<p><strong>ಚಿತ್ತಾಪುರ</strong>(<strong>ಕಲಬುರಗಿ ಜಿಲ್ಲೆ</strong>): ತಾಲ್ಲೂಕಿನ ಯಾಗಾಪುರ ಗುಡ್ಡದಲ್ಲಿ ಚಿರತೆಯು ಆಕಳ ಮೇಲೆ ದಾಳಿ ಮಾಡಿ ಕೊಂದು ತಿಂದಿರುವ ಪ್ರಕರಣ ಸೋಮವಾರ ಬೆಳಕಿಗೆ ಬಂದಿದೆ.</p><p>ಗ್ರಾಮದ ಬಸಲಿಂಗಪ್ಪ ಮೋಟ್ನಳ್ಳಿ ಅವರಿಗೆ ಸೇರಿದ ಆಕಳು ಚಿರತೆಗೆ ಬಲಿಯಾಗಿದೆ. ಭಾನುವಾರ ದನಕರುಗಳನ್ನು ಮೇಯಿಸಲೆಂದು ಗುಡ್ಡದಲ್ಲಿ ಹೊಡೆದುಕೊಂಡು ಹೋಗಲಾಗಿತ್ತು. ಸಂಜೆ ಮನೆಗೆ ಮರಳಿ ಬಂದಾಗ ಆಕಳೊಂದು ಬಂದಿಲ್ಲ ಎಂಬುದು ಗೊತ್ತಾಗಿದೆ.</p><p>ಸೋಮವಾರ ಬೆಳಿಗ್ಗೆ ಮೊಟ್ನಳ್ಳಿ ಕುಟುಂಬದವರು ಗುಡ್ಡದಲ್ಲಿ ಆಕಳನ್ನು ಹುಡುಕುತ್ತಿರುವಾಗ ಆಕಳ ಅರ್ಧ ಕಳೇಬರ ಕಂಡು ಬಂದಿದೆ ಎಂದು ಗ್ರಾಮದ ರಾಜಕುಮಾರ ಅವರು 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.</p><p>ಕಳೆದ ಜೂ.22ರಂದು ಆಹಾರ ಅರಸಿಕೊಂಡು ಗುಡ್ಡದ ಅರಣ್ಯದೊಳಗಿಂದ ಹೊರಗೆ ಬಂದಿದ್ದ ಚಿರತೆಯೊಂದು ಹೋರಿಯ ಮೇಲೆ ದಾಳಿ ಮಾಡಿ ಕತ್ತಿಗೆ ಗಂಭೀರವಾಗಿ ಗಾಯಗೊಳಿಸಿತ್ತು. ಮರುದಿನ ದನಗಾಯಿಗಳಿಗೆ ಚಿರತೆ ಕಂಡು ಬಂದಿತ್ತು. ಈಗ ಮತ್ತೆ ಆಕಳು ಬಲಿಯಾಗಿದ್ದು ದನಗಾಯಿಗಳಿಗೆ, ರೈತರಿಗೆ, ಕೃಷಿಕೂಲಿಕಾರರಿಗೆ ಆತಂಕವುಂಟು ಮಾಡಿದೆ.</p><p>ಹೋರಿಯ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಗುಡ್ಡದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಆಯಕಟ್ಟಿನ ಜಾಗ ಗುರುತಿಸಿ ಗುಡ್ಡದಲ್ಲಿ ಕಬ್ಬಿಣದ ಬೋನು ಅಳವಡಿಸಲಾಗಿತ್ತು. ಆದರೆ, ಚಿರತೆ ಪತ್ತೆಯಾಗಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ತಾಪುರ</strong>(<strong>ಕಲಬುರಗಿ ಜಿಲ್ಲೆ</strong>): ತಾಲ್ಲೂಕಿನ ಯಾಗಾಪುರ ಗುಡ್ಡದಲ್ಲಿ ಚಿರತೆಯು ಆಕಳ ಮೇಲೆ ದಾಳಿ ಮಾಡಿ ಕೊಂದು ತಿಂದಿರುವ ಪ್ರಕರಣ ಸೋಮವಾರ ಬೆಳಕಿಗೆ ಬಂದಿದೆ.</p><p>ಗ್ರಾಮದ ಬಸಲಿಂಗಪ್ಪ ಮೋಟ್ನಳ್ಳಿ ಅವರಿಗೆ ಸೇರಿದ ಆಕಳು ಚಿರತೆಗೆ ಬಲಿಯಾಗಿದೆ. ಭಾನುವಾರ ದನಕರುಗಳನ್ನು ಮೇಯಿಸಲೆಂದು ಗುಡ್ಡದಲ್ಲಿ ಹೊಡೆದುಕೊಂಡು ಹೋಗಲಾಗಿತ್ತು. ಸಂಜೆ ಮನೆಗೆ ಮರಳಿ ಬಂದಾಗ ಆಕಳೊಂದು ಬಂದಿಲ್ಲ ಎಂಬುದು ಗೊತ್ತಾಗಿದೆ.</p><p>ಸೋಮವಾರ ಬೆಳಿಗ್ಗೆ ಮೊಟ್ನಳ್ಳಿ ಕುಟುಂಬದವರು ಗುಡ್ಡದಲ್ಲಿ ಆಕಳನ್ನು ಹುಡುಕುತ್ತಿರುವಾಗ ಆಕಳ ಅರ್ಧ ಕಳೇಬರ ಕಂಡು ಬಂದಿದೆ ಎಂದು ಗ್ರಾಮದ ರಾಜಕುಮಾರ ಅವರು 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.</p><p>ಕಳೆದ ಜೂ.22ರಂದು ಆಹಾರ ಅರಸಿಕೊಂಡು ಗುಡ್ಡದ ಅರಣ್ಯದೊಳಗಿಂದ ಹೊರಗೆ ಬಂದಿದ್ದ ಚಿರತೆಯೊಂದು ಹೋರಿಯ ಮೇಲೆ ದಾಳಿ ಮಾಡಿ ಕತ್ತಿಗೆ ಗಂಭೀರವಾಗಿ ಗಾಯಗೊಳಿಸಿತ್ತು. ಮರುದಿನ ದನಗಾಯಿಗಳಿಗೆ ಚಿರತೆ ಕಂಡು ಬಂದಿತ್ತು. ಈಗ ಮತ್ತೆ ಆಕಳು ಬಲಿಯಾಗಿದ್ದು ದನಗಾಯಿಗಳಿಗೆ, ರೈತರಿಗೆ, ಕೃಷಿಕೂಲಿಕಾರರಿಗೆ ಆತಂಕವುಂಟು ಮಾಡಿದೆ.</p><p>ಹೋರಿಯ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಗುಡ್ಡದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಆಯಕಟ್ಟಿನ ಜಾಗ ಗುರುತಿಸಿ ಗುಡ್ಡದಲ್ಲಿ ಕಬ್ಬಿಣದ ಬೋನು ಅಳವಡಿಸಲಾಗಿತ್ತು. ಆದರೆ, ಚಿರತೆ ಪತ್ತೆಯಾಗಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>