<p><strong>ಕಲಬುರಗಿ:</strong> ‘ಪ್ರವರ್ಗ 2ಎ ದಲ್ಲಿರುವ ಸವಿತಾ ಸಮಾಜ ಪ್ರವರ್ಗ–1ರಲ್ಲಿ ಸೇರಲು ಸಂಘಟಿತ ಹೋರಾಟ ಅಗತ್ಯವಿದೆ’ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಅಜಯಕುಮಾರ ಎ.ದಾಮರಗಿದ್ದಾ ಹೇಳಿದರು.</p>.<p>ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸವಿತಾ ಸಮಾಜದ ಸರ್ಕಾರಿ, ಅರೆ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ, ಪಿಯುಸಿ, ಸ್ನಾತಕ, ಸ್ನಾತಕೋತ್ತರ ಪದವಿ, ಪಿಎಚ್.ಡಿ ಪಡೆದವರಿಗೆ ಪ್ರತಿಭಾ ಪುರಸ್ಕಾರ ಹಾಗೂ ನೂತನವಾಗಿ ಸೇವೆಗೆ ಸೇರಿದವರು ಮತ್ತು ಸೇವಾ ನಿವೃತ್ತರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಸಮಾಜದ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಬೇಕು’ ಎಂದರು.</p>.<p>ಅಬಕಾರಿ ಇಲಾಖೆಯ ವಿಭಾಗೀಯ ಜಂಟಿ ಆಯುಕ್ತ ಬಸವರಾಜ ಹಡಪದ ಮಾತನಾಡಿ, ‘ಸಮಾಜದ ಜನ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು. ಒಳ್ಳೆಯ ಶಿಕ್ಷಣ ಪಡೆದರೆ ಅವರೇ ಸಮಾಜಕ್ಕೆ ದಾರಿದೀಪವಾಗುತ್ತಾರೆ’ ಎಂದರು.</p>.<p>‘ಸಂಘದಿಂದ ಪ್ರತಿ ಜಿಲ್ಲೆಯಲ್ಲಿ ಹಾಸ್ಟೆಲ್ ನಿರ್ಮಿಸಲು ಮುಂದಾಗಬೇಕು. ಇದರಿಂದ ಸಮಾಜದ ಬಡ ಮಕ್ಕಳು ಕೂಡ ಉತ್ತಮ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ. ಅದೇ ರೀತಿ ಕೋ–ಆಪರೇಟಿವ್ ಬ್ಯಾಂಕ್ಗಳನ್ನು ಸಹ ಸ್ಥಾಪಿಸಬೇಕು’ ಎಂದು ಸಲಹೆ ನೀಡಿದರು.</p>.<p>ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಉಜ್ಜೆಲೀಕರ್ ಮಾತನಾಡಿ, ‘ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ನಿರ್ದೇಶಕರನ್ನು ನೇಮಕ ಮಾಡುವ ಜೊತೆಗೆ ₹100 ಕೋಟಿ ಅನುದಾನ ಕೊಡಬೇಕು. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸವಿತಾ ಮಹರ್ಷಿ ಪೀಠ ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.</p>.<p>ಶಿಕ್ಷಕ ಅಶೋಕ ಎ.ಅಚ್ಯುತಾನಂದ ಶಾಸ್ತ್ರಿ ಉಪನ್ಯಾಸ ನೀಡಿದರು. ಸರ್ಕಾರದಿಂದ ಉತ್ತಮ ಸೇವಾ ಪ್ರಶಸ್ತಿ ಪಡೆದ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಶ್ರೀನಿವಾಸ ತಾಂಡೂರಕರ್ ಅವರನ್ನು ಸತ್ಕರಿಸಲಾಯಿತು.</p>.<p>ಎಸ್ಎಸ್ಎಲ್ಸಿಯಲ್ಲಿ ಜಿಲ್ಲೆಗೆ ಅತಿಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿನಿ ತನಿಷ್ಕಾ ಆನಂದ ಹಕೀಮ್ ಅವರಿಗೆ ₹5 ಸಾವಿರ ನಗದು ಒಳಗೊಂಡ ‘ಶಾರದಾ ಪುರಸ್ಕಾರ’ ನೀಡಲಾಯಿತು. ದತ್ತಾತ್ರೇಯ ಸೂರ್ಯವಂಶಿ ಅವರು ತಮ್ಮ ತಾಯಿಯ ಸ್ಮರಣಾರ್ಥ ಈ ಪುರಸ್ಕಾರ ನೀಡಿದರು.</p>.<p>ಪತ್ರಕರ್ತ ಭವಾನಿಸಿಂಗ್ ಠಾಕೂರ್, ಪಾಲಿಕೆ ಸದಸ್ಯೆ ತೃಪ್ತಿ ಎಸ್.ಲಾಖೆ, ವೈದ್ಯೆ ಡಾ. ಅಶ್ವಿನಿಕುಮಾರಿ ಧನವಾಡಕರ್, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆನಂದ ವಾರಿಕ, ಸಮಾಜದ ಮುಖಂಡ ಬಾಬುರಾವ ಹಕೀಮ್, ಸವಿತಾ ಸಮಾಜದ ಸರ್ಕಾರಿ/ ಅರೆ ಸರ್ಕಾರಿ ಹಾಗೂ ನಿವೃತ್ತ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲಣ್ಣ ಆರ್.ಗೋಗಿ, ಸವಿತಾ ಸಮಾಜ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಆಡಕಿ ಉಪಸ್ಥಿತರಿದ್ದರು.</p>.<p>ಸವಿತಾ ಸಮಾಜದ ಮಾಜಿ ಅಧ್ಯಕ್ಷ ನಾಗಪ್ಪ ಟಿ.ಗೋಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೇಷರಾವ ಎಂ.ಚಿಕಲಿಕರ್ ಸ್ವಾಗತಿಸಿದರು. ದತ್ತಾತ್ರೇಯ ಸೂರ್ಯವಂಶಿ ನಿರೂಪಿಸಿದರು. ಗಿರಿಜಾಶಂಕರ ಗೋಗಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ‘ಪ್ರವರ್ಗ 2ಎ ದಲ್ಲಿರುವ ಸವಿತಾ ಸಮಾಜ ಪ್ರವರ್ಗ–1ರಲ್ಲಿ ಸೇರಲು ಸಂಘಟಿತ ಹೋರಾಟ ಅಗತ್ಯವಿದೆ’ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಅಜಯಕುಮಾರ ಎ.ದಾಮರಗಿದ್ದಾ ಹೇಳಿದರು.</p>.<p>ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸವಿತಾ ಸಮಾಜದ ಸರ್ಕಾರಿ, ಅರೆ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ, ಪಿಯುಸಿ, ಸ್ನಾತಕ, ಸ್ನಾತಕೋತ್ತರ ಪದವಿ, ಪಿಎಚ್.ಡಿ ಪಡೆದವರಿಗೆ ಪ್ರತಿಭಾ ಪುರಸ್ಕಾರ ಹಾಗೂ ನೂತನವಾಗಿ ಸೇವೆಗೆ ಸೇರಿದವರು ಮತ್ತು ಸೇವಾ ನಿವೃತ್ತರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಸಮಾಜದ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಬೇಕು’ ಎಂದರು.</p>.<p>ಅಬಕಾರಿ ಇಲಾಖೆಯ ವಿಭಾಗೀಯ ಜಂಟಿ ಆಯುಕ್ತ ಬಸವರಾಜ ಹಡಪದ ಮಾತನಾಡಿ, ‘ಸಮಾಜದ ಜನ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು. ಒಳ್ಳೆಯ ಶಿಕ್ಷಣ ಪಡೆದರೆ ಅವರೇ ಸಮಾಜಕ್ಕೆ ದಾರಿದೀಪವಾಗುತ್ತಾರೆ’ ಎಂದರು.</p>.<p>‘ಸಂಘದಿಂದ ಪ್ರತಿ ಜಿಲ್ಲೆಯಲ್ಲಿ ಹಾಸ್ಟೆಲ್ ನಿರ್ಮಿಸಲು ಮುಂದಾಗಬೇಕು. ಇದರಿಂದ ಸಮಾಜದ ಬಡ ಮಕ್ಕಳು ಕೂಡ ಉತ್ತಮ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ. ಅದೇ ರೀತಿ ಕೋ–ಆಪರೇಟಿವ್ ಬ್ಯಾಂಕ್ಗಳನ್ನು ಸಹ ಸ್ಥಾಪಿಸಬೇಕು’ ಎಂದು ಸಲಹೆ ನೀಡಿದರು.</p>.<p>ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಉಜ್ಜೆಲೀಕರ್ ಮಾತನಾಡಿ, ‘ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ನಿರ್ದೇಶಕರನ್ನು ನೇಮಕ ಮಾಡುವ ಜೊತೆಗೆ ₹100 ಕೋಟಿ ಅನುದಾನ ಕೊಡಬೇಕು. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸವಿತಾ ಮಹರ್ಷಿ ಪೀಠ ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.</p>.<p>ಶಿಕ್ಷಕ ಅಶೋಕ ಎ.ಅಚ್ಯುತಾನಂದ ಶಾಸ್ತ್ರಿ ಉಪನ್ಯಾಸ ನೀಡಿದರು. ಸರ್ಕಾರದಿಂದ ಉತ್ತಮ ಸೇವಾ ಪ್ರಶಸ್ತಿ ಪಡೆದ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಶ್ರೀನಿವಾಸ ತಾಂಡೂರಕರ್ ಅವರನ್ನು ಸತ್ಕರಿಸಲಾಯಿತು.</p>.<p>ಎಸ್ಎಸ್ಎಲ್ಸಿಯಲ್ಲಿ ಜಿಲ್ಲೆಗೆ ಅತಿಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿನಿ ತನಿಷ್ಕಾ ಆನಂದ ಹಕೀಮ್ ಅವರಿಗೆ ₹5 ಸಾವಿರ ನಗದು ಒಳಗೊಂಡ ‘ಶಾರದಾ ಪುರಸ್ಕಾರ’ ನೀಡಲಾಯಿತು. ದತ್ತಾತ್ರೇಯ ಸೂರ್ಯವಂಶಿ ಅವರು ತಮ್ಮ ತಾಯಿಯ ಸ್ಮರಣಾರ್ಥ ಈ ಪುರಸ್ಕಾರ ನೀಡಿದರು.</p>.<p>ಪತ್ರಕರ್ತ ಭವಾನಿಸಿಂಗ್ ಠಾಕೂರ್, ಪಾಲಿಕೆ ಸದಸ್ಯೆ ತೃಪ್ತಿ ಎಸ್.ಲಾಖೆ, ವೈದ್ಯೆ ಡಾ. ಅಶ್ವಿನಿಕುಮಾರಿ ಧನವಾಡಕರ್, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆನಂದ ವಾರಿಕ, ಸಮಾಜದ ಮುಖಂಡ ಬಾಬುರಾವ ಹಕೀಮ್, ಸವಿತಾ ಸಮಾಜದ ಸರ್ಕಾರಿ/ ಅರೆ ಸರ್ಕಾರಿ ಹಾಗೂ ನಿವೃತ್ತ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲಣ್ಣ ಆರ್.ಗೋಗಿ, ಸವಿತಾ ಸಮಾಜ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಆಡಕಿ ಉಪಸ್ಥಿತರಿದ್ದರು.</p>.<p>ಸವಿತಾ ಸಮಾಜದ ಮಾಜಿ ಅಧ್ಯಕ್ಷ ನಾಗಪ್ಪ ಟಿ.ಗೋಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೇಷರಾವ ಎಂ.ಚಿಕಲಿಕರ್ ಸ್ವಾಗತಿಸಿದರು. ದತ್ತಾತ್ರೇಯ ಸೂರ್ಯವಂಶಿ ನಿರೂಪಿಸಿದರು. ಗಿರಿಜಾಶಂಕರ ಗೋಗಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>