ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ವರುಷ; ಕಲಬುರಗಿಯಲ್ಲಿ ಇಂದಿರಾ ಕ್ಯಾಂಟೀನ್ ಮರು ಪ್ರಾರಂಭಿಸಲು ಮೀನಮೇಷ
ಬಷೀರಅಹ್ಮದ್ ನಗಾರಿ
Published : 10 ಜೂನ್ 2024, 6:41 IST
Last Updated : 10 ಜೂನ್ 2024, 6:41 IST
ಫಾಲೋ ಮಾಡಿ
Comments
ಚಿಂಚೋಳಿಯ ಬಸ್ ನಿಲ್ದಾಣದ ಎದುರಿನ ಇಂದಿರಾ ಕ್ಯಾಂಟೀನ್ನಲ್ಲಿ ವಿದ್ಯಾರ್ಥಿಗಳು ಹಸಿವು ತಣಿಸಿಕೊಂಡರು
ಚಿತ್ತಾಪುರದ ಇಂದಿರಾ ಕ್ಯಾಂಟೀನ್ನಲ್ಲಿ ವ್ಯಕ್ತಿಯೊಬ್ಬರು ಊಟ ಮಾಡಿದರು
ಭೀಮರಾಯ ಕಂದಳ್ಳಿ
ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ
ಜೇವರ್ಗಿ ಬಸ್ ನಿಲ್ದಾಣದಿಂದ ಮಿನಿ ವಿಧಾನಸೌಧದವರೆಗೆ ಯಾವುದಾದರೊಂದು ಕಡೆ ಇಂದಿರಾ ಕ್ಯಾಂಟೀನ್ ನಿರ್ಮಿಸಬೇಕು. ಬೇಗ ಆರಂಭಿಸಿದರೆ ಬಡವರು ಕಾರ್ಮಿಕರು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ
ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ ಜೇವರ್ಗಿ ಮುಖಂಡ
ಶಿವು ಹೊಟಕರ
ಜಿಲ್ಲೆಯ ಬೇರೆ ತಾಲ್ಲೂಕುಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಿ ಎರಡ್ಮೂರು ವರ್ಷವಾಯಿತು. ಅಫಜಲಪುರದಲ್ಲಿ ಕೂಡಲೇ ಕ್ಯಾಂಟೀನ್ ಆರಂಭಿಸಿದರೆ ಕಾರ್ಮಿಕ ವರ್ಗಕ್ಕೆ ನೆರವಾಗುತ್ತದೆ
ಶಿವು ಹೊಟಕರ ಅಧ್ಯಕ್ಷ ತಾಲ್ಲೂಕು ಕಟ್ಟಡ ಕಾರ್ಮಿಕ ಸಂಘ ಅಫಜಲಪುರ
‘ಶೀಘ್ರವೇ ಸಭೆ ನಡೆಸಿ ಕ್ರಮವಹಿಸುವೆ’
‘ಹಿಂದಿನ ಸರ್ಕಾರದ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರು–ಪಾಲಿಕೆ ನಡುವಣ ಲೆಕ್ಕದ ವ್ಯತ್ಯಾಸದಿಂದಾಗಿ ಕಲಬುರಗಿಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭ ವಿಳಂಬವಾಗಿದೆ. ಕಳೆದ ಮೂರು ತಿಂಗಳು ಚುನಾವಣೆಯಿಂದಾಗಿ ನೀತಿ ಸಂಹಿತೆ ಜಾರಿಯಲ್ಲಿತ್ತು. ಅದು ಇದೀಗ ಮುಗಿದಿದೆ. ಹೊಸ ಸ್ವರೂಪದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಸಿದ್ಧತೆ ನಡೆದಿದೆ. ಇಂದಿರಾ ಕ್ಯಾಂಟೀನ್ ಆರಂಭದ ಕುರಿತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಶೀಘ್ರವೇ ಸಭೆ ನಡೆಸಿ ತ್ವರಿತವಾಗಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ತಣಿಸುತ್ತಿದೆ ಹಸಿವು...
ಚಿಂಚೋಳಿಯ ಬಸ್ ನಿಲ್ದಾಣದ ಎದುರಿನ ಇಂದಿರಾ ಕ್ಯಾಂಟೀನ್ ಬಡವರ ಹಸಿವು ನಿರಂತರವಾಗಿ ತಣಿಸುತ್ತಿದೆ. ‘ಸ್ಥಳೀಯ ಆಡಳಿತದಿಂದ ಗುತ್ತಿಗೆದಾರರಿಗೆ ನಿಯಮಿತವಾಗಿ ಬಿಲ್ ಬಿಡುಗಡೆಯಾಗುತ್ತಿದೆ. ಇದರಿಂದ ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಣೆ ಸುಗಮವಾಗಿ ನಡೆಯುತ್ತಿದ್ದು ನಿತ್ಯ ನೂರಾರು ಮಂದಿ ಕ್ಯಾಂಟೀನ್ ಪ್ರಯೋಜನ ಪಡೆಯುತ್ತಿದ್ದಾರೆ. ಬೆಳಿಗ್ಗೆ 250ರಿಂದ 300 ಪ್ಲೇಟ್ ಉಪಾಹಾರ ಮಧ್ಯಾಹ್ನ 250 ಪ್ಲೇಟ್ ಊಟ ರಾತ್ರಿ 50 ಪ್ಲೇಟ್ಗಳಷ್ಟು ಊಟ ಖರ್ಚಾಗುತ್ತಿದೆ’ ಎಂದು ಕ್ಯಾಂಟೀನ್ ಉದ್ಯೋಗಿ ತಿಮ್ಮಣ್ಣ ಭೋವಿ ಹೇಳುತ್ತಾರೆ. ನಿತ್ಯ 100ರಷ್ಟು ಗ್ರಾಹಕರು! ಚಿತ್ತಾಪುರ ಎಪಿಎಂಸಿ ಸಮೀಪದಲ್ಲಿರುವ ಇಂದಿರಾ ಕ್ಯಾಂಟೀನ್ ನಿರಂತರವಾಗಿ ಸೇವೆ ನೀಡುತ್ತಿದ್ದರೂ ನಿರೀಕ್ಷೆಯಷ್ಟು ಗ್ರಾಹಕರು ಬರುತ್ತಿಲ್ಲ! ಅಲ್ಪ ಮೊತ್ತದಲ್ಲಿ ಬಡವರ ಹಸಿವು ನೀಗಿಸಲು ಆರಂಭವಾದ ಕ್ಯಾಂಟೀನ್ಗೆ ನಿತ್ಯ 50ರಿಂದ 100 ಗ್ರಾಹಕರು ಭೇಟಿ ನೀಡಿ ಹಸಿವು ತಣಿಸಿಕೊಳ್ಳುತ್ತಿದ್ದಾರೆ. ಗ್ರಾಹಕರ ಸಂಖ್ಯೆ ಅಂದಾಜಿಸಿ ಉಪಾಹಾರ ಊಟ ಸಿದ್ಧಪಡಿಸಲಾಗುತ್ತಿದೆ. ಹೆಚ್ಚಿನ ಗ್ರಾಹಕರು ಬಂದರೆ ತಕ್ಷಣ ಊಟ ಸಿದ್ಧಪಡಿಸಿ ಕೊಡುತ್ತೇವೆ. ಅಡುಗೆಗೆ ಬೇಕಾದ ಸಾಮಾನು ತರಕಾರಿ ಖರೀದಿಗೆ ಗುತ್ತಿಗೆದಾರರು ಹಣ ಹಾಕುತ್ತಾರೆ’ ಎಂದು ಕ್ಯಾಂಟೀನ್ ಸಿಬ್ಬಂದಿ ಹೇಳುತ್ತಾರೆ.