<p><strong>ಕಲಬುರಗಿ</strong>: ಕಳೆದ ಎರಡು ವಾರಗಳಿಂದ ಸತತ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ತೊಗರಿ ಬೆಳೆಯಲ್ಲಿ ಅಲ್ಲಲ್ಲಿ ಹೆಚ್ಚಿನ ತೇವಾಂಶದಿಂದ ಫೈಟೊಪ್ಥೋರಾ ಕಜಾನಿ ಎಂಬ ಶಿಲೀಂದ್ರ ಬಾಧೆ ಕಂಡು ಬಂದಿದೆ.</p>.<p>ಮೋಡ ಕವಿದ ವಾತಾವರಣ ಮತ್ತು ಸತತ ಜಿಟಿ ಜಿಟಿ ಮಳೆಯಿಂದಾಗಿ ತೊಗರಿ ಗಿಡದ ಎಲೆಗಳು ಹಳದಿಯಾಗಿ ಒಣಗುತ್ತಿರುವ ಮಚ್ಚೆಗಳು ಕಂಡು ಬರುತ್ತಿವೆ. ಹಾಗಾಗಿ ರೈತರು ತೊಗರಿ ಬೆಳೆಗೆ ಯಾವುದೇ ತರಹದ ಬೇರು ಕೊಳೆ ಅಥವಾ ನೆಟೆ ರೋಗ ಬಾರದಂತೆ ಬೆಳೆಗೆ ಟ್ರೆಕೊಡರ್ಮ ಸಿಂಪಡಣೆ ಮಾಡಬೇಕು ಎಂದು ಕಲಬುರಗಿ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ (ಸಸ್ಯ ರೋಗಶಾಸ್ತ್ರ) ಮಲ್ಲಿಕಾರ್ಜುನ ಕೆಂಗನಾಳ್ ತಿಳಿಸಿದ್ದಾರೆ.</p>.<p>ರೋಗ ಹೆಚ್ಚಾದಂತೆ ಕ್ರಮೇಣ ಎಲೆಗಳು ಸಂಪೂರ್ಣ ಹಳದಿಯಾಗಿ ಗಿಡಗಳು ಬಾಡುತ್ತಿವೆ. ಗಿಡದ ಕಾಂಡಗಳು ನೆಲದ ಹತ್ತಿರ ಕೊಳೆತಂತೆ ಕಂಡುಬರುತ್ತಿವೆ. ಅಲ್ಲದೇ ಹೆಚ್ಚಿನ ಮಳೆಯ ನೀರು ಹರಿದು ಹೋಗದೆ ಹೊಲಗಳಲ್ಲಿ ನಿಲ್ಲುತ್ತಿರುವುದರಿಂದ ತೊಗರಿ ಗಿಡಗಳ ಬೇರುಗಳಿಗೆ ಸರಿಯಾಗಿ ಗಾಳಿ ಸಿಗದೆ ಕೊಳೆಯಲು ಪ್ರಾರಂಭಿಸಿ ನೆಟೆ ಹೋಗುತ್ತಿವೆ. ಈ ರೋಗದ ನಿರ್ವಹಣೆಗೆ ರೈತರು ಹೊಲಗಳಲ್ಲಿ ಮಳೆಯ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ರೋಗಕಾರಕ ಶಿಲೀಂದ್ರದ ಕೋಶಗಳು ಮಳೆಯ ನೀರಿನೊಂದಿಗೆ ಇತರೆ ಹೊಲಗಳಿಗೆ ಹರಡುವ ಸಾಧ್ಯತೆ ಇರುವುದರಿಂದ ಹೆಚ್ಚಾದ ಮಳೆಯ ನೀರು ಹರಿದು ಹೋಗಲು ಕಾಲುವೆ ಮತ್ತು ಹರಿವುಗಳನ್ನು ಮಾಡಿ ನೀರು ಇತರೆ ಹೊಲಗಳನ್ನು ಸೇರದೆ ನಾಲೆಗಳಿಗೆ ಸೇರುವಂತೆ ದಾರಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.</p>.<p>ವಾತಾವರಣದಲ್ಲಿ ಶೇ 85 ಕ್ಕಿಂತಲೂ ಹೆಚ್ಚಿನ ಆದ್ರತೆ ಇರುವುದರಿಂದ ತೊಗರಿ ಬೆಳೆಗೆ ರೈತರು ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಟ್ರೈಕೊಡರ್ಮ ಜೈವಿಕ ಶಿಲೀಂದ್ರ ನಾಶಕದಿಂದ ಬುಡ ಮತ್ತು ಬೇರು ತೋಯಿಸಬೇಕು. ಇದರಿಂದ ತೊಗರಿ ಗಿಡದ ಕುತ್ತಿಗೆ ಹಾಗೂ ಬೇರುಗಳು ಕೊಳೆಯದಂತೆ ತಡೆಗಟ್ಟಬಹುದು. ಪ್ರತಿ ಲೀಟರ್ ನೀರಿಗೆ 5 ಗ್ರಾಂ ಟ್ರೈಕೊಡರ್ಮ ಬೆರಸಿ ಗಿಡಗಳ ಕಾಂಡ ಮತ್ತು ಬೇರುಗಳು ತೊಯ್ಯುವ ಹಾಗೆ ಉಪಚಾರ ಮಾಡುವುದರಿಂದ ಫೈಟೋಫ್ಥೋರ ಕೊಳೆ ರೋಗದ ಬಾಧೆಯಿಂದ ರಕ್ಷಿಸಬಹುದು ಎಂದು ಹೇಳಿದ್ದಾರೆ.</p>.<p>ರೋಗ ತೀವ್ರತೆ ಹೆಚ್ಚಾಗಿ ಇರುವ ಹೊಲಗಳಲ್ಲಿ ಮೆಟಲ್ಯಾಕ್ಸಿಲ್ ಶಿಲೀಂದ್ರ ನಾಶಕವನ್ನು ಪ್ರತಿ ಲೀಟರ್ ನೀರಿಗೆ 3 ಗ್ರಾಂ ಬೆರಸಿ ಬೆಳೆಗೆ ಸಿಂಪರಣೆ ಮಾಡುವುದರಿಂದ ರೋಗ ಹರಡುವುದನ್ನು ತಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ವಲಯ ಕೃಷಿ ಸಂಶೋಧನಾ ಕೇಂದ್ರದ ಸಸ್ಯ ರೋಗ ಶಾಸ್ತ್ರ ವಿಭಾಗ ಅಥವಾ ಸಮೀಪದ ಕೃಷಿ ವಿಜ್ಞಾನ ಕೇಂದ್ರ ಮತ್ತು ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬೇಕು ಎಂದು ಅವರು ತಿಳಿಸಿದ್ದಾರೆ. </p>.<div><blockquote>ಕಲಬುರಗಿ ಬೀದರ್ ಯಾದಗಿರಿ ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಸುಮಾರು 14 ಲಕ್ಷ ಹೆಕ್ಟೇರ್ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ.</blockquote><span class="attribution">ಮಲ್ಲಿಕಾರ್ಜುನ ಕೆಂಗನಾಳ್, ಹಿರಿಯ ವಿಜ್ಞಾನಿ ಕಲಬುರಗಿ ಕೃಷಿ ಸಂಶೋಧನಾ ಕೇಂದ್ರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ಕಳೆದ ಎರಡು ವಾರಗಳಿಂದ ಸತತ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ತೊಗರಿ ಬೆಳೆಯಲ್ಲಿ ಅಲ್ಲಲ್ಲಿ ಹೆಚ್ಚಿನ ತೇವಾಂಶದಿಂದ ಫೈಟೊಪ್ಥೋರಾ ಕಜಾನಿ ಎಂಬ ಶಿಲೀಂದ್ರ ಬಾಧೆ ಕಂಡು ಬಂದಿದೆ.</p>.<p>ಮೋಡ ಕವಿದ ವಾತಾವರಣ ಮತ್ತು ಸತತ ಜಿಟಿ ಜಿಟಿ ಮಳೆಯಿಂದಾಗಿ ತೊಗರಿ ಗಿಡದ ಎಲೆಗಳು ಹಳದಿಯಾಗಿ ಒಣಗುತ್ತಿರುವ ಮಚ್ಚೆಗಳು ಕಂಡು ಬರುತ್ತಿವೆ. ಹಾಗಾಗಿ ರೈತರು ತೊಗರಿ ಬೆಳೆಗೆ ಯಾವುದೇ ತರಹದ ಬೇರು ಕೊಳೆ ಅಥವಾ ನೆಟೆ ರೋಗ ಬಾರದಂತೆ ಬೆಳೆಗೆ ಟ್ರೆಕೊಡರ್ಮ ಸಿಂಪಡಣೆ ಮಾಡಬೇಕು ಎಂದು ಕಲಬುರಗಿ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ (ಸಸ್ಯ ರೋಗಶಾಸ್ತ್ರ) ಮಲ್ಲಿಕಾರ್ಜುನ ಕೆಂಗನಾಳ್ ತಿಳಿಸಿದ್ದಾರೆ.</p>.<p>ರೋಗ ಹೆಚ್ಚಾದಂತೆ ಕ್ರಮೇಣ ಎಲೆಗಳು ಸಂಪೂರ್ಣ ಹಳದಿಯಾಗಿ ಗಿಡಗಳು ಬಾಡುತ್ತಿವೆ. ಗಿಡದ ಕಾಂಡಗಳು ನೆಲದ ಹತ್ತಿರ ಕೊಳೆತಂತೆ ಕಂಡುಬರುತ್ತಿವೆ. ಅಲ್ಲದೇ ಹೆಚ್ಚಿನ ಮಳೆಯ ನೀರು ಹರಿದು ಹೋಗದೆ ಹೊಲಗಳಲ್ಲಿ ನಿಲ್ಲುತ್ತಿರುವುದರಿಂದ ತೊಗರಿ ಗಿಡಗಳ ಬೇರುಗಳಿಗೆ ಸರಿಯಾಗಿ ಗಾಳಿ ಸಿಗದೆ ಕೊಳೆಯಲು ಪ್ರಾರಂಭಿಸಿ ನೆಟೆ ಹೋಗುತ್ತಿವೆ. ಈ ರೋಗದ ನಿರ್ವಹಣೆಗೆ ರೈತರು ಹೊಲಗಳಲ್ಲಿ ಮಳೆಯ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ರೋಗಕಾರಕ ಶಿಲೀಂದ್ರದ ಕೋಶಗಳು ಮಳೆಯ ನೀರಿನೊಂದಿಗೆ ಇತರೆ ಹೊಲಗಳಿಗೆ ಹರಡುವ ಸಾಧ್ಯತೆ ಇರುವುದರಿಂದ ಹೆಚ್ಚಾದ ಮಳೆಯ ನೀರು ಹರಿದು ಹೋಗಲು ಕಾಲುವೆ ಮತ್ತು ಹರಿವುಗಳನ್ನು ಮಾಡಿ ನೀರು ಇತರೆ ಹೊಲಗಳನ್ನು ಸೇರದೆ ನಾಲೆಗಳಿಗೆ ಸೇರುವಂತೆ ದಾರಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.</p>.<p>ವಾತಾವರಣದಲ್ಲಿ ಶೇ 85 ಕ್ಕಿಂತಲೂ ಹೆಚ್ಚಿನ ಆದ್ರತೆ ಇರುವುದರಿಂದ ತೊಗರಿ ಬೆಳೆಗೆ ರೈತರು ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಟ್ರೈಕೊಡರ್ಮ ಜೈವಿಕ ಶಿಲೀಂದ್ರ ನಾಶಕದಿಂದ ಬುಡ ಮತ್ತು ಬೇರು ತೋಯಿಸಬೇಕು. ಇದರಿಂದ ತೊಗರಿ ಗಿಡದ ಕುತ್ತಿಗೆ ಹಾಗೂ ಬೇರುಗಳು ಕೊಳೆಯದಂತೆ ತಡೆಗಟ್ಟಬಹುದು. ಪ್ರತಿ ಲೀಟರ್ ನೀರಿಗೆ 5 ಗ್ರಾಂ ಟ್ರೈಕೊಡರ್ಮ ಬೆರಸಿ ಗಿಡಗಳ ಕಾಂಡ ಮತ್ತು ಬೇರುಗಳು ತೊಯ್ಯುವ ಹಾಗೆ ಉಪಚಾರ ಮಾಡುವುದರಿಂದ ಫೈಟೋಫ್ಥೋರ ಕೊಳೆ ರೋಗದ ಬಾಧೆಯಿಂದ ರಕ್ಷಿಸಬಹುದು ಎಂದು ಹೇಳಿದ್ದಾರೆ.</p>.<p>ರೋಗ ತೀವ್ರತೆ ಹೆಚ್ಚಾಗಿ ಇರುವ ಹೊಲಗಳಲ್ಲಿ ಮೆಟಲ್ಯಾಕ್ಸಿಲ್ ಶಿಲೀಂದ್ರ ನಾಶಕವನ್ನು ಪ್ರತಿ ಲೀಟರ್ ನೀರಿಗೆ 3 ಗ್ರಾಂ ಬೆರಸಿ ಬೆಳೆಗೆ ಸಿಂಪರಣೆ ಮಾಡುವುದರಿಂದ ರೋಗ ಹರಡುವುದನ್ನು ತಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ವಲಯ ಕೃಷಿ ಸಂಶೋಧನಾ ಕೇಂದ್ರದ ಸಸ್ಯ ರೋಗ ಶಾಸ್ತ್ರ ವಿಭಾಗ ಅಥವಾ ಸಮೀಪದ ಕೃಷಿ ವಿಜ್ಞಾನ ಕೇಂದ್ರ ಮತ್ತು ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬೇಕು ಎಂದು ಅವರು ತಿಳಿಸಿದ್ದಾರೆ. </p>.<div><blockquote>ಕಲಬುರಗಿ ಬೀದರ್ ಯಾದಗಿರಿ ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಸುಮಾರು 14 ಲಕ್ಷ ಹೆಕ್ಟೇರ್ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ.</blockquote><span class="attribution">ಮಲ್ಲಿಕಾರ್ಜುನ ಕೆಂಗನಾಳ್, ಹಿರಿಯ ವಿಜ್ಞಾನಿ ಕಲಬುರಗಿ ಕೃಷಿ ಸಂಶೋಧನಾ ಕೇಂದ್ರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>