<p><strong>ಕಲಬುರಗಿ:</strong> ಖಾಸಗಿ ಬ್ಯಾಂಕ್ನ ₹20.66 ಲಕ್ಷ ಮೊತ್ತದ ಹಣವನ್ನು ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಆಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.</p>.<p>ಭಾರತ್ ಫೈನಾನ್ಸ್ ಲಿಮಿಟೆಡ್ನ ಫೀಲ್ಡ್ ಆಫೀಸರ್ ಆಗಿದ್ದ ಆಳಂದ ತಾಲ್ಲೂಕಿನ ಬೆಳಮಗಿ ಗ್ರಾಮದ ನಿವಾಸಿ ಲಕ್ಕಪ್ಪ ಮಲ್ಲಿಕಾರ್ಜುನ ಗಡ್ಡೆ ಎಂಬಾತ ಬ್ಯಾಂಕ್ನ ಸದಸ್ಯರ ಸಾಲದ ಖಾತೆಗೆ ಜಮೆ ಮಾಡದೇ ಇಂಡಸ್ ಬ್ಯಾಂಕ್ನಲ್ಲಿ ಸದಸ್ಯರ ಖಾತೆ ತೆರೆದು ಹಣ ಜಮೆ ಮಾಡಿದ್ದಾರೆ.</p>.<p>ಹತ್ತಿರದ ಬ್ಯಾಂಕ್ಗೆ ಬಂದು ಬಯೊಮೆಟ್ರಿಕ್ ಮೂಲಕ ಸಾಲ ತೆಗೆದುಕೊಳ್ಳುವುದು. ಸಾಲ ನೀಡಿ ಮರುಪಾವತಿ ಸಹ ಮಾಡಿಕೊಳ್ಳುತ್ತಿದ್ದಾರೆ. ಬ್ಯಾಂಕ್ ಹಣ ಸ್ವಂತಕ್ಕೆ ಬಳಸಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬ್ಯಾಂಕ್ನ ಬ್ರ್ಯಾಂಚ್ ಮ್ಯಾನೇಜರ್ ಸಚಿನ್ ಹದಗಲ್ ದೂರಿನಲ್ಲಿ ಮನವಿ ಮಾಡಿದ್ದಾರೆ.</p>.<p>ವೇತನ ವಿಚಾರಿಸಿದಕ್ಕೆ ಹಲ್ಲೆ: ದೂರು– ವೇತನ ನೀಡುವ ಬಗ್ಗೆ ವಿಚಾರಿಸಿದಕ್ಕೆ ನಿಲಯ ಮೇಲ್ವಿಚಾರಕಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಬಿಸಿಎಂ ತಾಲ್ಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕನ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ನಗರದ ಗೊಲ್ಲರ ಗಲ್ಲಿಯಲ್ಲಿರುವ ಬಿಸಿಎಂ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ ಸಿದ್ರಾಮಪ್ಪ ಪಾಟೀಲ ಎಂಬುವವರು ಅವಾಚ್ಚ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.</p>.<p><strong>ಬೈಕ್ ಸವಾರ ಸಾವು:</strong> ಕಲಬುರಗಿ: ಬೈಕ್ಗೆ ಕಾರ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪಿದ ಘಟನೆ ಜೇವರ್ಗಿ ಕಲಬುರಗಿ ರಸ್ತೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ಜೇವರ್ಗಿ ತಾಲ್ಲೂಕಿನ ಕುಮನ್ ಸಿರಸಗಿ ನಿವಾಸಿ ಮಹಿಬೂಬ್ ಸಾಬ್ ಮಕಾಂದಾರ ಮೃತರು. ಜೇವರ್ಗಿಯಿಂದ ಕಲಬುರಗಿಗೆ ಬರುವಾಗ ಈ ಅಪಘಾತ ಸಂಭವಿಸಿದೆ. ಈ ಕುರಿತು ನಗರ ಸಂಚಾರಿ ಪೊಲೀಸ್ ಠಾಣೆ–1ರಲ್ಲಿ ದೂರು ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಖಾಸಗಿ ಬ್ಯಾಂಕ್ನ ₹20.66 ಲಕ್ಷ ಮೊತ್ತದ ಹಣವನ್ನು ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಆಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.</p>.<p>ಭಾರತ್ ಫೈನಾನ್ಸ್ ಲಿಮಿಟೆಡ್ನ ಫೀಲ್ಡ್ ಆಫೀಸರ್ ಆಗಿದ್ದ ಆಳಂದ ತಾಲ್ಲೂಕಿನ ಬೆಳಮಗಿ ಗ್ರಾಮದ ನಿವಾಸಿ ಲಕ್ಕಪ್ಪ ಮಲ್ಲಿಕಾರ್ಜುನ ಗಡ್ಡೆ ಎಂಬಾತ ಬ್ಯಾಂಕ್ನ ಸದಸ್ಯರ ಸಾಲದ ಖಾತೆಗೆ ಜಮೆ ಮಾಡದೇ ಇಂಡಸ್ ಬ್ಯಾಂಕ್ನಲ್ಲಿ ಸದಸ್ಯರ ಖಾತೆ ತೆರೆದು ಹಣ ಜಮೆ ಮಾಡಿದ್ದಾರೆ.</p>.<p>ಹತ್ತಿರದ ಬ್ಯಾಂಕ್ಗೆ ಬಂದು ಬಯೊಮೆಟ್ರಿಕ್ ಮೂಲಕ ಸಾಲ ತೆಗೆದುಕೊಳ್ಳುವುದು. ಸಾಲ ನೀಡಿ ಮರುಪಾವತಿ ಸಹ ಮಾಡಿಕೊಳ್ಳುತ್ತಿದ್ದಾರೆ. ಬ್ಯಾಂಕ್ ಹಣ ಸ್ವಂತಕ್ಕೆ ಬಳಸಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬ್ಯಾಂಕ್ನ ಬ್ರ್ಯಾಂಚ್ ಮ್ಯಾನೇಜರ್ ಸಚಿನ್ ಹದಗಲ್ ದೂರಿನಲ್ಲಿ ಮನವಿ ಮಾಡಿದ್ದಾರೆ.</p>.<p>ವೇತನ ವಿಚಾರಿಸಿದಕ್ಕೆ ಹಲ್ಲೆ: ದೂರು– ವೇತನ ನೀಡುವ ಬಗ್ಗೆ ವಿಚಾರಿಸಿದಕ್ಕೆ ನಿಲಯ ಮೇಲ್ವಿಚಾರಕಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಬಿಸಿಎಂ ತಾಲ್ಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕನ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ನಗರದ ಗೊಲ್ಲರ ಗಲ್ಲಿಯಲ್ಲಿರುವ ಬಿಸಿಎಂ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ ಸಿದ್ರಾಮಪ್ಪ ಪಾಟೀಲ ಎಂಬುವವರು ಅವಾಚ್ಚ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.</p>.<p><strong>ಬೈಕ್ ಸವಾರ ಸಾವು:</strong> ಕಲಬುರಗಿ: ಬೈಕ್ಗೆ ಕಾರ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪಿದ ಘಟನೆ ಜೇವರ್ಗಿ ಕಲಬುರಗಿ ರಸ್ತೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ಜೇವರ್ಗಿ ತಾಲ್ಲೂಕಿನ ಕುಮನ್ ಸಿರಸಗಿ ನಿವಾಸಿ ಮಹಿಬೂಬ್ ಸಾಬ್ ಮಕಾಂದಾರ ಮೃತರು. ಜೇವರ್ಗಿಯಿಂದ ಕಲಬುರಗಿಗೆ ಬರುವಾಗ ಈ ಅಪಘಾತ ಸಂಭವಿಸಿದೆ. ಈ ಕುರಿತು ನಗರ ಸಂಚಾರಿ ಪೊಲೀಸ್ ಠಾಣೆ–1ರಲ್ಲಿ ದೂರು ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>