<p><strong>ಕಾಳಗಿ:</strong> ತಾಲ್ಲೂಕಿನ ವಿವಿಧೆಡೆ ಶನಿವಾರ ಸಂಜೆ ಗುಡುಗು ಸಹಿತ ಮಳೆ ಆಗಿದೆ. ಸಿಡಿಲು ಬಡಿದು ಭರತನೂರ–ರಾಜಾಪುರ ನಡುವೆ ಸೀಮೆಯಲ್ಲಿ 21 ಮೇಕೆಗಳು ಸ್ಥಳದಲ್ಲೇ ಮೃತಪಟ್ಟು 4 ಗಾಯಗೊಂಡಿವೆ.</p>.<p>ರಾಜಾಪುರ ಗ್ರಾಮದ ಮೂವರು ಕುರಿಗಾಹಿ ಹುಡುಗರು ಮೇಕೆ ಮೇಯಿಸಲು ಹೊಲಗಳಿಗೆ ಹೋಗಿದ್ದಾಗ ಸಂಜೆ 5ರ ಸುಮಾರಿಗೆ ಗುಡುಗು ಸಹಿತ ಮಳೆ ಬರಲಾರಂಭಿಸಿದೆ. ಈ ವೇಳೆ ಮೇಕೆಗಳು ಗಿಡದ ಆಸರೆಯಲ್ಲಿ ನಿಂತು, ಹುಡುಗರು ಬೇರೆಕಡೆ ಇದ್ದಾಗ ಈ ಘಟನೆ ಸಂಭವಿಸಿದೆ.</p>.<p>ಮೃತ ಮೇಕೆಗಳಲ್ಲಿ ಶಿವಶಂಕ್ರಪ್ಪ ಅವರಿಗೆ ಸೇರಿದ 13, ಕಾಂತಪ್ಪ ಅವರ 5, ಅರವಿಂದ ಅವರ 1 ಮತ್ತು ಮರೆಮ್ಮ ಎಂಬುವವರ 2 ಮೇಕೆ ಸೇರಿವೆ ಎನ್ನಲಾಗಿದೆ. ಕಾಳಗಿ ಪಿಎಸ್ಐ ವಿಶ್ವನಾಥ ಬಾಕಳೆ, ಗ್ರಾಮ ಆಡಳಿತಾಧಿಕಾರಿ ರವಿಕಿರಣ, ಪಶು ವೈದ್ಯ ಡಾ.ಗೌತಮ ಕಾಂಬಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.</p>.<p>ಮಾಡಬೂಳ, ಕೋರವಾರ, ಶ್ರೀಕ್ಷೇತ್ರ ರೇವಗ್ಗಿ ಗುಡ್ಡ, ಮಂಗಲಗಿ, ಕೊಡದೂರ, ಗೋಟೂರ ಇತರೆಡೆ ಗುಡುಗು–ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಕಾಳಗಿ, ಕೋಡ್ಲಿ ಪ್ರದೇಶದಲ್ಲಿ ಗುಡುಗು–ಮಿಂಚಿನ ಮಧ್ಯೆ ಸಾಧರಣ ಮಳೆ ರಾತ್ರಿಯೂ ಮುಂದುವರೆದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ:</strong> ತಾಲ್ಲೂಕಿನ ವಿವಿಧೆಡೆ ಶನಿವಾರ ಸಂಜೆ ಗುಡುಗು ಸಹಿತ ಮಳೆ ಆಗಿದೆ. ಸಿಡಿಲು ಬಡಿದು ಭರತನೂರ–ರಾಜಾಪುರ ನಡುವೆ ಸೀಮೆಯಲ್ಲಿ 21 ಮೇಕೆಗಳು ಸ್ಥಳದಲ್ಲೇ ಮೃತಪಟ್ಟು 4 ಗಾಯಗೊಂಡಿವೆ.</p>.<p>ರಾಜಾಪುರ ಗ್ರಾಮದ ಮೂವರು ಕುರಿಗಾಹಿ ಹುಡುಗರು ಮೇಕೆ ಮೇಯಿಸಲು ಹೊಲಗಳಿಗೆ ಹೋಗಿದ್ದಾಗ ಸಂಜೆ 5ರ ಸುಮಾರಿಗೆ ಗುಡುಗು ಸಹಿತ ಮಳೆ ಬರಲಾರಂಭಿಸಿದೆ. ಈ ವೇಳೆ ಮೇಕೆಗಳು ಗಿಡದ ಆಸರೆಯಲ್ಲಿ ನಿಂತು, ಹುಡುಗರು ಬೇರೆಕಡೆ ಇದ್ದಾಗ ಈ ಘಟನೆ ಸಂಭವಿಸಿದೆ.</p>.<p>ಮೃತ ಮೇಕೆಗಳಲ್ಲಿ ಶಿವಶಂಕ್ರಪ್ಪ ಅವರಿಗೆ ಸೇರಿದ 13, ಕಾಂತಪ್ಪ ಅವರ 5, ಅರವಿಂದ ಅವರ 1 ಮತ್ತು ಮರೆಮ್ಮ ಎಂಬುವವರ 2 ಮೇಕೆ ಸೇರಿವೆ ಎನ್ನಲಾಗಿದೆ. ಕಾಳಗಿ ಪಿಎಸ್ಐ ವಿಶ್ವನಾಥ ಬಾಕಳೆ, ಗ್ರಾಮ ಆಡಳಿತಾಧಿಕಾರಿ ರವಿಕಿರಣ, ಪಶು ವೈದ್ಯ ಡಾ.ಗೌತಮ ಕಾಂಬಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.</p>.<p>ಮಾಡಬೂಳ, ಕೋರವಾರ, ಶ್ರೀಕ್ಷೇತ್ರ ರೇವಗ್ಗಿ ಗುಡ್ಡ, ಮಂಗಲಗಿ, ಕೊಡದೂರ, ಗೋಟೂರ ಇತರೆಡೆ ಗುಡುಗು–ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಕಾಳಗಿ, ಕೋಡ್ಲಿ ಪ್ರದೇಶದಲ್ಲಿ ಗುಡುಗು–ಮಿಂಚಿನ ಮಧ್ಯೆ ಸಾಧರಣ ಮಳೆ ರಾತ್ರಿಯೂ ಮುಂದುವರೆದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>