<p><strong>ಕಲಬುರಗಿ:</strong> ನಗರದ ಕನ್ನಡ ಭವನದಲ್ಲಿ ಸೇರಿದ್ದ ಶ್ರೋತೃಗಳನ್ನು ಅಂತರರಾಷ್ಟ್ರೀಯ ಕಲಾವಿದ ಪಂ.ಕೈವಲ್ಯಕುಮಾರ ಗುರವ ಗಾಯನ ಮೋಡಿ ಮಾಡಿತು. ಹಸಿದವರಿಗೆ ಹಿಂದೂಸ್ತಾನಿ ಶಾಸ್ತ್ರೀಯ ಗಾಯನದ ಔತಣ ಉಣಬಡಿಸಿದರು.</p>.<p>ನಗರದ ಹೈದರಾಬಾದ್ ಕರ್ನಾಟಕ ಸಂಗೀತ ಸೇವಾ ಸಮಿತಿ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮದಲ್ಲಿ ತುಸು ತಡವಾಗಿ ವೇದಿಕೆ ಏರಿದ ಕೈವಲ್ಯಕುಮಾರ, 45 ನಿಮಿಷಗಳ ಕಾಲ ಸಂಗೀತ ಸುಧೆ ಹರಿಸಿದರು.</p>.<p>ರಾಗ ದುರ್ಗಾದಿಂದ ಗಾಯನ ಆರಂಭಿಸಿದರು. ರಾಗ ದುರ್ಗಾದಲ್ಲಿ ವಿಲಂಬಿತ್ ರೂಪಕ್, ಧೃತ್ನಲ್ಲಿ ಏಕ ತಾಲ್, ತೀನ್ ತಾಲ್ನಲ್ಲಿ ಚೀಜ್ಗಳನ್ನು ಪ್ರಸ್ತುತಪಡಿಸಿ, ಚಪ್ಪಾಳೆ ಗಿಟ್ಟಿಸಿದರು. ಸೊಗಸಾದ ಆಲಾಪಗಳ ಮೂಲಕ ಶ್ರೋತೃಗಳ ಮನ ಗೆದ್ದರು. ಬಳಿಕ ‘ಎಂದು ಕಾಣುವೆ ಗುರುವೆ ನಿನ್ನ ಚಂದಿರ ಮುಖ ಸಿರಿ’ ದಾಸವಾಣಿ ಪ್ರಸ್ತುತಪಡಿಸಿದರು.</p>.<p>ಬಳಿಕ ‘ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ’ ವಚನ ಹಾಡಿದರು. ಶ್ರೋತೃಗಳ ಬೇಡಿಕೆ ಮೇರೆಗೆ ‘ವಿಠ್ಠಲ–ವಿಠ್ಠಲ’ ಮರಾಠಿ ಅಭಂಗ ಹಾಡಿ, ಸಭಿಕರನ್ನು ತಲೆದೂಗುವಂತೆ ಮಾಡಿದರು. ಅಂತಿಮವಾಗಿ ರಾಗ ಭೈರವಿಯಲ್ಲಿ ಬಸವಣ್ಣವರ ವಚನ ಹಾಡಿ ಕಛೇರಿ ಸಂಪನ್ನಗೊಳಿಸಿದರು.</p>.<p>ಅವರಿಗೆ ತಬಲಾದಲ್ಲಿ ಪಂ.ಸಾತಲಿಂಗಪ್ಪ ದೇಸಾಯಿ ಕಲ್ಲೂರ, ಹಾರ್ಮೋನಿಯಂನಲ್ಲಿ ಬದರಿನಾಥ ಮುಡಬಿ, ತಾನಪುರನಲ್ಲಿ ರೇಣುಕಾ ಹಾಗೂ ಮಡಿವಾಳಮ್ಮ ಸಾಥ್ ನೀಡಿದರು.</p>.<p>ಇದಕ್ಕೂ ಮೊದಲು ಬೆಂಗಳೂರಿನ ಆಕಾಶವಾಣಿ ಕಲಾವಿದ ಪ್ರಕಾಶ ಹೆಗಡೆ ಬಾನ್ಸುರಿ ವಾದನ ನೆರೆದಿದ್ದವರನ್ನು ಹಿಡಿದಿಟ್ಟಿತು. ಅವರಿಗೆ ತಬಲಾದಲ್ಲಿ ರಘುನಂದನ ಗೋಪಾಲ ಹಾಗೂ ತಾನಪುರ್ನಲ್ಲಿ ರೇಣುಕಾ ಸಾಥ್ ಕೊಟ್ಟರು. ಬಳಿಕ ಆಕಾಶವಾಣಿ ಕಲಾವಿದರಾದ ಜಯರಾವ ಕುಲಕರ್ಣಿ ಹಾಗೂ ಸಾಗರ ಕುಲಕರ್ಣಿ ತಬಲಾ ವಾದನ ಮೋಡಿ ಮಾಡಿತು.</p>.<p>ಕಲಬುರಗಿ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ವೈ.ಪಾಟೀಲ ತಬಲಾ ಬಾರಿಸಿ ಸಂಗೀತ ಕಾರ್ಯಕ್ರಮ ಉದ್ಘಾಟಿಸಿದರು. ಹೂಗಾರ ಸಮಾಜದ ರಾಜ್ಯಘಟಕದ ಮಾಜಿ ಅಧ್ಯಕ್ಷ ಸೂರ್ಯಕಾಂತ ಫುಲಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>ಕಲಬುರಗಿ ಆಕಾಶವಾಣಿ ಕಲಾವಿದ ಜಯರಾವ್ ಕುಲಕರ್ಣಿ ಅವರಿಗೆ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.</p>.<p>ಹೂಗಾರ ಸಮಾಜದ ಮುಖಂಡ ಶಿವಶರಣಪ್ಪ ಹೂಗಾರ ನದಿಸಿನ್ನೂರ, ಸಿ.ಎ.ಚಂದ್ರಕಾಂತ ಕುಲಕರ್ಣಿ, ಜಂಗಮ ಸಮಾಜದ ಅಧ್ಯಕ್ಷ ಸಿದ್ಧಯ್ಯಸ್ವಾಮಿ ಆಕಾಶಮಠ, ಎಪಿಎಂಸಿ ಮಾಜಿ ಸದಸ್ಯ ಕಲ್ಯಾಣರಾವ್ ಬಿರಾದಾರ, ಉದ್ದಿಮೆದಾರರಾದ ಮಡಿವಾಳಪ್ಪ ನರಿಬೋಳ, ಕಲ್ಯಾಣಪ್ಪ ನರುಣಿ, ಶರಣಬಸಪ್ಪ ಹೂಗಾರ, ಶೈಲಜಾ ಹೂಗಾರ ಪಾಲ್ಗೊಂಡಿದ್ದರು. ವೀರೇಶ ಶಾಸ್ತ್ರೀ ಶಮಲಕೂಡ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ನಗರದ ಕನ್ನಡ ಭವನದಲ್ಲಿ ಸೇರಿದ್ದ ಶ್ರೋತೃಗಳನ್ನು ಅಂತರರಾಷ್ಟ್ರೀಯ ಕಲಾವಿದ ಪಂ.ಕೈವಲ್ಯಕುಮಾರ ಗುರವ ಗಾಯನ ಮೋಡಿ ಮಾಡಿತು. ಹಸಿದವರಿಗೆ ಹಿಂದೂಸ್ತಾನಿ ಶಾಸ್ತ್ರೀಯ ಗಾಯನದ ಔತಣ ಉಣಬಡಿಸಿದರು.</p>.<p>ನಗರದ ಹೈದರಾಬಾದ್ ಕರ್ನಾಟಕ ಸಂಗೀತ ಸೇವಾ ಸಮಿತಿ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮದಲ್ಲಿ ತುಸು ತಡವಾಗಿ ವೇದಿಕೆ ಏರಿದ ಕೈವಲ್ಯಕುಮಾರ, 45 ನಿಮಿಷಗಳ ಕಾಲ ಸಂಗೀತ ಸುಧೆ ಹರಿಸಿದರು.</p>.<p>ರಾಗ ದುರ್ಗಾದಿಂದ ಗಾಯನ ಆರಂಭಿಸಿದರು. ರಾಗ ದುರ್ಗಾದಲ್ಲಿ ವಿಲಂಬಿತ್ ರೂಪಕ್, ಧೃತ್ನಲ್ಲಿ ಏಕ ತಾಲ್, ತೀನ್ ತಾಲ್ನಲ್ಲಿ ಚೀಜ್ಗಳನ್ನು ಪ್ರಸ್ತುತಪಡಿಸಿ, ಚಪ್ಪಾಳೆ ಗಿಟ್ಟಿಸಿದರು. ಸೊಗಸಾದ ಆಲಾಪಗಳ ಮೂಲಕ ಶ್ರೋತೃಗಳ ಮನ ಗೆದ್ದರು. ಬಳಿಕ ‘ಎಂದು ಕಾಣುವೆ ಗುರುವೆ ನಿನ್ನ ಚಂದಿರ ಮುಖ ಸಿರಿ’ ದಾಸವಾಣಿ ಪ್ರಸ್ತುತಪಡಿಸಿದರು.</p>.<p>ಬಳಿಕ ‘ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ’ ವಚನ ಹಾಡಿದರು. ಶ್ರೋತೃಗಳ ಬೇಡಿಕೆ ಮೇರೆಗೆ ‘ವಿಠ್ಠಲ–ವಿಠ್ಠಲ’ ಮರಾಠಿ ಅಭಂಗ ಹಾಡಿ, ಸಭಿಕರನ್ನು ತಲೆದೂಗುವಂತೆ ಮಾಡಿದರು. ಅಂತಿಮವಾಗಿ ರಾಗ ಭೈರವಿಯಲ್ಲಿ ಬಸವಣ್ಣವರ ವಚನ ಹಾಡಿ ಕಛೇರಿ ಸಂಪನ್ನಗೊಳಿಸಿದರು.</p>.<p>ಅವರಿಗೆ ತಬಲಾದಲ್ಲಿ ಪಂ.ಸಾತಲಿಂಗಪ್ಪ ದೇಸಾಯಿ ಕಲ್ಲೂರ, ಹಾರ್ಮೋನಿಯಂನಲ್ಲಿ ಬದರಿನಾಥ ಮುಡಬಿ, ತಾನಪುರನಲ್ಲಿ ರೇಣುಕಾ ಹಾಗೂ ಮಡಿವಾಳಮ್ಮ ಸಾಥ್ ನೀಡಿದರು.</p>.<p>ಇದಕ್ಕೂ ಮೊದಲು ಬೆಂಗಳೂರಿನ ಆಕಾಶವಾಣಿ ಕಲಾವಿದ ಪ್ರಕಾಶ ಹೆಗಡೆ ಬಾನ್ಸುರಿ ವಾದನ ನೆರೆದಿದ್ದವರನ್ನು ಹಿಡಿದಿಟ್ಟಿತು. ಅವರಿಗೆ ತಬಲಾದಲ್ಲಿ ರಘುನಂದನ ಗೋಪಾಲ ಹಾಗೂ ತಾನಪುರ್ನಲ್ಲಿ ರೇಣುಕಾ ಸಾಥ್ ಕೊಟ್ಟರು. ಬಳಿಕ ಆಕಾಶವಾಣಿ ಕಲಾವಿದರಾದ ಜಯರಾವ ಕುಲಕರ್ಣಿ ಹಾಗೂ ಸಾಗರ ಕುಲಕರ್ಣಿ ತಬಲಾ ವಾದನ ಮೋಡಿ ಮಾಡಿತು.</p>.<p>ಕಲಬುರಗಿ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ವೈ.ಪಾಟೀಲ ತಬಲಾ ಬಾರಿಸಿ ಸಂಗೀತ ಕಾರ್ಯಕ್ರಮ ಉದ್ಘಾಟಿಸಿದರು. ಹೂಗಾರ ಸಮಾಜದ ರಾಜ್ಯಘಟಕದ ಮಾಜಿ ಅಧ್ಯಕ್ಷ ಸೂರ್ಯಕಾಂತ ಫುಲಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>ಕಲಬುರಗಿ ಆಕಾಶವಾಣಿ ಕಲಾವಿದ ಜಯರಾವ್ ಕುಲಕರ್ಣಿ ಅವರಿಗೆ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.</p>.<p>ಹೂಗಾರ ಸಮಾಜದ ಮುಖಂಡ ಶಿವಶರಣಪ್ಪ ಹೂಗಾರ ನದಿಸಿನ್ನೂರ, ಸಿ.ಎ.ಚಂದ್ರಕಾಂತ ಕುಲಕರ್ಣಿ, ಜಂಗಮ ಸಮಾಜದ ಅಧ್ಯಕ್ಷ ಸಿದ್ಧಯ್ಯಸ್ವಾಮಿ ಆಕಾಶಮಠ, ಎಪಿಎಂಸಿ ಮಾಜಿ ಸದಸ್ಯ ಕಲ್ಯಾಣರಾವ್ ಬಿರಾದಾರ, ಉದ್ದಿಮೆದಾರರಾದ ಮಡಿವಾಳಪ್ಪ ನರಿಬೋಳ, ಕಲ್ಯಾಣಪ್ಪ ನರುಣಿ, ಶರಣಬಸಪ್ಪ ಹೂಗಾರ, ಶೈಲಜಾ ಹೂಗಾರ ಪಾಲ್ಗೊಂಡಿದ್ದರು. ವೀರೇಶ ಶಾಸ್ತ್ರೀ ಶಮಲಕೂಡ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>