<p><strong>ವಾಡಿ</strong>: ಪಟ್ಟಣ ಸೇರಿದಂತೆ ಸುತ್ತಲಿನ ಹಲವು ಗ್ರಾಮಗಳಲ್ಲಿ ಶುಕ್ರವಾರ ಹಾಗೂ ಶನಿವಾರ ಸುರಿದ ಜಿಟಿಜಿಟಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು.</p>.<p>ಶನಿವಾರ ಬೆಳಿಗ್ಗೆಯಿಂದ ನಿರಂತರವಾಗಿ ಸುರಿದ ಮಳೆಯು ಜನರು ಹೊರಗೆ ಬಾರದಂತೆ ಮಾಡಿತು. ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಪರದಾಡಿದರು. ಪಟ್ಟಣದ ಬಿಯ್ಯಾಬಾನಿ ಏರಿಯಾ, ಬಸವನಕಣಿ, ಅಂಬೇಡ್ಕರ್ ನಗರ, ರೆಸ್ಟ್ ಕ್ಯಾಂಪ್ ಬಡಾವಣೆ, ಹನುಮಾನ ನಗರ, ವಿಜಯನಗರ ಸಹಿತ ಹಲವೆಡೆ ಕೊಳಚೆ ನೀರು ಹರಿದಾಡಿದ ಪರಿಣಾಮ ಜನರು ಕಿರಿಕಿರಿ ಅನುಭವಿಸಿದರು.</p>.<p>ಲಾಡ್ಲಾಪುರ, ನಾಲವಾರ, ಹಣ್ಣಿಕೇರಾ, ತರಕಸ್ ಪೇಟ್, ಹಲಕರ್ಟಿ, ಕೊಲ್ಲೂರು, ಸನ್ನತಿ ಹಾಗೂ ಹಲವೆಡೆ ಮಳೆ ಸುರಿದಿದ್ದರಿಂದ ಕೊಳಚೆ ನೀರು ರಸ್ತೆ ಮೇಲೆ ಹರಿದಾಡಿ ಹದಗೆಟ್ಟ ಚರಂಡಿ ವ್ಯವಸ್ಥೆಗೆ ಕನ್ನಡಿ ಹಿಡಿದಿತ್ತು. ಶಾಲಾ ವಿದ್ಯಾರ್ಥಿಗಳು ಮನೆಗೆ ತೆರಳಲು ಪರದಾಡಿದರು.</p>.<p>ಕಳೆದ 3 ವರ್ಷದ ಹಿಂದೆ ನಿರ್ಮಿಸಿದ್ದ ಲಾಡ್ಲಾಪುರ ಆಲಹಳ್ಳಿ ಪ್ರಮುಖ ರಸ್ತೆಯ ಮೇಲಿನ ತಗ್ಗುಗಳು ಕೊಳಚೆ ನೀರಿನಿಂದ ತುಂಬಿ ಜನರು ಬಿದ್ದು ಗಾಯ ಮಾಡಿಕೊಂಡ ಘಟನೆಗಳು ಜರುಗಿದವು. ಹಂಪಮ್ಮ ಹಿರೇಮಠ, ತುಳಜರಾಮ್ ಮಳದಕರ ಹಾಗೂ ಬಸವರಾಜ ಹಣ್ಣಿಕೇರಾ ಬಿದ್ದು ನರಳಾಡಿದ ಘಟನೆ ಸಹ ಜರುಗಿದವು. ಶುಕ್ರವಾರ ಜರುಗುವ ವಾರದ ಸಂತೆ ಹೊಂಡದ ರಸ್ತೆ ಮೇಲೆ ನಡೆದು ಸಾರ್ವಜನಿಕರು ಹಾಗೂ ವರ್ತಕರು ಹಿಂಸೆ ಅನುಭವಿಸಿದರು. ಮಳೆಯಿಂದ ವಿದ್ಯುತ್ ಪೂರೈಕೆಯಲ್ಲಿ ಸಹ ವ್ಯತ್ಯಯ ಉಂಟಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಡಿ</strong>: ಪಟ್ಟಣ ಸೇರಿದಂತೆ ಸುತ್ತಲಿನ ಹಲವು ಗ್ರಾಮಗಳಲ್ಲಿ ಶುಕ್ರವಾರ ಹಾಗೂ ಶನಿವಾರ ಸುರಿದ ಜಿಟಿಜಿಟಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು.</p>.<p>ಶನಿವಾರ ಬೆಳಿಗ್ಗೆಯಿಂದ ನಿರಂತರವಾಗಿ ಸುರಿದ ಮಳೆಯು ಜನರು ಹೊರಗೆ ಬಾರದಂತೆ ಮಾಡಿತು. ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಪರದಾಡಿದರು. ಪಟ್ಟಣದ ಬಿಯ್ಯಾಬಾನಿ ಏರಿಯಾ, ಬಸವನಕಣಿ, ಅಂಬೇಡ್ಕರ್ ನಗರ, ರೆಸ್ಟ್ ಕ್ಯಾಂಪ್ ಬಡಾವಣೆ, ಹನುಮಾನ ನಗರ, ವಿಜಯನಗರ ಸಹಿತ ಹಲವೆಡೆ ಕೊಳಚೆ ನೀರು ಹರಿದಾಡಿದ ಪರಿಣಾಮ ಜನರು ಕಿರಿಕಿರಿ ಅನುಭವಿಸಿದರು.</p>.<p>ಲಾಡ್ಲಾಪುರ, ನಾಲವಾರ, ಹಣ್ಣಿಕೇರಾ, ತರಕಸ್ ಪೇಟ್, ಹಲಕರ್ಟಿ, ಕೊಲ್ಲೂರು, ಸನ್ನತಿ ಹಾಗೂ ಹಲವೆಡೆ ಮಳೆ ಸುರಿದಿದ್ದರಿಂದ ಕೊಳಚೆ ನೀರು ರಸ್ತೆ ಮೇಲೆ ಹರಿದಾಡಿ ಹದಗೆಟ್ಟ ಚರಂಡಿ ವ್ಯವಸ್ಥೆಗೆ ಕನ್ನಡಿ ಹಿಡಿದಿತ್ತು. ಶಾಲಾ ವಿದ್ಯಾರ್ಥಿಗಳು ಮನೆಗೆ ತೆರಳಲು ಪರದಾಡಿದರು.</p>.<p>ಕಳೆದ 3 ವರ್ಷದ ಹಿಂದೆ ನಿರ್ಮಿಸಿದ್ದ ಲಾಡ್ಲಾಪುರ ಆಲಹಳ್ಳಿ ಪ್ರಮುಖ ರಸ್ತೆಯ ಮೇಲಿನ ತಗ್ಗುಗಳು ಕೊಳಚೆ ನೀರಿನಿಂದ ತುಂಬಿ ಜನರು ಬಿದ್ದು ಗಾಯ ಮಾಡಿಕೊಂಡ ಘಟನೆಗಳು ಜರುಗಿದವು. ಹಂಪಮ್ಮ ಹಿರೇಮಠ, ತುಳಜರಾಮ್ ಮಳದಕರ ಹಾಗೂ ಬಸವರಾಜ ಹಣ್ಣಿಕೇರಾ ಬಿದ್ದು ನರಳಾಡಿದ ಘಟನೆ ಸಹ ಜರುಗಿದವು. ಶುಕ್ರವಾರ ಜರುಗುವ ವಾರದ ಸಂತೆ ಹೊಂಡದ ರಸ್ತೆ ಮೇಲೆ ನಡೆದು ಸಾರ್ವಜನಿಕರು ಹಾಗೂ ವರ್ತಕರು ಹಿಂಸೆ ಅನುಭವಿಸಿದರು. ಮಳೆಯಿಂದ ವಿದ್ಯುತ್ ಪೂರೈಕೆಯಲ್ಲಿ ಸಹ ವ್ಯತ್ಯಯ ಉಂಟಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>