‘ಪ್ರಿಯಾಂಕ್ ಜವಾಬ್ದಾರಿ ಅರಿತು ಮಾತಾಡಲಿ’
‘ಜವಾಬ್ದಾರಿ ಸ್ಥಾನದಲ್ಲಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮಹಾರಾಷ್ಟ್ರದಿಂದ ಭೀಮಾ ನದಿಗೆ ಅನ್ಯಾಯವಾದ ಬಗ್ಗೆ ಮಾತಾಡಿ ಎಂದರೆ ಸಂಸದ ಡಾ.ಉಮೇಶ ಜಾಧವ ಅವರು ಹೋರಾಟಗಾರರ ಬಿ.ಪಿ ಚೆಕ್ ಮಾಡಿದ ಬಗ್ಗೆ ಹೇಳಿಕೆ ನೀಡುತ್ತಾರೆ. ಇದು ನಮ್ಮ ದುರದೃಷ್ಟ. ಮಾತೆತ್ತಿದರೆ ದೇಶ ಪ್ರಜಾಪ್ರಭುತ್ವ ಎನ್ನುವ ಅವರಿಗೆ ಜಿಲ್ಲೆಯ ಪ್ರಜೆಗಳು ನೀರಿಗಾಗಿ ಪರದಾಡುತ್ತಿರುವುದು ಕಾಣಿಸುತ್ತಿಲ್ಲವೇ? ಕೊನೆ ಪಕ್ಷ ನೀರು ಪಡೆಯುವ ವಿಚಾರದಲ್ಲಿ ಮಹಾರಾಷ್ಟ್ರದ್ದೇ ಸರಿ ಎಂದಾದರೂ ಹೇಳಲಿ’ ಎಂದು ಶಿವಕುಮಾರ ನಾಟೀಕಾರ ಟೀಕಿಸಿದರು.