<p><strong>ಕಲಬುರಗಿ:</strong> ‘ರಂಗಭೂಮಿ ಮತ್ತು ಸಾಂಸ್ಕೃತಿಕ ಕ್ಷೇತ್ರ ವಸೂಲಿ ಬಾಜಿಗಳ ಸಂತೆಯಾಗಿದೆ. ಅಧಿಕಾರಕ್ಕೆ ಬಂದ ಆಯಾ ರಾಜಕೀಯ ಪಕ್ಷಗಳ ವಕ್ತಾರರಿಗೆ ಪ್ರಶಸ್ತಿ, ಸ್ಥಾನಮಾನ ಸಿಗುತ್ತಿದೆ. ಇದರಿಂದ ಅರ್ಹರು ವಂಚಿತರಾಗುತ್ತಿದ್ದಾರೆ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.</p>.<p>ನಗರದಲ್ಲಿ ಗುರುವಾರ ರಂಗಸಂಗಮ ಕಲಾ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದರಿಗೆ ಜಂಗಮಶೆಟ್ಟಿ ರಂಗ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.</p>.<p>‘ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದಾಗ ಅವರ ಹಿಂಬಾಲಕರಿಗೆ ಪ್ರಶಸ್ತಿ ಸಿಗುವುದು ಸಹಜ ಎನ್ನುವ ರೀತಿಯಲ್ಲಿ ನಡೆದುಕೊಂಡು ಬರುತ್ತಿದೆ. ಅರ್ಹರಿಗೆ ಪ್ರಶಸ್ತಿಗಳು ಸಿಗುತ್ತಿಲ್ಲ’ ಎಂದ ಅವರು, ರಂಗಸಂಗಮದಂತಹ ಕಲಾ ವೇದಿಕೆಗಳು ಅರ್ಹರನ್ನು ಹುಡುಕಿ ಅವರಿಗೆ ಗೌರವ, ಸತ್ಕಾರ ಮಾಡುತ್ತಿರುವುದು ಹೆಮ್ಮೆಯ ವಿಷಯ’ ಎಂದರು.</p>.<p>‘ರಾಜಕೀಯದ ಥೀಮ್ ಇರಿಸಿಕೊಂಡು ಸಿನಿಮಾ, ನಾಟಕಗಳ ಮೂಲಕ ಏನೆಲ್ಲ ತೋರಿಸಬಹುದಿತ್ತೋ ಅದೆಲ್ಲವನ್ನೂ ರಾಜಕಾರಣಿಗಳೇ ನೈಜವಾಗಿ ತೋರಿಸುತ್ತಿದ್ದಾರೆ. ನಟರಿಗಿಂತ ತಾವೇನು ಕಡಿಮೆ ಇಲ್ಲದಂತೆ ನಟಿಸುತ್ತಿದ್ದಾರೆ. ಭ್ರಷ್ಟಾಚಾರ, ಅನಾಚಾರ, ಅತ್ಯಾಚಾರ, ದೌರ್ಜನ್ಯದಲ್ಲಿ ತೊಡಗಿದ್ದಾರೆ. ಒಂದೇ ವಿಚಾರಕ್ಕೆ ಒಂದೇ ಕುಟುಂಬದ ಮೂವರು ಜೈಲಿಗೆ ಹೋಗುತ್ತಾರೆ ಎಂದರೆ ಇದಕ್ಕಿಂತ ಒಳ್ಳೆಯ ಕಥೆ ಎಲ್ಲಿ ಸಿಗುತ್ತದೆ’ ಎಂದು ವ್ಯಂಗ್ಯವಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ‘ರಂಗಭೂಮಿ ಮತ್ತು ಸಾಂಸ್ಕೃತಿಕ ಕ್ಷೇತ್ರ ವಸೂಲಿ ಬಾಜಿಗಳ ಸಂತೆಯಾಗಿದೆ. ಅಧಿಕಾರಕ್ಕೆ ಬಂದ ಆಯಾ ರಾಜಕೀಯ ಪಕ್ಷಗಳ ವಕ್ತಾರರಿಗೆ ಪ್ರಶಸ್ತಿ, ಸ್ಥಾನಮಾನ ಸಿಗುತ್ತಿದೆ. ಇದರಿಂದ ಅರ್ಹರು ವಂಚಿತರಾಗುತ್ತಿದ್ದಾರೆ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.</p>.<p>ನಗರದಲ್ಲಿ ಗುರುವಾರ ರಂಗಸಂಗಮ ಕಲಾ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದರಿಗೆ ಜಂಗಮಶೆಟ್ಟಿ ರಂಗ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.</p>.<p>‘ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದಾಗ ಅವರ ಹಿಂಬಾಲಕರಿಗೆ ಪ್ರಶಸ್ತಿ ಸಿಗುವುದು ಸಹಜ ಎನ್ನುವ ರೀತಿಯಲ್ಲಿ ನಡೆದುಕೊಂಡು ಬರುತ್ತಿದೆ. ಅರ್ಹರಿಗೆ ಪ್ರಶಸ್ತಿಗಳು ಸಿಗುತ್ತಿಲ್ಲ’ ಎಂದ ಅವರು, ರಂಗಸಂಗಮದಂತಹ ಕಲಾ ವೇದಿಕೆಗಳು ಅರ್ಹರನ್ನು ಹುಡುಕಿ ಅವರಿಗೆ ಗೌರವ, ಸತ್ಕಾರ ಮಾಡುತ್ತಿರುವುದು ಹೆಮ್ಮೆಯ ವಿಷಯ’ ಎಂದರು.</p>.<p>‘ರಾಜಕೀಯದ ಥೀಮ್ ಇರಿಸಿಕೊಂಡು ಸಿನಿಮಾ, ನಾಟಕಗಳ ಮೂಲಕ ಏನೆಲ್ಲ ತೋರಿಸಬಹುದಿತ್ತೋ ಅದೆಲ್ಲವನ್ನೂ ರಾಜಕಾರಣಿಗಳೇ ನೈಜವಾಗಿ ತೋರಿಸುತ್ತಿದ್ದಾರೆ. ನಟರಿಗಿಂತ ತಾವೇನು ಕಡಿಮೆ ಇಲ್ಲದಂತೆ ನಟಿಸುತ್ತಿದ್ದಾರೆ. ಭ್ರಷ್ಟಾಚಾರ, ಅನಾಚಾರ, ಅತ್ಯಾಚಾರ, ದೌರ್ಜನ್ಯದಲ್ಲಿ ತೊಡಗಿದ್ದಾರೆ. ಒಂದೇ ವಿಚಾರಕ್ಕೆ ಒಂದೇ ಕುಟುಂಬದ ಮೂವರು ಜೈಲಿಗೆ ಹೋಗುತ್ತಾರೆ ಎಂದರೆ ಇದಕ್ಕಿಂತ ಒಳ್ಳೆಯ ಕಥೆ ಎಲ್ಲಿ ಸಿಗುತ್ತದೆ’ ಎಂದು ವ್ಯಂಗ್ಯವಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>