<p><strong>ಕಲಬುರಗಿ:</strong> ನಿಗಮಕ್ಕೆ ಸೇರಬೇಕಿರುವ ಜಾಗವನ್ನು ಖಾಸಗಿಯವರೊಂದಿಗೆ ಶಾಮೀಲಾಗಿ ಪರಭಾರೆ ಮಾಡಿರುವ, ಬಸ್ ನಿಲ್ದಾಣಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಅಂಗಡಿ ನಿರ್ಮಿಸಿದ್ದರೂ ಕ್ರಮ ಕೈಗೊಳ್ಳದ, ನಿಗಮದ ಆಸ್ತಿಗಳನ್ನು ನಾಶಪಡಿಸಿ ಅತಿಕ್ರಮಣ ಮಾಡಲು ಅವಕಾಶ ನೀಡಿರುವುದು ಸೇರಿದಂತೆ ವಿವಿಧ ಲೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಪ್ರಭಾರ ಮುಖ್ಯ ಕಾಮಗಾರಿ ಎಂಜಿನಿಯರ್ (ಸಿಸಿಇ) ಬಚ್ಚನ ಬೋರಯ್ಯ ಎಂಬುವವರ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<p>ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಹಿರೇಭೇರ್ಗಿ ಗ್ರಾಮದ ರಮೇಶ ಪಾಟೀಲ, ಕಲಮಂಗಿ ಗ್ರಾಮದ ಪಾಮಯ್ಯ ನಂದಿಹಳ್ಳಿ ಎಂಬುವವರು ನೀಡಿದ ದೂರು ಆಧರಿಸಿ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.</p>.<p>ಬೀದರ್ ಜಿಲ್ಲೆ ಔರಾದನ ತಹಶೀಲ್ದಾರ್ ಕಚೇರಿ ಹಿಂಭಾಗದಲ್ಲಿ ನಾಲ್ಕು ಎಕರೆ ಜಮೀನು, ಸಂತಪುರ ಗ್ರಾಮದ ಹಿಂದುಗಡೆ ಇರುವ ಜಮೀನುಗಳು ದಾಖಲೆಯಲ್ಲಿ ನಿಗಮದ ಮಾಲೀಕತ್ವಕ್ಕೆ ಒಳಪಟ್ಟಿದ್ದರೂ ದಾಖಲೆಗಳನ್ನು ನಾಶಪಡಿಸಿ, ಖಾಸಗಿ ವ್ಯಕ್ತಿಗಳು ಈ ಜಮೀನಿನಲ್ಲಿ ನಿವೇಶನ ಮತ್ತು ಮನೆಗಳನ್ನು ನಿರ್ಮಿಸಿಕೊಳ್ಳಲು ಮುಕ್ತ ಅವಕಾಶ ಕೊಟ್ಟು ನಿಗಮಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p>ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಹಳೆ ಬಸ್ ನಿಲ್ದಾಣದಲ್ಲಿ ಕೆಲವರು ಡಬ್ಬಾ ಅಂಗಡಿ, ಮಾಂಸ ಮಾರಾಟ ಅಂಗಡಿಗಳನ್ನು ಇಟ್ಟುಕೊಂಡಿದ್ದಾರೆ. ಈ ಜಾಗದ ಮಾರುಕಟ್ಟೆ ಮೌಲ್ಯ ಕೋಟ್ಯಂತರ ರೂಪಾಯಿ ಆಗುತ್ತಿದ್ದು, ಅವರನ್ನು ತೆರವುಗೊಳಿಸದೇ ಬೋರಯ್ಯ ಅವರು ನಿಗಮಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ. </p>.<p>ಬಳ್ಳಾರಿ ಜಿಲ್ಲೆಯ ಕುರುಗೋಡು ಬಸ್ ನಿಲ್ದಾಣದಲ್ಲಿ ನಿಗಮಕ್ಕೆ ಸೇರಿದ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿದ್ದಾರೆ. ಇದರಿಂದಾಗಿ ಮೊದಲೇ ಬಸ್ ನಿಲ್ದಾಣದಲ್ಲಿ ಹೋಟೆಲ್ ನಡೆಸಲು ನಿಗಮದಿಂದ ಪರವಾನಗಿ ಪಡೆದಿದ್ದ ಹೋಟೆಲ್ ಉದ್ಯಮಿ ಆರ್ಥಿಕ ನಷ್ಟವಾಗಿದ್ದರಿಂದ ಅದನ್ನು ಬಿಟ್ಟು ಹೋಗಿದ್ದಾರೆ. ಇದರಿಂದಾಗಿ ನಿಗಮಕ್ಕೆ ಬರಬೇಕಿದ್ದ ವರಮಾನ ಕೈತಪ್ಪಿದೆ. ಇದಕ್ಕೆ ಬೋರಯ್ಯ ಅವರೇ ಹೊಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.</p>.<p>ಕಲಬುರಗಿ ಕೇಂದ್ರ ಕಚೇರಿಯಲ್ಲಿನ ಆಸ್ತಿ ಶಾಖೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರರು ಕಾಮಗಾರಿಗಳ ವಿನ್ಯಾಸ, ನಕಾಶೆ ಮತ್ತು ಕೆಲಸದಲ್ಲಿ ಆಗಿರುವ ಪ್ರಗತಿಯ ಟಿಪ್ಪಣೆ ಬರೆದು ಕಡತ ಮಂಡಿಸುತ್ತಾರೆ. ಆದರೆ, ಇವರ ಕಡತಗಳನ್ನು ಸಿಸಿಇ ಬೋರಯ್ಯ ಅವರು ಹರಿದು ಹಾಕಿ ತಮಗೆ ಬೇಕಾದ ಎಇಇಗಳಿಂದ ತಮಗೆ ಬೇಕಾದಂತೆ ವರದಿ ತರಿಸಿಕೊಂಡು ಅಕ್ರಮ ಎಸಗಿದ್ದಾರೆ ಎಂದು 18 ಪುಟಗಳ ದೂರಿನಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ನಿಗಮಕ್ಕೆ ಸೇರಬೇಕಿರುವ ಜಾಗವನ್ನು ಖಾಸಗಿಯವರೊಂದಿಗೆ ಶಾಮೀಲಾಗಿ ಪರಭಾರೆ ಮಾಡಿರುವ, ಬಸ್ ನಿಲ್ದಾಣಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಅಂಗಡಿ ನಿರ್ಮಿಸಿದ್ದರೂ ಕ್ರಮ ಕೈಗೊಳ್ಳದ, ನಿಗಮದ ಆಸ್ತಿಗಳನ್ನು ನಾಶಪಡಿಸಿ ಅತಿಕ್ರಮಣ ಮಾಡಲು ಅವಕಾಶ ನೀಡಿರುವುದು ಸೇರಿದಂತೆ ವಿವಿಧ ಲೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಪ್ರಭಾರ ಮುಖ್ಯ ಕಾಮಗಾರಿ ಎಂಜಿನಿಯರ್ (ಸಿಸಿಇ) ಬಚ್ಚನ ಬೋರಯ್ಯ ಎಂಬುವವರ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<p>ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಹಿರೇಭೇರ್ಗಿ ಗ್ರಾಮದ ರಮೇಶ ಪಾಟೀಲ, ಕಲಮಂಗಿ ಗ್ರಾಮದ ಪಾಮಯ್ಯ ನಂದಿಹಳ್ಳಿ ಎಂಬುವವರು ನೀಡಿದ ದೂರು ಆಧರಿಸಿ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.</p>.<p>ಬೀದರ್ ಜಿಲ್ಲೆ ಔರಾದನ ತಹಶೀಲ್ದಾರ್ ಕಚೇರಿ ಹಿಂಭಾಗದಲ್ಲಿ ನಾಲ್ಕು ಎಕರೆ ಜಮೀನು, ಸಂತಪುರ ಗ್ರಾಮದ ಹಿಂದುಗಡೆ ಇರುವ ಜಮೀನುಗಳು ದಾಖಲೆಯಲ್ಲಿ ನಿಗಮದ ಮಾಲೀಕತ್ವಕ್ಕೆ ಒಳಪಟ್ಟಿದ್ದರೂ ದಾಖಲೆಗಳನ್ನು ನಾಶಪಡಿಸಿ, ಖಾಸಗಿ ವ್ಯಕ್ತಿಗಳು ಈ ಜಮೀನಿನಲ್ಲಿ ನಿವೇಶನ ಮತ್ತು ಮನೆಗಳನ್ನು ನಿರ್ಮಿಸಿಕೊಳ್ಳಲು ಮುಕ್ತ ಅವಕಾಶ ಕೊಟ್ಟು ನಿಗಮಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p>ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಹಳೆ ಬಸ್ ನಿಲ್ದಾಣದಲ್ಲಿ ಕೆಲವರು ಡಬ್ಬಾ ಅಂಗಡಿ, ಮಾಂಸ ಮಾರಾಟ ಅಂಗಡಿಗಳನ್ನು ಇಟ್ಟುಕೊಂಡಿದ್ದಾರೆ. ಈ ಜಾಗದ ಮಾರುಕಟ್ಟೆ ಮೌಲ್ಯ ಕೋಟ್ಯಂತರ ರೂಪಾಯಿ ಆಗುತ್ತಿದ್ದು, ಅವರನ್ನು ತೆರವುಗೊಳಿಸದೇ ಬೋರಯ್ಯ ಅವರು ನಿಗಮಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ. </p>.<p>ಬಳ್ಳಾರಿ ಜಿಲ್ಲೆಯ ಕುರುಗೋಡು ಬಸ್ ನಿಲ್ದಾಣದಲ್ಲಿ ನಿಗಮಕ್ಕೆ ಸೇರಿದ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿದ್ದಾರೆ. ಇದರಿಂದಾಗಿ ಮೊದಲೇ ಬಸ್ ನಿಲ್ದಾಣದಲ್ಲಿ ಹೋಟೆಲ್ ನಡೆಸಲು ನಿಗಮದಿಂದ ಪರವಾನಗಿ ಪಡೆದಿದ್ದ ಹೋಟೆಲ್ ಉದ್ಯಮಿ ಆರ್ಥಿಕ ನಷ್ಟವಾಗಿದ್ದರಿಂದ ಅದನ್ನು ಬಿಟ್ಟು ಹೋಗಿದ್ದಾರೆ. ಇದರಿಂದಾಗಿ ನಿಗಮಕ್ಕೆ ಬರಬೇಕಿದ್ದ ವರಮಾನ ಕೈತಪ್ಪಿದೆ. ಇದಕ್ಕೆ ಬೋರಯ್ಯ ಅವರೇ ಹೊಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.</p>.<p>ಕಲಬುರಗಿ ಕೇಂದ್ರ ಕಚೇರಿಯಲ್ಲಿನ ಆಸ್ತಿ ಶಾಖೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರರು ಕಾಮಗಾರಿಗಳ ವಿನ್ಯಾಸ, ನಕಾಶೆ ಮತ್ತು ಕೆಲಸದಲ್ಲಿ ಆಗಿರುವ ಪ್ರಗತಿಯ ಟಿಪ್ಪಣೆ ಬರೆದು ಕಡತ ಮಂಡಿಸುತ್ತಾರೆ. ಆದರೆ, ಇವರ ಕಡತಗಳನ್ನು ಸಿಸಿಇ ಬೋರಯ್ಯ ಅವರು ಹರಿದು ಹಾಕಿ ತಮಗೆ ಬೇಕಾದ ಎಇಇಗಳಿಂದ ತಮಗೆ ಬೇಕಾದಂತೆ ವರದಿ ತರಿಸಿಕೊಂಡು ಅಕ್ರಮ ಎಸಗಿದ್ದಾರೆ ಎಂದು 18 ಪುಟಗಳ ದೂರಿನಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>