪಿಸುತ್ತಾರೆ ಆಳಂದ ನಿವಾಸಿ ನಾಗರಾಜ ಬಸಗುಂಡೆ.</p>.<p>ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಪ್ರವಾಸಿಗರು ಅಮರ್ಜಾ ಜಲಾಶಯವನ್ನು ನೋಡಲು ಬರಲು ಇದೇ ರಸ್ತೆ ಬಳಸಬೇಕು. ಭೂಸನೂರಿನಿಂದ ಅಮರ್ಜಾಗೆ ಹೋಗುವ ರಸ್ತೆಯೂ ತೀವ್ರವಾಗಿ ಹದಗೆಟ್ಟು ಹೋಗಿದ್ದು, ಯಾಕಾದರೂ ಇಲ್ಲಿಗೆ ಬಂದೆವು ಎಂದು ಹಿಡಿಶಾಪ ಹಾಕುವಂತಾಗಿದೆ.</p>.<p>‘ಕಳಪೆ ರಸ್ತೆ ಕಾಮಗಾರಿಯು ಬಿಜೆಪಿ ಸರ್ಕಾರದಲ್ಲಿ ಶಾಸಕರಾಗಿದ್ದ ಸುಭಾಷ್ ಗುತ್ತೇದಾರ ಅವರ ಪುತ್ರ ಸಂತೋಷ ಅವರೇ ಈ ರಸ್ತೆ ಕಾಮಗಾರಿಯ ಟೆಂಡರ್ ಪಡೆದಿದ್ದರು. ಕಳಪೆ ಕಾಮಗಾರಿ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ ವಿರೋಧ ಪಕ್ಷದಲ್ಲಿದ್ದ ಹಾಲಿ ಶಾಸಕ, ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್. ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.</p>.<p>ಪ್ರತಿಭಟನೆಗೆ ಬೆದರಿದ್ದ ಗುತ್ತಿಗೆದಾರರು ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಿದ್ದರು. ಆದರೆ, ಮತ್ತೆ ಹಾಳಾಗಿದ್ದು, ತಕ್ಷಣವೇ ದುರಸ್ತಿ ಮಾಡಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.</p>.<p><strong>‘ಕಳಪೆ ಕಾಮಗಾರಿಯಿಂದ ರಸ್ತೆ ಹಾಳು’ </strong></p><p>ಭೂಸನೂರು ರಸ್ತೆ ಹದಗೆಟ್ಟಿದ್ದಕ್ಕೆ ಹಿಂದಿನ ಸರ್ಕಾರವೇ ಕಾರಣ. ಈ ರಸ್ತೆ ನಿರ್ಮಾಣದ ಹೊಣೆಯನ್ನು ಹಿಂದಿನ ಶಾಸಕ ಸುಭಾಷ್ ಗುತ್ತೇದಾರ ಅವರ ಪುತ್ರನಿಗೆ ಕೊಟ್ಟಿದ್ದರು. ಆಗಲೇ ಕಳಪೆ ಕಾಮಗಾರಿಯಾಗಿದ್ದನ್ನು ಖಂಡಿಸಿದ್ದೆವು. ಬರೀ ಭೂಸನೂರು ರಸ್ತೆ ಅಷ್ಟೇ ಅಲ್ಲ. ಹಿಂದಿನ ಸರ್ಕಾರದ ಸಂದರ್ಭದಲ್ಲಿ ತೀವ್ರ ಭ್ರಷ್ಟಾಚಾರ ನಡೆಸಿದ್ದರಿಂದ ಆಳಂದ ತಾಲ್ಲೂಕಿನ ರಸ್ತೆಗಳೆಲ್ಲ ಹದಗೆಟ್ಟಿವೆ ಎಂದು ಶಾಸಕ ಮುಖ್ಯಮಂತ್ರಿ ಸಲಹೆಗಾರ ಬಿ.ಆರ್. ಪಾಟೀಲ ಆರೋಪಿಸಿದರು. </p><p>ರಸ್ತೆ ಅವ್ಯವಸ್ಥೆ ಕುರಿತು ತಮ್ಮನ್ನು ಸಂಪರ್ಕಿಸಿದ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ‘ತಾಲ್ಲೂಕಿನಲ್ಲಿ ಹದಗೆಟ್ಟ ರಸ್ತೆಗಳನ್ನು ಆದ್ಯತೆಯ ಮೇರೆಗೆ ದುರಸ್ತಿ ಮಾಡುವಂತೆ ಕೆಆರ್ಡಿಸಿಎಲ್ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ರಸ್ತೆ ಅಭಿವೃದ್ಧಿಗೆ ಸರ್ಕಾರದ ಬಳಿ ಹಣ ಇಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ಇತ್ತೀಚೆಗಷ್ಟೇ ದುರಸ್ತಿಯಾಗಿದ್ದ ಆಳಂದದಿಂದ ಭೂಸನೂರು ಮಾರ್ಗವಾಗಿ ಅಫಜಲಪುರಕ್ಕೆ ಕಲ್ಪಿಸುವ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.</p>.<p>ಆಳಂದ ಪಟ್ಟಣದಿಂದ ಭೂಸನೂರಿಗೆ ತೆರಳಲು ಸ್ವಾಗತ ಕಮಾನಿನಿಂದ ಮುಂದೆ ಹೋಗುತ್ತಿದ್ದಂತೆಯೇ ಇಡೀ ರಸ್ತೆಯೇ ತಗ್ಗುಬಿದ್ದಿದೆ. ಆ ತಗ್ಗುಗಳನ್ನು ತಪ್ಪಿಸುವುದೂ ಅಸಾಧ್ಯವಾಗಿದ್ದು, ಇತ್ತೀಚೆಗೆ ಮಳೆಯಾಗಿದ್ದರಿಂದ ರಸ್ತೆಯ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ.</p>.<p>ಆಳಂದದಿಂದ ಭೂಸನೂರು ಸಂಪರ್ಕಿಸುವ ರಸ್ತೆಯುದ್ದಕ್ಕೂ ದೊಡ್ಡ ತಗ್ಗುಗಳು ಬಿದ್ದಿದ್ದು, ಭಾರಿ ಗಾತ್ರದ ವಾಹನಗಳು, ಸಾರಿಗೆ ಬಸ್ಗಳು, ಕಾರುಗಳು ಹಾಗೂ ಬೈಕ್ ಸವಾರರಿಗೆ ಇಲ್ಲಿ ಸಂಚರಿಸುವುದೇ ದೊಡ್ಡ ಸವಾಲಾಗಿದೆ.</p>.<p>ಭೂಸನೂರು, ಕೊರಳ್ಳಿ, ಬಟ್ಟರಗಾ, ನಿಂಬರ್ಗಾ, ಗಾಣಗಾಪುರಕ್ಕೆ ಹೋಗುವ ರಸ್ತೆಯುದ್ದಕ್ಕೂ ಇದೇ ಪರಿಸ್ಥಿತಿ ಇದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.</p>.<p>ಭೂಸನೂರಿನ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆಗೆ ಇದೇ ಮಾರ್ಗವಾಗಿ ಕಬ್ಬು ತುಂಬಿಕೊಂಡು ಟ್ರಕ್, ಟ್ರ್ಯಾಕ್ಟರ್ಗಳು ಹಾದು ಹೋಗಿದ್ದರಿಂದಲೂ ರಸ್ತೆ ಹಾಳಾಗಿದೆ ಎಂಬ ಆರೋಪಗಳಿವೆ. ಆದಾಗ್ಯೂ, ಒಂದೂವರೆ ವರ್ಷದ ಹಿಂದೆ ನಿರ್ಮಾಣವಾದ ಈ ರಸ್ತೆ ಇಷ್ಟು ಬೇಗ ಹಾಳಾಗಿದ್ದನ್ನು ನೋಡಿದರೆ ಕಳಪೆ ಕಾಮಗಾರಿ ನಡೆಸಿರುವ ಸಂಶಯ ಬರುತ್ತದೆ ಎಂದು ಆರೋಪಿಸುತ್ತಾರೆ ಆಳಂದ ನಿವಾಸಿ ನಾಗರಾಜ ಬಸಗುಂಡೆ.</p>.<p>ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಪ್ರವಾಸಿಗರು ಅಮರ್ಜಾ ಜಲಾಶಯವನ್ನು ನೋಡಲು ಬರಲು ಇದೇ ರಸ್ತೆ ಬಳಸಬೇಕು. ಭೂಸನೂರಿನಿಂದ ಅಮರ್ಜಾಗೆ ಹೋಗುವ ರಸ್ತೆಯೂ ತೀವ್ರವಾಗಿ ಹದಗೆಟ್ಟು ಹೋಗಿದ್ದು, ಯಾಕಾದರೂ ಇಲ್ಲಿಗೆ ಬಂದೆವು ಎಂದು ಹಿಡಿಶಾಪ ಹಾಕುವಂತಾಗಿದೆ.</p>.<p>‘ಕಳಪೆ ರಸ್ತೆ ಕಾಮಗಾರಿಯು ಬಿಜೆಪಿ ಸರ್ಕಾರದಲ್ಲಿ ಶಾಸಕರಾಗಿದ್ದ ಸುಭಾಷ್ ಗುತ್ತೇದಾರ ಅವರ ಪುತ್ರ ಸಂತೋಷ ಅವರೇ ಈ ರಸ್ತೆ ಕಾಮಗಾರಿಯ ಟೆಂಡರ್ ಪಡೆದಿದ್ದರು. ಕಳಪೆ ಕಾಮಗಾರಿ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ ವಿರೋಧ ಪಕ್ಷದಲ್ಲಿದ್ದ ಹಾಲಿ ಶಾಸಕ, ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್. ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.</p>.<p>ಪ್ರತಿಭಟನೆಗೆ ಬೆದರಿದ್ದ ಗುತ್ತಿಗೆದಾರರು ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಿದ್ದರು. ಆದರೆ, ಮತ್ತೆ ಹಾಳಾಗಿದ್ದು, ತಕ್ಷಣವೇ ದುರಸ್ತಿ ಮಾಡಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.</p>.<p><strong>‘ಕಳಪೆ ಕಾಮಗಾರಿಯಿಂದ ರಸ್ತೆ ಹಾಳು’ </strong></p><p>ಭೂಸನೂರು ರಸ್ತೆ ಹದಗೆಟ್ಟಿದ್ದಕ್ಕೆ ಹಿಂದಿನ ಸರ್ಕಾರವೇ ಕಾರಣ. ಈ ರಸ್ತೆ ನಿರ್ಮಾಣದ ಹೊಣೆಯನ್ನು ಹಿಂದಿನ ಶಾಸಕ ಸುಭಾಷ್ ಗುತ್ತೇದಾರ ಅವರ ಪುತ್ರನಿಗೆ ಕೊಟ್ಟಿದ್ದರು. ಆಗಲೇ ಕಳಪೆ ಕಾಮಗಾರಿಯಾಗಿದ್ದನ್ನು ಖಂಡಿಸಿದ್ದೆವು. ಬರೀ ಭೂಸನೂರು ರಸ್ತೆ ಅಷ್ಟೇ ಅಲ್ಲ. ಹಿಂದಿನ ಸರ್ಕಾರದ ಸಂದರ್ಭದಲ್ಲಿ ತೀವ್ರ ಭ್ರಷ್ಟಾಚಾರ ನಡೆಸಿದ್ದರಿಂದ ಆಳಂದ ತಾಲ್ಲೂಕಿನ ರಸ್ತೆಗಳೆಲ್ಲ ಹದಗೆಟ್ಟಿವೆ ಎಂದು ಶಾಸಕ ಮುಖ್ಯಮಂತ್ರಿ ಸಲಹೆಗಾರ ಬಿ.ಆರ್. ಪಾಟೀಲ ಆರೋಪಿಸಿದರು. </p><p>ರಸ್ತೆ ಅವ್ಯವಸ್ಥೆ ಕುರಿತು ತಮ್ಮನ್ನು ಸಂಪರ್ಕಿಸಿದ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ‘ತಾಲ್ಲೂಕಿನಲ್ಲಿ ಹದಗೆಟ್ಟ ರಸ್ತೆಗಳನ್ನು ಆದ್ಯತೆಯ ಮೇರೆಗೆ ದುರಸ್ತಿ ಮಾಡುವಂತೆ ಕೆಆರ್ಡಿಸಿಎಲ್ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ರಸ್ತೆ ಅಭಿವೃದ್ಧಿಗೆ ಸರ್ಕಾರದ ಬಳಿ ಹಣ ಇಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>