<p><strong>ಕಲಬುರಗಿ:</strong> ‘ಪ್ರತಿಯೊಬ್ಬ ಮನುಷ್ಯನಿಗೂ ಸಾಧನೆಯ ಹಿಂದೆ ಗುರುವಿನ ಮಾರ್ಗದರ್ಶನದ ಅಗತ್ಯ ಇದ್ದೇ ಇರುತ್ತದೆ’ ಎಂದು ಉತ್ತರಾದಿಮಠದ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹೇಳಿದರು.</p>.<p>ನಗರದ ಬ್ರಹ್ಮಪುರದ ಉತ್ತರಾದಿಮಠದ ವಿಠ್ಠಲ ರುಕ್ಮಿಣಿ ಮಂದಿರದಲ್ಲಿ ಭಾನುವಾರ ವಿಶ್ವ ಮಧ್ವ ಮಹಾ ಪರಿಷತ್ ಜಿಲ್ಲಾ ಘಟಕ ಆಯೋಜಿಸಿದ್ದ ಗುರುವಂದನ ಸಮಾರಂಭದ ಗುರುವಂದನೆ ಆಶೀರ್ವಚನದಲ್ಲಿ ಅವರು ಮಾತನಾಡಿದರು.</p>.<p>‘ಎಲ್ಲರನ್ನೂ ರಕ್ಷಿಸುವ ಭಗವಂತನೇ ಎಲ್ಲರಿಗೂ ಗುರುವಾಗಿದ್ದಾನೆ ಎಂಬ ಸತ್ಯವನ್ನು ಅರಿಯಬೇಕು. ಲೌಖಿಕ ಜೀವನದಲ್ಲಿ ಸಾಧನೆ ಮಾಡಬೇಕಾದರೂ ಗುರುವಿನ ಸೂಕ್ತ ಮಾರ್ಗದರ್ಶನ ಬೇಕು’ ಎಂದರು.</p>.<p>‘ಭಾರತದಲ್ಲಿ ಅನೇಕರು ಸಾಧನೆಯ ಶಿಖರ ಹತ್ತಿ ಮೋಕ್ಷ ಸಾಧನೆ ಮಾಡಿಕೊಂಡಿದ್ದಾರೆ. ಅವರ ಸಾಧನೆಯ ಹಿಂದೆಯೂ ಗುರುಕಾರುಣ್ಯದ ಪ್ರತಿಫಲವಿದೆ. ಗುರು ಎಂದರೆ ಬೆಳಕು, ಗುರುವೆಂದರೆ ಬದುಕು, ಗುರುವೆಂದರೆ ಜೀವನ ರೂಪಿಸುವ ಶಕ್ತಿ. ಸಕಲರನ್ನು ಉದ್ಧರಿಸುವ ಭಗವಂತನೆ ಜಗತ್ತಿಗೆ ನಿಜವಾದ ಗುರುವಾಗಿದ್ದಾನೆ’ ಎಂದು ಹೇಳಿದರು.</p>.<p>‘ನಮ್ಮ ಪೀಠದ ಶ್ರೇಷ್ಠ ಯತಿಗಳಾದ ಜಯತೀರ್ಥರ ಮೂಲಸನ್ನಿಧಾನದ ಸಮೀಪದಲ್ಲಿ ಗುರುಪೂರ್ಣಿಮೆ ಆಚರಿಸಿಕೊಳ್ಳುತ್ತಿರುವುದು ನನ್ನ ಭಾಗ್ಯ. ಜಯತೀರ್ಥರು ತತ್ವಪ್ರಪಂಚಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅಂತಹ ಗುರುಗಳ ಸ್ಮರಣೆ ಮಾತ್ರದಿಂದ ಪಾಪದಿಂದ ಮುಕ್ತಿಹೊಂದಿ ಮೋಕ್ಷ ಸಾಧನೆ ಸಾಧಿಸಬಹುದು. ಅಂತಹ ಗುರುಗಳ ಸೇವೆ ಮಾಡಿ ನಾವೆಲ್ಲರೂ ಪಾವನರಾಗೋಣ’ ಎಂದರು.</p>.<p>ಮಠಾಧಿಕಾರಿ ರಾಮಾಚಾರ್ಯ ಘಂಟಿ, ಮಠದ ವ್ಯವಸ್ಥಾಪಕ ವಿನೋದಾಚಾರ್ಯ ಗಲಗಲಿ, ಗೋಪಾಲಾಚಾರ್ಯ ಅಕಮಂಚಿ, ಭೀಮಸೇನಾಚಾರ್ಯ, ವಿಶ್ವಮಧ್ವ ಮಹಾಪರಿಷತ್ ಜಿಲ್ಲಾಧ್ಯಕ್ಷ ಡಿ.ಕೆ.ಕುಲಕರ್ಣಿ, ವಿದ್ವಾಂಸರು, ಭಕ್ತರು ಪಾಲ್ಗೊಂಡಿದ್ದರು. </p>.<p>151 ಜನರು ₹ 3.06 ಲಕ್ಷ ಸಂಗ್ರಹಿಸಿ ಗುರುಗಳಿಗೆ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ‘ಪ್ರತಿಯೊಬ್ಬ ಮನುಷ್ಯನಿಗೂ ಸಾಧನೆಯ ಹಿಂದೆ ಗುರುವಿನ ಮಾರ್ಗದರ್ಶನದ ಅಗತ್ಯ ಇದ್ದೇ ಇರುತ್ತದೆ’ ಎಂದು ಉತ್ತರಾದಿಮಠದ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹೇಳಿದರು.</p>.<p>ನಗರದ ಬ್ರಹ್ಮಪುರದ ಉತ್ತರಾದಿಮಠದ ವಿಠ್ಠಲ ರುಕ್ಮಿಣಿ ಮಂದಿರದಲ್ಲಿ ಭಾನುವಾರ ವಿಶ್ವ ಮಧ್ವ ಮಹಾ ಪರಿಷತ್ ಜಿಲ್ಲಾ ಘಟಕ ಆಯೋಜಿಸಿದ್ದ ಗುರುವಂದನ ಸಮಾರಂಭದ ಗುರುವಂದನೆ ಆಶೀರ್ವಚನದಲ್ಲಿ ಅವರು ಮಾತನಾಡಿದರು.</p>.<p>‘ಎಲ್ಲರನ್ನೂ ರಕ್ಷಿಸುವ ಭಗವಂತನೇ ಎಲ್ಲರಿಗೂ ಗುರುವಾಗಿದ್ದಾನೆ ಎಂಬ ಸತ್ಯವನ್ನು ಅರಿಯಬೇಕು. ಲೌಖಿಕ ಜೀವನದಲ್ಲಿ ಸಾಧನೆ ಮಾಡಬೇಕಾದರೂ ಗುರುವಿನ ಸೂಕ್ತ ಮಾರ್ಗದರ್ಶನ ಬೇಕು’ ಎಂದರು.</p>.<p>‘ಭಾರತದಲ್ಲಿ ಅನೇಕರು ಸಾಧನೆಯ ಶಿಖರ ಹತ್ತಿ ಮೋಕ್ಷ ಸಾಧನೆ ಮಾಡಿಕೊಂಡಿದ್ದಾರೆ. ಅವರ ಸಾಧನೆಯ ಹಿಂದೆಯೂ ಗುರುಕಾರುಣ್ಯದ ಪ್ರತಿಫಲವಿದೆ. ಗುರು ಎಂದರೆ ಬೆಳಕು, ಗುರುವೆಂದರೆ ಬದುಕು, ಗುರುವೆಂದರೆ ಜೀವನ ರೂಪಿಸುವ ಶಕ್ತಿ. ಸಕಲರನ್ನು ಉದ್ಧರಿಸುವ ಭಗವಂತನೆ ಜಗತ್ತಿಗೆ ನಿಜವಾದ ಗುರುವಾಗಿದ್ದಾನೆ’ ಎಂದು ಹೇಳಿದರು.</p>.<p>‘ನಮ್ಮ ಪೀಠದ ಶ್ರೇಷ್ಠ ಯತಿಗಳಾದ ಜಯತೀರ್ಥರ ಮೂಲಸನ್ನಿಧಾನದ ಸಮೀಪದಲ್ಲಿ ಗುರುಪೂರ್ಣಿಮೆ ಆಚರಿಸಿಕೊಳ್ಳುತ್ತಿರುವುದು ನನ್ನ ಭಾಗ್ಯ. ಜಯತೀರ್ಥರು ತತ್ವಪ್ರಪಂಚಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅಂತಹ ಗುರುಗಳ ಸ್ಮರಣೆ ಮಾತ್ರದಿಂದ ಪಾಪದಿಂದ ಮುಕ್ತಿಹೊಂದಿ ಮೋಕ್ಷ ಸಾಧನೆ ಸಾಧಿಸಬಹುದು. ಅಂತಹ ಗುರುಗಳ ಸೇವೆ ಮಾಡಿ ನಾವೆಲ್ಲರೂ ಪಾವನರಾಗೋಣ’ ಎಂದರು.</p>.<p>ಮಠಾಧಿಕಾರಿ ರಾಮಾಚಾರ್ಯ ಘಂಟಿ, ಮಠದ ವ್ಯವಸ್ಥಾಪಕ ವಿನೋದಾಚಾರ್ಯ ಗಲಗಲಿ, ಗೋಪಾಲಾಚಾರ್ಯ ಅಕಮಂಚಿ, ಭೀಮಸೇನಾಚಾರ್ಯ, ವಿಶ್ವಮಧ್ವ ಮಹಾಪರಿಷತ್ ಜಿಲ್ಲಾಧ್ಯಕ್ಷ ಡಿ.ಕೆ.ಕುಲಕರ್ಣಿ, ವಿದ್ವಾಂಸರು, ಭಕ್ತರು ಪಾಲ್ಗೊಂಡಿದ್ದರು. </p>.<p>151 ಜನರು ₹ 3.06 ಲಕ್ಷ ಸಂಗ್ರಹಿಸಿ ಗುರುಗಳಿಗೆ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>