<p><strong>ಮಡಿಕೇರಿ:</strong> ‘ದೊಡ್ಡ ದೊಡ್ಡ ಬಂಡವಾಳಶಾಹಿಗಳ ಪರ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರುವ ಸರ್ಕಾರಗಳು ಮತಬ್ಯಾಂಕ್ಗಾಗಿ ಕೊಡಗನ್ನು ಬಲಿಪಶು ಮಾಡುತ್ತಿವೆ’ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ (ಸಿಎನ್ಸಿ) ಎನ್.ಯು.ನಾಚಪ್ಪ ಆರೋಪಿಸಿದರು.</p>.<p>ಕೊಡಗು ಜಿಲ್ಲೆಯಲ್ಲಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಸಿಎನ್ಸಿ ವತಿಯಿಂದ ಪೊನ್ನಂಪೇಟೆ ಪಟ್ಟಣದಲ್ಲಿ ಸೋಮವಾರ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಈ ಹಿಂದಿನ ಸರ್ಕಾರ 30 ಎಕರೆವರೆಗಿನ ಒತ್ತುವರಿ ಜಮೀನನ್ನು 30 ವರ್ಷ ಗುತ್ತಿಗೆ ನೀಡುವ ಕ್ರಮ ಜಾರಿಗೆ ತಂದಿತ್ತು. ಇದಕ್ಕೆ ಪೂರಕವಾಗಿ ಈಗಿನ ಸರ್ಕಾರ ವಿಧಾನಸಭೆಯಲ್ಲಿ ಅನುಮೋದನೆ ನೀಡಿ ಕೃಷಿಕರನ್ನು ನಿರಾಳಗೊಳಿಸಿತ್ತು. ಆದರೆ ಇತ್ತೀಚೆಗಿನ ಬೆಳವಣಿಗೆಗಳು ವ್ಯತಿರಿಕ್ತವಾಗಿದ್ದು, ಗುತ್ತಿಗೆ ಆಧಾರದ ಯೋಜನೆ ಅನುಷ್ಠಾನಗೊಳ್ಳುವ ಬಗ್ಗೆ ಅನುಮಾನ ಕಾಡುತ್ತಿದೆ ಎಂದರು.</p>.<p>ಆದಿಮಸಂಜಾತ ಕೊಡವ ಬುಡಕಟ್ಟು ಜನರಿಗೆ ಒಂದಿಲ್ಲ ಒಂದು ಕಾನೂನಿನ ಮೂಲಕ ಕಿರುಕುಳವಾಗುತ್ತಿದೆ. ಸದಾ ಜನರ ಕಲ್ಯಾಣವನ್ನು ಬಯಸುವ ಸರ್ಕಾರದಿಂದ ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಕೊಡವರು ಕಲ್ಯಾಣ ರಾಜ್ಯದ ವ್ಯಾಪ್ತಿಯಲ್ಲಿ ಸ್ವತಂತ್ರವಾಗಿ ಬದುಕಬೇಕೆ ಅಥವಾ ಬೇಡವೇ ಎನ್ನುವ ಗೊಂದಲವನ್ನು ಸರ್ಕಾರ ಸೃಷ್ಟಿಸಿದೆ ಎಂದೂ ಅವರು ದೂರಿದರು.</p>.<p>ಆರ್ಥಿಕ ಹೊರೆಯನ್ನು ಅನುಭವಿಸುತ್ತಿರುವ ರಾಜ್ಯ ಸರ್ಕಾರ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಕೊಡಗು ಜಿಲ್ಲೆಯಲ್ಲಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಗೆ ಪರೋಕ್ಷವಾಗಿ ಉತ್ತೇಜನ ನೀಡುತ್ತಿದೆ ಏನೋ ಎಂಬ ಅನುಮಾನವೂ ಕಾಡುತ್ತಿದೆ ಎಂದರು.</p>.<p>ಸರ್ಕಾರಕ್ಕೆ ಧೈರ್ಯವಿದ್ದರೆ ಮೊದಲು ದೊಡ್ಡ ದೊಡ್ಡ ಕಂಪೆನಿಗಳು ಒತ್ತುವರಿ ಮಾಡಿಕೊಂಡಿರುವ ನೂರಾರು ಎಕರೆ ಭೂಮಿಯನ್ನು ತೆರವುಗೊಳಿಸಲಿ ಎಂದೂ ಅವರು ಸವಾಲೆಸೆದರು.</p>.<p>ಕಾಫಿತೋಟಗಳು ಭೂಪರಿವರ್ತನೆಯಾಗಿ ಅಲ್ಲಿ ಬಡಾವಣೆಗಳು ನಿರ್ಮಾಣವಾದರೆ ಪರಿಸರ ನಾಶವಾಗುತ್ತದೆ. ಜಲ, ತೊರೆಗಳು ಬತ್ತುತ್ತವೆ. ಅಂತಿಮವಾಗಿ ಕಾವೇರಿ ಒಡಲು ಬರಿದಾಗುತ್ತದೆ ಎಂದೂ ಅವರು ಎಚ್ಚರಿಸಿದರು.</p>.<p>ಪವಿತ್ರ ಕೊಡವ ಲ್ಯಾಂಡ್ ನಲ್ಲಿ ನಿತ್ಯ ಪ್ರವಾಸಿಗರ ಮೋಜು ಮಸ್ತಿ, ದೌರ್ಜನ್ಯ ನಡೆಯುತ್ತಿದೆ. ಪ್ರವಾಸಿಗರಿಂದಾಗಿ ಮೂಲ ನಿವಾಸಿಗಳಿಗೆ ರಕ್ಷಣೆ ಮತ್ತು ನೆಮ್ಮದಿ ಇಲ್ಲದಾಗಿದೆ. ಪ್ರವಾಸಿಗರ ದೌರ್ಜನ್ಯಕ್ಕೆ ಸಂಬಪಟ್ಟ ಇಲಾಖೆಗಳು ಕಡಿವಾಣ ಹಾಕಬೇಕು. ತಪ್ಪಿದಲ್ಲಿ ಸ್ಥಳೀಯರಿಗೆ ಉಳಿಗಾಲವಿಲ್ಲದಂತ್ತಾಗುತ್ತದೆ ಎಂದೂ ಅವರು ದೂರಿದರು.</p>.<p>ಜುಲೈ 24ರಂದು ವಿರಾಜಪೇಟೆ, ಜುಲೈ 29 ರಂದು ಟಿ.ಶೆಟ್ಟಿಗೇರಿ ಮತ್ತು ಆಗಸ್ಟ್ 10ರಂದು ಮಾದಾಪುರದಲ್ಲಿ ಮಾನವಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.</p>.<p>ಚೇಂದಿರ ಶೈಲಾ, ಮುದ್ದಿಯಡ ಲೀಲಾವತಿ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಮತ್ರಂಡ ಬೋಜಮ್ಮ, ಮಾಚಿಮಾಡ ಲವ್ಲಿ, ಮಾಣಿಪಂಡ ರತಿ, ಮಲ್ಚಿರ ಕವಿತಾ, ಕಾಯಮಾಡ ಕಮಲ, ಕೇಚೆಟ್ಟಿರ ಕಾಮುನಿ, ಕಾಳಮಂಡ ನಯನ, ಕಾಳಮಂಡ ಕಲ್ಪಕ್, ಮಲ್ಚಿರ ಪ್ರತೀಮ, ಬೊಳ್ಳಮ್ಮ, ಸುಳ್ಳಿಮಾಡ ವಿನು, ಆಲೆಮಾಡ ರೋಶನ್, ಆಲೆಮಾಡ ನವೀನ, ಮತ್ರಂಡ ನವೀನ್, ಮುದ್ದಿಯಡ ಕಿರಣ್ ಭಾಗವಹಿಸಿದ್ದರು.</p>.<p>ಜುಲೈ 24 ರಂದು ವಿರಾಜಪೇಟೆಯಲ್ಲಿ ಪ್ರತಿಭಟನೆ ಜುಲೈ 29 ರಂದು ಟಿ.ಶೆಟ್ಟಿಗೇರಿಯಲ್ಲಿ ಮಾನವ ಸರಪಳಿ ರಚನೆ ಆಗಸ್ಟ್ 10ರಂದು ಮಾದಾಪುರದಲ್ಲಿ ಜನಜಾಗೃತಿ ಕಾರ್ಯಕ್ರಮ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ‘ದೊಡ್ಡ ದೊಡ್ಡ ಬಂಡವಾಳಶಾಹಿಗಳ ಪರ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರುವ ಸರ್ಕಾರಗಳು ಮತಬ್ಯಾಂಕ್ಗಾಗಿ ಕೊಡಗನ್ನು ಬಲಿಪಶು ಮಾಡುತ್ತಿವೆ’ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ (ಸಿಎನ್ಸಿ) ಎನ್.ಯು.ನಾಚಪ್ಪ ಆರೋಪಿಸಿದರು.</p>.<p>ಕೊಡಗು ಜಿಲ್ಲೆಯಲ್ಲಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಸಿಎನ್ಸಿ ವತಿಯಿಂದ ಪೊನ್ನಂಪೇಟೆ ಪಟ್ಟಣದಲ್ಲಿ ಸೋಮವಾರ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಈ ಹಿಂದಿನ ಸರ್ಕಾರ 30 ಎಕರೆವರೆಗಿನ ಒತ್ತುವರಿ ಜಮೀನನ್ನು 30 ವರ್ಷ ಗುತ್ತಿಗೆ ನೀಡುವ ಕ್ರಮ ಜಾರಿಗೆ ತಂದಿತ್ತು. ಇದಕ್ಕೆ ಪೂರಕವಾಗಿ ಈಗಿನ ಸರ್ಕಾರ ವಿಧಾನಸಭೆಯಲ್ಲಿ ಅನುಮೋದನೆ ನೀಡಿ ಕೃಷಿಕರನ್ನು ನಿರಾಳಗೊಳಿಸಿತ್ತು. ಆದರೆ ಇತ್ತೀಚೆಗಿನ ಬೆಳವಣಿಗೆಗಳು ವ್ಯತಿರಿಕ್ತವಾಗಿದ್ದು, ಗುತ್ತಿಗೆ ಆಧಾರದ ಯೋಜನೆ ಅನುಷ್ಠಾನಗೊಳ್ಳುವ ಬಗ್ಗೆ ಅನುಮಾನ ಕಾಡುತ್ತಿದೆ ಎಂದರು.</p>.<p>ಆದಿಮಸಂಜಾತ ಕೊಡವ ಬುಡಕಟ್ಟು ಜನರಿಗೆ ಒಂದಿಲ್ಲ ಒಂದು ಕಾನೂನಿನ ಮೂಲಕ ಕಿರುಕುಳವಾಗುತ್ತಿದೆ. ಸದಾ ಜನರ ಕಲ್ಯಾಣವನ್ನು ಬಯಸುವ ಸರ್ಕಾರದಿಂದ ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಕೊಡವರು ಕಲ್ಯಾಣ ರಾಜ್ಯದ ವ್ಯಾಪ್ತಿಯಲ್ಲಿ ಸ್ವತಂತ್ರವಾಗಿ ಬದುಕಬೇಕೆ ಅಥವಾ ಬೇಡವೇ ಎನ್ನುವ ಗೊಂದಲವನ್ನು ಸರ್ಕಾರ ಸೃಷ್ಟಿಸಿದೆ ಎಂದೂ ಅವರು ದೂರಿದರು.</p>.<p>ಆರ್ಥಿಕ ಹೊರೆಯನ್ನು ಅನುಭವಿಸುತ್ತಿರುವ ರಾಜ್ಯ ಸರ್ಕಾರ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಕೊಡಗು ಜಿಲ್ಲೆಯಲ್ಲಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಗೆ ಪರೋಕ್ಷವಾಗಿ ಉತ್ತೇಜನ ನೀಡುತ್ತಿದೆ ಏನೋ ಎಂಬ ಅನುಮಾನವೂ ಕಾಡುತ್ತಿದೆ ಎಂದರು.</p>.<p>ಸರ್ಕಾರಕ್ಕೆ ಧೈರ್ಯವಿದ್ದರೆ ಮೊದಲು ದೊಡ್ಡ ದೊಡ್ಡ ಕಂಪೆನಿಗಳು ಒತ್ತುವರಿ ಮಾಡಿಕೊಂಡಿರುವ ನೂರಾರು ಎಕರೆ ಭೂಮಿಯನ್ನು ತೆರವುಗೊಳಿಸಲಿ ಎಂದೂ ಅವರು ಸವಾಲೆಸೆದರು.</p>.<p>ಕಾಫಿತೋಟಗಳು ಭೂಪರಿವರ್ತನೆಯಾಗಿ ಅಲ್ಲಿ ಬಡಾವಣೆಗಳು ನಿರ್ಮಾಣವಾದರೆ ಪರಿಸರ ನಾಶವಾಗುತ್ತದೆ. ಜಲ, ತೊರೆಗಳು ಬತ್ತುತ್ತವೆ. ಅಂತಿಮವಾಗಿ ಕಾವೇರಿ ಒಡಲು ಬರಿದಾಗುತ್ತದೆ ಎಂದೂ ಅವರು ಎಚ್ಚರಿಸಿದರು.</p>.<p>ಪವಿತ್ರ ಕೊಡವ ಲ್ಯಾಂಡ್ ನಲ್ಲಿ ನಿತ್ಯ ಪ್ರವಾಸಿಗರ ಮೋಜು ಮಸ್ತಿ, ದೌರ್ಜನ್ಯ ನಡೆಯುತ್ತಿದೆ. ಪ್ರವಾಸಿಗರಿಂದಾಗಿ ಮೂಲ ನಿವಾಸಿಗಳಿಗೆ ರಕ್ಷಣೆ ಮತ್ತು ನೆಮ್ಮದಿ ಇಲ್ಲದಾಗಿದೆ. ಪ್ರವಾಸಿಗರ ದೌರ್ಜನ್ಯಕ್ಕೆ ಸಂಬಪಟ್ಟ ಇಲಾಖೆಗಳು ಕಡಿವಾಣ ಹಾಕಬೇಕು. ತಪ್ಪಿದಲ್ಲಿ ಸ್ಥಳೀಯರಿಗೆ ಉಳಿಗಾಲವಿಲ್ಲದಂತ್ತಾಗುತ್ತದೆ ಎಂದೂ ಅವರು ದೂರಿದರು.</p>.<p>ಜುಲೈ 24ರಂದು ವಿರಾಜಪೇಟೆ, ಜುಲೈ 29 ರಂದು ಟಿ.ಶೆಟ್ಟಿಗೇರಿ ಮತ್ತು ಆಗಸ್ಟ್ 10ರಂದು ಮಾದಾಪುರದಲ್ಲಿ ಮಾನವಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.</p>.<p>ಚೇಂದಿರ ಶೈಲಾ, ಮುದ್ದಿಯಡ ಲೀಲಾವತಿ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಮತ್ರಂಡ ಬೋಜಮ್ಮ, ಮಾಚಿಮಾಡ ಲವ್ಲಿ, ಮಾಣಿಪಂಡ ರತಿ, ಮಲ್ಚಿರ ಕವಿತಾ, ಕಾಯಮಾಡ ಕಮಲ, ಕೇಚೆಟ್ಟಿರ ಕಾಮುನಿ, ಕಾಳಮಂಡ ನಯನ, ಕಾಳಮಂಡ ಕಲ್ಪಕ್, ಮಲ್ಚಿರ ಪ್ರತೀಮ, ಬೊಳ್ಳಮ್ಮ, ಸುಳ್ಳಿಮಾಡ ವಿನು, ಆಲೆಮಾಡ ರೋಶನ್, ಆಲೆಮಾಡ ನವೀನ, ಮತ್ರಂಡ ನವೀನ್, ಮುದ್ದಿಯಡ ಕಿರಣ್ ಭಾಗವಹಿಸಿದ್ದರು.</p>.<p>ಜುಲೈ 24 ರಂದು ವಿರಾಜಪೇಟೆಯಲ್ಲಿ ಪ್ರತಿಭಟನೆ ಜುಲೈ 29 ರಂದು ಟಿ.ಶೆಟ್ಟಿಗೇರಿಯಲ್ಲಿ ಮಾನವ ಸರಪಳಿ ರಚನೆ ಆಗಸ್ಟ್ 10ರಂದು ಮಾದಾಪುರದಲ್ಲಿ ಜನಜಾಗೃತಿ ಕಾರ್ಯಕ್ರಮ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>