<p><strong>ಕಲಬುರಗಿ</strong>: ಪ್ರತಿ ಮಳೆ ಸಂತಸದ ಜೊತೆಗೆ ನೋವನ್ನೂ ಹೊತ್ತು ತರುತ್ತದೆ. ಮಳೆ ಸಂಬಂಧಿ ಅವಘಡಗಳಿಂದಾಗಿ ಏಳು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 92 ಜನ ಮೃತಪಟ್ಟಿದ್ದಾರೆ.</p>.<p>ಪ್ರಸಕ್ತ ವರ್ಷದ ಜನವರಿಯಿಂದ ಇದುವರೆಗೆ ಒಂಬತ್ತು ಜನ ಮೃತಪಟ್ಟಿದ್ದಾರೆ. ಎಂಟು ಜನ ಸಿಡಿಲಿಗೆ ಬಲಿಯಾಗಿದ್ದರೆ, ಒಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಸಿಡಿಲು ಬಡಿದು ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ ಮೂವರು, ಚಿಂಚೋಳಿಯಲ್ಲಿ ಇಬ್ಬರು, ಚಿತ್ತಾಪುರ ತಾಲ್ಲೂಕಿನಲ್ಲಿ ಒಬ್ಬರು, ಕಮಲಾಪುರದಲ್ಲಿ ಒಬ್ಬರು ಹಾಗೂ ಸೇಡಂನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಜೇವರ್ಗಿಯಲ್ಲಿ ಒಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.</p>.<p>2023ರಲ್ಲಿ ಸಿಡಿಲು ಬಡಿದು ಐವರು ಮೃತಪಟ್ಟಿದ್ದು, ಮೂವರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಆಳಂದ ಮತ್ತು ಚಿತ್ತಾಪುರ ತಾಲ್ಲೂಕಿನಲ್ಲಿ ಕ್ರಮವಾಗಿ ಮೂವರು ಹಾಗೂ ಇಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಚಿಂಚೋಳಿ ತಾಲ್ಲೂಕಿನಲ್ಲಿ ವಿದ್ಯುತ್ ಸ್ಪರ್ಶಿಸಿ ಮೂವರು ಸಾವನ್ನಪ್ಪಿದ್ದಾರೆ.</p>.<p>ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚು ಸಾವು ಸಂಭವಿಸಿವೆ. 2023 ಹಾಗೂ ಪ್ರಸಕ್ತ ವರ್ಷ ಇದುವರೆಗೂ ಆಳಂದ ತಾಲ್ಲೂಕಿನಲ್ಲಿ ಹೆಚ್ಚು ಸಾವು ವರದಿಯಾಗಿವೆ. ಸಿಡಿಲು ಬಡಿದು ಒಟ್ಟು 6 ಜನ ಮೃತಪಟ್ಟಿದ್ದಾರೆ.</p>.<p>2019ರಲ್ಲಿ ಮಳೆ ಅವಘಡಗಳಿಂದ ಹೆಚ್ಚು ಜನ ಮೃತಪಟ್ಟಿದ್ದಾರೆ. ಈ ಅವಧಿಯಲ್ಲಿ ಒಟ್ಟು 17 ಜನ ಮೃತಪಟ್ಟಿದ್ದು, ಆ ಪೈಕಿ 15 ಜನ ಸಿಡಿಲು ಬಡಿದು ಹಾಗೂ ಇಬ್ಬರು ಮನೆ ಕುಸಿದು ಸಾವನ್ನಪ್ಪಿರುವುದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಂಕಿ–ಅಂಶಗಳಿಂದ ತಿಳಿದುಬರುತ್ತದೆ.</p>.<p>ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಹಾನಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.</p>.<p>ಮಳೆ ಸಂಬಂಧಿ ಅವಘಡಗಳಿಂದ ಮೃತಪಟ್ಟವರಿಗೆ ನೈಸರ್ಗಿಕ ವಿಕೋಪ ಪರಿಹಾರ ನಿಧಿಯಿಂದ ತಲಾ ₹4 ಲಕ್ಷ ಹಾಗೂ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ₹1 ಲಕ್ಷ ನೀಡಲಾಗಿದೆ.</p>.<p>ಮಳೆ ಬರುವ ಸಂದರ್ಭದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಜಾಗೃತಿ ಮೂಡಿಸಲಾಗುತ್ತಿದೆ. </p><p><strong>–ಉಮೇಶ ಬಿರಾದಾರ ವಿಪತ್ತು ನಿರ್ವಹಣಾ ಪರಿಣಿತ</strong></p>.<p><strong>ಸಿಡಿಲಿನಿಂದ ರಕ್ಷಿಸಿಕೊಳ್ಳುವುದು ಹೇಗೆ?</strong></p><p> 1. ‘ಸಿಡಿಲು’ ಮೊಬೈಲ್ ಆ್ಯಪ್ನಲ್ಲಿ ಮುನ್ಸೂಚನೆ ತಿಳಿಯಿರಿ</p><p>2. ಮನೆಯ ಸುತ್ತಲಿನ ಕೊಳೆತ ಹಾಗೂ ಒಣಗಿದ ಮರಗಳನ್ನು ತೆರವು ಮಾಡಿ </p><p>3. ಮರ ಹಾಗೂ ವಿದ್ಯುತ್ ಕಂಬಗಳ ಕೆಳಗೆ ನಿಲ್ಲದಿರಿ </p><p>4. ವಿದ್ಯುತ್ ಉಪಕರಣ ಮುಟ್ಟದಿರಿ </p><p>5. ಪ್ರಾಣಿಗಳ ಮಧ್ಯೆ ಇದ್ದರೆ ಅಲ್ಲಿಯೇ ಬಾಗಿ ಕುಳಿತುಕೊಳ್ಳಿ </p><p>6. ಎತ್ತರದ ಪ್ರದೇಶದಲ್ಲಿದ್ದರೆ ತಗ್ಗು ಪ್ರದೇಶಕ್ಕೆ ಬನ್ನಿ </p><p>7. ಕಾಡಿನಲ್ಲಿದ್ದರೆ ಸಣ್ಣ ಮರದ ಕೆಳಗೆ ಆಶ್ರಯ ಪಡೆಯಿರಿ </p><p>8. ಮಳೆ ಬರುವ ಸಂದರ್ಭದಲ್ಲಿ ಈಜಾಡಬೇಡಿ</p>.<p><strong>ತುರ್ತು ಸಹಾಯವಾಣಿ</strong> </p><p>ಜಿಲ್ಲಾ ವಿಪತ್ತು ತುರ್ತು ನಿರ್ವಾಹಣಾ ಕೇಂದ್ರದ ಸಹಾಯವಾಣಿ–1077 ಕಲಬುರಗಿ-9980683702 ಚಿಂಚೋಳಿ–08475-200127 ಕಾಳಗಿ-9449266885 ಕಮಲಾಪುರ-9986324648 ಜೇವರ್ಗಿ-7019270898 ಯಡ್ರಾಮಿ-9743682346 ಶಹಾಬಾದ್-8152093789 ಸೇಡಂ-08441-276184 ಆಳಂದ-9845858252 ಅಫಜಲಪುರ–08470-282020 ಚಿತ್ತಾಪುರ–08474-236250. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ಪ್ರತಿ ಮಳೆ ಸಂತಸದ ಜೊತೆಗೆ ನೋವನ್ನೂ ಹೊತ್ತು ತರುತ್ತದೆ. ಮಳೆ ಸಂಬಂಧಿ ಅವಘಡಗಳಿಂದಾಗಿ ಏಳು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 92 ಜನ ಮೃತಪಟ್ಟಿದ್ದಾರೆ.</p>.<p>ಪ್ರಸಕ್ತ ವರ್ಷದ ಜನವರಿಯಿಂದ ಇದುವರೆಗೆ ಒಂಬತ್ತು ಜನ ಮೃತಪಟ್ಟಿದ್ದಾರೆ. ಎಂಟು ಜನ ಸಿಡಿಲಿಗೆ ಬಲಿಯಾಗಿದ್ದರೆ, ಒಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಸಿಡಿಲು ಬಡಿದು ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ ಮೂವರು, ಚಿಂಚೋಳಿಯಲ್ಲಿ ಇಬ್ಬರು, ಚಿತ್ತಾಪುರ ತಾಲ್ಲೂಕಿನಲ್ಲಿ ಒಬ್ಬರು, ಕಮಲಾಪುರದಲ್ಲಿ ಒಬ್ಬರು ಹಾಗೂ ಸೇಡಂನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಜೇವರ್ಗಿಯಲ್ಲಿ ಒಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.</p>.<p>2023ರಲ್ಲಿ ಸಿಡಿಲು ಬಡಿದು ಐವರು ಮೃತಪಟ್ಟಿದ್ದು, ಮೂವರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಆಳಂದ ಮತ್ತು ಚಿತ್ತಾಪುರ ತಾಲ್ಲೂಕಿನಲ್ಲಿ ಕ್ರಮವಾಗಿ ಮೂವರು ಹಾಗೂ ಇಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಚಿಂಚೋಳಿ ತಾಲ್ಲೂಕಿನಲ್ಲಿ ವಿದ್ಯುತ್ ಸ್ಪರ್ಶಿಸಿ ಮೂವರು ಸಾವನ್ನಪ್ಪಿದ್ದಾರೆ.</p>.<p>ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚು ಸಾವು ಸಂಭವಿಸಿವೆ. 2023 ಹಾಗೂ ಪ್ರಸಕ್ತ ವರ್ಷ ಇದುವರೆಗೂ ಆಳಂದ ತಾಲ್ಲೂಕಿನಲ್ಲಿ ಹೆಚ್ಚು ಸಾವು ವರದಿಯಾಗಿವೆ. ಸಿಡಿಲು ಬಡಿದು ಒಟ್ಟು 6 ಜನ ಮೃತಪಟ್ಟಿದ್ದಾರೆ.</p>.<p>2019ರಲ್ಲಿ ಮಳೆ ಅವಘಡಗಳಿಂದ ಹೆಚ್ಚು ಜನ ಮೃತಪಟ್ಟಿದ್ದಾರೆ. ಈ ಅವಧಿಯಲ್ಲಿ ಒಟ್ಟು 17 ಜನ ಮೃತಪಟ್ಟಿದ್ದು, ಆ ಪೈಕಿ 15 ಜನ ಸಿಡಿಲು ಬಡಿದು ಹಾಗೂ ಇಬ್ಬರು ಮನೆ ಕುಸಿದು ಸಾವನ್ನಪ್ಪಿರುವುದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಂಕಿ–ಅಂಶಗಳಿಂದ ತಿಳಿದುಬರುತ್ತದೆ.</p>.<p>ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಹಾನಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.</p>.<p>ಮಳೆ ಸಂಬಂಧಿ ಅವಘಡಗಳಿಂದ ಮೃತಪಟ್ಟವರಿಗೆ ನೈಸರ್ಗಿಕ ವಿಕೋಪ ಪರಿಹಾರ ನಿಧಿಯಿಂದ ತಲಾ ₹4 ಲಕ್ಷ ಹಾಗೂ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ₹1 ಲಕ್ಷ ನೀಡಲಾಗಿದೆ.</p>.<p>ಮಳೆ ಬರುವ ಸಂದರ್ಭದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಜಾಗೃತಿ ಮೂಡಿಸಲಾಗುತ್ತಿದೆ. </p><p><strong>–ಉಮೇಶ ಬಿರಾದಾರ ವಿಪತ್ತು ನಿರ್ವಹಣಾ ಪರಿಣಿತ</strong></p>.<p><strong>ಸಿಡಿಲಿನಿಂದ ರಕ್ಷಿಸಿಕೊಳ್ಳುವುದು ಹೇಗೆ?</strong></p><p> 1. ‘ಸಿಡಿಲು’ ಮೊಬೈಲ್ ಆ್ಯಪ್ನಲ್ಲಿ ಮುನ್ಸೂಚನೆ ತಿಳಿಯಿರಿ</p><p>2. ಮನೆಯ ಸುತ್ತಲಿನ ಕೊಳೆತ ಹಾಗೂ ಒಣಗಿದ ಮರಗಳನ್ನು ತೆರವು ಮಾಡಿ </p><p>3. ಮರ ಹಾಗೂ ವಿದ್ಯುತ್ ಕಂಬಗಳ ಕೆಳಗೆ ನಿಲ್ಲದಿರಿ </p><p>4. ವಿದ್ಯುತ್ ಉಪಕರಣ ಮುಟ್ಟದಿರಿ </p><p>5. ಪ್ರಾಣಿಗಳ ಮಧ್ಯೆ ಇದ್ದರೆ ಅಲ್ಲಿಯೇ ಬಾಗಿ ಕುಳಿತುಕೊಳ್ಳಿ </p><p>6. ಎತ್ತರದ ಪ್ರದೇಶದಲ್ಲಿದ್ದರೆ ತಗ್ಗು ಪ್ರದೇಶಕ್ಕೆ ಬನ್ನಿ </p><p>7. ಕಾಡಿನಲ್ಲಿದ್ದರೆ ಸಣ್ಣ ಮರದ ಕೆಳಗೆ ಆಶ್ರಯ ಪಡೆಯಿರಿ </p><p>8. ಮಳೆ ಬರುವ ಸಂದರ್ಭದಲ್ಲಿ ಈಜಾಡಬೇಡಿ</p>.<p><strong>ತುರ್ತು ಸಹಾಯವಾಣಿ</strong> </p><p>ಜಿಲ್ಲಾ ವಿಪತ್ತು ತುರ್ತು ನಿರ್ವಾಹಣಾ ಕೇಂದ್ರದ ಸಹಾಯವಾಣಿ–1077 ಕಲಬುರಗಿ-9980683702 ಚಿಂಚೋಳಿ–08475-200127 ಕಾಳಗಿ-9449266885 ಕಮಲಾಪುರ-9986324648 ಜೇವರ್ಗಿ-7019270898 ಯಡ್ರಾಮಿ-9743682346 ಶಹಾಬಾದ್-8152093789 ಸೇಡಂ-08441-276184 ಆಳಂದ-9845858252 ಅಫಜಲಪುರ–08470-282020 ಚಿತ್ತಾಪುರ–08474-236250. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>