<p><strong>ಕಲಬುರಗಿ</strong>: ‘ಕಥೆ ರಚನೆ ಮತ್ತು ನಿರೂಪಣೆ ಶೈಲಿಯಲ್ಲಿ ಕಥೆಗಾರ ಎಚ್ಚರ ವಹಿಸಬೇಕು. ಕಥೆ ಕಟ್ಟುವ ಸನ್ನಿವೇಶಗಳಲ್ಲಿ ಕಥಾ ಹಂದರದ ತಿರುಳು ಬಹಳ ಮುಖ್ಯವೇ ವಿನಃ ಕಥೆಯ ಸಂಗತಿಗಳನ್ನು ಜೋಡಿಸುವುದು ಮುಖ್ಯವಲ್ಲ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಶಿವಗಂಗಾ ರುಮ್ಮಾ ಅಭಿಪ್ರಾಯಪಟ್ಟರು. </p>.<p>ನಗರದಲ್ಲಿ ಶನಿವಾರ ಜನರಂಗ ವೇದಿಕೆ ಆಯೋಜಿಸಿದ್ದ ಯುವ ಕಥೆಗಾರ ಸಂಗನಗೌಡ ಹಿರೇಗೌಡ ಅವರ ಮೊದಲ ಕಥಾಸಂಕಲನ ‘ಮೊಡಚಿಗಳು’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>‘ಗಂಭೀರ ವಿಷಯಗಳ ಕುರಿತು ಕಥೆ ಬರೆಯುವಾಗ ಲೇಖಕರಿಗೆ ಸೂಕ್ಷ್ಮ ಪ್ರಜ್ಞೆ ಹಾಗೂ ಸಂವೇದನೆ ಮನಸ್ಸು ಬಹಳ ಮುಖ್ಯವಾಗಿರುತ್ತದೆ. ಆ ನಿಟ್ಟಿನಲ್ಲಿ ಲೇಖಕ ಸಂಗನಗೌಡ ಅವರ ಪ್ರಯತ್ನ ಶ್ಲಾಘನೀಯ. ಅವರ ಕಥೆಗಳಲ್ಲಿ ಸಾಮಾಜಿಕ ಪ್ರಜ್ಞೆಯುಳ್ಳ ವಿಚಾರಗಳಿವೆ. ಕಥೆಯಲ್ಲಿ ಬಳಸಿರುವ ಭಾಷಾ ತಂತ್ರ ಮತ್ತು ನಾಟಕೀಯ ಶೈಲಿಯ ನಿರೂಪಣೆ ಅತ್ಯುತ್ತಮವಾಗಿದೆ. ಅದಕ್ಕೆ ಲೇಖಕರು ಬೆಳೆದಿರುವ ಪರಿಸರ ಅನುಭವಿಸಿದ ಅನುಭವಗಳು ಮುಖ್ಯವಾಗಿವೆ. ದೇಶಿ ಸಂಸ್ಕೃತಿ ಮತ್ತು ವಾಸ್ತವ ಪರಿಸರದ ಪ್ರಭಾವ ಕೂಡ ಮುಖ್ಯವಾಗುತ್ತದೆ. ಕಥೆಗಳಲ್ಲಿ ಭಿನ್ನ ಪಾತ್ರಗಳು ನೈಜ ಬದುಕಿನ ತಾಕಲಾಟಗಳನ್ನು ಮುಚ್ಚುಮರೆಯಿಲ್ಲದೆ, ಏಚುಪೇಚಿಲ್ಲದೆ ಬಳಸಿರುವುದು ಕಥೆಗೆ ಮೆರುಗು ತಂದಿದೆ’ ಎಂದರು.</p>.<p>ಡಾ. ಬಿ.ಆರ್. ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅರುಣ ಜೋಳದಕೂಡ್ಲಿಗಿ ಮಾತನಾಡಿ, 'ಮೊಡಚಿಗಳು’ ಕಥಾ ಸಂಕಲನದಲ್ಲಿ ಸಂಗನಗೌಡ ಅವರು ತಮ್ಮ ಓರಗೆಯ ಕಥೆಗಾರರಿಂದ ಪ್ರಭಾವಿತರಾಗಿರುವುದು ಕಂಡು ಬರುತ್ತದೆ. ಕುಂ. ವೀರಭದ್ರಪ್ಪ, ಮೊಗಳ್ಳಿ ಗಣೇಶ್ ಅವರನ್ನು ಓದಿಕೊಂಡವರು ಅವರ ಬರಹದ ಒಂದು ಹಾಳೆಯನ್ನು ಕಂಡರೆ ಇವರೇ ಬರೆದಿರುವುದು ಎಂದು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಅದೇ ರೀತಿ ತಮ್ಮ ಮೊದಲ ಕಥಾ ಸಂಕಲನದಲ್ಲಿ ಸಂಗನಗೌಡ ಅವರು ಅಂತಹ ಛಾಪು ಮೂಡಿಸಲು ಯತ್ನಿಸಿರುವುದು ಕಾಣಿಸುತ್ತದೆ’ ಎಂದು ಹೇಳಿದರು.</p>.<p>ಕಥೆಗಾರ ಪ್ರೊ.ಕೆ.ಎಸ್. ನಾಯಕ ಮಾತನಾಡಿದರು. </p>.<p>ಕಲಬುರಗಿ ಜನರಂಗ ವೇದಿಕೆ ಅಧ್ಯಕ್ಷ ಹಾಗೂ ರಂಗ ನಿರ್ದೇಶಕ ಶಂಕ್ರಯ್ಯ ಘಂಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಕಾಲೀನ ವಿಷಯಗಳ ಕಡೆಗೆ ಸಮಾಜಮುಖಿ ಚಿಂತನೆ ಮೂಡಿಸುವ ವಿಚಾರಗಳು ಮೊಡಚಿಗಳು ಕಥಾ ಸಂಕಲದಲ್ಲಿವೆ. ಅದರಲ್ಲೂ ತತ್ವಪದಕಾರರ ನೆಲದಲ್ಲಿ ಅನುಭವ, ಅನುಭಾವ, ದೇಶಿ ಪದ ಮತ್ತು ಭಾಷೆ ಬಳಕೆಯಿಂದ ಕಥೆಗಳಿಗೆ ಹೊಸ ಮೆರಗು ಬಂದಿದೆ ಎಂದರು.</p>.<p>ಗುಲಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕ ಪ್ರೊ.ಕೆ. ಎಂ.ಕುಮಾರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ‘ಕಥೆ ರಚನೆ ಮತ್ತು ನಿರೂಪಣೆ ಶೈಲಿಯಲ್ಲಿ ಕಥೆಗಾರ ಎಚ್ಚರ ವಹಿಸಬೇಕು. ಕಥೆ ಕಟ್ಟುವ ಸನ್ನಿವೇಶಗಳಲ್ಲಿ ಕಥಾ ಹಂದರದ ತಿರುಳು ಬಹಳ ಮುಖ್ಯವೇ ವಿನಃ ಕಥೆಯ ಸಂಗತಿಗಳನ್ನು ಜೋಡಿಸುವುದು ಮುಖ್ಯವಲ್ಲ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಶಿವಗಂಗಾ ರುಮ್ಮಾ ಅಭಿಪ್ರಾಯಪಟ್ಟರು. </p>.<p>ನಗರದಲ್ಲಿ ಶನಿವಾರ ಜನರಂಗ ವೇದಿಕೆ ಆಯೋಜಿಸಿದ್ದ ಯುವ ಕಥೆಗಾರ ಸಂಗನಗೌಡ ಹಿರೇಗೌಡ ಅವರ ಮೊದಲ ಕಥಾಸಂಕಲನ ‘ಮೊಡಚಿಗಳು’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>‘ಗಂಭೀರ ವಿಷಯಗಳ ಕುರಿತು ಕಥೆ ಬರೆಯುವಾಗ ಲೇಖಕರಿಗೆ ಸೂಕ್ಷ್ಮ ಪ್ರಜ್ಞೆ ಹಾಗೂ ಸಂವೇದನೆ ಮನಸ್ಸು ಬಹಳ ಮುಖ್ಯವಾಗಿರುತ್ತದೆ. ಆ ನಿಟ್ಟಿನಲ್ಲಿ ಲೇಖಕ ಸಂಗನಗೌಡ ಅವರ ಪ್ರಯತ್ನ ಶ್ಲಾಘನೀಯ. ಅವರ ಕಥೆಗಳಲ್ಲಿ ಸಾಮಾಜಿಕ ಪ್ರಜ್ಞೆಯುಳ್ಳ ವಿಚಾರಗಳಿವೆ. ಕಥೆಯಲ್ಲಿ ಬಳಸಿರುವ ಭಾಷಾ ತಂತ್ರ ಮತ್ತು ನಾಟಕೀಯ ಶೈಲಿಯ ನಿರೂಪಣೆ ಅತ್ಯುತ್ತಮವಾಗಿದೆ. ಅದಕ್ಕೆ ಲೇಖಕರು ಬೆಳೆದಿರುವ ಪರಿಸರ ಅನುಭವಿಸಿದ ಅನುಭವಗಳು ಮುಖ್ಯವಾಗಿವೆ. ದೇಶಿ ಸಂಸ್ಕೃತಿ ಮತ್ತು ವಾಸ್ತವ ಪರಿಸರದ ಪ್ರಭಾವ ಕೂಡ ಮುಖ್ಯವಾಗುತ್ತದೆ. ಕಥೆಗಳಲ್ಲಿ ಭಿನ್ನ ಪಾತ್ರಗಳು ನೈಜ ಬದುಕಿನ ತಾಕಲಾಟಗಳನ್ನು ಮುಚ್ಚುಮರೆಯಿಲ್ಲದೆ, ಏಚುಪೇಚಿಲ್ಲದೆ ಬಳಸಿರುವುದು ಕಥೆಗೆ ಮೆರುಗು ತಂದಿದೆ’ ಎಂದರು.</p>.<p>ಡಾ. ಬಿ.ಆರ್. ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅರುಣ ಜೋಳದಕೂಡ್ಲಿಗಿ ಮಾತನಾಡಿ, 'ಮೊಡಚಿಗಳು’ ಕಥಾ ಸಂಕಲನದಲ್ಲಿ ಸಂಗನಗೌಡ ಅವರು ತಮ್ಮ ಓರಗೆಯ ಕಥೆಗಾರರಿಂದ ಪ್ರಭಾವಿತರಾಗಿರುವುದು ಕಂಡು ಬರುತ್ತದೆ. ಕುಂ. ವೀರಭದ್ರಪ್ಪ, ಮೊಗಳ್ಳಿ ಗಣೇಶ್ ಅವರನ್ನು ಓದಿಕೊಂಡವರು ಅವರ ಬರಹದ ಒಂದು ಹಾಳೆಯನ್ನು ಕಂಡರೆ ಇವರೇ ಬರೆದಿರುವುದು ಎಂದು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಅದೇ ರೀತಿ ತಮ್ಮ ಮೊದಲ ಕಥಾ ಸಂಕಲನದಲ್ಲಿ ಸಂಗನಗೌಡ ಅವರು ಅಂತಹ ಛಾಪು ಮೂಡಿಸಲು ಯತ್ನಿಸಿರುವುದು ಕಾಣಿಸುತ್ತದೆ’ ಎಂದು ಹೇಳಿದರು.</p>.<p>ಕಥೆಗಾರ ಪ್ರೊ.ಕೆ.ಎಸ್. ನಾಯಕ ಮಾತನಾಡಿದರು. </p>.<p>ಕಲಬುರಗಿ ಜನರಂಗ ವೇದಿಕೆ ಅಧ್ಯಕ್ಷ ಹಾಗೂ ರಂಗ ನಿರ್ದೇಶಕ ಶಂಕ್ರಯ್ಯ ಘಂಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಕಾಲೀನ ವಿಷಯಗಳ ಕಡೆಗೆ ಸಮಾಜಮುಖಿ ಚಿಂತನೆ ಮೂಡಿಸುವ ವಿಚಾರಗಳು ಮೊಡಚಿಗಳು ಕಥಾ ಸಂಕಲದಲ್ಲಿವೆ. ಅದರಲ್ಲೂ ತತ್ವಪದಕಾರರ ನೆಲದಲ್ಲಿ ಅನುಭವ, ಅನುಭಾವ, ದೇಶಿ ಪದ ಮತ್ತು ಭಾಷೆ ಬಳಕೆಯಿಂದ ಕಥೆಗಳಿಗೆ ಹೊಸ ಮೆರಗು ಬಂದಿದೆ ಎಂದರು.</p>.<p>ಗುಲಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕ ಪ್ರೊ.ಕೆ. ಎಂ.ಕುಮಾರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>