ಮಡಿಕೇರಿಯ ವಿದ್ಯುತ್ ಪರಿವರ್ತಕಗಳ ಸುತ್ತ ಗಿಡಗಂಟಿಗಳು ಬೆಳೆದಿರುವುದು ಚಿತ್ರ: ರಂಗಸ್ವಾಮಿ
ಶನಿವಾರಸಂತೆ ಸಮೀಪ ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಕಂಬ
ವಿರಾಜಪೇಟೆ ಸಮೀಪದ ಆರ್ಜಿಯ ಸರ್ಕಾರಿ ಶಾಲೆಯ ಮುಂಭಾಗದಲ್ಲಿರುವ ಅನಾಹುತ ನಡೆದ ಕಂಬ. ಇಲ್ಲಿ ಸೆಸ್ಕ್ ಸಿಬ್ಬಂದಿ ಈಚೆಗೆ ಮೃತಪಟ್ಟಿದ್ದರು. ನಂತರವೂ ಕಂಬದ ಸ್ಥಿತಿ ಹೀಗಿದೆ.
ವಿರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಬಳಿಯಿರುವ ವಿದ್ಯುತ್ ಪರಿವರ್ತಕವನ್ನು ಅಳವಡಿಸಲಾಗಿರುವ ಕಂಬದ ಸಲಾಕೆಯೊಂದು ಸುತ್ತಲು ಅಳವಡಿಸಿರುವ ತಂತಿಬೇಲಿಯ ಮೇಲ್ಭಾಗಕ್ಕೆ ತಾಗಿಕೊಂಡಿರುವುದು
ಎಚ್.ಎಂ.ಬೆನ್ನಿ ಆರ್ಜಿ ಗ್ರಾಮ.
ದುರ್ಘಟನೆ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳಿ
ಈಚೆಗೆ ದುರ್ಘಟನೆ ನಡೆದ ವಿರಾಜಪೇಟೆ ಸಮೀಪದ ಆರ್ಜಿಯ ಶಾಲೆಯ ಸಮೀಪದಲ್ಲೆ ಇರುವ 11 ಕೆ.ವಿ ಸಾಮರ್ಥ್ಯದ ಕಂಬದ ಸುತ್ತಲು ಯಾವುದೇ ರಕ್ಷಣಾ ಬೇಲಿ ಇಲ್ಲ. ಜತೆಗೆ ಸುತ್ತಲೂ ಗಿಡಗಂಟಿಗಳಿಂದ ಆವರಿಸಿದ್ದು ಹೆಚ್ಚಿನ ಆತಂಕ ಮೂಡಿಸಿದೆ. ಪ್ರಾಥಮಿಕ ಶಾಲೆ ಸಮೀಪದಲ್ಲೆ ಇರುವುದರಿಂದ ಪುಟ್ಟ ಮಕ್ಕಳು ಇದೇ ಭಾಗದಲ್ಲಿ ಓಡಾಡುತ್ತಿರುತ್ತಾರೆ. ಮತ್ತಷ್ಟು ಅನಾಹುತ ಸಂಭವಿಸುವ ಮೊದಲು ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕಿದೆ- ಎಚ್.ಎಂ.ಬೆನ್ನಿ ಆರ್ಜಿ ಗ್ರಾಮ.
ಎಸ್.ಪಿ.ಸತೀಶ್ ಕಾಫಿ ಬೆಳೆಗಾರರು.
ವಿದ್ಯುತ್ ತಂತಿಗಳು ಕೆಳಕ್ಕೆ ಬಾಗಿವೆ
ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗುಳ ಗ್ರಾಮದ ಮಾಲಂಬಿ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ವಿದ್ಯುತ್ ತಂತಿಗಳು ಕೆಳಕ್ಕೆ ಬಾಗಿವೆ. ಯಾವುದಾದರೂ ದೊಡ್ಡ ವಾಹನಗಳು ಇಲ್ಲಿ ಸಂಚರಿಸಿದರೆ ಅದಕ್ಕೆ ತಾಗುತಿವೆ. ಇದನ್ನು ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಇಂದಿಗೂ ಸರಿಪಡಿಸಲು ಮುಂದಾಗುತ್ತಿಲ್ಲ. ಅನಾಹುತ ನಡೆಯುವುದಕ್ಕೂ ಮುನ್ನ ಇದನ್ನು ಸರಿಪಡಿಸಲು ಇಲಾಖೆ ಮುಂದಾಗಬೇಕಿದೆ-ಎಸ್.ಪಿ.ಸತೀಶ್ ಕಾಫಿ ಬೆಳೆಗಾರರು.
ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಿ
ನಾಪೋಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಕೇಂದ್ರವನ್ನು ಸ್ಥಾಪಿಸಬೇಕು ಅದರಂತೆ ಕಚೇರಿಯಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಈ ವ್ಯಾಪ್ತಿಯಲ್ಲಿ ಜನರು ಅನುಭವಿಸುತ್ತಿರುವ ನಿರಂತರ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಸಂಬಂಧಪಟ್ಟ ಸೆಸ್ಕ್ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಪರವಂಡ ಸಿರಾಜ್ ನಾಪೋಕ್ಲು.
ಅಪಾಯಕಾರಿ ವಿದ್ಯುತ್ ಕಂಬಗಳು:
ಗೋಣಿಕೊಪ್ಪಲು ಪಟ್ಟಣದ ಬೈಪಾಸ್ ತೋಡಿನ ಒಂದು ಬದಿಯಲ್ಲಿ ನೆಟ್ಟಿರುವ ವಿದ್ಯುತ್ ಕಂಬಗಳು ನೇರವಾಗಿ ನಿಂತೇ ಇಲ್ಲ. ಈ ಬಗ್ಗೆ ಸೆಸ್ಕ್ಗೆ ಹಲವು ಬಾರಿ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು -ಪುಳಿಂಜನ ಪೂವಯ್ ಪೊನ್ನಂಪೇಟೆಯ ವಿನೋದ್
ಎಚ್ಚರಿಕೆ ವಹಿಸಲಾಗಿದೆ ಸೂಚನೆ ನೀಡಲಾಗಿದೆ...: ಕಾಫಿ ತೋಟದ ಒಳಗೆ ಹಾದು ಹೋಗಿರುವ ವಿದ್ಯುತ್ ಮಾರ್ಗದಲ್ಲಿ ಮರದ ರೆಂಬೆಗಳನ್ನು ಕಡಿದು ಮಾರ್ಗ ಸ್ವಚ್ಚಗೊಳಿಸಲಾಗಿದೆ. ತೋಟದ ಮಾಲೀಕರು ಹಾಗೂ ಕಾರ್ಮಿಕರು ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ. ಕಾಳು ಮೆಣಸು ಕೊಯ್ಯಲು ಬಿದಿರಿನ ಏಣಿ ಬಳಸುವಂತೆ ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ. ರಸ್ತೆ ಬದಿಯಲ್ಲಿ ಮತ್ತು ಬೈಪಾಸ್ ತೋಡುಗಳ ಬದಿಯಲ್ಲಿ ಸತ್ವ ಕಳೆದುಕೊಂಡಿರುವ ವಿದ್ಯುತ್ ಕಂಬಗಳ ಬದಲಾವಣೆ ಮಾಡಲಾಗುವುದು.
ನೀಲಶೆಟ್ಟಿ, ಸಹಾಯಕ ನಿರ್ವಾಹಕ ಎಂಜಿನಿಯರ್ ಸೆಸ್ಕ್ ಗೋಣಿಕೊಪ್ಪಲು ಉಪವಿಭಾಗ