<p>ಸೇಡಂ: ತಾಲ್ಲೂಕಿನ ಮಳಖೇಡ ಗ್ರಾಮದ ಕಾಗಿಣಾ ತೀರದಲ್ಲಿರುವ ಉತ್ತರಾಧಿ ಮಠದಲ್ಲಿ ಗುರುವಾರ ಜಯತೀರ್ಥರ ಮಧ್ಯಾರಾಧನೆ ವಿಜೃಂಭಣೆಯಿಂದ ಜರುಗಿತು.</p>.<p>ಬೆಳಿಗ್ಗೆ ಅರುಣೋದಯ ಕಾಲದಲ್ಲಿ ಜಯತೀರ್ಥರ ಶ್ರೀಮನ್ಯಾಯಸುಧಾ ಗ್ರಂಥದ ಪಾಠ ಪ್ರವಚನದೊಂದಿಗೆ ಆರಂಭಗೊಂಡ ಧಾರ್ಮಿಕ ವಿಧಾನಗಳು, ಜಯತೀರ್ಥರ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ, ಶ್ರೀಮೂಲ ಸೀತಾ ಸಮೇತ ಶ್ರೀಮೂಲ ರಾಮ ದೇವರ ಪೂಜೆ ನೈವೇದ್ಯಾದಿಗಳು ಜರುಗಿದವು.</p>.<p>ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ವಿಶೇಷ ಪೂಜೆ ನಡೆಸಿದರು. ಜಯತೀರ್ಥರ ಆರಾಧನಾ ಮಹೋತ್ಸವ ನಿಮಿತ್ತ ಜೋಡು ರಥೋತ್ಸವ ಜರುಗಿತು. ಭಕ್ತರು ಮಳೆಯಲ್ಲಿಯೂ ರಥೋಥ್ಸವದಲ್ಲಿ ಪಾಲ್ಗೊಂಡಿದ್ದರು. ಭಕ್ತರಿಗೆ ಮುದ್ರಾ ಧಾರಣೆ ನಡೆಯಿತು. ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಮಂತ್ರಾಕ್ಷತೆ ನೀಡಿದರು. </p>.<p>ಅನೇಕ ರಾಜ್ಯಗಳಿಂದ ಆಗಮಿಸಿದ್ದ ಪಂಡಿತರಿಂದ ಉಪನ್ಯಾಸಗಳು ಜರುಗಿದವು. ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. </p>.<p>ಸಂಜೆ ಪಂಡಿತರ ಪ್ರವಚನಗಳು ಮತ್ತು ಶ್ರೀ ಸತ್ಯಾತ್ಮತೀರ್ಥರ ಅನುಗ್ರಹ ಸಂದೇಶಗಳಲ್ಲಿ ಜಯತೀರ್ಥರ ದಿವ್ಯ ವ್ಯಕ್ತಿತ್ವದ ಬಗ್ಗೆ ತಿಳಿಸಿದರು. ಬಳಿಕ ತೊಟ್ಟಿಲು ಪೂಜೆ ಮಹಾಮಂಗಳಾರತಿಯಿಂದ ಸಂಪನ್ನಗೊಂಡಿತು. </p>.<p>ಮಳಖೇಡ ಠಾಣೆಯ ಪೊಲೀಸರಿಂದ ಸೂಕ್ತ ಬಂದೋಬಸ್ತ ವ್ಯವಸ್ಥೆ ಕಲ್ಪಿಸಲಾಗಿತ್ತು.</p>.<p>ಪಂಡಿತ ವಿದ್ಯಾಧೀಶಾಚಾರ್ಯ, ಮಠದ ವ್ಯವಸ್ಥಾಪಕ ವೆಂಕಣ್ಣಾಚಾರ್ಯ ಪೂಜಾರ್, ದಿವಾನ್ ಶಶಿ ಆಚಾರ್ಯ ಹಾಗೂ ಮುಂಬೈ ಸತ್ಯಧ್ಯಾನ ವಿದ್ಯಾಪೀಠದ , ಬೆಂಗಳೂರಿನ ಶ್ರೀ ಜಯತೀರ್ಥ ವಿದ್ಯಾಪೀಠದ, ಮಣ್ಣೂರಿನ ಶ್ರೀ ವೇದೇಶತೀರ್ಥ ವಿದ್ಯಾಪೀಠದ ಪಂಡಿತರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. </p>.<p>ಜು 26 ರಂದು ಶುಕ್ರವಾರ ಉತ್ತರಾರಾಧನೆ ನಡೆಯುವ ಮೂಲಕ ಜಯತೀರ್ಥರ ಆರಾಧನಾ ಮಹೋತ್ಸವ ಮಂಗಲಗೊಳ್ಳಲಿದೆ.</p>.<p>ಜಯತೀರ್ಥರ ಚಲನಚಿತ್ರ ಟ್ರೇಲರ್ ಬಿಡುಡೆ: ಉತ್ತರಾಧಿ ಮಠದಲ್ಲಿ ಗುರುವಾರ ನಡೆದ ಮಧ್ಯಾರಾಧನೆ ಮಹೋತ್ಸವದಲ್ಲಿ ಜಯತೀರ್ಥರ ಜೀವನ ಚರಿತ್ರೆ ಬಗ್ಗೆ ರಚಿಸಲಾಗುತ್ತಿರುವ ಚಲನಚಿತ್ರದ ಟ್ರೇಲರ್ ಮತ್ತು ಹಾಡನ್ನು ಅನಾವರಣಗೊಳಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸೇಡಂ: ತಾಲ್ಲೂಕಿನ ಮಳಖೇಡ ಗ್ರಾಮದ ಕಾಗಿಣಾ ತೀರದಲ್ಲಿರುವ ಉತ್ತರಾಧಿ ಮಠದಲ್ಲಿ ಗುರುವಾರ ಜಯತೀರ್ಥರ ಮಧ್ಯಾರಾಧನೆ ವಿಜೃಂಭಣೆಯಿಂದ ಜರುಗಿತು.</p>.<p>ಬೆಳಿಗ್ಗೆ ಅರುಣೋದಯ ಕಾಲದಲ್ಲಿ ಜಯತೀರ್ಥರ ಶ್ರೀಮನ್ಯಾಯಸುಧಾ ಗ್ರಂಥದ ಪಾಠ ಪ್ರವಚನದೊಂದಿಗೆ ಆರಂಭಗೊಂಡ ಧಾರ್ಮಿಕ ವಿಧಾನಗಳು, ಜಯತೀರ್ಥರ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ, ಶ್ರೀಮೂಲ ಸೀತಾ ಸಮೇತ ಶ್ರೀಮೂಲ ರಾಮ ದೇವರ ಪೂಜೆ ನೈವೇದ್ಯಾದಿಗಳು ಜರುಗಿದವು.</p>.<p>ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ವಿಶೇಷ ಪೂಜೆ ನಡೆಸಿದರು. ಜಯತೀರ್ಥರ ಆರಾಧನಾ ಮಹೋತ್ಸವ ನಿಮಿತ್ತ ಜೋಡು ರಥೋತ್ಸವ ಜರುಗಿತು. ಭಕ್ತರು ಮಳೆಯಲ್ಲಿಯೂ ರಥೋಥ್ಸವದಲ್ಲಿ ಪಾಲ್ಗೊಂಡಿದ್ದರು. ಭಕ್ತರಿಗೆ ಮುದ್ರಾ ಧಾರಣೆ ನಡೆಯಿತು. ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಮಂತ್ರಾಕ್ಷತೆ ನೀಡಿದರು. </p>.<p>ಅನೇಕ ರಾಜ್ಯಗಳಿಂದ ಆಗಮಿಸಿದ್ದ ಪಂಡಿತರಿಂದ ಉಪನ್ಯಾಸಗಳು ಜರುಗಿದವು. ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. </p>.<p>ಸಂಜೆ ಪಂಡಿತರ ಪ್ರವಚನಗಳು ಮತ್ತು ಶ್ರೀ ಸತ್ಯಾತ್ಮತೀರ್ಥರ ಅನುಗ್ರಹ ಸಂದೇಶಗಳಲ್ಲಿ ಜಯತೀರ್ಥರ ದಿವ್ಯ ವ್ಯಕ್ತಿತ್ವದ ಬಗ್ಗೆ ತಿಳಿಸಿದರು. ಬಳಿಕ ತೊಟ್ಟಿಲು ಪೂಜೆ ಮಹಾಮಂಗಳಾರತಿಯಿಂದ ಸಂಪನ್ನಗೊಂಡಿತು. </p>.<p>ಮಳಖೇಡ ಠಾಣೆಯ ಪೊಲೀಸರಿಂದ ಸೂಕ್ತ ಬಂದೋಬಸ್ತ ವ್ಯವಸ್ಥೆ ಕಲ್ಪಿಸಲಾಗಿತ್ತು.</p>.<p>ಪಂಡಿತ ವಿದ್ಯಾಧೀಶಾಚಾರ್ಯ, ಮಠದ ವ್ಯವಸ್ಥಾಪಕ ವೆಂಕಣ್ಣಾಚಾರ್ಯ ಪೂಜಾರ್, ದಿವಾನ್ ಶಶಿ ಆಚಾರ್ಯ ಹಾಗೂ ಮುಂಬೈ ಸತ್ಯಧ್ಯಾನ ವಿದ್ಯಾಪೀಠದ , ಬೆಂಗಳೂರಿನ ಶ್ರೀ ಜಯತೀರ್ಥ ವಿದ್ಯಾಪೀಠದ, ಮಣ್ಣೂರಿನ ಶ್ರೀ ವೇದೇಶತೀರ್ಥ ವಿದ್ಯಾಪೀಠದ ಪಂಡಿತರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. </p>.<p>ಜು 26 ರಂದು ಶುಕ್ರವಾರ ಉತ್ತರಾರಾಧನೆ ನಡೆಯುವ ಮೂಲಕ ಜಯತೀರ್ಥರ ಆರಾಧನಾ ಮಹೋತ್ಸವ ಮಂಗಲಗೊಳ್ಳಲಿದೆ.</p>.<p>ಜಯತೀರ್ಥರ ಚಲನಚಿತ್ರ ಟ್ರೇಲರ್ ಬಿಡುಡೆ: ಉತ್ತರಾಧಿ ಮಠದಲ್ಲಿ ಗುರುವಾರ ನಡೆದ ಮಧ್ಯಾರಾಧನೆ ಮಹೋತ್ಸವದಲ್ಲಿ ಜಯತೀರ್ಥರ ಜೀವನ ಚರಿತ್ರೆ ಬಗ್ಗೆ ರಚಿಸಲಾಗುತ್ತಿರುವ ಚಲನಚಿತ್ರದ ಟ್ರೇಲರ್ ಮತ್ತು ಹಾಡನ್ನು ಅನಾವರಣಗೊಳಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>