ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಬಾ ಭವಾನಿ ಜಾತ್ರೆಗೆ ವಿಶೇಷ ಬಸ್

Published : 6 ಅಕ್ಟೋಬರ್ 2024, 16:13 IST
Last Updated : 6 ಅಕ್ಟೋಬರ್ 2024, 16:13 IST
ಫಾಲೋ ಮಾಡಿ
Comments

ಕಲಬುರಗಿ: ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ತುಳಜಾಪುರದಲ್ಲಿ ಅಕ್ಟೋಬರ್ 19 ರವರೆಗೂ ನಡೆಯುವ ಅಂಬಾ ಭವಾನಿ ಜಾತ್ರೆ ಪ್ರಯುಕ್ತ ಕಲಬುರಗಿ ವಿಭಾಗ–1ರಿಂದ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲಬುರಗಿ ಘಟಕ–1 ಮತ್ತು 4, ಚಿಂಚೋಳಿ, ಚಿತ್ತಾಪುರ, ಕಾಳಗಿ ಮತ್ತು ಸೇಡಂ ಘಟಕಗಳಿಂದ ಬಸ್‌ ನಿಲ್ದಾಣ ಹಾಗೂ ಇತರ ಸ್ಥಳಗಳಿಂದ ತುಳಜಾಪುರಕ್ಕೆ ವಿಶೇಷ ಬಸ್‌ಗಳನ್ನು ಓಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಮಾಹಿತಿಗಾಗಿ ಕಲಬುರಗಿ ಘಟಕ–1 ಮೊ.ಸಂ: 7760992113, ಘಟಕ–2 ಮೊ.ಸಂ: 7022012103, ಚಿಂಚೋಳಿ ಮೊ.ಸಂ: 7760992117, ಚಿತ್ತಾಪುರ ಮೊ.ಸಂ: 7760992119, ಕಾಳಗಿ ಮೊ.ಸಂ: 7760992120, ಮೊ.ಸಂ: 7760992466 ಸಂಪರ್ಕಿಸಲು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT