<p>ಆಳಂದ: ಮಗಳ ಸಾವು ಅನುಮಾನಾಸ್ಪದವಾಗಿದೆ. ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಲಾಗಿದೆ ಎಂದು ಪೋಷಕರು ದೂರು ನೀಡಿದ ಹಿನ್ನೆಲೆಯಲ್ಲಿ ಜೂನ್ 22ರಂದು ಮೃತಪಟ್ಟಿದ್ದ ಅಹಮದಿ ಬೇಗಂ ಎಂಬುವವರ ಶವವನ್ನು ಬುಧವಾರ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.</p>.<p>ಘಟನೆ ವಿವರ: ಪಟ್ಟಣದ ನ್ಯೂ ಅನ್ಸಾರಿ ಮೊಹಲ್ಲಾದ ನಿವಾಸಿ ಅಹಮದಿ ಬೇಗಂ (20) ಜೂನ್ 22ರಂದು ಮೃತಪಟ್ಟಿದ್ದರು. ಮೆಹಬೂಬ ಅನ್ಸಾರಿ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದ ಅಹಮದಿ ಮೂರು ತಿಂಗಳ ಗರ್ಭಿಣಿಯಾಗಿದ್ದರು.</p>.<p>ಮಗಳ ಕತ್ತಿನಲ್ಲಿ ರಕ್ತದ ಕಲೆಗಳಿದ್ದು, ಗಾಯಗಳು ಸಹ ಆಗಿದ್ದವು. ಆದರೆ ಗಂಡನ ಮನೆಯವರು ತರಾತುರಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದರು. ಹೀಗಾಗಿ ಮರಣೋತ್ತರ ಪರೀಕ್ಷೆ ನಡೆಸಿ ಎಂದು ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಹಜರತ್ ಲಾಡ್ಲೇಮಶಾಕ ದರ್ಗಾದಲ್ಲಿರುವ ಖಬರಸ್ಥಾನದಲ್ಲಿ ಹೂತಿದ್ದ ಶವವನ್ನು ಹೊರತೆಗೆಯಲಾಗಿದೆ.</p>.<p>ತಹಶೀಲ್ದಾರ್ ಯಲ್ಲಪ್ಪ ಸುಬೇದಾರ, ಡಿವೈಎಸ್ಪಿ ಗೋಪಿ ಆರ್, ಪಿಐ ಮಹಾದೇವ ಪಂಚಮುಖಿ, ಪಿಎಸ್ಐ ದಿನೇಶ, ವೈದ್ಯರ ತಂಡ ಮತ್ತು ಎಫ್.ಎಸ್.ಎಲ್ ತಂಡದವರು ತಂದೆ ಮುನಾವರ, ತಾಯಿ ಅರೇಜಾ ಬೇಗಂ ಅವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆಳಂದ: ಮಗಳ ಸಾವು ಅನುಮಾನಾಸ್ಪದವಾಗಿದೆ. ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಲಾಗಿದೆ ಎಂದು ಪೋಷಕರು ದೂರು ನೀಡಿದ ಹಿನ್ನೆಲೆಯಲ್ಲಿ ಜೂನ್ 22ರಂದು ಮೃತಪಟ್ಟಿದ್ದ ಅಹಮದಿ ಬೇಗಂ ಎಂಬುವವರ ಶವವನ್ನು ಬುಧವಾರ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.</p>.<p>ಘಟನೆ ವಿವರ: ಪಟ್ಟಣದ ನ್ಯೂ ಅನ್ಸಾರಿ ಮೊಹಲ್ಲಾದ ನಿವಾಸಿ ಅಹಮದಿ ಬೇಗಂ (20) ಜೂನ್ 22ರಂದು ಮೃತಪಟ್ಟಿದ್ದರು. ಮೆಹಬೂಬ ಅನ್ಸಾರಿ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದ ಅಹಮದಿ ಮೂರು ತಿಂಗಳ ಗರ್ಭಿಣಿಯಾಗಿದ್ದರು.</p>.<p>ಮಗಳ ಕತ್ತಿನಲ್ಲಿ ರಕ್ತದ ಕಲೆಗಳಿದ್ದು, ಗಾಯಗಳು ಸಹ ಆಗಿದ್ದವು. ಆದರೆ ಗಂಡನ ಮನೆಯವರು ತರಾತುರಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದರು. ಹೀಗಾಗಿ ಮರಣೋತ್ತರ ಪರೀಕ್ಷೆ ನಡೆಸಿ ಎಂದು ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಹಜರತ್ ಲಾಡ್ಲೇಮಶಾಕ ದರ್ಗಾದಲ್ಲಿರುವ ಖಬರಸ್ಥಾನದಲ್ಲಿ ಹೂತಿದ್ದ ಶವವನ್ನು ಹೊರತೆಗೆಯಲಾಗಿದೆ.</p>.<p>ತಹಶೀಲ್ದಾರ್ ಯಲ್ಲಪ್ಪ ಸುಬೇದಾರ, ಡಿವೈಎಸ್ಪಿ ಗೋಪಿ ಆರ್, ಪಿಐ ಮಹಾದೇವ ಪಂಚಮುಖಿ, ಪಿಎಸ್ಐ ದಿನೇಶ, ವೈದ್ಯರ ತಂಡ ಮತ್ತು ಎಫ್.ಎಸ್.ಎಲ್ ತಂಡದವರು ತಂದೆ ಮುನಾವರ, ತಾಯಿ ಅರೇಜಾ ಬೇಗಂ ಅವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>