‘ಕಲಾವಿದರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ’
ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಪುತ್ರಿ ತೆಲಂಗಾಣ ವಿಧಾನ ಪರಿಷತ್ ಸದಸ್ಯೆ ಸುರಭಿ ವಾಣಿದೇವಿ ಮಾತನಾಡಿ ‘ಕಲಾವಿದರು ಸೃಷ್ಟಿಕರ್ತರು. ಆದರೆ ಅವರು ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಪ್ರೊ.ಅಂದಾನಿಯವರು ನನಗೆ 35 ವರ್ಷಗಳಿಂದ ಪರಿಚಿತರು. ಅವರ ಸಂಸ್ಥೆಯಲ್ಲಿಯೇ ನನ್ನ ಪುತ್ರಿ ಸ್ನಾತಕೋತ್ತರ ಪದವಿ ಪೂರೈಸಿದ್ದಾಳೆ. ಅವರ ಶಿಷ್ಯಂದಿರು ದೇಶದಾದ್ಯಂತ ಪಸರಿಸಿದ್ದಾರೆ. ರಮಣರೆಡ್ಡಿ ಎಂಬ ಅವರ ಶಿಷ್ಯ ಪ್ರಸ್ತುತ ಹೈದರಾಬಾದ್ ಕಲಾ ಸಮಾಜದ ಅಧ್ಯಕ್ಷರಾಗಿದ್ದಾರೆ. ಪ್ರೊ.ಅಂದಾನಿಯವರ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ನಾನೂ ಕಲಾ ಕಾಲೇಜು ನಡೆಸುತ್ತಿದ್ದು ಅದಕ್ಕೆ ಅವರು ಮಾರ್ಗದರ್ಶನ ನೀಡಿದ್ದರು’ ಎಂದು ಸ್ಮರಿಸಿದರು.