<p><strong>ಮಡಿಕೇರಿ</strong>: ಕೊಡಗು ಜಿಲ್ಲೆ ರಾಜ್ಯ ಬಜೆಟ್ ಮೇಲೆ ಎಷ್ಟು ಅವಲಂಬಿತವಾಗಿದೆಯೋ ಅಷ್ಟೇ ಕೇಂದ್ರ ಸರ್ಕಾರದ ಬಜೆಟ್ ಮೇಲೂ ಅವಲಂಬಿತವಾಗಿದೆ. ಜಿಲ್ಲೆಯ ಜನರು ಒಂದಿಲ್ಲೊಂದು ಕಾರಣದಿಂದ ಬಹುವಾಗಿ ನೆಚ್ಚಿಕೊಂಡಿರುವ ಕಾಫಿ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳು ಕೇಂದ್ರ ಬಜೆಟ್ನತ್ತ ಚಿತ್ತನೆಟ್ಟಿವೆ. ಇಲ್ಲಿನ ಉದ್ಯಮಿಗಳು, ವ್ಯಾಪಾರಸ್ಥರು, ರೈತರು ಹಾಗೂ ಬೆಳೆಗಾರರು ಕೇಂದ್ರ ಬಜೆಟ್ ಮೇಲೆ ಅಗಾಧ ನಿರೀಕ್ಷೆಯನ್ನಿರಿಸಿಕೊಂಡಿದ್ದಾರೆ.</p>.<p>ಈ ಬಾರಿ ನೂತನ ಸಂಸದರಾಗಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯ್ಕೆಯಾಗಿರುವುದು ಹಾಗೂ ಅವರ ಗೆಲುವಿಗೆ ಕೊಡಗು ಜಿಲ್ಲೆಯಿಂದಲೇ ಅತ್ಯಧಿಕ ಮತಗಳು ಬಂದಿರುವುದು ಇಲ್ಲಿನ ಜನರ ನಿರೀಕ್ಷೆಗಳನ್ನು ಗರಿಗೆದರಿಸಿದೆ. ಮಾತ್ರವಲ್ಲ, ಕಳೆದ ಬಾರಿಗಿಂತಲೂ ಹೆಚ್ಚಿನ ಕೊಡುಗೆ ಕೇಂದ್ರ ಬಜೆಟ್ನಿಂದ ಜಿಲ್ಲೆಗೆ ದಕ್ಕಬಹುದು ಎಂದು ಬಜೆಟ್ ಮಂಡನೆಯನ್ನೇ ಎದುರು ನೋಡುತ್ತಿದ್ದಾರೆ.</p>.<p>ಮುಖ್ಯವಾಗಿ, ಕಾಫಿ, ಪ್ರವಾಸೋದ್ಯಮ, ವನ್ಯಜೀವಿ ಮಾನವ ಸಂಘರ್ಷ, ಅರಣ್ಯ, ರೈಲು, ವಿಮಾನ, ಹೆಲಿಟೂರಿಸಂ... ಹೀಗೆ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿನ ಹೆಚ್ಚಿನ ವಿಷಯಗಳು ಕೇಂದ್ರದ ವ್ಯಾಪ್ತಿಗೆ ಬರುತ್ತವೆ. ಹಾಗಾಗಿ, ಇತರೆ ಜಿಲ್ಲೆಗಳಿಗಿಂತ ಹೆಚ್ಚಿನ ನಿರೀಕ್ಷೆ ಇಲ್ಲಿನ ಜನರಲ್ಲಿದೆ.</p>.<p>ಕಾರ್ಮಿಕರ ಅಲಭ್ಯತೆ, ತೋಟಗಳ ನಿರ್ವಹಣಾ ವೆಚ್ಚ ಏರಿಕೆ, ವನ್ಯಜೀವಿಗಳ ಕಾಟ ಹೀಗೆ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಕಾಫಿ ಬೆಳಗಾರರು ನಿರೀಕ್ಷೆಗಣ್ಣುಗಳಿಂದ ಕೇಂದ್ರ ಬಜೆಟ್ನ್ನು ನೋಡುತ್ತಿದ್ದಾರೆ. ಸಾಲಮನ್ನಾ, ಬಡ್ಡಿ ಮನ್ನಾ, ಸಾಲದ ಮಿತಿ ಏರಿಕೆ, ಸಹಾಯಧನ ಸೇರಿದಂತೆ ಬೆಳೆಗಾರರಿಗೆ ಉತ್ತೇಜನ ಸಿಗುವಂತಹ ಯಾವುದಾದರೂ ಒಂದು ಕ್ರಮವನ್ನಾದರೂ ಸರ್ಕಾರ ಕೈಗೊಳ್ಳಬಹುದೇ ಎಂಬ ನಿರೀಕ್ಷೆ ಇದೆ.</p>.<p>ಕಾಫಿಯನ್ನು ಬಿಟ್ಟರೆ ಜಿಲ್ಲೆಯ ಜನ ಹೆಚ್ಚು ಅವಲಂಬಿತವಾಗಿರುವುದು ಪ್ರವಾಸೋದ್ಯಮದ ಮೇಲೆ. ಆದರೆ, ಇದುವರೆಗೂ ಕೊಡಗಿನಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಆಗಿಲ್ಲ. ನೂರಾರು ಸ್ಥಳಗಳಿದ್ದರೂ ಕೇವಲ ಬೆರಳೆಣಿಕೆಯಷ್ಟು ಸ್ಥಳಗಳು ಮಾತ್ರವೇ ಪ್ರವಾಸಿ ತಾಣ ಎನಿಸಿವೆ. ಈ ತಾಣಗಳೂ ಮೂಲಸೌಕರ್ಯಗಳ ಕೊರತೆಯಿಂದ ನರಳುತ್ತಿವೆ. ಬಹಳಷ್ಟು ಪ್ರವಾಸಿಗಳಿಗೆ ಒಮ್ಮೆ ಬಂದರೆ ಸಾಕು ಮತ್ತೊಮ್ಮೆ ಕೊಡಗಿಗೆ ಹೋಗುವುದು ಬೇಡ ಎನ್ನಿಸುತ್ತದೆ. ಈಗ ಇರುವ ಪ್ರವಾಸಿ ತಾಣಗಳಿಗೆ ಮೂಲಸೌಕರ್ಯ ಒದಗಿಸುವ ಹಾಗೂ ಸುಸ್ಥಿರ ಪ್ರವಾಸೋದ್ಯಮ ಹೊಸಹೊಸ ಸಾಧ್ಯತೆಗಳೇನಾದರೂ ಬಜೆಟ್ನಲ್ಲಿ ಸಿಗಬಹುದೇ ಎಂಬ ನಿರೀಕ್ಷೆ ಪ್ರವಾಸೋದ್ಯಮ ವಲಯದಲ್ಲಿದೆ.</p>.<p>ಇನ್ನು ರೈಲು ಸಂಪರ್ಕ ಇರದ ಜಿಲ್ಲೆ ಎನಿಸಿರುವ ಕೊಡಗಿಗೆ ರೈಲು ಸಂಪರ್ಕ ಬೇಕೆಂಬ ಕೂಗು ದಶಕಗಳದ್ದು. ಈ ಕೂಗು ದೆಹಲಿಯನ್ನು ತಲುಪುತ್ತದೆಯೆ ಎಂಬುದನ್ನು ಬಜೆಟ್ನಲ್ಲಿ ಕಾದು ನೋಡಬೇಕಿದೆ. ಈ ಸಂಬಂಧ ಘೋಷಣೆಯಾಗಿರುವ ಯೋಜನೆಗಳಿಗೆ ಹೆಚ್ಚಿನ ಹಣಕಾಸಿನ ನೆರವು ಸಿಗಲಿದೆಯೇ ಎಂಬ ಬೇಡಿಕೆಯೂ ಇದೆ.</p>.<p>ಕೈಗಾರಿಕೆಗಳ ಅಭಿವೃದ್ಧಿ ಕುಶಾಲನಗರ ಸೂಕ್ತವಾಗಿದ್ದು, ಇಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲವಾಗುವಂತಹ ಮೂಲಸೌಕರ್ಯಗಳನ್ನು ಒದಗಿಸಬಹುದೇ ಎಂಬ ನಿರೀಕ್ಷೆಯೂ ಕೈಗಾರಿಕೋದ್ಯಮಿಗಳಲ್ಲಿದೆ.</p>.<p>ವನ್ಯಜೀವಿ ಮಾನವ ಸಂಘರ್ಷ ತಡೆಗಟ್ಟಲು ಕೇಂದ್ರ ಸರ್ಕಾರ ದೂರದೃಷ್ಟಿಯ ಯೋಜನೆ ಯೋಜಿಸಬೇಕು, ತೋಟಗಳಲ್ಲೇ ಸಂತಾನೋತ್ಪತ್ತಿ ಮಾಡುತ್ತಾ ತೋಟಗಳನ್ನೇ ಮನೆ ಮಾಡಿಕೊಂಡಿರುವ ಕಾಡಾನೆಗಳನ್ನು ಸ್ಥಳಾಂತರಿಸಬೇಕು, ಕಾಡಂಚಿನಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸಬೇಕು ಹೀಗೆ ವನ್ಯಜೀವಿ ಮಾನವ ಸಂಘರ್ಷ ತಡೆಗೆ ಏನಾದರೂ ಯೋಜನೆಗಳು ಬಜೆಟ್ನಲ್ಲಿ ಸಿಗಬಹುದೇ ಎಂಬ ಆಸೆಯೂ ಇಲ್ಲಿನವರಲ್ಲಿದೆ.</p>.<p>ವಿಮಾನನಿಲ್ದಾಣ ನಿರ್ಮಾಣ, ಕುಸಿಯುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಸುಸ್ಥಿರ ಅಭಿವೃದ್ಧಿ ಸೇರಿದಂತೆ ಇನ್ನೂ ಅನೇಕ ನಿರೀಕ್ಷೆಗಳು ಕೇಂದ್ರದ ಬಜೆಟ್ ಮೇಲಿದೆ.</p>.<p>ಪ್ರತಿಕ್ರಿಯೆಗಳು ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು ಕೇಂದ್ರ ಸರ್ಕಾರ ಬಜೆಟ್ನಲ್ಲಿ ಕೊಡಗನ್ನು ವಿಶೇಷವಾಗಿ ಪರಿಗಣಿಸಬೇಕು. ಇಲ್ಲಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ಇನ್ನಷ್ಟು ಒತ್ತು ನೀಡಬೇಕು. ಹೋಟೆಲ್ ರೂಂಗಳಿಗೆ ನಿಗದಿಮಾಡಿರುವ ಜಿಎಸ್ಟಿಯನ್ನು ಇಳಿಕೆ ಮಾಡಬೇಕು. ಕೊಡಗನ್ನೇ ದತ್ತುವನ್ನಾಗಿ ಕೇಂದ್ರ ಸ್ವೀಕರಿಸಿ ಅಭಿವೃದ್ಧಿಪಡಿಸಬೇಕು </p><p><strong>-ನಾಗೇಂದ್ರಪ್ರಸಾದ್ ಕೊಡಗು ಜಿಲ್ಲಾ ಹೋಟೆಲ್ ರೆಸಾರ್ಟ್ಸ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷ.</strong> </p><p>ವಿಮಾ ವ್ಯಾಪ್ತಿಗೆ ಕಾಫಿ ತನ್ನಿ ಅತಿವಷ್ಟಿ ಅನಾವೃಷ್ಟಿಯ ಹೆಚ್ಚುತ್ತಿದೆ. ಕೇಂದ್ರ ಸರ್ಕಾರ ಅಡಿಕೆ ಕಾಳುಮೆಣಸಿಗೆ ವಿಮೆ ನೀಡಿದೆ. ಆದರೆ ಮುಖ್ಯಬೆಳೆಯಾದ ಕಾಫಿಗೆ ನೀಡಿಲ್ಲ. ಕಾಫಿಯನ್ನೂ ಫಸಲ್ ವಿಮಾ ಯೋಜನೆ ವ್ಯಾಪ್ತಿಗೆ ತಂದರೆ ಕಾಫಿಬೆಳೆಗಾರರಿಗೆ ಅನುಕೂಲವಾಗಲಿದೆ. </p><p><strong>-ವಿಶ್ವನಾಥ್ ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ.</strong> </p><p>ಕೊಡಗಿಗೆ ರೈಲು ಬರಲಿ ಕೊಡಗಿಗೆ ತೀರಾ ಅಗತ್ಯವಾಗಿ ರೈಲು ಸಂಪರ್ಕ ಬೇಕು ಹಾಗೂ ವಿಮಾನಯಾನ ಸಂಪರ್ಕವೂ ಬೇಕು. ಈ ಎರಡನ್ನೂ ಪೂರ್ಣಪ್ರಮಾಣದಲ್ಲಿ ಜಾರಿ ಮಾಡುವಂತಹ ಯೋಜನೆಯನ್ನು ಕೇಂದ್ರ ತನ್ನ ಬಜೆಟ್ನಲ್ಲಿ ಪ್ರಕಟಿಸಲಿ. ಜೊತೆಗೆ ಕೊಡಗಿನ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಬೇಕಿದೆ. ಇಲ್ಲಿ ಅಪಘಾತಗಳು ಸಂಭವಿಸದಂತೆ ನೋಡಿಕೊಳ್ಳಬೇಕಿದೆ. </p><p><strong>-ನವೀನ್ ಅಂಬೆಕಲ್ ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಗಳ ಸಂಸ್ಥೆಯ ಉಪಾಧ್ಯಕ್ಷ.</strong> </p><p>ಸಂಪೂರ್ಣ ಸಾಲಮನ್ನಾ ಮಾಡಿ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು. ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರಬಾರದು. ಯಾವುದೇ ಕಾರಣಕ್ಕೂ ಕೃಷಿ ಪಂಪ್ಸೆಟ್ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಬಾರದು. ರೈತಪರವಾದ ಕೃಷಿ ನೀತಿಯನ್ನು ಜಾರಿಗೆ ತರಬೇಕು. </p><p>-ರವಿಕಿರಣ್ ಪುಣಚ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ಕೊಡಗು ಜಿಲ್ಲೆ ರಾಜ್ಯ ಬಜೆಟ್ ಮೇಲೆ ಎಷ್ಟು ಅವಲಂಬಿತವಾಗಿದೆಯೋ ಅಷ್ಟೇ ಕೇಂದ್ರ ಸರ್ಕಾರದ ಬಜೆಟ್ ಮೇಲೂ ಅವಲಂಬಿತವಾಗಿದೆ. ಜಿಲ್ಲೆಯ ಜನರು ಒಂದಿಲ್ಲೊಂದು ಕಾರಣದಿಂದ ಬಹುವಾಗಿ ನೆಚ್ಚಿಕೊಂಡಿರುವ ಕಾಫಿ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳು ಕೇಂದ್ರ ಬಜೆಟ್ನತ್ತ ಚಿತ್ತನೆಟ್ಟಿವೆ. ಇಲ್ಲಿನ ಉದ್ಯಮಿಗಳು, ವ್ಯಾಪಾರಸ್ಥರು, ರೈತರು ಹಾಗೂ ಬೆಳೆಗಾರರು ಕೇಂದ್ರ ಬಜೆಟ್ ಮೇಲೆ ಅಗಾಧ ನಿರೀಕ್ಷೆಯನ್ನಿರಿಸಿಕೊಂಡಿದ್ದಾರೆ.</p>.<p>ಈ ಬಾರಿ ನೂತನ ಸಂಸದರಾಗಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯ್ಕೆಯಾಗಿರುವುದು ಹಾಗೂ ಅವರ ಗೆಲುವಿಗೆ ಕೊಡಗು ಜಿಲ್ಲೆಯಿಂದಲೇ ಅತ್ಯಧಿಕ ಮತಗಳು ಬಂದಿರುವುದು ಇಲ್ಲಿನ ಜನರ ನಿರೀಕ್ಷೆಗಳನ್ನು ಗರಿಗೆದರಿಸಿದೆ. ಮಾತ್ರವಲ್ಲ, ಕಳೆದ ಬಾರಿಗಿಂತಲೂ ಹೆಚ್ಚಿನ ಕೊಡುಗೆ ಕೇಂದ್ರ ಬಜೆಟ್ನಿಂದ ಜಿಲ್ಲೆಗೆ ದಕ್ಕಬಹುದು ಎಂದು ಬಜೆಟ್ ಮಂಡನೆಯನ್ನೇ ಎದುರು ನೋಡುತ್ತಿದ್ದಾರೆ.</p>.<p>ಮುಖ್ಯವಾಗಿ, ಕಾಫಿ, ಪ್ರವಾಸೋದ್ಯಮ, ವನ್ಯಜೀವಿ ಮಾನವ ಸಂಘರ್ಷ, ಅರಣ್ಯ, ರೈಲು, ವಿಮಾನ, ಹೆಲಿಟೂರಿಸಂ... ಹೀಗೆ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿನ ಹೆಚ್ಚಿನ ವಿಷಯಗಳು ಕೇಂದ್ರದ ವ್ಯಾಪ್ತಿಗೆ ಬರುತ್ತವೆ. ಹಾಗಾಗಿ, ಇತರೆ ಜಿಲ್ಲೆಗಳಿಗಿಂತ ಹೆಚ್ಚಿನ ನಿರೀಕ್ಷೆ ಇಲ್ಲಿನ ಜನರಲ್ಲಿದೆ.</p>.<p>ಕಾರ್ಮಿಕರ ಅಲಭ್ಯತೆ, ತೋಟಗಳ ನಿರ್ವಹಣಾ ವೆಚ್ಚ ಏರಿಕೆ, ವನ್ಯಜೀವಿಗಳ ಕಾಟ ಹೀಗೆ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಕಾಫಿ ಬೆಳಗಾರರು ನಿರೀಕ್ಷೆಗಣ್ಣುಗಳಿಂದ ಕೇಂದ್ರ ಬಜೆಟ್ನ್ನು ನೋಡುತ್ತಿದ್ದಾರೆ. ಸಾಲಮನ್ನಾ, ಬಡ್ಡಿ ಮನ್ನಾ, ಸಾಲದ ಮಿತಿ ಏರಿಕೆ, ಸಹಾಯಧನ ಸೇರಿದಂತೆ ಬೆಳೆಗಾರರಿಗೆ ಉತ್ತೇಜನ ಸಿಗುವಂತಹ ಯಾವುದಾದರೂ ಒಂದು ಕ್ರಮವನ್ನಾದರೂ ಸರ್ಕಾರ ಕೈಗೊಳ್ಳಬಹುದೇ ಎಂಬ ನಿರೀಕ್ಷೆ ಇದೆ.</p>.<p>ಕಾಫಿಯನ್ನು ಬಿಟ್ಟರೆ ಜಿಲ್ಲೆಯ ಜನ ಹೆಚ್ಚು ಅವಲಂಬಿತವಾಗಿರುವುದು ಪ್ರವಾಸೋದ್ಯಮದ ಮೇಲೆ. ಆದರೆ, ಇದುವರೆಗೂ ಕೊಡಗಿನಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಆಗಿಲ್ಲ. ನೂರಾರು ಸ್ಥಳಗಳಿದ್ದರೂ ಕೇವಲ ಬೆರಳೆಣಿಕೆಯಷ್ಟು ಸ್ಥಳಗಳು ಮಾತ್ರವೇ ಪ್ರವಾಸಿ ತಾಣ ಎನಿಸಿವೆ. ಈ ತಾಣಗಳೂ ಮೂಲಸೌಕರ್ಯಗಳ ಕೊರತೆಯಿಂದ ನರಳುತ್ತಿವೆ. ಬಹಳಷ್ಟು ಪ್ರವಾಸಿಗಳಿಗೆ ಒಮ್ಮೆ ಬಂದರೆ ಸಾಕು ಮತ್ತೊಮ್ಮೆ ಕೊಡಗಿಗೆ ಹೋಗುವುದು ಬೇಡ ಎನ್ನಿಸುತ್ತದೆ. ಈಗ ಇರುವ ಪ್ರವಾಸಿ ತಾಣಗಳಿಗೆ ಮೂಲಸೌಕರ್ಯ ಒದಗಿಸುವ ಹಾಗೂ ಸುಸ್ಥಿರ ಪ್ರವಾಸೋದ್ಯಮ ಹೊಸಹೊಸ ಸಾಧ್ಯತೆಗಳೇನಾದರೂ ಬಜೆಟ್ನಲ್ಲಿ ಸಿಗಬಹುದೇ ಎಂಬ ನಿರೀಕ್ಷೆ ಪ್ರವಾಸೋದ್ಯಮ ವಲಯದಲ್ಲಿದೆ.</p>.<p>ಇನ್ನು ರೈಲು ಸಂಪರ್ಕ ಇರದ ಜಿಲ್ಲೆ ಎನಿಸಿರುವ ಕೊಡಗಿಗೆ ರೈಲು ಸಂಪರ್ಕ ಬೇಕೆಂಬ ಕೂಗು ದಶಕಗಳದ್ದು. ಈ ಕೂಗು ದೆಹಲಿಯನ್ನು ತಲುಪುತ್ತದೆಯೆ ಎಂಬುದನ್ನು ಬಜೆಟ್ನಲ್ಲಿ ಕಾದು ನೋಡಬೇಕಿದೆ. ಈ ಸಂಬಂಧ ಘೋಷಣೆಯಾಗಿರುವ ಯೋಜನೆಗಳಿಗೆ ಹೆಚ್ಚಿನ ಹಣಕಾಸಿನ ನೆರವು ಸಿಗಲಿದೆಯೇ ಎಂಬ ಬೇಡಿಕೆಯೂ ಇದೆ.</p>.<p>ಕೈಗಾರಿಕೆಗಳ ಅಭಿವೃದ್ಧಿ ಕುಶಾಲನಗರ ಸೂಕ್ತವಾಗಿದ್ದು, ಇಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲವಾಗುವಂತಹ ಮೂಲಸೌಕರ್ಯಗಳನ್ನು ಒದಗಿಸಬಹುದೇ ಎಂಬ ನಿರೀಕ್ಷೆಯೂ ಕೈಗಾರಿಕೋದ್ಯಮಿಗಳಲ್ಲಿದೆ.</p>.<p>ವನ್ಯಜೀವಿ ಮಾನವ ಸಂಘರ್ಷ ತಡೆಗಟ್ಟಲು ಕೇಂದ್ರ ಸರ್ಕಾರ ದೂರದೃಷ್ಟಿಯ ಯೋಜನೆ ಯೋಜಿಸಬೇಕು, ತೋಟಗಳಲ್ಲೇ ಸಂತಾನೋತ್ಪತ್ತಿ ಮಾಡುತ್ತಾ ತೋಟಗಳನ್ನೇ ಮನೆ ಮಾಡಿಕೊಂಡಿರುವ ಕಾಡಾನೆಗಳನ್ನು ಸ್ಥಳಾಂತರಿಸಬೇಕು, ಕಾಡಂಚಿನಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸಬೇಕು ಹೀಗೆ ವನ್ಯಜೀವಿ ಮಾನವ ಸಂಘರ್ಷ ತಡೆಗೆ ಏನಾದರೂ ಯೋಜನೆಗಳು ಬಜೆಟ್ನಲ್ಲಿ ಸಿಗಬಹುದೇ ಎಂಬ ಆಸೆಯೂ ಇಲ್ಲಿನವರಲ್ಲಿದೆ.</p>.<p>ವಿಮಾನನಿಲ್ದಾಣ ನಿರ್ಮಾಣ, ಕುಸಿಯುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಸುಸ್ಥಿರ ಅಭಿವೃದ್ಧಿ ಸೇರಿದಂತೆ ಇನ್ನೂ ಅನೇಕ ನಿರೀಕ್ಷೆಗಳು ಕೇಂದ್ರದ ಬಜೆಟ್ ಮೇಲಿದೆ.</p>.<p>ಪ್ರತಿಕ್ರಿಯೆಗಳು ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು ಕೇಂದ್ರ ಸರ್ಕಾರ ಬಜೆಟ್ನಲ್ಲಿ ಕೊಡಗನ್ನು ವಿಶೇಷವಾಗಿ ಪರಿಗಣಿಸಬೇಕು. ಇಲ್ಲಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ಇನ್ನಷ್ಟು ಒತ್ತು ನೀಡಬೇಕು. ಹೋಟೆಲ್ ರೂಂಗಳಿಗೆ ನಿಗದಿಮಾಡಿರುವ ಜಿಎಸ್ಟಿಯನ್ನು ಇಳಿಕೆ ಮಾಡಬೇಕು. ಕೊಡಗನ್ನೇ ದತ್ತುವನ್ನಾಗಿ ಕೇಂದ್ರ ಸ್ವೀಕರಿಸಿ ಅಭಿವೃದ್ಧಿಪಡಿಸಬೇಕು </p><p><strong>-ನಾಗೇಂದ್ರಪ್ರಸಾದ್ ಕೊಡಗು ಜಿಲ್ಲಾ ಹೋಟೆಲ್ ರೆಸಾರ್ಟ್ಸ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷ.</strong> </p><p>ವಿಮಾ ವ್ಯಾಪ್ತಿಗೆ ಕಾಫಿ ತನ್ನಿ ಅತಿವಷ್ಟಿ ಅನಾವೃಷ್ಟಿಯ ಹೆಚ್ಚುತ್ತಿದೆ. ಕೇಂದ್ರ ಸರ್ಕಾರ ಅಡಿಕೆ ಕಾಳುಮೆಣಸಿಗೆ ವಿಮೆ ನೀಡಿದೆ. ಆದರೆ ಮುಖ್ಯಬೆಳೆಯಾದ ಕಾಫಿಗೆ ನೀಡಿಲ್ಲ. ಕಾಫಿಯನ್ನೂ ಫಸಲ್ ವಿಮಾ ಯೋಜನೆ ವ್ಯಾಪ್ತಿಗೆ ತಂದರೆ ಕಾಫಿಬೆಳೆಗಾರರಿಗೆ ಅನುಕೂಲವಾಗಲಿದೆ. </p><p><strong>-ವಿಶ್ವನಾಥ್ ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ.</strong> </p><p>ಕೊಡಗಿಗೆ ರೈಲು ಬರಲಿ ಕೊಡಗಿಗೆ ತೀರಾ ಅಗತ್ಯವಾಗಿ ರೈಲು ಸಂಪರ್ಕ ಬೇಕು ಹಾಗೂ ವಿಮಾನಯಾನ ಸಂಪರ್ಕವೂ ಬೇಕು. ಈ ಎರಡನ್ನೂ ಪೂರ್ಣಪ್ರಮಾಣದಲ್ಲಿ ಜಾರಿ ಮಾಡುವಂತಹ ಯೋಜನೆಯನ್ನು ಕೇಂದ್ರ ತನ್ನ ಬಜೆಟ್ನಲ್ಲಿ ಪ್ರಕಟಿಸಲಿ. ಜೊತೆಗೆ ಕೊಡಗಿನ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಬೇಕಿದೆ. ಇಲ್ಲಿ ಅಪಘಾತಗಳು ಸಂಭವಿಸದಂತೆ ನೋಡಿಕೊಳ್ಳಬೇಕಿದೆ. </p><p><strong>-ನವೀನ್ ಅಂಬೆಕಲ್ ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಗಳ ಸಂಸ್ಥೆಯ ಉಪಾಧ್ಯಕ್ಷ.</strong> </p><p>ಸಂಪೂರ್ಣ ಸಾಲಮನ್ನಾ ಮಾಡಿ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು. ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರಬಾರದು. ಯಾವುದೇ ಕಾರಣಕ್ಕೂ ಕೃಷಿ ಪಂಪ್ಸೆಟ್ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಬಾರದು. ರೈತಪರವಾದ ಕೃಷಿ ನೀತಿಯನ್ನು ಜಾರಿಗೆ ತರಬೇಕು. </p><p>-ರವಿಕಿರಣ್ ಪುಣಚ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>