ಘಟನೆಗೆ ಬಿಸಿಯೂಟ ಸೇವನೆ ಅಥವಾ ನೀರು ಸೇವನೆ ಕಾರಣ ಎಂಬುದು ತಿಳಿದು ಬಂದಿಲ್ಲ. ವಿದ್ಯಾರ್ಥಿಗಳ ಅರೋಗ್ಯದಲ್ಲಿನ ಏರುಪೇರಿನಿಂದ ಗ್ರಾಮದಲ್ಲಿ ಈಗ ಆತಂಕದ ವಾತಾವರಣ ಉಂಟಾಗಿದೆ. ಆಸ್ಪತ್ರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜಗದೇವಿ ಅತ್ತೂರು, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ ತಿಗಡಿ ಹಾಗೂ ಪಿಎಸ್ಐ ತಿರುಮಲೇಶ ಕುಂಬಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.